Posts

Showing posts from September, 2019

ಝೈನಬ್ (ರ.ಅ)

ಮುರಿಯದ ದಾಂಪತ್ಯ ಸಂಬಂಧ ಪ್ರವಾದಿ ಪುತ್ರಿ ಝೈನಬ್(ರ) ರವರ ಚರಿತ್ರೆ ___________________________________ ಪ್ರವಾದಿ ﷺ ರವರ ಪ್ರಥಮ ಪುತ್ರಿಯ ಜನನ ಖದೀಜ... ಮಕ್ಕಾದ ಅಗ್ರಗಣ್ಯ ಶ್ರೀಮಂತಲ್ಲಿ ಒಬ್ಬರು... ವ್ಯಾಪಾರದಲ್ಲಿ ಎತ್ತಿದ ಕೈ.. ಬುದ್ಧಿಯಲ್ಲಿ ಚತುರೆ.. ಕೊಡುಗೈ ದಾನಿ.. ಒಬ್ಬರು ಏನಾದರೂ ಕೇಳಿದರೆ ಇಲ್ಲ ಎಂದು ಹೇಳುವ ಸ್ವಭಾವ ಅವರದಲ್ಲ.. ಆದ್ದರಿಂದ ಮಕ್ಕಾದ ಎಲ್ಲರಿಗೂ ಅವರಲ್ಲಿ ಒಂದಲ್ಲ ಒಂದು ರೀತಿಯ ಆತ್ಮೀಯತೆ ಇತ್ತು...ಅವರ ಮನೆಯಲ್ಲಿ ಸದಾ ಅತಿಥಿಗಳು ನೆರೆದಿರುತ್ತಿದ್ದರು... ಬಂದವರಿಗೆಲ್ಲ ಆತಿಥ್ಯ.... ಪ್ರಾಯ ಮೂವತ್ತೊಂಬತ್ತು ದಾಟಿ ನಲುವತ್ತಾಗಿತ್ತು.. ಅಷ್ಟರ ತನಕ ವ್ಯಾಪಾರದ ಎಲ್ಲಾ ಜವಾಬ್ದಾರಿಯನ್ನು ಅವರೇ ಹೊರುತ್ತಿದ್ದರು.. ಇದೀಗ ಅದರ ಹಿಂದೆ ಹೋಗಲು ಅವರಿಗೆ ಸಾಧ್ಯವಾಗುತ್ತಿಲ್ಲ...ಸೂಕ್ತರಾದ ಮೇಲ್ವಿಚಾರಕರನ್ನು ನೇಮಕ ಮಾಡಿ ಎಲ್ಲಾ ಕಾರ್ಯವನ್ನು ಅವರಿಗೆ ವಹಿಸಿಕೊಡುವುದು ಅವರ ಉದ್ದೇಶವಾಗಿತ್ತು...ಅವರು ಮೇಲ್ವಿಚಾರಕರ ಹುಡುಕಾಟದಲ್ಲಿದ್ದರು... ಒಂದು ದಿನ ಅಬೂತಾಲಿಬ್ ಖದೀಜರ ಮನೆಗೆ ಬಂದು ತಮ್ಮ ಸಹೋದರ ಅಬ್ದುಲ್ಲಾ ರ ಮಗನಾದ ಮುಹಮ್ಮದರನ್ನು ﷺ ಮೇಲ್ವಿಚಾರಕರಾಗಿ ನೇಮಿಸಲು ವಿನಂತಿಸಿಕೊಂಡರು ಖದೀಜರಿಗೆ ಹುಡುಕುವ ಬಳ್ಳಿ ಕಾಲಿಗೆ ಸುತ್ತಿದ ಅನುಭವ... ಸಂತೋಷದಿಂದ ಒಪ್ಪಿಕೊಂಡರು ಖದೀಜ ಕೂಡಲೇ ಮನೆಯ ಕೆಲಸದಾಳಾದ ಮೈಸರತ್ ಳನ್ನು ಕರೆದು ಹೇಳಿದರು... ಮೈಸರ..!!!ಈ ವರ್ಷ ನಮ್ಮ ವ್ಯಾಪಾರಕ್ಕೆ ನಾಯಕತ್ವವನ್...

ಆರೋಗ್ಯ ಟಿಪ್ಸ್

ಹಿರೇಕಾಯಿಯಲ್ಲಿ ಇಂತಹ ಸಮಸ್ಯೆಗಳಿಗೆ ಅದ್ಭುತ ಆರೋಗ್ಯದ ಶಕ್ತಿ ನಮ್ಮ ಮನೆಯ ಹಿತ್ತಲಲ್ಲಿ ಹಲವಾರು ರೀತಿಯ ತರಕಾರಿಗಳನ್ನು ಬೆಳೆಯುತ್ತೇವೆ ಆದರೆ ಅವುಗಳಿಂದ ಆಗುವ ಲಾಭಗಳ ಬಗ್ಗೆ ತಿಳಿದಿರುವುದಿಲ್ಲ ಹಾಗೆ ಹಿರೇಕಾಯಿಯಲ್ಲಿ ಸಹ ಅಡಗಿದೆ ಹಲವಾರು ರೀತಿಯ ರೋಗನಿವಾರಕ ಗುಣಗಳು. ಮೂಲವ್ಯಾದಿ ಹಾಗೂ ಮಹಿಳೆಯರ ಮಾಸಿಕ ಸಮಯದಲ್ಲಿ ಹೆಚ್ಚು ರಕ್ತಸ್ರಾವ ಆಗುತ್ತಿದ್ದರೆ ಬಲಿತ ಹೀರೆಕಾಯಿ ಬೀಜದ ಒಳ ಭಾಗವನ್ನು ತಣ್ಣೀರಿನಲ್ಲಿ ಸೇರಿಸಿ ಕುಡಿದರೆ ರಕ್ತಸ್ರಾವ ನಿಲ್ಲುತ್ತದೆ. ಹೀರೆಕಾಯಿ ಪೌಷ್ಟಿಕ ತರಕಾರಿ ಮಾತ್ರವಲ್ಲದೇ ಹಲವಾರು ಔಷಧ ಗುಣಗಳನ್ನು ಹೊಂದಿದೆ. ಇಡೀ ದೇಹದಲ್ಲಿ ಉರಿ ಇದ್ದರೆ, ಹೀರೆಕಾಯಿಯ ತಿರುಳನ್ನು ತುಪ್ಪದಲ್ಲಿ ಬೇಯಿಸಿ ಮೊಸರಿನ ಜೊತೆ ಸೇವಿಸಿದರೆ ಉರಿ ಕಡಿಮೆಯಾಗಿ ದೇಹ ತಂಪಾಗುತ್ತದೆ. ಅಕ್ಕಿತೊಳೆದ ನೀರಿಗೆ ಜೀರಿಗೆ ಪುಡಿ, ಕಲ್ಲುಸಕ್ಕರೆ ಮತ್ತು ಹೀರೆಕಾಯಿಯ ಬೀಜಗಳನ್ನು ಸೇರಿಸಿ ಸೇವಿಸಿದರೆ ಮೂತ್ರ ಮಾರ್ಗದ ನೋವು ಕಡಿಮೆಯಾಗುತ್ತದೆ.ಪಿತ್ತ ಹೆಚ್ಚಿದ್ದರೆ ಹೀರೆಕಾಯಿ ಹಾಗೂ ಹೆಸರುಬೇಳೆಯನ್ನು ಸಮಪ್ರಮಾಣದಲ್ಲಿ ಬೇಯಿಸಿ ಸೇವಿಸಿದರೆ ಪಿತ್ತ ಕಡಿಮೆಯಾಗುತ್ತದೆ. ಪಿತ್ತದಿಂದ ಬರುವ ಜ್ವರಕ್ಕೆ ಹೀರೆಕಾಯಿ ಎಲೆಯ ಕಷಾಯವನ್ನು ಮಾಡಿ ಅದಕ್ಕೆ ಸಕ್ಕರೆ ಸೇರಿಸಿ ಸೇವಿಸಿದರೆ ಜ್ವರ ಕಡಿಮೆಯಾಗುತ್ತದೆ. ಪಿತ್ತ ಹೆಚ್ಚಿದ್ದರೆ ಹೀರೆಕಾಯಿ ಹಾಗೂ ಹೆಸರುಬೇಳೆಯನ್ನು ಸಮಪ್ರಮಾಣದಲ್ಲಿ ಬೇಯಿಸಿ ಸೇವಿಸಿದರೆ ಪಿತ್ತ ಕಡಿಮೆಯಾಗುತ್ತದೆ. ದೇಹದ ಯಾವುದೇ ಭಾಗದಲ್...

ಆರೋಗ್ಯ ಟಿಪ್ಸ್

ದೇಹದ ಭಾರ ಕಡಿಮೆಗೊಳಿಸಲು ಇಲ್ಲಿದೆ ಸುಲಭವಾದ ಟಿಪ್ಸ್ ಪ್ರೊಟೀನ್ ಅಂಶಗಳು, ಲ್ಯಾಕ್ಟೋಸ್ ಸಕ್ಕರೆ ಮತ್ತು ತನ್ನ ಸಾಂದ್ರತೆಯಿಂದಾಗಿ ಕೆನೆರಹಿತ ಹಾಲು (ಸ್ಕಿಮ್ಡ್ ಹಾಲು) ಸೇವನೆಯಿಂದ ಹೊಟ್ಟೆ ತುಂಬಿದ ಸಂತೃಪ್ತ ಭಾವನೆಯಿಂದಿರುವುದು ಸಾಧ್ಯ ಮತ್ತು ಇದು ಕಡಿಮೆ ಕ್ಯಾಲೊರಿ ಸೇವನೆಗೆ ಪೂರಕವಾಗುತ್ತದೆ ಎನ್ನುತ್ತದೆ ಸಂಶೋಧನಾ ವರದಿ. ಹಣ್ಣಿನ ರಸಕ್ಕೆ ಹೋಲಿಸಿದರೆ, ಬೆಳಗಿನ ಜಾವ ಕೊಬ್ಬು ಇಲ್ಲದ ಹಾಲು ಸೇವನೆಯು ಹೊಟ್ಟೆ ತುಂಬಿದ ಭಾವನೆ ಮೂಡಿಸುತ್ತದೆ ಮತ್ತು ಮುಂದಿನ ಆಹಾರ ಸೇವನೆ ಸಂದರ್ಭ ಕಡಿಮೆ ಕ್ಯಾಲೊರಿ ಸೇವನೆಗೆ ಕಾರಣವಾಗುತ್ತದೆ. ಹಾಲು ಕುಡಿದವರು ಸುಮಾರು 50ರಷ್ಟು ಕ್ಯಾಲೊರಿ (ಶೇ.9ರಷ್ಟು ಕಡಿಮೆ ಆಹಾರ) ಕಡಿಮೆ ಸೇವಿಸುತ್ತಾರೆ ಎಂದಿದ್ದಾರೆ ಸಂಶೋಧಕರು.. 34 ಮಂದಿ ಅಧಿಕ ದೇಹತೂಕದ ಆದರೆ ಆರೋಗ್ಯವಂತ ಪುರುಷರು ಮತ್ತು ಮಹಿಳೆಯರು ಈ ಅಧ್ಯಯನಕ್ಕಾಗಿ ನಡೆದ ಎರಡು ಸೆಶನ್‌ಗಳಲ್ಲಿ ಭಾಗವಹಿಸಿದ್ದರು. ಒಂದು ಸೆಶನ್‌ನಲ್ಲಿ ಅವರಿಗೆಲ್ಲಾ ಸುಮಾರು 20 ಔನ್ಸ್‌ನಷ್ಟು ಕೆನೆ ರಹಿತ ಹಾಲು ನೀಡಲಾಗಿದ್ದರೆ, ಮತ್ತೊಂದು ಸೆಶನ್‌ನಲ್ಲಿ ಅಷ್ಟೇ ಪ್ರಮಾಣದಲ್ಲಿ ಹಣ್ಣಿನ ರಸ ನೀಡಲಾಗಿತ್ತು.. ಬೆಳಗಿನ ಉಪಾಹಾರ ಮತ್ತು ಮಧ್ಯಾಹ್ನದೂಟದ ನಡುವಿನ ನಾಲ್ಕು ಗಂಟೆಗಳಲ್ಲಿ ಅವರೆಲ್ಲರಿಗೆ ಹೊಟ್ಟೆ ತುಂಬಿದ ಭಾವನೆಯಾಗುತ್ತಿದ್ದುದನ್ನು ಪರಿಶೀಲಿಸಲಾಗುತ್ತಿತ್ತು ಮತ್ತು ಭೋಜನ ವೇಳೆ ಹೊಟ್ಟೆ ತುಂಬುವಷ್ಟು ತಿನ್ನುವಂತೆ ಸೂಚಿಸಲಾಗಿತ್ತು.. ಹಾಲು ಕುಡಿದ ಮಂದಿಗೆ ಹೆಚ್ಚ...

ಖದೀಜಾ. (ರ.ಅ)

ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರ ಪ್ರೀಯ ಮಡದಿ ಖದೀಜಾ ರಳಿಯಲ್ಲಾಹು ಅನ್ಅಃ """"""""""""""""""""""""""""""""""""""""""""""""""""""""""""""""""""""""""" ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರ ಪತ್ನಿಯರಲ್ಲಿ ಏಕ ಕನ್ಯೆಯೂ, ಸು೦ದರಿಯೂ, ತೀರಾ ಚಿಕ್ಕ ಪ್ರಾಯದವರೂ ಆದ ಆಯೀಶ (ರ). ಆ ಮಾತೆಯೂ ಒಮ್ಮೆ ಹೇಳಿದರು: ಜೀವನದಲ್ಲಿ ನನಗೆ ಒಮ್ಮೆ ಅಸೂಯೆ ಉ೦ಟಾದದ್ದು ಒಬ್ಬರೇ ಒಬ್ಬರಲ್ಲಿ ಮಾತ್ರವಾಗಿತ್ತು. ಅದು ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರ ಮೊದಲ ಪತ್ನಿ ಖದೀಜಾ(ರ)ರವರಲ್ಲಾಗಿತ್ತು. ಸತ್ಯವಾಗಿಯೂ ನಾನು ಅವರನ್ನು ಕ೦ಡದ್ದು ಕೂಡ ಇಲ್ಲ. ಆದರೆ ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರು ಯಾವತ್ತೂ ಅವರನ್ನು ಹೊಗಳಿ ಮಾತನಾಡುತ್ತಿರುತ್ತಾರೆ. ನನಗದನ್ನು ಕೇಳುವಾಗ ಅವರಲ್ಲಿ ಅಸೂಯೆ ಉ೦ಟಾಗುತ್ತದೆ. ಪ್ರವಾದಿಯವರಿಗೆ ಅವರು ಅಷ್ಟೋ೦ದು ಇಷ್ಟವಾಗಿದ್ದರು. ಒಮ್ಮೆ ಆಯೀಶ...

ಪುಣ್ಯ ಮದೀನ

ಪುಣ್ಯ ಮದೀನಾ – 04 ➖➖➖➖➖➖➖➖ صلّوا على الحبيب 💞 ಬೇಟೆಗಾರನಿಂದ ಮರಿಗಳಿಗೆ ಹಾಲುಣಿಸಲು ಹೋದ ಜಿಂಕೆಗೆ ಜಾಮೀನು ನಿಂತಿರೋದು ಪುಣ್ಯ ನೆಬಿ ﷺ ರೆಂದು ತಿಳಿದಾಗ ಜಿಂಕೆ ಮರಿಗಳು ಹಾಲು ಕುಡಿಯದೆ ಮರಳಿ ನೆಬಿ ﷺ ರ ಬಳಿ ನೀನು ತಲುಪುವ ತನಕ ನಿನ್ನ ಹಾಲು ನಿಶಿದ್ದ ಎಂದಿದ್ದರೆ ಆ ಜಿಂಕೆ ಮರಿಯ ಪ್ರೀತಿಯ ಒಂದಂಶವೂ ಇಲ್ಲದಾಯಿತೇ ಈ ಪಾಪಿಯ ಮನದಲ್ಲಿ ಭಾಗ್ಯವ ನೀಡು ರಬ್ಬೇ ಆ ಪುಣ್ಯ ನೆಬಿ ﷺ ರ ಪುಣ್ಯ ವದನವ ಕಾಣಲು  فِدَاكَ اَبِي وَاُمِّي يَا سَيَّدِ ي يَارَسُولَ الله ﷺِ   الصــلوة والسلام عليك يارسول الله ﷺ ➖➖➖➖➖➖➖ ಅಶ್ಫಾಕ್ ಕಟ್ಟತ್ತಾರ್

ಪುಣ್ಯ ಮದೀನ

ಪುಣ್ಯ ಮದೀನಾ – 03 ➖➖➖➖➖➖➖➖ صلّوا على الحبيب 💞 ತಲೆ ಕೊಯ್ಯಲೆಂದು ಬಂದ ಪರ್ವತ ದಂತಹ ಬಾಬುವಾನ್ ಎಂಬ ಮನುಷ್ಯ ರೂಪ ಕೂಡ ಸೌಂದರ್ಯ ಲಾವಣ್ಯತೆಯಿಂದ ಕಂಗೊಳಿಸುವ ಪುಣ್ಯ ನೆಬಿ ﷺ ರ ಮುಖವ ಕಂಡು ಮೂಕವಿಸ್ಮಿತನಾಗಿ ಕೊನೆಗೆ ಇಸ್ಲಾಂ ಧರ್ಮ ವನ್ನೇ ಸ್ವೀಕರಿಸುವಂತಾಯಿತು..!! ಶತ್ರುವಿಗೂ ಮಿತ್ರನಾಗೋ ಭಾಗ್ಯವ ನೀಡಿದ ರಬ್ಬೇ ಈ ಪಾಪಿಗೆ ಆ ಪುಣ್ಯ ನೆಬಿ ﷺ ರ ಪ್ರೇಮಿಯಾಗೋ ಭಾಗ್ಯ ನೀಡು  فِدَاكَ اَبِي وَاُمِّي يَا سَيَّدِ ي يَارَسُولَ الله ﷺِ   الصــلوة والسلام عليك يارسول الله ﷺ ➖➖➖➖➖➖➖ ಅಶ್ಫಾಕ್ ಕಟ್ಟತ್ತಾರ್

ಪುಣ್ಯ ಮದೀನ

ಪುಣ್ಯ ಮದೀನಾ – 02 ➖➖➖➖➖➖➖➖ صلّوا على الحبيب 💓 ಕಂಪಿಸಿತು ಮದೀನಾ ಪ್ರದೇಶವೇ ಅದು ಹಲವು ವರ್ಷದ ಬಳಿಕ ಬಿಲಾಲ್ رضي الله عنه ರವರ ಆಝಾನ್ ಧ್ವನಿಯ ಕೇಳಿ.., ಕಣ್ಣೀರು ಧಾರೆ ಧಾರೆ ಸುರಿಯಿತು ಅದು ಪುಣ್ಯ ನೆಬಿ ﷺ ರ ನೆನದು ಬಿಲಾಲ್ رضي الله عنه ರ ಪ್ರೇಮದ ಕಟ್ಟೆ ಹೊಡೆದು.., ಸಾಧ್ಯವಿಲ್ಲವೇ ನಮಗೆ ಆ ಪ್ರೇಮದ ಒಂದಂಶವಾದರು ಪಡೆಯಲು.., ಕರುಣಿಸುವಿರೇ ಓ ಪುಣ್ಯ ನೆಬಿ ﷺ ರೇ ನಿಮ್ಮ ಪ್ರೇಮಿಗಳ ಸಾಲಿನಲ್ಲಿ ಸೇರಲು..,  الصــلوة والسلام عليك يارسول الله ﷺ ➖➖➖➖➖➖➖ ಅಶ್ಫಾಕ್ ಕಟ್ಟತ್ತಾರ್ NOOR-UL-FALAH ISLAMIC STORE 

ಎಲ್ಲಿ ಸೌಂದರ್ಯ

ಎಲ್ಲಿದೆ ಸೌಂದರ್ಯ? ಛೆ! ಎಂಥ ಕುರೂಪಿ ಹುಡುಗಿ ಇವಳು! ಹಲ್ಲುಬ್ಬು. ಅಲ್ಲಿನ ಮೇಲೆಲ್ಲ ಹಳದಿ ಕಲೆಗಳು. ಎಣ್ಣೆಗೆಂಪು ಬಣ್ಣ. ಮೋಟುಜಡೆ. ಹಲ್ಲಿನ ನಡುವೆ ಬಸ್ಸು ಹೋಗುವಷ್ಟು ಅಗಲ ಕಿಂಡಿಗಳು. ಯಾವ ಮೂಡಿನಲ್ಲಿದ್ದನೋ ಪರಮಾತ್ಮ ಇವಳನ್ನು ನಿರ್ಮಿಸುವಾಗ! ಮದುವೆ ಮನೆ. ಅಸ್ತಮಾ ಪೀಡಿತ ನಾಯಿಯಂತೆ ಸದ್ದು ಹೊರಡಿಸುತ್ತಾ ಒಬ್ಬ ಜೋರಾಗಿ ತೇಕತೊಡಗಿದ. ಬಾಯಿಯಿಂದ ನೊರೆ ಉಕ್ಕತೊಡಗಿತು. ಅವನ ತಲೆ ಜೋರಾಗಿ ಮಧ್ಯಕ್ಕೂ ಬಲಕ್ಕೂ ತೊಯ್ದಾಡತೊಡಗಿತು. ನಮ್ಮ ಕುರೂಪಿ ಹುಡುಗಿ ಓಡಿ ಬಂದಳು. ಅವನು ಆಕೆಯ ಗಂಡ! ಯಾರೋ ಕೀಗೊಂಚಲು ಕೊಟ್ಟರು. ಕೀಗೊಂಚಲನ್ನು ಅವನ ಕೈಯಲ್ಲಿಟ್ಟು ಇನೊಂದು ಕೈಯಾಲ್ಲಿ ತೋಳನ್ನು ಬಿಗಿಯಾಗಿ ಹಿಡಿದು ಸಂತೈಸತೊಡಗಿದಳು. ಚಪ್ಪಲಿ ಬಿಚ್ಚಿ ತೆಗೆದು ಅಂಗಾಲನ್ನು ತಿಕ್ಕತೊಡಗಿದಳು. ಅವನು ನಿಧಾನವಾಗಿ ಚೇತರಿಸಿಕೊಳ್ಳತೊಡಗಿದ. ಪ್ರಜ್ಞೆ ಮರುಕಳಿಸಿದಂತೆ ಹುಚ್ಚು ಹಿಡಿದವನಂತೆ ಆಡತೊಡಗಿದ. ಚಪ್ಪಲಿ ತೆಗೆದಿದ್ದಕ್ಕೆ ಅವಳ ಮೇಲೆ ರೇಗಿದ. ಅವನು ದೂಕಿದ ಜೋರಿಗೆ ಆಕೆ ಎರಡು ಮಾರಾಚೆ ಹೋಗಿ ಬಿದ್ದಳು. ನಿಧಾನವಾಗಿ ಹಸನ್ಮುಖಿಯಾಗಿ ಎದ್ದು ಬಂದಳು. ಚಪ್ಪಲಿ ತೊಡಿಸಲು ಮುಂದಾದಳು. ಅವಳ ಕಪಾಳಕ್ಕೆ ಹೊಡೆದು ಝಾಡಿಸಿ ಸೊಂಟಕ್ಕೆ ಒದ್ದ. ಈ ಬಾರಿ ನಾಕು ಮಾರು ದೂರಕ್ಕೆ ಬಿದ್ದಳು. ಅವಳ ದೇಹ ಬಡಿದ ರಭಸಕ್ಕೆ ಕುರ್ಚಿಗಳು ಚೆದುರಿ ಹೋದವು. ಅವಳ ಮುಖದ ಮುಗುಳ್ನಗು ಮಾಯವಾಗಲಿಲ್ಲ. ಚಿಮ್ಮಿದ ಕಣ್ಣೀರನ್ನು ಅಲ್ಲೇ ಅದುಮಿ ತೊರುಬೆರಳಿಂದ ಒರೆಸಿಕೊಂಡು ಗಂಡನ ತೋಳು ಹಿಡಿದ...

ದೊಡ್ಡವರ ವಿಷಯ

ದೊಡ್ಡವರ ವಿಷಯ! ಈ ಊರಿಗೆ ಹೊಸದಾಗಿ ಜಿಲ್ಲಾ ಮಟ್ಟದ ಗೆಝೆಟೆಡ್ ಅಧಿಕಾರಿ ವರ್ಗವಾಗಿ ಬಂದರು. ಅವರ ಗತ್ತು, ಗಾಂಭೀರ್ಯ ಹೆಸರುವಾಸಿಯಾಗಿದ್ದವು. ಈ ಹೊಸ ಆಫ಼ೀಸಿನ ಜವಾನನಿಗೆ ಇಪ್ಪತ್ತೇಳೋ ಇಪ್ಪತೆಂಟೋ ವರ್ಷದ ಅನುಭವ. ಇಲಾಖೆಯ ರಾಜಕೀಯ, ಕಾರ್ಯವೈಖರಿ, ದಕ್ಷತೆ ಇತ್ಯಾದಿಗಳ ಬಗ್ಗೆ ಚೆನ್ನಾಗಿ ಅರಿತವ. ನುರಿತವ! ಅಗಾಗ ಅಧಿಕಾರಿಗಳಿಗೆ ಕೆಲ ಸೂಕ್ಷ್ಮಗಳನ್ನು ತಿಳಿಸಲು ಯತ್ನಿಸುತ್ತಿದ್ದ. ಅವರಿಗೆ ರೇಗುತ್ತಿತ್ತು. "ನಿನ್ನ ಕೆಲಸ ನೀನು ನೋಡು" ಎಂದು ಗದರುತ್ತಿದ್ದರು. "ದೊಡ್ಡವರ ವಿಷಯ ನಿಂಗ್ಯಾಕೆ?" ಎಂದು ಅಬ್ಬರಿಸುತ್ತಿದ್ದರು. ಅನುಭವಿ ಜವಾನ ದೊಡ್ಡವರ ವಿಷಯದಲ್ಲಿ ತಲೆ ಹಾಕದಿರುವುದನ್ನು ಬಹಳ ಬೇಗ ಕಲಿತುಕೊಂಡ. ಅಧಿಕಾರಿಗಳ ಮಗಳ ಮದುವೆ ಆ ಊರಿನ ಪ್ರಸಿದ್ಧ ಪತ್ರಿಕೆಯ ಸಂಪಾದಕರೊಂದಿಗೆ ನಿಶ್ಚಯವಾಯಿತು. ಸಂತಸ ಸಂಭ್ರಮಗಳಿಂದ ಸಿದ್ಧತೆಗಳು ಜರುಗತೊಡಗಿದವು. ಮದುವೆ ಇನ್ನೊಂದು ವಾರವಿದೆ ಎನ್ನುವಾಗ ಹಾರ್ಟ್ ಬ್ರೇಕಿಂಗ್ ನ್ಯೂಸ್ ಬಂತು. ಹುಡುಗ ಮೊದಲೇ ಪ್ರ್‍ಏಮಿಸಿ ಒಬ್ಬ ಹುಡುಗಿಯನ್ನು ಮದುವೆಯಾಗಿದ್ದ. ಒಂದು ಮಗುವೂ ಇತ್ತು. ತಮಗೆ ಇಷ್ಟ ಇಲ್ಲದ ಸೊಸೆಗೆ ಬಲವಂತವಾಗಿ ಮಗನಿಂದ ಡೈವರ್ಸ್ ಕೊಡಿಸಿ ವಿಷಯ ಮುಚ್ಚಿಟ್ಟು ಮದುವೆ ಮಾಡಲು ಹೊರಟಿದ್ದರು. ಹುಡುಗನಿಗೆ ಈ ಮದುವೆ ಇಷ್ಟವೇ ಇರಲಿಲ್ಲ. ಮದುವೆ ಮುರಿಯಿತು. ಖಿನ್ನರಾಗಿ ಅಫ಼ೀಸಿನ ಖುರ್ಚಿಯ ಮೇಲೆ ಕುಳಿತ ಅಧಿಕಾರಿ ಗೊಣಗಿದರು. "ಆ ಹುಡುಗನಿಗೆ ಮೊದಲೇ ಮದುವೆ ಆಗಿತ್ತಂತೆ...