Posts

Showing posts from October, 2020

ಮಲಕ್ ರಿಝ್‌ವಾನ್ (ಅ) ರನ್ನು ಬೇಟಿಯಾದ ಹಝ್ರತ್ ಉಮರ್ (ರ) ರ ದಾಸಿ

ಮಲಕ್ ರಿಝ್‌ವಾನ್ (ಅ) ರನ್ನು ಬೇಟಿಯಾದ ಹಝ್ರತ್ ಉಮರ್ (ರ) ರ ದಾಸಿ ✍ಯೂಸುಫ್ ನಬ್‌ಹಾನಿ ಕುಕ್ಕಾಜೆ      ▪ ಇಸ್ಲಾಮಿನ ಎರಡನೇ ಖಲೀಫಾ ಹಝ್ರತ್ ಉಮರ್ ಬಿನ್ ಅಲ್ ಖತ್ತಾಬ್ (ರ) ರವರ ಮನೆಯಲ್ಲಿ ಝಾಯಿದಾ ಎಂಬ ಹೆಸರಿನ ಒಂದು ದಾಸಿ ಮನೆ ಕೆಲಸಕ್ಕಿದ್ದರು. ತನ್ನ ಕೆಲಸವನ್ನು ಬಹಳ ಅಚ್ಚುಕಟ್ಟಾಗಿ ಮಾಡುತ್ತಿದ್ದ ಆ ಮಹಿಳೆಯಲ್ಲಿ ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರಿಗೂ ಬಹಳ ಇಷ್ಟವಾಗಿತ್ತು. ಮಾತ್ರವಲ್ಲ ಆ ಮಹಿಳೆಯನ್ನು ನೋಡುವಾಗಲೆಲ್ಲ ನೀನು ಭಾಗ್ಯವಂತೆ. ನೀನು ಅದೃಷ್ಟಶಾಲಿ" ಎಂದು ಪ್ರವಾದಿಯವರು ಯಾವಾಗಲೂ ಹೇಳುತ್ತಿದ್ದರು.       ▪ ಒಂದು ದಿನ ಈ ದಾಸಿಯು ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಸನ್ನಿಧಿಗೆ ಬಂದು ಹೇಳಿದರು. "ನಾನಿವತ್ತು ಮನೆಯಲ್ಲಿ ಅಡುಗೆ ಮಾಡಲು ಕಟ್ಟಿಗೆ ತರಲು ಹತ್ತಿರದ ಬೆಟ್ಟಕ್ಕೆ ಹೋದೆನು. ಜಮೆ ಮಾಡಿದ ಕಟ್ಟಿಗೆಯ ಕಟ್ಟು ಬಹಳ ದೊಡ್ಡ ಗಾತ್ರದ್ದಾದರಿಂದ ನನಗೆ ಅದನ್ನು ಸ್ವಂತವಾಗಿ ತಲೆಯ ಮೇಲಿಟ್ಟು ಹೊರಲು ಕಷ್ಟಸಾಧ್ಯಯಿತು. ಏನು ಮಾಡುವುದು..? ಯಾರಾದರೂ ಸಹಾಯ ಮಾಡಲು ಸಿಗುತ್ತಾರಾ ಎಂದು ಆಲೋಚಿಸಿ ಕುಳಿತಿರುವಾಗ ಬಹಳ ಸುಂದರವಾದ ಒಬ್ಬ ಯುವಕ ಒಂದು ಕುದುರೆಯ ಮೇಲೆ ಕುಳಿತು ಸವಾರಿ ಮಾಡುತ್ತಾ ಬರುತ್ತಿದ್ದರು. ಎಷ್ಟು ಸುಂದರನೆಂದರೆ, ನಾನೊಮ್ಮೆಯೂ ನನ್ನ ಬದುಕಿನಲ್ಲಿ ಅಷ್ಟೊಂದು ಸುಂದರನಾದ ವ್ಯಕ್ತಿಯನ್ನು ಒಮ್ಮೆಯೂ ನೋಡಿರಲಿಲ್ಲ. ಬಹಳ ಶುಭ್ರವಾದ ವಸ್ತ್ರ ...

ಜ್ಞಾನಧಾರೆ

ಲೋಕ ನಾಯಕ ಪ್ರವಾದಿﷺ ರಿಗೆ ಶತ್ರು ಪ್ರಮುಖ ಅಬೂಜಹಲ್ ಸಂರಕ್ಷಣೆ ನೀಡಿದ್ದಾನೆಯೇ..!? ಪ್ರವಾದಿﷺ ಹೇಳುತ್ತಾರೆ: ಒಮ್ಮೆ ನಾನು ಮಗುವಾಗಿದ್ದಾಗ ಅಬ್ದುಲ್ ಮುತ್ತಲಿಬ್ ರಿಂದ ದೂರ ಸರಿದಿದ್ದೆ(ನಾನು ಕಾಣೆಯಾಗಿದ್ದೆ). ಅತಿ ಕಠಿಣ ಹಸಿವು, ನೀರಡಿಕೆ ನನ್ನನ್ನು ಮರಣಹೊಂದಿಸಲು ಸಮೀಪಿಸುತ್ತಿತ್ತು. ನಂತರ ಅಲ್ಲಾಹು ನನಗೆ ಒಂದು ದಾರಿ ತೋರಿಸಿದ." ಈ ಹದೀಸ್ ಉದ್ಧರಿಸುತ್ತಾ ಲಹ್ಹಾಖ್(ರ.ಅ) ಹೇಳುತ್ತಾರೆ; ಅಬ್ದುಲ್ ಮುತ್ತಲಿಬ್ ಪ್ರವಾದಿﷺ ಕಣ್ಮರೆಯಾದಾಗ ಕ'ಅಬಾದ ಸ್ತಂಭವನ್ನು ಹಿಡಿದು ಹಾಡುತ್ತಾ, ಪ್ರಾರ್ಥಿಸಿದರು.  ಆ ಪದ್ಯ ಅವರು ಪುನರಾವರ್ತಿಸಿ ಹೇಳುತ್ತಿದ್ದರು. ಅಷ್ಟರಲ್ಲಿ ಒಂದು ಒಂಟೆಯ ಮೇಲೆ ಕುಳಿತು ಪ್ರವಾದಿﷺ ಬರುವ ದೃಶ್ಯ. ಮುಂದೆ ಮಗುವಾಗಿದ್ದ ಪ್ರವಾದಿﷺ, ಹಿಂದೆ ಶತ್ರು ಪ್ರಮುಖನಾದ ಅಬೂಜಹಲ್ ಇದ್ದ.  ಅವನು ಹೇಳಿದ, "ಈ ಮಗು ತುಂಬಾ ಅಸಾಧಾರಣವಾದುದು. ಅಬ್ದುಲ್ ಮುತ್ತಲಿಬ್; ಏನು ವಿಷಯ..?  ಅಬೂಜಹಲ್: ದಾರಿಮಧ್ಯೆ ಏಕಾಂಗಿಯಾಗಿ ನಿಂತಿದ್ದ ಈ ಮಗುವನ್ನು ನನ್ನ ಒಂಟೆಯ ಮೇಲೆ ಇಟ್ಟು ಹಿಂಬದಿಯಲ್ಲಿ ಕುಳ್ಳಿರಿಸಿದೆ. ಒಂಟೆಯನ್ನು ಮುಂದಕ್ಕೆ ತಳ್ಳಿದಾಗ ಅದು ಒಂದು ಹೆಜ್ಜೆ ಕೂಡ ಮುಂದೆ ಹೋಗಲಿಲ್ಲ.  ಅದನ್ನು ಎಷ್ಟು ತಳ್ಳಿದರೂ ಅದರಲ್ಲಿ ಒಂದೇ ಒಂದು ಬದಲಾವಣೆ ಆಗಲಿಲ್ಲ. ಇದೇಕೆ‌ ಈಗೆ..? ಎಂದು ನಾನು ಆಲೋಚಿಸಿದೆ. ಕೊನೆಗೆ ನಾನು ಮಗುವನ್ನು ನನ್ನ ಮುಂದೆ ಕುಳ್ಳಿರಿಸಿದಾಗ ಒಂಟೆ ತುಂಬಾ ಆರಾಮವಾಗಿ ಮುಂದೆ ಹೋಗಲು ಪ್ರಾರಂಭಿಸಿ...

ಪ್ರವಾದಿ ಪ್ರಪಂಚ

✍🏻ಯೂಸುಫ್ ನಬ್‌ಹಾನಿ ಕುಕ್ಕಾಜೆ     ▪️ ಪ್ರಖ್ಯಾತ ಸ್ವಹಾಬಿ ಹಝ್ರತ್ ಅಬ್ದುಲ್ಲಾಹಿ ಬಿನ್ ಬುಸ್‌ರ್ (ರ‌ಅ) ರವರು ಹೇಳುತ್ತಾರೆ, "ಒಮ್ಮೆ ನಮ್ಮ ಮನೆಗೆ ಪ್ರವಾದಿ ಮುಹಮ್ಮದ್ ﷺ ರು ಅತಿಥಿಯಾಗಿ ಬಂದರು. ತಂದೆಯವರು ಅವರಿಗೆ ಕುಳಿತುಕೊಳ್ಳಲು ಮನೆಯಲ್ಲಿದ್ದ ಒಂದು ಮಖಮಲ್ (Velvet) ಬಟ್ಟೆಯನ್ನು ನೆಲದಲ್ಲಿ ಹಾಸಿದರು. ಪ್ರವಾದಿವರ್ಯರು ಅದರಲ್ಲಿ ಕುಳಿತರು. ತಂದೆಯವರು ಮನೆಯೊಳಗೆ ಬಂದು ತಾಯಿಯಲ್ಲಿ ಕೇಳಿದರು. ಪ್ರವಾದಿವರ್ಯರು ಮನೆಗೆ ಬಂದಿದ್ದಾರೆ. ಅವರಿಗೆ ತಿನ್ನಲು ಕೊಡಲು ಮನೆಯಲ್ಲಿ ಏನಾದರೂ ಇದೆಯೇ.?ತಾಯಿಯವರು ಹೇಳಿದರು. ಹೌದು ಇದೆ. ಒಳ್ಳೆಯ ಖರ್ಜೂರ ಹೈಸ್ (حيس) ಇದೆ.  ( ಹೈಸ್ ಎಂದರೆ, ಖರ್ಜೂರದ ಬೀಜ ಬೇರ್ಪಡಿಸಿ ಅದಕ್ಕೆ ಗೋಧಿ ಹಿಟ್ಟು ಮತ್ತು ತುಪ್ಪ ಮಿಶ್ರಣ ಮಾಡಿ ಜಾಮಿನ ರೂಪದಲ್ಲಿ ಮಾಡುವ ಒಂದು ತರ ಖಾದ್ಯ) ನಂತರ ಅದನ್ನು ಅವರ ಸನ್ನಿಧಿಯಲ್ಲಿ ಇಡಲಾಯಿತು. ಪ್ರವಾದಿಯವರೊಂದಿಗೆ ತಂದೆಯವರು ಕೂಡ ತಿನ್ನಲು ಕುಳಿತರು. ಇಬ್ಬರೂ ಒಟ್ಟಾಗಿ ತಿಂದರು. ಬಳಿಕ ಪ್ರವಾದಿ ಮುಹಮ್ಮದ್ ﷺ ರು ಮನೆಯವರಿಗೆ ಬೇಕಾಗಿ ದುಆ ಮಾಡಿದರು."     ▪️ ಅಬ್ದುಲ್ಲಾಹಿ ಬಿನ್ ಬುಸ್‌ರ್ (ರ) ರವರು ಮುಂದುವರಿಸುತ್ತಾ ಹೇಳುತ್ತಾರೆ. "ಆ ವೇಳೆ ನಾನು ಪುಟ್ಟ ಬಾಲಕನಾಗಿದ್ದೆ. ಮನೆಯಲ್ಲಿ ಆಚೆ ಈಚೆ ಓಡಿ ಆಟವಾಡುತ್ತಿದ್ದ ನನ್ನನ್ನು ಪ್ರವಾದಿಯವರು ಕರೆದು ತನ್ನ ಹತ್ತಿರ ಕುಳ್ಳಿರಿಸಿಕೊಂಡು ನನ್ನ ತಲೆಯ ಮೇಲೆ ಅವರ ಪವಿತ್ರ ಹಸ್ತದಿಂದ ...

ಸಬಾಹಲ್ ಖೈರ್

ಸಹನೆಗೆ ಸಿಂಹ ಕೂಡಾ ಶರಣಾಯಿತು: ಓರ್ವನು ತನ್ನ ದೂರದ ಊರಲ್ಲಿದ್ದ ಮಿತ್ರನೊಬ್ಬನನ್ನು ಕಾಣಲೆಂದು ಹೋದನು. ಹೋದಾಗ ಮಿತ್ರ ಮನೆಯಲ್ಲಿರಲಿಲ್ಲ. ಪತ್ನಿ ಇದ್ದಳು. ಯಾರು ನೀವು ಎಂದು ಆಕೆ ಕೇಳಿದಾಗ “ನಿಮ್ಮ ಪತಿಯ ಆಪ್ತಮಿತ್ರ, ಅವನೆಲ್ಲಿದ್ದಾನೆ?" ಎಂದು ಕೇಳಿದರು. ಆಗ ಆಕೆ ಹೇಳಿದಳು. “ಸೌದೆ ತರಲೆಂದು ಎತ್ತಲೋ ಹೋಗಿದ್ದಾರೆ. ಮರಳಿಬಾರದೆ ಅಲ್ಲೇ ಸತ್ತಿದ್ದರೆ ಚೆನ್ನಾಗಿತ್ತು ದುಷ್ಟ, ಕೊರಮ ನೀಚ." ಮಿತ್ರನಿಗೆ ಆಶ್ಚರ್ಯವಾಯಿತು. ಹೀಗೂ ಬಯ್ಯುವ ಪತ್ನಿಯರಿದ್ದಾರಾ ಎಂದು ಚಕಿತರಾದರು. ಅಷ್ಟರಲ್ಲಿ ಮಿತ್ರನು ಸೌದೆಯ ಕಟ್ಟನ್ನು ಒಂದು ಸಿಂಹದ ಮೇಲೆ ಹೊರಿಸಿಕೊಂಡು ಬರುವುದು ಕಾಣಿಸಿತು. ಹೊರೆಯನ್ನು ಇಳಿಸಿ “ನೀನು ಹೋಗು" ಎಂದಾಗ ಸಿಂಹ ಹೊರಟು ಹೋಯಿತು. ಮನೆಯಲ್ಲಿ ತನ್ನ ಹಳೆಯ ಮಿತ್ರ ಬಂದುದನ್ನು ಕಂಡು ಬಹಳ ಅಕ್ಕರೆಯಿಂದ ಸ್ವಾಗತಿಸಿ ಉಪಚಾರ ನೀಡಿದನು. ಆಗಲೂ ಆಕೆ ಅವನನ್ನು ಬಯ್ಯುತ್ತಲೇ ಇದ್ದಳು. ಆತ ಚಕಾರವೆತ್ತುತ್ತಿರಲಿಲ್ಲ. ಹಾಗೆ ಮಿತ್ರನು ಹೊರಟು ಹೋದನು.   ಮುಂದಿನ ವರ್ಷ ಇದೇ ಮಿತ್ರ ಮತ್ತೊಮ್ಮೆ ಅದೇ ಮಿತ್ರನ ಭೇಟಿಗೆ ಬಂದನು. ಮಡದಿಯು ಅವನಿಗೆ ಸ್ವಾಗತ ನೀಡಿ ಒಳ್ಳೆಯ ಆತಿಥ್ಯ ಕೊಟ್ಟಳು, ಪತಿ ಎಲ್ಲಿದ್ದಾನೆ ಎಂದು ಕೇಳಿದಾಗ "ಸೌದೆ ತರಲು ಹೋಗಿದ್ದಾರೆ. ಪಾಪ ಅವರೊಬ್ಬರು ದುಡಿದು ಕಷ್ಟಪಟ್ಟು ನಮ್ಮನ್ನು ಸಾಕುತ್ತಿದ್ದಾರೆ. ಚಿನ್ನದಂತಹ ಮನುಷ್ಯ. ಇಂತಹ ಮನುಷ್ಯನ ಕೈಹಿಡಿದ ನಾನು ಧನ್ಯ" ಎಂದೆಲ್ಲ ಪ್ರಶಂಸೆ ಮಾಡಿದಳು. ಅ...

ಲಾಭದಾಯಕ ವ್ಯಾಪಾರ!

ಲಾಭದಾಯಕ ವ್ಯಾಪಾರ! ✍🏻ಯೂಸುಫ್ ನಬ್‌ಹಾನಿ ಕುಕ್ಕಾಜೆ    ▪ ವಿಶ್ವ ವಿಖ್ಯಾತಪಂಡಿತ ಇಮಾಮ್ ಅಸ್‌ಮ‌ಈ (ರ) ರವರು (ಹಿಜ್‌ರಾ 121 - 216) ಒಂದು ದಾರಿಯಲ್ಲಿ ಹೋಗುತ್ತಿರುವಾಗ ಒಬ್ಬಳು ಕೆಲಸದಾಳು ಒಂದು ಬುಟ್ಟಿ ತುಂಬಾ ದಾಳಿಂಬೆ ಹಣ್ಣನ್ನು ತಲೆಯಲ್ಲಿ ಹೊತ್ತುಕೊಂಡು ಹೋಗುತ್ತಿದ್ದಳು.       ▪ ಆ ದಾರಿಯಲ್ಲಿ ಹೋಗುತ್ತಿದ್ದ ಒಬ್ಬ ಯುವಕ ಆ ಬಡಪಾಯಿ ಮಹಿಳೆಯ ಹಿಂದಿನಿಂದ ಹೋಗಿ ದಾಳಿಂಬೆ ಬುಟ್ಟಿಯಿಂದ ಒಂದು ದಾಳಿಂಬೆಯನ್ನು ಕದ್ದು ತೆಗೆದನು. ಇಮಾಮ್ ಅಸ್‌ಮ‌ಈ (ರ) ರವರು ಈ ಕದ್ದ ದಾಳಿಂಬೆಯನ್ನು ಈತ ಏನು ಮಾಡುತ್ತಾನೆಂದು ನೋಡಲು ಅವನ ಹಿಂದಿನಿಂದ ಹೋದರು. ಸ್ವಲ್ಪ ಮುಂದೆ ಸಾಗಿದಾಗ ಯುವಕನು ಅದನ್ನು ಒಬ್ಬ ಭಿಕ್ಷುಕನಿಗೆ ಕೊಟ್ಟನು.       ▪ ಇಮಾಮ್‌ರವರು ಅವನಲ್ಲಿ ಕೇಳಿದರು. ಏನಿದು ಅವಸ್ಥೆ.? ನಾನು ಭಾವಿಸಿದ್ದು ನಿನಗೆ ಹಸಿವಿಗೆ ತಿನ್ನಲಿಕ್ಕೆ ಆಗಿರಬಹುದು ಎಂದು. ಆದರೆ ನೀನು ಇದನ್ನು ಬೇರೊಬ್ಬರಿಗೆ ದಾನ ಮಾಡಿದಿ. ಇದು ಬಹಳ ಅದ್ಭುತವಾದ ಒಂದು ಸಂಗತಿ."ಆಗ ಆತ ಹೇಳಿದ. "ಇಮಾಮರೇ., ನೀವು ಯಾವ ಯುಗದಲ್ಲಿ ಇದ್ದೀರಿ..? ನಾನು ಯಾವುದೇ ಪರಿಶ್ರಮವಿಲ್ಲದೆ ಅಲ್ಲಾಹನಾಗಿ ಒಂದು ಲಾಭದಾಯಕ ವ್ಯಾಪಾರ ಮಾಡಿದ್ದು. ಕುಳಿತಲ್ಲಿಗೇ ಪ್ರತಿಫಲ."       ▪ ಇಮಾಮರು ಕೇಳಿದರು. "ಅದೇನು ಅಂತಹಾ ಲಾಭದಾಯಕ ವ್ಯಾಪಾರ.? ವಿವರಿಸಿ ಕೊಡುತ್ತಿಯಾ.?" ಆಗ ಆತ ಹೇಳಿದ. "ನಾನು ಒಂದು ದಾಳಿಂಬೆ...

ಸಬಾಹಲ್ ಖೈರ್

ಸ್ತ್ರೀಧನ: ಹೆಣ್ಣಿನ ಕಡೆಯವರು ಬೆವರು ಸುರಿಸಿದ ಹಣ ಬಂಗಾರ ಮೋಹಿಸಿ ಮದುವೆಯಾಗದಿರು ಅದರಿಂದ ಬರಕತ್ತನ್ನೇ ಅಲ್ಲಾಹು ಇಲ್ಲವಾಗಿಸುವನು ಎಂಬ ಸತ್ಯ ನೆನಪಿರಲಿ. ಮದುವೆಯಾದ ನಂತರ ಹೆಣ್ಣಿನ ಸಂರಕ್ಷಣೆ ಎಲ್ಲಾ ಗಂಡನ ತಲೆಗೆ, ಆದುದರಿಂದ ಮದುವೆಯಾಗುವಾಗ ಸ್ತ್ರೀಧನದಿಂದ ಸ್ಪಲ್ಪ ಸಮಾಧಾನ ಪಡಕೊಳ್ಳೋಣವೆಂದು ಬಗೆಯದಿರಿ, ಆಡಂಬರ, ಗೌಜಿಯಿಲ್ಲದೆ ಮದುವೆಯಿಂದ ಜೀವನದುದ್ದಕ್ಕೂ ಬರಕತ್ ಇದೆ ಎಂಬ ಸತ್ಯಾಂಶ ಮರೆಯದಿರಿ. ಧಾರಾಳ ಸೊತ್ತು ಸಂಪತ್ತಿರುವವನು ಯಥಾರ್ಥ ಐಶ್ವರ್ಯನಲ್ಲ ಪರಾಶ್ರಯ ರಹಿತ ಜೀವನವೇ ಯಥಾರ್ಥ ಐಶ್ವರ್ಯ ಎಂಬ ಹದೀಸಿನ ಮರ್ಮವನ್ನು ಅರಿತು ಕೊಳ್ಳಿ. ತನ್ನ ಸಹೋದರಿಗೆ ಸ್ತ್ರೀ ಧನ ಕೊಡಲಿಕ್ಕಿದೆ ಎಂಬ ನೆಪ ನೀವು ಹೇಳುಬಹುದು. ಆದರೆ ಅಲ್ಲಾಮಾಇಕ್ಬಾಲ್‌ರವರ ನುಡಿಯೊಂದನ್ನು ಮನನ ಮಾಡು “ಅಲ್ಲಾಹ್ ನನ್ನ ಜೀವನವನ್ನು ಮೇಣ ಬತ್ತಿಯಂತೆ ಮಾಡು” (ಅಂದರೆ ಮೇಣ ಬತ್ತಿ ಇತರರಿಗೆ ಬೆಳಕನ್ನು ನೀಡಿದರೂ ಅದು ಕರಗುತ್ತಾ ಹೋಗುತ್ತದೆ) ಇಂತಹ ಜೀವನ ಆಶಿಸುವವರು ಖಂಡಿತಾ ಪರಾಜಿತಲಾಗಲಾರರು.  ಸಂ: ✒️ಅಬೂರಿಫಾನ ದುಆಃ ಇರಲಿ ಸದಾ.. 𝗟𝗶𝗸𝗲 & 𝗙𝗼𝗹𝗹𝗼𝘄 ✦ ꜰᴏʀ ᴀʟʟ ɪꜱʟᴀᴍɪᴄ ʀᴇʟᴀᴛᴇᴅ ᴀʀᴛɪᴄʟᴇꜱ ᴅᴏᴡɴʟᴏᴀᴅ ᴀɴᴅ ɪɴꜱᴛᴀʟʟ ᴛʜɪꜱ ᴀᴘᴘ https://play.google.com/store/apps/details?id=com.noorulfalah.islamicstories ᴄᴏᴘʏʀɪɢʜᴛ© 𝗡𝗢𝗢𝗥-𝗨𝗟-𝗙𝗔𝗟𝗔𝗛 ORGANIZATION® 💢💢💢💢💢💢💢💢💢💢💢

ಪೈಶಾಚಿಕ ಸಹಾಯ

ಪೈಸಾ'ಚಿಕ' ಸಹಾಯ! ✍🏻ಯೂಸುಫ್ ನಬ್‌ಹಾನಿ ಕುಕ್ಕಾಜೆ      ▪ ಒಮ್ಮೆ ಹನಫೀ ಮದ್‌ಹಬಿನ ಇಮಾಮರಾದ ಜ್ಞಾನಸೂರ್ಯ ಇಮಾಮ್ ಅಬೂ ಹನೀಫ (ರ‌) ರವರ ಸನ್ನಿಧಿಗೆ ಒಬ್ಬನು ಬಂದು ಹೇಳಿದನು. "ಇಮಾಮರೇ.., ನಾನೊಂದು ದೊಡ್ಡ ಸಮಸ್ಯೆಗೆ ಒಳಗಾಗಿದ್ದೇನೆ. ನಾನು ಒಂದೆರಡು ವರ್ಷಗಳ ಮೊದಲು ಕಳ್ಳರ ಹಾವಳಿ ಮತ್ತು ಇತರ ಕೆಲವು ಸಮಸ್ಯೆಗಳಿಂದಾಗಿ ನನ್ನಲ್ಲಿರುವ ಬಂಗಾರ, ಬೆಳ್ಳಿ, ಹಣ ಹಾಗೆಯೇ ಹಲವಾರು ಬೆಲೆಬಾಳುವ ವಸ್ತುಗಳನ್ನು ಒಂದು ಪೆಟ್ಟಿಗೆಯಲ್ಲಿಟ್ಟು ಒಂದು ಕಡೆ ಹುಗಿದಿಟ್ಟಿದ್ದೆನು. ಆದರೆ ಈಗ ಅದರ ಅಗತ್ಯ ಬರುವಾಗ ಹುಗಿದಿಟ್ಟ ಜಾಗ ನೆನಪಿನಿಂದ ಮರೆತು ಹೋಗಿದೆ. ಏನು ಮಾಡಬೇಕೆಂದು ತಿಳಿಯದೆ ಕಂಗಾಲಾಗಿದ್ದೇನೆ. ತಲೆಬಿಸಿಯಿಂದ ಹಲವಾರು ದಿನಗಳಿಂದ ನಿದ್ದೆ ಬರುವುದಿಲ್ಲ. ಊಟ ಪಾನೀಯಗಳು ಕೂಡ ಬೇಡವೆಂದೆನಿಸುತ್ತದೆ. ಆದ್ದರಿಂದ ಅದನ್ನು ಸಿಗುವಂತೆ ಮಾಡಲು ನಿಮ್ಮಲ್ಲಿ ಏನಾದರೂ ಮಾರ್ಗವಿದೆಯಾ..? ದಯೆಮಾಡಿ ನನಗೆ ತಿಳಿಸುವಿರಾ..? ಅದಕ್ಕೋಸ್ಕರ ನಾನು ನಿಮ್ಮ ಈ ಮಹಾ ಸನ್ನಿಧಿಗೆ ಬಂದಿದ್ದೇನೆ."      ▪ ಇಮಾಮ್ ಅಬೂಹನೀಫ (ರ‌) ರವರು ಹೇಳಿದರು. "ನನ್ನಲ್ಲಿ ಇದಕ್ಕೆ ಏನು ಪರಿಹಾರ..? ನಾನೊಬ್ಬ ಇಸ್ಲಾಮಿನ ಕರ್ಮಶಾಸ್ತ್ರ ಪಂಡಿತ. ಆ ವಿಷಯದಲ್ಲಿ ಏನಾದರು ಸಮಸ್ಯೆಯಿದ್ದಲ್ಲಿ ಪರಿಹಾರ ಹುಡುಕಬಹುದಿತ್ತು. ಆದರೆ ಇದಕ್ಕೆ ನನ್ನಲ್ಲಿ ಪರಿಹಾರವಿಲ್ಲ."    ▪ ಸಮಸ್ಯೆಗೊಳಗಾದ ಬಡಪಾಯಿಯು, ಇಮಾಮ್ ಅಬೂಹನೀಫರಿಂದ ಈ ನಿರಾಶಾದಾಯ...

ದಾಂಪತ್ಯ ಜೀವನದಲ್ಲಿ ಸಿಹಿಮಾತು

💞💞💞💞💞💞💞💞💞💞💞💞🌹 ದಾಂಪತ್ಯ ಜೀವನದಲ್ಲಿರಲಿ🌹💞💞💞🌹ಸಿಹಿಮಾತು🌹💞💞💞💞💞💞💞💞💞💞💞💞💞 ಆಧುನಿಕ ಇಲೆಕ್ಟ್ರಾನಿಕ್ ಯುಗದಲ್ಲಿ ಎಲ್ಲರೂ ಬ್ಯುಝಿಯಾಗಿದ್ದಾರೆ. ಯಾರಿಗೂ ಯಾವುದಕ್ಕೂ ಸಮಯವಿಲ್ಲ. ಪರಸ್ಪರ ಹೃದಯ ಬಿಚ್ಚಿ ಮಾತನಾಡಲು ಸಹ ಪುರುಸೊತ್ತಿಲ್ಲ. ಅವರವರಿಗೆ ಅವರವರ ಕೆಲಸ. ಸ್ವಂತ ಬಿಟ್ಟರೆ ಯಾರಿಗೂ ಇನ್ನೊಂದರಲ್ಲಿ ಆಸಕ್ತಿಯಿಲ್ಲ. ಇನ್ನೊಬ್ಬನ ನೋವು ನಲಿವುಗಳನ್ನು ಆಲಿಸುವ ಕಾಳಜಿಯಿಲ್ಲ. ಇದು ಕುಟುಂಬದ ಮಟ್ಟಿಗೆ ಮಾತ್ರ ಸತ್ಯವಲ್ಲ. ಸ್ನೇಹ , ಸಂಬಂಧದಲ್ಲೂ ಸಹ ಇದೇ ಸ್ಥಿತಿಯಿದೆ. ತಾನು ತನ್ನದು ಎಂದಾದ ಮೇಲೆ ಸ್ನೇಹಿತರು ದೂರವಾಗುತ್ತಾರೆ. ಸಮುದಾಯದೊಳಗಿನ ಸ್ಥಿತಿಯೂ ಇದುವೇ ...ಎಲ್ಲವೂ ಯಾಂತ್ರಿಕವಾಗುತ್ತಿದೆ.         ಆರೋಗ್ಯಕರವಾದ ಸಂವಹನ ಅಥವಾ ಮಾತುಕತೆ, ಸಂಬಂಧಗಳನ್ನು ಬಲಿಷ್ಠಗೊಳಿಸುತ್ತದೆ. ಕಾವ್ಯಾತ್ಮಕವಾಗಿ ಹೇಳುವುದಾದರೆ, ಸಂಬಂಧ ಎಂಬ ಶರಬತ್ತಿನಲ್ಲಿ ಸಿಹಿ ಇರಬೇಕಾದರೆ ಅಲ್ಲಿ ಆರೋಗ್ಯಕರ ಸಂವಹನ ಎಂಬ ಸಕ್ಕರೆ ಇರಬೇಕು. ಪ್ರೀತಿ ತುಂಬಿದ ಮಾತುಗಳು, ಕಾಳಜಿಯುಳ್ಳ ಮಾತುಕತೆ ಸಂಬಂಧಗಳನ್ನು ಬಲಪಡಿಸುತ್ತದೆ. ಸಹೃದಯತೆಯನ್ನು ಉಳಿಸುತ್ತದೆ. ವಿಶೇಷವಾಗಿ ದಾಂಪತ್ಯ ಬಂಧದಲ್ಲಿ ಆರೋಗ್ಯಕರ ಸಂವಹನಕ್ಕೆ ಬಹಳಷ್ಟು ಮಹತ್ವವಿದೆ. ಆರೋಗ್ಯಕರ ಸಂವಹನದ ಕೊರತೆಯೇ ನಮ್ಮ ನಡುವಿನ ಅನೇಕ ವಿವಾಹ ವಿಚ್ಛೇದನೆಗಳಿಗೆ ಕಾರಣ.            ಅಧುನಿಕ ದಾಂಪತ್ಯ ಜೀವನ...

ಸಬಾಹಲ್ ಖೈರ್

ಕುರ್‍ಆನ್ ಪಾರಾಯಣ: ಅನಸ್ ಬಿನ್ ಮಾಲಿಕ್(ರ) ರವರಿಂದ ವರದಿ: ಪ್ರವಾದಿﷺರವರು ಹೇಳಿದರು,  “ಓರ್ವನು ತನ್ನ ಮಕ್ಕಳಿಗೆ ಕುರ್‌ಆನ್‌ನನ್ನು ಓದಲು ಕಲಿಸಿದರೆ ಅವನ ಕಳೆದ ಹಾಗೂ ಬರಲಿಕ್ಕಿರುವ ಎಲ್ಲಾ ಪಾಪಗಳನ್ನು ಅಲ್ಲಾಹನು ಕ್ಷಮಿಸುವನು. ಇನ್ನು ಓರ್ವನು ತನ್ನ ಮಕ್ಕಳಿಗೆ ಕುರ್‍ಆನ್‌ನನ್ನು ಕಂಠಪಾಠ ಮಾಡಿಸುವುದಾದರೆ ಅಂತ್ಯದಿನದಲ್ಲಿ ಅವನನ್ನು ಹುಣ್ಣಿಮೆ ಚಂದ್ರನಂತೆ ಎಬ್ಬಿಸಲಾಗುತ್ತದೆ. ಬಳಿಕ ಅವನ ಮಗನೊಂದಿಗೆ ಹೇಳಲಾಗುವುದು. “ನೀನು ಕುರ್‍ಆನ್ ಪಾರಾಯಣ ಮಾಡು.” ಪ್ರತೀ ಸೂಕ್ತವು ಓದಿದಂತೆ ಆ ತಂದೆಯ ಪದವಿಯನ್ನು ಉನ್ನತಿಗೇರಿಸುತ್ತಿರುವನು. ಹಾಗೆ ಅವನು ಕುರ್‍ಆನ್‌ನನ್ನು ಪೂರ್ತಿಯಾಗಿ ಪಾರಾಯಣ ಮಾಡುವವರೆಗೆ ಅದು ಮುಂದುವರಿಯುವುದು. ಸಂ: ✒️ಅಬೂರಿಫಾನ ದುಆಃ ಇರಲಿ ಸದಾ.. 𝗟𝗶𝗸𝗲 & 𝗙𝗼𝗹𝗹𝗼𝘄 ✦ *ꜰᴏʀ ᴀʟʟ ɪꜱʟᴀᴍɪᴄ ʀᴇʟᴀᴛᴇᴅ ᴀʀᴛɪᴄʟᴇꜱ ᴅᴏᴡɴʟᴏᴀᴅ ᴀɴᴅ ɪɴꜱᴛᴀʟʟ ᴛʜɪꜱ ᴀᴘᴘ https://play.google.com/store/apps/details?id=com.noorulfalah.islamicstories ᴄᴏᴘʏʀɪɢʜᴛ© 𝗡𝗢𝗢𝗥-𝗨𝗟-𝗙𝗔𝗟𝗔𝗛 ORGANIZATION® 💢💢💢💢💢💢💢💢💢💢💢

ಈಜಿಪ್ಟ್‌ನ ರಾಜ ಯೂಸುಫ್ ನಬಿ

ಈಜಿಪ್ಟ್‌ನ ರಾಜ ಯೂಸುಫ್ ನಬಿ ۞ بِسْمِ اللهِ الرَّحْمَٰنِ الرَّحِيمْ السَّـــــــلاَمُ عَلَيــْــكُم وَرَحْمَةُ اللهِ وَبَرَكـَـاتُه ಪ್ರೀತಿಯ ಸ್ನೇಹಿತರೇ ನೀವೆಲ್ಲರೂ ಈ ಚರಿತ್ರೆಯನ್ನು ಅರಿತವರಾಗಿರಬಹುದು ಆದರೂ ಆ ಚರಿತ್ರೆಯನ್ನು ಮತ್ತೊಮ್ಮೆ ನೆನಪಿಸುದಕ್ಕಾಗಿ ಈ ಚರಿತ್ರೆಯನ್ನ ಬರೆಯುತ್ತಿದ್ದೇನೆ ಸೃಷ್ಟಿಕರ್ತನಾದ ಅಲ್ಲಾಹು ಅದಕ್ಕೆ ತೌಫೀಕ್ ನೀಡಲಿ (ಆಮೀನ್) ನಾನು ಅಲ್ಲಾಹನ ಪ್ರವಾದಿಯಾದ ಯೂಸುಫ್ ನಬಿ(ಅ) ರ ಜೀವನ ಚರಿತ್ರೆಯ ಪ್ರದಾನವಾದ ಕೆಲ ವಿಷಯಗಳನ್ನು ಬರೆಯುವೆನು   ಸರ್ವ ಶಕ್ತನಾದ ಅಲ್ಲಾಹನ ನಾಮದಿಂದ ನಾ ಕಥೆಯನ್ನು ಆರಂಭಿಸುವೆನು. ನಮಗೆಲ್ಲರಿಗೂ ತಿಲಿದಿರುವ ಹಾಗೆ ಅಲ್ಲಾಹನು ಈ ಭೂಲೋಕಕ್ಕೆ ತನ್ನ ಧರ್ಮ ಇಸ್ಲಾಂ ಅನ್ನು ಪ್ರಬೋದಿಸಲು ಒಂದು ಲಕ್ಷ ಚಿಲ್ಲರೆ ಪ್ರವಾದಿಗಳನ್ನು ಕಲಿಸಿಕೊಟ್ಟಿದ್ದಾನೆ ಆ ಪ್ರವಾದಿ ಸೃಂಕಲಕ್ಕೆ ಅಂತ್ಯಹಾಡಿ ಬಂದವರೇ ನಮ್ಮ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ) ರವರಾಗಿದ್ದಾರೆ ಅವರ ಜನ್ಮದೊಂದಿಗೆ ಅನುಗ್ರಹೀತವಾದ ರಬೀವುಲ್ ಅವ್ವಲ್ ತಿಂಗಳಲ್ಲಿ ಅವರ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳನ್ನು ನಾಡಿನ ಸರ್ವ ಧರ್ಮ ಭಾಂಧವರಿಗೆ ತಿಳಿಸುತ್ತಾ..    ಈ ಪ್ರವಾದಿ ಸೃಂಕಲೆಯಲ್ಲಿ ಉದಯಿಸಿ ಬಂದ ಹಝ್ರತ್ ಇಬ್ರಾಹಿಂ ನಬಿ(ಅ) ರೊಂದಿಗೆ ನಮ್ಮ ಕಥೆಯನ್ನು ಪ್ರಾರಂಬಿಸೋಣ ಇಂಶಾ ಅಲ್ಲಾಹ್...  ✍🏻 ರಶೀದ್ ಕೆ. ಎಂ      ▪️ಹಝ್ರತ್ಇಬ್ರಾಹಿಂ ನಬಿ(ಅ)...