Posts

Showing posts from March, 2020

ಜ್ಞಾನ ಧಾರೆ

ಜ್ಞಾನಧಾರೆ:15 ಕೊರೋನೋ ವೈರಸ್‌ ಗೆ ಇಲ್ಲಿದೆ ಪರಿಹಾರ...!!!       ಜಗತ್ತು ಪೂರಾ‌ ಕೊರೋನಾ ವೈರಸ್ ಜ್ವರ ಭಾಧೆಯಿಂದ ತತ್ತರಿಸಿರುವಾಗ, ಪ್ರತಿಯೊಬ್ಬರೂ ಭೀತಿಯಿಂದ ಜೀವಿಸುತ್ತಿರುವ ಈ ಸಂದಿಗ್ಧ ಸಮಯದಲ್ಲಿ ಪ್ರವಾದಿವರ್ಯರು‌ ನಮ್ಮೊಂದಿಗೆ ಒಂದು ದ್ಸಿಕ್ರ್ ರೂಢಿ‌ ಮಾಡಲು ಹೇಳುತ್ತಾರೆ.         ಸಕಲ ತೊಂದರೆ, ರೋಗ, ‌ನೋವುಗಳಿಂದ‌ ಮುಕ್ತಿ ಸಿಗಲು ಪ್ರವಾದಿವರ್ಯರು ಹೇಳಿ ಕೊಟ್ಟ ಒಂದು ಆತ್ಮೀಯ ಪ್ರತಿರೋಧ ಆಯುಧವಾಗಿದೆ‌ ಈ ಕೆಳಗಿನ ದ್ಸಿಕ್ರ್‌.. بسم الله الذي لا يضر مع اسمه شيء في الأرض ولا في السماء وهو السميع العليم (ಬಿಸ್ಮಿಲ್ಲಾ ಇಲ್ಲಝೀ ಲಾ ಯಲುರ್ರು ಮಹಸ್ಮಿಹೀ ಶಯಿಹುನ್ ಫಿಲ್ ಅರ್ಲಿ ವಲಾ ಫಿಸ್ಸಮಾಈ ವಹುವಸ್ಸಮೀಹುಲ್ ಅಲೀಮ್) ಇದರ ಜೊತೆ ‌ أعوذ بكلمات اللَّه التامات من شر ما خلق (ಅಹೂಝು ಬಿಕಲಿಮಾತಿಲ್ಲಾಹಿ ತಾಮ್ಮಾತಿನ್ ಮಿನ್ ಶರ್ರಿ ಮಾ ಖಲಖ್) 👆🏻ಎಲ್ಲಾ‌ ದಿವಸವೂ ಬೆಳಿಗ್ಗೆ ಹಾಗೂ ‌ಸಂಜೆ ಇದನ್ನು ಮೂರು ‌ಬಾರಿ‌ ಮರೆಯದೆ ಹೇಳಿರಿ.      ವಿಶೇಷವಾಗಿ ಮನೆಯಿಂದ ಹೊರಗೆ ಹೋಗುವಾಗ, ‌ಯಾತ್ರೆ ಮಾಡಿ ಎಲ್ಲಿ ತಲುಪಿದರೂ‌ ಈ ದ್ಸಿಕ್ರ್ ಹೇಳಿ ರೂಢಿ ಮಾಡಿರಿ. ಇದು ರೂಢಿ ಮಾಡಿದರೆ ಯಾವುದೇ ನೋವುಂಟು ಮಾಡುವ ರೋಗವೂ ನಮ್ಮತ್ತ ಸುಳಿಯಲ್ಲ. ಅಲ್ಲಾಹು ನಮ್ಮನ್ನು ಸಕಲ ಮಾರಕ ರೋಗಗಳಿಂದಲೂ ಕಾಪಾಡಲಿ, ಆಮೀನ್.

ಜ್ಞಾನ ಧಾರೆ

ಜ್ಞಾನಧಾರೆ: 14 ಹಾತಿಮುಲ್ ಅಸಮ್ಮ್ ಎಂಬ ಮಹಾನರ ನಾಲ್ಕು ಪ್ರಧಾನ ಉಪದೇಶ...!? ಅಬ್ದುಲ್ಲಾ ಇಬ್ನ್ ಸಮರ್ಕಂದೀ(ರ.ಅ) ತನ್ನ 'ತಂಬೀಹುಲ್ ಗಾಫಿಲೀನ್' ಎಂಬ ಗ್ರಂಥದಲ್ಲಿ ಉದ್ಧರಿಸುತ್ತಾರೆ. ಹಾತಿಮುಲ್ ಅಸಮ್ಮ್(ರ.ಅ)  ಹೇಳುತ್ತಾರೆ, ಈ ನಾಲ್ಕು ವಿಷಯಗಳ ಬೆಲೆ, ಸ್ಥಾನ, ಮಹತ್ವ ಈ ನಾಲ್ಕು ಮಾದರಿಯ ಜನರು ಮಾತ್ರ ತಿಳಿದಿರುವರು. 1. ವೃದ್ಧಾಪ್ಯ ತಲುಪಿದವರು ಮಾತ್ರ ಯೌವ್ವನದ ಮಹತ್ವ ತಿಳಿಯುವುದು. 2. ನೋವು, ಕಷ್ಟ ಅನುಭವಿಸಿದವರು ಮಾತ್ರ ಕ್ಷೇಮದ ಮಹತ್ವ ತಿಳಿಯುವುದು. 3. ರೋಗಿಯಾದವನು ಮಾತ್ರ ಆರೋಗ್ಯದ ಮಹತ್ವ ತಿಳಿಯುವುದು.  4. ಮರಣ ಹೊಂದಿದವರು ಮಾತ್ರ ಜೀವನದ ಮಹತ್ವ ತಿಳಿಯುವುದು.(ತಂಬೀಹುಲ್    ಗಾಫಿಲೀನ್-39)

ಜ್ಞಾನ ಧಾರೆ

ಜ್ಞಾನಧಾರೆ: 13 ಹೃದಯ ಶುದ್ಧಿಗೆ 5 ಮಹಾ ಔಷಧಿಗಳು...!! ಮಹಾನರಾದ "ಝೈನುದ್ದೀನ್ ಮಖ್ದೂಂ"(ರ.ಅ) ತನ್ನ " ಕಿತಾಬುಲ್ ಅದ್ಸ್'ಕಿಯಾ "ದಲ್ಲಿ ಹೃದಯ ಶುದ್ಧಿಗೆ ಐದು ಔಷಧಿಗಳನ್ನು ವಿವರಿಸುತ್ತಾರೆ. ಅದನ್ನು ನಿಜಜೀವನದಲ್ಲಿ ಅನುಕರಿಸಿ ತಂದರೆ ನಮ್ಮ ದ್ವಿಲೋಕ ಜೀವನವೂ ಪ್ರಕಾಶಮಯವಾಗಲಿದೆ. 👇🏻ಹೃದಯ ಶುದ್ಧಿಗಿರುವ ಐದು ಔಷಧಿಗಳು ودواء قلب خمسة فتلاوة بتدبر المعنى وللبطن الخلا   وقيام ليل والتضرع باالسحر ومجالسات الصالحين الفضلا 1. ಕುರ್'ಆನ್ ಪಾರಾಯಣ ಮಾಡುವಾಗ ಅರ್ಥ ಗ್ರಹಿಸಿ ಪಾರಾಯಣ ಮಾಡುವುದು. 2. ಹೊಟ್ಟೆ ಖಾಲಿಯಾಗಿಸುವಿಕೆ. 3. ರಾತ್ರಿ ನಿದ್ದೆ ಉಪೇಕ್ಷಿಸಿ ನಮಾಜ್ ಮಾಡುವುದು.  4.ಸಹರಿ ಸಮಯದಲ್ಲಿ ಧ್ಯಾನ ಮಾಡುವುದು. 5. ಸಚ್ಚರಿತ ಸಜ್ಜನ ವ್ಯಕ್ತಿಗಳೊಂದಿಗೆ ಸಹವಾಸ        ಕುರ್-ಆನಿನ ಅರ್ಥ ಗ್ರಹಿಸಿ ಪಾರಾಯಣ ಮಾಡುವಾಗ ನಮ್ಮ ಹೃದಯದಲ್ಲಿ ಬದಲಾವಣೆಯ ತಂಗಾಳಿ ಬೀಸಲು ಆರಂಭಿಸುತ್ತದೆ. ಕಣ್ಣುಗಳು ತೇವಗೊಳ್ಳುತ್ತದೆ. ಹೃದಯ ಶುದ್ಧಿಯಾಗುತ್ತೆ. ಒಂದೊಂದು ಕಣ್ಣಂಬನಿ ಉದುರುವಾಗ ಹೃದಯದಲ್ಲಿ ಅಂಟಿಕೊಂಡ ಮಾಲಿನ್ಯಗಳು ಶುದ್ಧಿಯಾಗಿ ಹೃದಯ ಪ್ರಕಾಶಿಸಲು ಆರಂಭಿಸುತ್ತದೆ. ಅಲ್ಲಾಹು ನಮ್ಮನ್ನು ಈ ಪೈಕಿ ಸೇರಿಸಲಿ, ಆಮೀನ್

ಜ್ಞಾನ ಧಾರೆ

ಜ್ಞಾನಧಾರೆ: 12 ಹಜ್ಜ್ ನಿರ್ವಹಿಸದವನಿಗೆ ಹಜ್ಜಿನ ಪ್ರತಿಫಲ..!?        ಹದೀಸುಗಳನ್ನು ವ್ಯಾಖ್ಯಾನಿಸುತ್ತಾ ಮಹಾನರು ಹೇಳುತ್ತಾರೆ. ನಿಶ್ಚಯವಾಗಿಯೂ ಪರಲೋಕದಲ್ಲಿ ವಿಚಾರಣೆ ಮಾಡುವ ದಿನ ಅಲ್ಲಾಹು ದಾಸನೋರ್ವನನ್ನು ಹಾಜರುಪಡಿಸುತ್ತಾನೆ. ನಂತರ ಆ ದಾಸನಿಗೆ ತನ್ನ ಜೀವನದ ರಿಪೋರ್ಟ್ ನೀಡಲಾಗುತ್ತದೆ. ಅದನ್ನು ಆ ವ್ಯಕ್ತಿ ಬಲಗೈಯಲ್ಲಿ ಸ್ವೀಕರಿಸುವನು. ಆ ವ್ಯಕ್ತಿ ಅದನ್ನು ತೆರೆದು ಓದಿ ನೋಡುವಾಗ ಅದರಲ್ಲಿ ಹಜ್ಜ್ ನಿರ್ವಹಿಸಿದ್ದಾಗಿ, ಧರ್ಮಯುದ್ಧ ಮಾಡಿದ್ದಾಗಿ, ದಾನಧರ್ಮ ಮುಂತಾದ ಒಳ್ಳೆಯ ಸತ್ಕರ್ಮಗಳು ಮಾಡಿದ್ದಾಗಿ ಅದರಲ್ಲಿ ಕಾಣಲು ಸಾಧ್ಯವಾಗುತ್ತದೆ. ಆ ದಾಸನಿಗೆ ಇದೆಲ್ಲಾ ಮಾಡಬೇಕೆಂಬ ಮನೋ-ವಾಂಛೆ ಇದ್ದರೂ ಆತನ ಭೌತಿಕ ಜೀವನದಲ್ಲಿ ಇದ್ಯಾವುದೂ ಮಾಡುವ ಅವಕಾಶ ಒದಗಿ ಬಂದಿರಲಿಲ್ಲ .ಆ ಕಾರಣ ಆ ದಾಸ ಅಲ್ಲಾಹನಲ್ಲಿ ಹೇಳುವನು, ' ಇದು ನನ್ನ ಕಿತಾಬ್ ಅಲ್ಲ ನಾನಿಷ್ಟು ಸತ್ಕರ್ಮಗಳು ಮಾಡಿರಲಿಲ್ಲ' ಆಗ ಅಲ್ಲಾಹು ಹೇಳುವನು " ಇದು ನಿನ್ನ ಕಿತಾಬೇ ಆಗಿದೆ, ನೀನು ಬಡವನಾಗಿ ಸುದೀರ್ಘ ವರ್ಷ ಜೀವಿಸಿದ್ದಾಗ ನಿನ್ನ ಮನ ಮಂತ್ರಿಸುತ್ತಿದ್ದದ್ದು ನನಗೆ ಸಂಪತ್ತು ಇದ್ದರೆ ಅದುಪಯೋಗಿಸಿ ನಾನು ಹಜ್ಜ್ ನಿರ್ವಹಿಸುತ್ತಿದ್ದೆ. ನನ್ನಲ್ಲಿ ಹಣ ಇದ್ದರೆ ನಾನು ಅದರಿಂದ ದಾನ-ಧರ್ಮ ಮಾಡುತ್ತಿದ್ದೆ" ಎಂಬ ನಿನ್ನ ಉದಾತ್ತ ಸತ್ಯ ಸಂಧವಾದ ನಿಯತ್ತಿನ ಫಲದಿಂದ ಅದು ನೀನು ಮಾಡದಿದ್ದರೂ ಅದರ ಪ್ರತಿಫಲವೆಲ್ಲಾ ನಾನು ನಿನಗೆ ನೀಡಿದ್ದೇನೆ.  ಸತ್...

ಉಮ್ಮುಲ್ ಖುರ್‌ಆನ್

ಸೂರಾಃ ಫಾತಿಹ  ಸೂರಃ ಫಾತಿಹಾ ಹಿಜ್ರಾಕ್ಕೆ ಮೊದಲು ಮತ್ತು ಹಿಜ್ರಾಕ್ಕೆ ನಂತರ ಹೀಗೆ ಎರಡು ಬಾರಿ ಅವತೀರ್ಣಗೊಂಡಿದೆ ಎಂಬ ಅಭಿಪ್ರಾಯದಂತೆ, ಅದನ್ನು  "ಮಕ್ಕಿಯ್ಯ್" ಮತ್ತು "ಮದನಿಯ್ಯ್" ಎಂದು ಹೇಳಲಾಗುತ್ತದೆ. ಅದರ ಆಯತುಗಳ ಸಂಖ್ಯೆ ಏಳು, ಶಾಫಿಈ ಮದ್ಸ್ ಹಬ್ ಪ್ರಕಾರ ಬಿಸ್ಮಿ... ಫಾತಿಹಾದ ಒಂದು ಆಯತ್ ಆಗಿದ್ದು, ನಮಾಝಿನಲ್ಲಿ ಫಾತಿಹ ಓದುವಾಗ ಬಿಸ್ಮಿ ಓದುವುದು ಕಡ್ಡಾಯವಾಗಿದೆ.  ಈ ಸೂರತ್‌ಗೆ ಹಲವು ನಾಮಗಳಿವೆ. ಅಧಿಕ ಹೆಸರುಗಳು ಅದರ ಶ್ರೇಷ್ಟತೆಯ ಹೆಚ್ಚಳವನ್ನು ಸೂಚಿಸುತ್ತದೆ...  1.الفَاتِحَة (ಆರಂಭಿಸುವ ಅಧ್ಯಾಯ)  ಖುರ್‌ಆನಿನ ಸೂರತ್‌ಗಳ ಪೈಕಿ ಪ್ರಾರಂಭದ ಸೂರತ್ ಮತ್ತು ನಮಾಝಿನ ಆರಂಭದಲ್ಲಿ ಓದಲ್ಪಡುವ ಸೂರತ್ ಎಂಬ ಅರ್ಥದಲ್ಲಿ ಫಾತಿಹ ಸೂರತ್ (ಆರಂಭಿಸುವ) ಎನ್ನಲಾಗುತ್ತದೆ.. 2.اَلسَّبْعُ الْمَثَانِى(ಆವರ್ತಿಸಿ ಓದಲ್ಪಡುವ)  ನಮಾಝಿನಲ್ಲಿ ಮತ್ತು ಹಲವು ಸಂದರ್ಭಗಳಲ್ಲಿ ಆವರ್ತಿಸಿ ಓದಲ್ಪಡುವ ಸೂರತ್ ಆಗಿರುವುದರಿಂದ ಹೀಗೆ ಹೆಸರಿಸಲಾಗಿದೆ... 3.اَلْقُرْآنُ الْعَظِيمْ(ಮಹತ್ತರವಾದ ಖುರ್‌ಆನ್)  ಖರ್‌ಆನ್‌ನಲ್ಲಿರುವ ಸರ್ವಜ್ಞಾನಗಳೂ ಈ ಸೂರತ್‌ನಲ್ಲಿ ಅಡಕವಾಗಿರುವುದರಿಂದ ಈ ಹೆಸರು ಹೇಳಲಾಗುತ್ತದೆ...  4.اَلشِّفَاءُ(ಉಪಶಮನ) ಎಲ್ಲಾ ರೋಗಗಳಿಗೆ ಉಪಶಮನ ಲಭಿಸುವ ಸೂರತ್ ಎಂಬ ಕಾರಣಕ್ಕಾಗಿ ಇದಕ್ಕೆ ಈ ಹೆಸರು ಬಂದಿದೆ. 5.اَلدُّعَاءْ(ಹಿದಾಯತ್‌ಗಾಗಿ ಪ್ರಾರ್ಥನೆ) اِهْدِنَا ...

ಬದ್ರ್ ಚರಿತ್ರೆ-02

ಬದ್‌ರ್ ಚರಿತ್ರೆ ಭಾಗ-02 ಅಧ್ಯಾಯ-4 ಚಿತ್ರಹಿಂಸೆ  ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಬಹಿರಂಗ ಪ್ರಚಾರಕ್ಕೆ ಇಳಿದ ನಂತರದ ದಿನಗಳು ಚಿತ್ರಹಿಂಸೆಯ ದಿನಗಳಾಗಿದ್ದವು. ಈ ಹಿಂಸಾ ಕೃತ್ಯಗಳು ಕೇವಲ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಹಾಗೂ ಅವರ ಅನುಯಾಯಿಗಳಿಗೆ ಸೀಮಿತವಾಗಿರಲಿಲ್ಲ. ಪ್ರವಾದಿಯನ್ನು ಬೆಂಬಲಿಸಿದ ಹಾಶಿಂ ಮುತ್ತಲಿಬ್ ವಂಶದ ಸರ್ವರ ಮೇಲೂ ಹಲ್ಲೆ, ದಾಳಿಗಳಾಗುತ್ತಿದ್ದವು. ಹಾಗೆ ನೋಡಿದರೆ, ಅದು ಕೇವಲ ವ್ಯಕ್ತಿ ಹಲ್ಲೆಗಳು ಮಾತ್ರವಾಗಿರಲಿಲ್ಲ. ಅದೊಂದು ಅಘೋಷಿತ ಯುದ್ಧವಾಗಿತ್ತು. ಚಿತ್ರಹಿಂಸೆ, ಪೀಡನೆ, ಕೊಲೆ, ಬಹಿಷ್ಕಾರ, ಮುತ್ತಿಗೆ, ವ್ಯಾಪಾರ ವಹಿವಾಟುಗಳಿಗೆ ತಡೆ, ಸಂಪತ್ತಿನ ಮೇಲೆ ದಾಳಿ, ತೋಟಗಳ ಮೇಲೆ ದಾಳಿ ಮೊದಲಾಗಿ ಯುದ್ಧ ಸರ್ವ ಲಕ್ಷಣಗಳೂ ಪ್ರಕಟವಾಗಿದ್ದವು.  ಅಬ್ದುಲ್ಲಾಹಿಬ್ ಮಸ್ ಊದ್ (ರ) ಹೇಳುತ್ತಾರೆ. ನಾವು ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರೊಂದಿಗೆ ಮಸ್ಜಿದುಲ್ ಹರಮ್‌ನಲ್ಲಿದ್ದೆವು. ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ನಮಾಝ್ ಮಾಡುತ್ತಿದ್ದರು. ಕೆಲವು ದಿನಗಳ ಹಿಂದೆ ದ್ಸಬಹ್ ಮಾಡಲಾಗಿದ್ದ ಒಂಟೆಯ ಅವಶೇಷಗಳು ಪಕ್ಕದಲ್ಲಿದ್ದವು. ಅಲ್ಲಿದ್ದ ಅಬೂಜಹಲ್ ತನ್ನ ಜನರೊಂದಿಗೆ ಕೇಳಿದನು.. "ಆ ಕಾಣುವ ಒಂಟೆಯ ಅವಶೇಷಗಳನ್ನು ತಂದು ಮುಹಮ್ಮದನ ಮೇಲೆ ಎಸೆಯಬೇಕು. ಅದಕ್ಕೆ ಯಾರು ಸಿದ್ಧರಿದ್ದೀರಿ ?” ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಸಾಷ್ಟಾಂಗದಲ್ಲಿದ್ದರು. ಉಕ್ಬತುಬುನು ಅಬೀ...