Posts

Showing posts from April, 2020

ಕುಂಞಾಲಿ ಮರಕ್ಕಾರ್(ಅರಬ್ಬಿ ಸಮುದ್ರದ ರಕ್ತಸಾಕ್ಷಿ)

بِسْمِ اللهِ الرَّحْمَٰنِ الرَّحِيم ಅರಬ್ಬಿ ಸಮುದ್ರದ   ರಕ್ತಸಾಕ್ಷಿ (ಕುಂಞಾಲಿ ಮರಕ್ಕಾರ್)  ✒ಹನೀಫ್ ಮುಹಬ್ಬತ್ ಪೊನ್ನಾನಿ ಈ ಹೆಸರು ಕೇಳದವರು ವಿರಳ.ಸ್ವಹಾಬಿಗಳ ಪಾದಸ್ಪರ್ಶದಿಂದ ಪುಳಕಿತಗೊಂಡ ಮಣ್ಣು.  ಚರಿತ್ರೆ ಪುಟಗಳಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಠಿಸಿದ ಸುಂದರವಾದ ತಾಣ. ಸಣ್ಣ ಮಕ್ಕಾ ಎಂಬ ಹೆಸರಿನಲ್ಲಿ ಗುರುತಿಸಲ್ಪಡುವ ಪ್ರದೇಶ. ಅಲ್ಲಿಂದ ಮುಂದಕ್ಕೆ ಸಂಚರಿಸಿದರೆ ಕಾಣ ಸಿಗುವ ವರ್ಣರಂಜಿತ ಪ್ರದೇಶವಾಗಿದೆ ವೆಲಿಯಂಗೋಡು        ಈ ಹೆಸರು ಕೇಳುವಾಗ ನಮ್ಮೆಲ್ಲರ ಮನಸಲ್ಲಿ ಉದಯಿಸಿ ಬರುವ ಹೆಸರು,ತನ್ನ ಜೀವಿತ ಕಾಲದಲ್ಲೇ ಪ್ರವಾದಿ ಪೈಗಂಬರ್ (ಸ.ಅ) ರ ಅಸ್ತಲಘಾವ ನಡೆಸಿದ ಮಹಾನ್ ಪಂಡಿತ ಇದೀಗ ಅದೇ  ಊರಿನಲ್ಲಿ ಅಂತ್ಯ ವಿಶ್ರಾಂತಿ ಹೊಂದುತ್ತಿರುವ ಮಹಾನರಾದ ಉಮ್ಮರ್ ಖಾಝಿ ವೆಲಿಯಂಗೋಡು ರವರನ್ನು ಸ್ಮರಿಸುತ್ತಾ....           ಅವರು ಅಂತ್ಯ ವಿಶ್ರಾಂತಿ ಹೊಂದಿರುವ ಸ್ಥಳದಿಂದ  ಸ್ವಲ್ಪ ಮುಂದಕ್ಕೆ ಚಲಿಸಿದರೆ ಕಾಣುವ ಸಣ್ಣ ಗುಡಿಸಲು. ಸುಪ್ರಸಿದ್ಧ ಮಾನತ್ತ್ ಪರಂಪರೆಗೆ ಒಳಪಟ್ಟ ಅಬ್ದುಲ್ಲಾ ಆಮಿನಾ ದಂಪತಿಗಳು ವಾಸಿಸುವ ಆ ಮನೆ.          ಅತ್ಯಂತ ಸುಂದರವಾದ ಅವರ ದಾಂಪತ್ಯದಲ್ಲಿ ಅವರಿಗೆ ಅಲ್ಲಾಹನು ಒಂದು ಗಂಡು ಮಗುವನ್ನು ಕರುಣಿಸಿದನು. ಅಬ್ದುಲ್ಲಾರವರು  ಊರಿನವರ ಹಿರಿಮೆಗೆ ಪಾತ್ರರಾಗಿದ...

ರಮಳಾನ್ ಕೈಪಿಡಿ

ಆರ್ಶಿವಚನ: •ಪವಿತ್ರ ರಮಳಾನ್ ನಮಗೆ ಅಲ್ಲಾಹು ನೀಡಿದ ಒಂದು ಮಹಾನುಗ್ರಹವಾಗಿದೆ. ಆಗಮಿಸುವುದಕ್ಕಿಂತ ಎರಡು ತಿಂಗಳ ಮುಂಚೆಯೇ ಅದನ್ನು ತಲುಪಿಸಿಕೊಡಲಿಕ್ಕಾಗಿ ನಾವು ಅಲ್ಲಾಹನಲ್ಲಿ ಬೇಡುತ್ತೇವೆ. ಈ ಪವಿತ್ರ ತಿಂಗಳ ಮಹತ್ವಗಳನ್ನರಿತು ಪ್ರತಿಯೊಂದು ಕ್ಷಣಗಳೂ ಸಮರ್ಪಕ ರೀತಿಯಲ್ಲಿ ಸದುಪಯೋಗಪಡಿಸಬೇಕಾದದ್ದು ಪ್ರತಿಯೋರ್ವ ಸತ್ಯವಿಶ್ವಾಸಿಗಳ ಅನಿವಾರ್ಯ ಬಾಧ್ಯತೆಯಾಗಿದೆ. ಈ ಬಾಧ್ಯತೆಯ ಪೂರೈಕೆಗೆ ಈ ರಮಳಾನ್ ಕೈಪಿಡಿ ಅತ್ಯಂತ ಉಪಯುಕ್ತವಾದ ಒಂದು ಮಾರ್ಗದರ್ಶಿಯೆನಿಸುತ್ತದೆ. ಪಿ. ಎ. ಮುಬಶ್ಮೀರ್ ಅಹ್ಮನಿ ಕೊಂಡಂಗೇರಿ ಬರೆದ ಈ ರಮಳಾನ್ ಕೈಪಿಡಿ. ಪವಿತ್ರ ರಮಳಾನಿನಲ್ಲಿ ಹಲವು ಆರಾಧನೆಗಳಿಂದ ನಮ್ಮ ಬದುಕನ್ನು ಧನ್ಯಗೊಳಿಸಿ ಹೃದಯಗಳನ್ನು ಸಂಶುದ್ದಗೊಳಿಸಲು ನಾವು ನಿರ್ವಹಿಸುವ ಕನಿಷ್ಟ ಕರ್ಮಗಳು ನಾವರಿಯದೆ ನಿಷ್ಫಲಗೊಳ್ಳದಿರಲು ಇದು ಸಹಾಯಕವಾಗಬಹುದು ಎಂಬ ನಿರೀಕ್ಷೆ ನಮಗಿದೆ.. ರಮಳಾನಿನ ಪಾವನ ಮಾಸ ಮುಸ್ಲಿಮರ ಪಾಲಿಗೆ ಅನುಗ್ರಹ. ಅಲ್ಲಾಹನ ಔದಾರ್ಯ ರಮಳಾನ್ ವೃತದ ಮೂಲಕ ಲಭಿಸದಿದ್ದರೆ ಮುಸ್ಲಿಮರ ಪರಲೋಕ ಸ್ಥಿತಿ ಶೋಚನೀಯವಾಗುತ್ತಿತ್ತು. ರಮಳಾನ್ ವೃತ ಪರಲೋಕದ ಭಯಾನಕ ದುರಂತದಿಂದ ತಡೆಹಿಡಿಯುವ ರಕ್ಷಾಕವಚ. ಆದರೆ ಆ ವೃತ ಪೂರ್ಣವಾಗಬೇಕು. ಕೇವಲ ಹೊಟ್ಟೆಗೆ ಹಸಿವು ನೀಡಿದ ಕಾರಣ ಅದು ನೈಜ ವೃತವಾಗುವುದಿಲ್ಲ. ಆ ಬಗ್ಗೆ ಜ್ಞಾನ ತಿಳುವಳಿಕೆಯನ್ನು ಗಳಿಸುವುದು ಅನಿವಾರ್ಯ. ರಮಳಾನ್ ಕೈಪಿಡಿಯೆಂಬ ಈ ಸಂಚಿಕೆಗಳಲ್ಲಿ ಸಾಧ್ಯವಾಗುವಷ್ಟು ವಿಷಯ ಒಳಗೊಂಡಿದೆ. ಇದಕ್ಕಾಗಿ ...

ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಪತ್ನಿಯರ ಕುರಿತು ನಿಮಗೇಷ್ಟು ಗೊತ್ತು

ಪ್ರವಾದಿﷺರ ಪತ್ನಿಯ ಕುರಿತು ನಿಮಗೇಷ್ಟು ಗೊತ್ತು..? ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಜೀವನ ಚರಿತ್ರೆ ಕಲಿಯಬೇಕಾದದ್ದು ನಮ್ಮೆಲ್ಲರ ಬಾಧ್ಯತೆಯಾಗಿದೆ. ಮಕ್ಕಳು ಮಾತನಾಡಲು ಆರಂಭಿಸುವಾಗ ಪ್ರಥಮ ವಾಗಿ ಕಲಿಸಬೇಕಾದದ್ದು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಕುರಿತಾಗಿದೆ. ಅದು ಹೆತ್ತವರ ಮೇಲೆ ಕಡ್ಡಾಯವೂ ಆಗಿದೆ. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಅನುಯಾಯಿಗಳೆಂದು ಅಭಿಮಾನ ಪಡುವ ನಮಗೆ ಅವರ ಜೀವನ ಚರಿತ್ರೆ ಗೊತ್ತಿಲ್ಲ ಎಂಬುದು ಅತ್ಯಂತ ದೊಡ್ಡ ದುರಂತವಲ್ಲವೇ..? ಅವರ ಜನನದಿಂದ ವಫಾತ್ ತನಕ ಇರುವ ಜೀವನದ ಸಂಕ್ಷಿಪ್ತವಾದ ಅರಿವಾದರೂ ನಮಗೆ ಬೇಕು. ನಾವದನ್ನು ಕಲಿಯಬೇಕು. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಜೀವನ ಚರಿತ್ರೆ ಕಲಿಯುವುದರ ಭಾಗವಾಗಿದೆ ಅವರ ಪತ್ನಿಯರ ಕುರಿತು ಕಲಿಯುವುದು. ನಮ್ಮಲ್ಲಿ ಬಹುತೇಕರಿಗೆ ಅವರ ಪತ್ನಿಯರ ಕುರಿತು ತಿಳಿದಿಲ್ಲ. ಅವರ ಮಕ್ಕಳ ಕುರಿತ ಅರಿವಿಲ್ಲ. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಯಾವ ಪತ್ನಿಯರಿಗೆ ಮಕ್ಕಳಿವೆ ಎಂಬುದರ ಕುರಿತ ಮಾಹಿತಿ ಇಲ್ಲ.ನಾವು ಹಾಗಾಗ ಬಾರದು. ಅವರ ಪತ್ನಿಯರ, ಮಕ್ಕಳ ಬಗ್ಗೆ ನಾವು ಕಲಿಯಬೇಕು. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಹನ್ನೆರಡು ಮಹಿಳೆಯರನ್ನು ವಿವಾಹವಾಗಿದ್ದಾರೆ. ಮೊದಲು ವಿವಾಹ ಖದೀಜ ಬೀವಿಯವರಿಂದ ಹಿಡಿದು ಕೊನೆಯದಾಗಿ ವಿವಾಹ ವಾದ ಮೈಮುನಾರ ತನಕ ಹನ್ನೆರಡು ಪತ್ನಿಯರ ಕುರಿತ ಅರಿವು ನಮಗಿರಬೇಕು. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ...

ಖಾದಿಸಿಯ್ಯಾ ಯುದ್ಧ

بِسْمِ اللهِ الرَّحْمَٰنِ الرَّحِيمْ السَّـــــــلاَمُ عَلَيــْــكُم وَرَحْمَةُ اللهِ وَبَرَكـَـاتُه ಖಾದಿಸಿಯ್ಯಾ ಯುದ್ದ ಬಿಸ್ಮಿಲ್ಲಾಹ್ ವಲ್ ಹಂದುಲಿಲ್ಲಾಹ್ ವಸ್ಸಲಾತು ವಸ್ಸಲಾಮು ಅಲಾ ಸಯ್ಯಿದಿನಾ ಮುಹಮ್ಮದಿನ್ ವ ಅಲಾ ಆಲಿಹೀ ವಸಹ್ ಬಿಹೀ ವಸಲ್ಲಿಮ್ ﺍَﻟﺼَّﻠَﺎﺓُ ﻭَﺍﻟﺴَّﻠَﺎﻡُ ﻋَﻠَﻴْﻚَ ﻳَﺎ ﺭَﺳُﻮﻝَ ﺭَﺏِّ ﺍﻟْﻌَﺎﻟَﻴن ﺻَﻠَﺎﻭَﺍﺕُ ﺍﻟﻠّٰﻪِ ﻭَﻣَﻼَﺋِﻜَﺘِﻪِ ﻭَﺍَﻧْﺒِﻴَﺎﺋِﻪِ ﻭَﺭُﺳُﻠِﻪِ ﻭَﺣَﻤَﻠَﺔِ ﻋَﺮْﺷِﻪِ ﻭَﺟَﻤﻴﻊِ ﺧَﻠْﻘِﻪِ ﻋَﻠٰﻰ ﺳَﻴِّﺪِﻧَﺎ ﻣُﺤَﻤَّﺪٍ ﻭَﻋَﻠٰﻰ ﺍٰﻟِﻪِ ﻭَﺻَﺤْﺒِﻪِ ﺍَﺟْﻤَﻌﻴﻦَ ಬರೆಯಲು ಶಕ್ತಿಕೊಟ್ಟ ಅಲ್ಲಾಹನಿಗಷ್ಟೇ ಸರ್ವ ಸ್ತುತಿ ಅರ್ಪಿಸುತ್ತಾ ಬಿಸ್ಮಿ ಹಮ್ದು ಸ್ವಲಾತ್ ಮೊಳಗಿಸಿ ಈ ಚರಿತ್ರೆಯನ್ನು ಬರೆಯುತ್ತಾ ಇದ್ದೇನೆ. ಅಲ್ಲಾಹು ಸ್ವೀಕರಿಸಲಿ ಆಮೀನ್ •ಲೇಖಕರ ಮಾತು : ಅಸ್ಸೀರಿಯಾ ನಾಗರಿಕತೆಯನ್ನು ಪಲ್ಲಟಗೊಳಿಸಿ ಮುಖ್ಯವಾಹಿಣಿಗೆ ಬಂದ ಸಾಮ್ರಾಜ್ಯವಾಗಿತ್ತು ಪರ್ಷಿಯಾ ಸಾಮ್ರಾಜ್ಯ. ಅಸ್ಸೀರಿಯನ್ - ಕಲ್ ದಾಯ ಸಾಮ್ರಾಜ್ಯಗಳ ಪತನದಿಂದ ಇಸ್ಲಾಮೀ ಸಾಮ್ರಾಜ್ಯೋದಯದವರೆಗೆ (ಕ್ರಿ. ಪೂರ್ವ 550 - ಕ್ರಿ.ಶ 641 ) ಪರ್ಷಿಯನ್ ಸಾಮ್ರಾಜ್ಯವು ನಿರಂಕುಶ ಪ್ರಭುತ್ವದ ಮೂಲಕ ಇಡೀ ಜಗತ್ತಿನ ಮೇಲೆಯೇ ದಬ್ಬಾಳಿಕೆಯ ಅಸ್ತಿತ್ವವನ್ನು ಹೊಂದಿತ್ತು.       ಕ್ರಿಸ್ತಪೂರ್ವ ಎರಡನೇ ಶತಮಾನದಲ್ಲಿ ಮಧ್ಯ ಏಷ್ಯಾದಿಂದ ಮೆಸಪೊಟೋಮಿಯಾಗೆ ವಲಸೆ ಬಂ...