Posts

Showing posts from October, 2019

ನಮಾಝ್

ನಮಾಝ್ ನಾನು ಓದಿದರಲ್ಲಿ ನನಗೆ ತುಂಬಾ ಇಷ್ಟಪಟ್ಟ ಲೇಖನ ಇದು... ಮೂಲ: ಮಳಯಾಲಮ್ ಸಾಧ್ಯವಾದರೆ ಇದನ್ನು ಕೋಪಿ ಮಾಡಿ ಸೇವ್ ಮಾಡಿ ಇಡಿ...ಆಗಾಗ ಓದುತ್ತಾ ಇರಿ. ಅಷ್ಟೂ ಹೃದಯ ಮಿಡಿಯುವ ಲೇಖನವಾಗಿದೆ. ಮದುವೆ ನಿಶ್ಚಿತಾರ್ಥ ವಾದ ಎಲ್ಲಾ ಹೆಣ್ಣು ಮಕ್ಕಳು ಇದನ್ನು ಓದಲೇಬೇಕು, ಅಥವಾ ಓದಿಸಲೇಬೇಕು... ಬರೆದದ್ದು ಯಾರು ಅಂತ ಗೊತ್ತಿಲ್ಲ...ಆದರೆ ಮನಮುಟ್ಟುವ ರಚನೆಯಾಗಿದೆ. ಅದು ಅವಳ ಮದುವೆ ಸುದಿನವಾಗಿತ್ತು. ರಾತ್ರಿ ೯ ಗಂಟೆಗೆ ಮನಯಿಂದ ಸ್ಪಲ್ಪ ದೂರದಲ್ಲಿರುವ ಹಾಲಿನಲ್ಲಿ ನಡೆಯಬೇಕಿದ್ದ ಮದುವೆ ಸಮಾರಂಭಕ್ಕೆ ಬಂಧು ಬಳಗದವರೂ ನೆರೆಮನೆಯವರೂ ಮಧ್ಯಾಹ್ನದ ನಂತರ ಅವಳ ಮನೆಗೆ ಬರುತ್ತಲೇ ಇದ್ದರು. ಮಗ್ರಿಬ್ ನಮಾಝಿನ ನಂತರ ಎಲ್ಲರೂ ಹಾಲಿಗೆ ಹೋಗುವುದಾಗಿ ತೀರ್ಮಾನಿಸಲಾಯಿತು‌. ಗೆಳತಿಯರು ಹಾಗೂ ನೆರೆಮನೆಯ ಹೆಣ್ಣು ಮಕ್ಕಳು ಆಗಲೇ ಅವಳ ಕೋಣೆಗೆ ಪ್ರವೇಶಿಸಿಯಾಗಿತ್ತು. ಮದುಮಗಳ ವಸ್ತ್ರದ ಮತ್ತು ಆಭರಣದ ಸೌಂದರ್ಯ ವನ್ನು ಅವರು ಕಣ್ತುಂಬಾ ಆಸ್ವದಿಸಿದರು ‌ ಹಾಗೆಯೇ ಮಸೀದಿಯ ಮಿನಾರದಿಂದ ಅಸರ್ ಬಾಂಗ್ ಮೊಳಗಿತು. ಎಲ್ಲರೂ ನಮಾಝಿನಲ್ಲಿ ನಿರತರಾದರು. ನಮಾಝಿನಿಂದ ವಿರಮಿಸಿದ ನಂತರ ಪೇಟೆಯ ಪ್ರಮುಖ ಬ್ಯೂಟಿಶ್ಯನ್ ಹಾಗೂ ಅವಳ ಸಹಾಯಕಿಯರು ಆಗಮಿಸಿದರು. ತುಂಬಿ ತುಳುಕಾಡುತ್ತಿರುವ ಕೋಣೆಯಿಂದ ಎಲ್ಲರನ್ನೂ ಅವರು ಹೊರಹೋಗುವಂತೆ ಸೂಚಿಸಿದರು. ಅವರು ಅವಳನ್ನು ಇನ್ನಷ್ಟು ಸೌಂದರ್ಯವತಿಯಾಗಿ ಮಾಡಲು ಹೊರಟರು. ಹಿಜಾಬಿನ ಮಧ್ಯದಲ್ಲಿ ಕಂಗೊಳಿಸುವ ಅವಳ ಮುಖ...

ಕಲ್ಪನಾಲೋಕದ ವಿಹಾರ

ಅಯ್ಯೋ! ಸಮಯವಾಯಿತೇ! (ಕಲ್ಪನಾಲೋಕದ ವಿಹಾರ) ‘ಇನ್ಯಾರನ್ನಾಗಿದೆ ಕಾದು ಕುಳಿತಿರುವುದು…. ತೆಗೆದುಕೊ೦ಡು ಹೋಗುವ ಅಲ್ಲವೇ ?” ಯಾರೋ ದೊಡ್ಡ ಶಬ್ದದಲ್ಲಿ ಹೇಳುತ್ತಿರುವುದನ್ನು ನಾನು ನಿಸ್ಸಾಹಾಯಕನಾಗಿ ಕೇಳುತ್ತಿದ್ದೆ. ಎಲ್ಲರೂ ಸೇರಿಕೊ೦ಡು ಮೇಲುತ್ತುತ್ತಿದ್ದಾರೆ…. ಯಾರನ್ನು? ಎಂದು ಯೋಚಿಸಲಿಕ್ಕೆ ಹೋಗುವ ಅವಶ್ಯವಿಲ್ಲ!! ನನ್ನನ್ನೇ! ಒಳಗಡೆಯಿ೦ದ ಸಣ್ಣದಾಗಿ ಕೇಳುತ್ತಿದ್ದ ಅಳುವಿನ ಶಬ್ದಗಳು ದಾಡುವ ಅನುಭವವಾಗುತ್ತಿತ್ತು … ಮನೆಯ ಮೆಟ್ಟಿಲುಗಳನ್ನು ಇಳಿಸುತ್ತಿರುವರು…. ನಾನು ಮಲಗುವ ಸ್ಥಳ ಇದಲ್ಲವಾದ್ದರಿಂದ ಇದರಲ್ಲಿ ಏನೋ ಬಿಗಿತ! ಇದನ್ನೆಲ್ಲ ಹೇಳಲಿಕ್ಕಿದೆ… ಆದರೆ ಸದಾ ವಿಶ್ರಾಂತಿಯೇ ಇಲ್ಲದೇ ಆಡುತ್ತಿದ್ದ ನನ್ನ ನಾಲಗೆ ಇಂದು ಚಲಿಸುತ್ತಲೇ ಇಲ್ಲ!!! ಸಣ್ಣಗೆ ಆಚೀಚೆ ಅಲುಗಾಡಲು ಕೂಡ ಆಗದ ರೀತಿಯಲ್ಲಿ ಬ೦ದಿಸಲಾಗಿದೆ ನನ್ನ ದೇಹವನ್ನು… ಅರೆ ಯಾಕೆ ನನ್ನೊಟ್ಟಿಗೆ ಹೀಗೆ ಎಲ್ಲರೂ ಹೀಗೆ ವರ್ತಿಸುತ್ತಿದ್ದಾರೆ? ಹಾ! ಈಗ ನನಗೆ ಅರಿವಾಯಿತು! ನಾನು ಇನ್ನೆ೦ದೂ ಮರಳಿ ಬರಲಾಗದ೦ತೆ ಶಾಶ್ವತವಾಗಿ ತೊರೆದು ಹೋಗುತ್ತಿರುವೆನು… ಜೀವನದ ಬಹುಭಾಗವು ಕಷ್ಟಪಟ್ಟು ಕಟ್ಟಿಸಿದ ಆ ಮನೆಯಲ್ಲಿ ಇನ್ನು ನಾನಿರಲಾರೆ… ನನ್ನನ್ನು ಹೊತ್ತುಕೊ೦ಡ ಜನಗು೦ಪು ಗೇಟನ್ನು ದಾಟಿ ಮೈನ್ ರೋಡಿನತ್ತ ತಲುಪಿತು. ಅದ್ಯಾರು ಮಾರ್ಗ ಬದಿಯಲ್ಲಿ ಕಾಯುತ್ತಾ ನಿಂತಿರುವವರು? ಆ ವಯಸ್ಸಾದ ಮನುಷ್ಯ!! ಅರೇ! ನೆನಪಾಯಿತು ಆ ಮುಖ!! ಮನೆಯ ಟೈಲ್ಸ್ ಒಡೆದು ಮಾರ್ಬಲ್ ಹಾಕುತ್ತಿರುವ ಸಮಯದಲ್ಲಿ, ಈ ...

ಮಧುರ ದಾಂಪತ್ಯ

ಮಧುರ ದಾಂಪತ್ಯದ ಮೊದಲ ರಾತ್ರಿ ಹತ್ತು ಹಲವು ಕನಸುಗಳನ್ನು ಹೊತ್ತುಕೊಂಡು, ಬದುಕಿನ ಅತ್ಯಂತ ಸಂತಸದ ಕ್ಷಣಕ್ಕೆ ಕಾಲಿರಿಸುವ ಶುಭ ಮುಹೂರ್ತವಾಗಿರುತ್ತದೆ ಪ್ರತಿಯೊಬ್ಬ ದಂಪತಿಗಳ ಸಾಲಿನ ಮೊದಲ ರಾತ್ರಿ. ಸಂಭ್ರಮ, ಸುಖ, ಸಮೃದ್ಧಿ ಸಮಾಲೋಚನೆಗಳ ಸಂಘರ್ಷ ಹೀಗೆ ವಿಭಿನ್ನ ಮುಖಗಳ ದಿಗ್ದರ್ಶನವೇ ಈ ವೈವಾಹಿಕ ಬದುಕಿನ ಫಸ್ಟ್ ನೈಟ್. ಒಳಿತಿನಿಂದ ಕೂಡಿದ ಯಾವುದೇ ಕಾರ‍್ಯಗಳ ಪ್ರಾರಂಭವು ಅಲ್ಲಾಹನ ಸ್ಮರಣೆಯೊಂದಿಗೆ ಆಗಿರುವುದು ಮುಸ್ಲಿಂ ವಿಶ್ವಾಸಿಯ ಮಟ್ಟಿಗೆ ಅತ್ಯವಶ್ಯಕ. ಪ್ರಾರ್ಥನೆ, ಉದ್ದೇಶ ಸಾಪಲ್ಯದ ನಮಾಝ್ ಮೊದಲಾದವುಗಳು ಈ ಶುಭಕ್ಷಣದಲ್ಲಿ ನಡೆಸುವುದು ವೈವಾಹಿಕ ಬದುಕು ಪೂರ್ತಿ ಸುಖ ಸಮೃದ್ಧಿ, ಸಂತಸ, ಐಶ್ವರ್ಯ ಉಂಟುಮಾಡುವುದು. ದಾಂಪತ್ಯ ಸಂಬಂಧ ಎಲ್ಲ ತೆರನಾದ ಭಿನ್ನತೆ, ಎಡರು ತೊಡರು, ಅಲುಗುಗಳಿಂದ ಮುಕ್ತವಾಗಿ ಯಾವುದೇ ಅಡೆತಡೆಗಳಿಲ್ಲದೆ ಬದುಕಿನ ಸಂಧ್ಯಾ ಕಾಲದ ವರೆಗೂ ಸುಖ, ಸೌಹಾರ್ದತೆಯೊಂದಿಗೆ ಹೆಚ್ಚು ಸುದೃಢವಾಗಿ ಭದ್ರವಾಗಿ ಸುಸೂತ್ರವಾಗಿ ಬರಕತ್ತು ನಿಹಮತ್ತುಗಳಿಂದ ಮುಂದುವರಿಯಲು ಸೃಷ್ಟಿಕರ್ತನಲ್ಲಿ ನಿಸ್ವಾರ್ಥ ಪ್ರಾರ್ಥನೆ ನಡೆಸಬೇಕು ಇಮಾಂ ಮಾಲಿಕ್(ರ) ರವರು ತಮ್ಮ ‘ಮುವತ್ತ್ತ’ ಎಂಬ ಗ್ರಂಥದಲ್ಲಿ ಈ ಬಗ್ಗೆ ವಿವರವಾಗಿ ಹೇಳಿದ್ದಾರೆ “ಅಲ್ಲಾಹನೇ ನನ್ನ ಸಂಗಾತಿಯಿಂದ ನನಗೂ ನನ್ನಿಂದ ನನ್ನ ಕುಟುಂಬಕ್ಕೂ ಬರಕತ್ತು ವರ್ಷಿಸು” ಎಂದು ಪ್ರಾರ್ಥಿಸಬೇಕು (ಬಿಗ್‌ಯಾ ೨೪೭) ದಾಂಪತ್ಯ ಬದುಕನ್ನೇ ಪೂರಾ ಕದಲಿಸಿಬಿಡುವ ಹಲವು ಸಮಸ್ಯೆಗಳು ಕೆಲವೊಮ್ಮೆ...

ಎದೆ ಬಿರುವ ಮೌನ ಸದ್ದು

ಕಥನ ಕುತೂಹಲ ಎದೆ ಬಿರಿವ ಸದ್ದು ಮೌನ : ಕನ್ನಡ ಮಿನಿ ಕಥೆ ಬ್ಯಾರಿ ಸಮುದಾಯದೊಳಗಿನ ಮದುವೆ ಮುಂಚಿನ ಸಂಪ್ರದಾಯಗಳ ಪರಿಚಯ ಮಾಡಿಸುವ ಈ ಕಥೆ, ಬಹಳ ಮುಖ್ಯವಾಗಿ ಹೆಣ್ಣಿನ ಸೂಕ್ಷ್ಮತೆಯನ್ನೂ, ಆದ್ಯತೆಯನ್ನೂ ಹೇಳುತ್ತದೆ. ಹೊರಜಗತ್ತಿಗೆ ನಗಣ್ಯ ಅನ್ನಿಸುವ ಸಂಗತಿಯೊಂದು ಹೆಣ್ಣಿನ ಒಳಗನ್ನು ತಾಕುವುದನ್ನು ಮತ್ತು ಮುರಿಯುವುದನ್ನು ಇರ್ಫಾನ್ ಹಕ್ ಯಾವುದೇ ಅತಿರೇಕದ ಹೇಳಿಕೆಗಳಿಲ್ಲದೆ ಸಹಜವಾಗಿ ಕಟ್ಟಿಕೊಟ್ಟಿದ್ದಾರೆ. ಉಮ್ಮಾ ಎದ್ದೇಳು! ರಾತ್ರಿ 3 ಗಂಟೆಗೆ ಆಯಿಶಾ, ತನ್ನ ತಾಯಿ ಅಲೀಮಮ್ಮಳ ಬಲ ಕೈ ಅಲ್ಲಾಡಿಸಿ ಎಬ್ಬಿಸುತಿದ್ದಳು.ಪ್ರತಿನಿತ್ಯ ಮಗಳನ್ನು ಅಲೀಮಮ್ಮ ಎಬ್ಬಿಸುತಿದ್ದರೆ ಇಂದು ಆಯಿಶಾ ಸ್ವಲ್ಪ ಬೇಗನೇ ಎದ್ದಿದ್ದಳು.ಅದಕ್ಕೆ ಕಾರಣವೂ ಇತ್ತು‌; ನಾಳೆ ಗಂಡಿನ ಕಡೆಯವರು ಆಕೆಯನ್ನು ನೋಡಲು ಬರುವವರಿದ್ದರು. ಅಮ್ಮ ಎದ್ದೊಡನೇ ಇಬ್ಬರೂ ಉಝೂ ಮುಗಿಸಿ ತಹಜ್ಜುದ್ ನಮಾಝ್ ನಿರ್ವಹಿಸಿದರು..ತದನಂತರದಲ್ಲಿ ಇಬ್ಬರೂ ಕೈಗಳೆತ್ತಿ ಪ್ರಾರ್ಥಿಸತೊಡಗಿದರು..ತುಟಿಪಿಟಿಕೆನ್ನದೆ ಮನಸ್ಸಲ್ಲೇ ಪ್ರಾರ್ಥನೆ... ನಮಾಝ್ ನ ನಂತರ ಇಬ್ಬರೂ ಮುಸಲ್ಲದ ಮೇಲೇ ತಲಕಾನಿ ಇಟ್ಟು ಸುಬಹ್ ಬಾಂಗ್ ವರೆಗೆ ಮಲಗೋದು ವಾಡಿಕೆ.ಆದರೆ ಈ ದಿನ ಆಯಿಶಾಲಿಗೆ ನಿದ್ದೆ ಹತ್ತುತ್ತಿಲ್ಲ. ನಾಳೆ ಬರುವ ಹುಡುಗ ಹೇಗಿರಬಹುದು?,ನನ್ನಂತೆ ಸರಳ ವ್ಯಕ್ತಿ ಆಗಿರಬಹುದೇ? ಅವನಿಗೆ ನಾ ಇಷ್ಟವಾಗಬಹುದೇ? OK ಯಾದರೆ ನನ್ನನ್ನು ಆತ ಪ್ರೀತಿಯಿಂದ ನೋಡಿಕೊಳ್ಳಬಹುದೇ? ಹೀಗೆ ಹಲವಾರು ಪ್ರಶ್ನೆಗಳು ...

ಹುಲಿಮರಿಯ ಅಂತ್ಯ

ಹುಲಿಮರಿಯ ಅಂತ್ಯ - ಅಲೀ(ರ) ﷽ ಪ್ರವಾದಿ(ಸ)ರವರು ಹೇಳಿದರು ; ನಾನು ವಿಜ್ಞಾನದ ತೋಟವಾಗಿರುವೆನು ಅದರ ಹೆಬ್ಬಾಗಿಲು ಅಲೀ(ರ)ರವರಾಗಿರುವರು . ಪ್ರವಾದಿ(ಸ)ರವರು ಮದೀನಾಕ್ಕೆ ಹಿಜಿರಾ ಹೋಗುವಾಗ ತನ್ನ ವಸಿಯ್ಯತ್ ಗಳನ್ನೂ ಇತರರು ತೆಗೆದಿರಿಸಲು ಕೊಟ್ಟಂತಹಾ ವಸ್ತುಗಳನ್ನೂ ಅಲೀ(ರ)ರವರಿಗಾಗಿತ್ತು ವಹಿಸಿಕೊಟ್ಟದ್ದು. ಮದೀನಾದಲ್ಲಿ ತನ್ನೊಂದಿಗೆ ಖಲೀಫ಼ರಾಗಲೂ ಆಜ್ಞಾಪಿಸಿದ ನೆಬಿ(ಸ)ರವರೊಂದಿಗೆ ಮಕ್ಕಳಿಗೂ ಮಹಿಳೆಯರಿಗೂ ನನ್ನನ್ನು ಖಲೀಫ಼ರನ್ನಾಗಿ ಮಾಡುವುದೇ ಎಂದವರು ಕೇಳಿದರು. ಆಗ ಪ್ರವಾದಿ(ಸ)ರವರ ಪ್ರತ್ಯುತ್ತರ ಈ ರೀತಿಯಾಗಿತ್ತು. ಮೂಸಾ ನೆಬಿ(ಅ)ರವರಿಂದ ಹಾರೂನ್ ನೆಬಿ(ಅ)ರವರ ಸ್ಥಾನದಲ್ಲಿ ನನ್ನಿಂದ ನೀನು ಆಗುವುದನ್ನು ಇಷ್ಟಪಡುವುದಿಲ್ಲವೆ...? ಆದರೆ ನನ್ನ ನಂತರ ಪ್ರವಾದಿಗಳಿಲ್ಲ. ತುಂಬಿ ನಿಂತು ಆಕರ್ಷಣೀಯವಾಗಿ ಕಂಗೊಳಿಸುತ್ತಿರುವ ಗಡ್ಡದಲ್ಲಿ ಕೈಯ್ಯಾಡಿಸುತ್ತಾ ಅಲೀ(ರ)ರವರೊಂದಿಗೆ ನೆಬಿ (ಸ)ರವರ ಪ್ರಶ್ನೆ. ಉಲ್ಲಾಸಭರಿತರಾಗಿದ್ದ ಅಲೀ(ರ)ರವರು ತನ್ನ ಮುಖವನ್ನು ಪ್ರವಾದಿಯವರತ್ತ ತಿರುಗಿಸಿದರು. ಸುಂದರವಾದ ಮುಖದಲ್ಲಿರುವ ಅಲೀ(ರ)ರವರ ಗಡ್ಡದಲ್ಲಿ ಯಾವಾಗಲೂ ಪ್ರವಾದಿ(ಸ)ರವರ ಕೈಗಳು ಸ್ಪರ್ಶಿಸುತ್ತಿರುತ್ತದೆ . ಅಂತಹಾ ಒಂದು ಸಂದರ್ಭದಲ್ಲಾಗಿತ್ತು ನೆಬಿ(ಸ)ರವರಿಂದ ಒಂದು ಪ್ರಶ್ನೆಯೂ ಅಲೀ(ರ)ರವರತ್ತ ತೂರಿ ಬರುವುದು. "ಮಗನೇ ....ಅಲೀ..." ನೆಬಿ(ಸ)ರವರ ಕರೆಗೆ ಓಗೊಟ್ಟು ಅಲ...

ಬೀವಿ ಆತಿಕಾ(ರ)

ಬೀವಿ ಆತಿಕಾ (ರ) بِسْمِ اللهِ الرَّحْمَٰنِ الرَّحِيمْ السَّـــــــلاَمُ عَلَيــْــكُم وَرَحْمَةُ اللهِ وَبَرَكـَـاتُه ಮುನೀರ್ ಸಖಾಫಿ,ಸಾಲೆತ್ತೂರು. ಸ್ವಹಾಬೀ ವನಿತೆಯಾದ ಆತಿಕ ಬೀವಿ (ರ) ರನ್ನು ನಮಾಜಿಗಾಗಿ ಮಸೀದಿ ಹೋದ ಬಗ್ಗೆ ವಹ್ಹಾಬಿಯೊಬ್ಬ ಬರೆದುದನ್ನು ನೋಡಿ ಈ ಲೇಖನ ಬರೆಯಲು ಪ್ರಾಂಬಿಸಿದ್ದೇನೆ. ಆತಿಕ ಬೀವಿ ಯಾರು? ಅವರು ಮಸೀದಿಗೆ ಯಾವಾಗ ಹೋದದ್ದು? ನಂತರ ಅವರು ಮಸೀದಿಗೆ ಹೋಗದಿರಲು ಕಾರಣವೇನು? ನನ್ನನ್ನು ನೀವು ಮದುವೆಯಾದಲ್ಲಿ ಮಸೀದಿಗೆ ನಮಾಝಿಗೆ ಹೋಗಲು ಅನುಮತಿ ನೀಡಬೇಕೆಂದು ಹೇಳಿಯೂ ಉಮರ್ (ರ) ಅವರನ್ನು ವಿವಾಹವಾಗಲು ಕಾರಣವೇನು? ಸತ್ಯಕ್ಕೆ ಬೇಕಾಗಿ ಜೀವನವನ್ನೇ ಸಮರ್ಪಿಸಿದ ಉಮರ್ (ರ) ಅವರ ಮಸೀದಿಯ ನಮಾಜು ಅನುಮತಿಸಿದ್ದರೇ? ಮುಂತಾದ ವಿಷಯಗಳ ಬಗ್ಗೆ ಬೆಳಕು ಚೆಲ್ಲುವ ಅತ್ಯಮೂಲ್ಯವಾದ ಲೇಖನವಾಗಿದೆ ಇದು. ಇದರ ಎಲ್ಲಾ ಭಾಗಗಳನ್ನು ಓದುಗರು ಗಮನದಲ್ಲಿಟ್ಟು ಓದಬೇಕಾಗಿ ವಿನಂತಿ. ಆತಿಕಾ (ರ) ತಂದೆ :ಅಂರು ಬಿನ್ ನುಫೈಲ್ ತಾಯಿ:ಉಮ್ಮು ಕುರ್ ಝ್. ಪತಿ: ಒಂದನೇ ಪತಿ ಅಬ್ದುಲ್ಲ (ರ). ಇವರು ಸಿದ್ದೀಖ್ (ರ) ರವರ ಪುತ್ರರು. ಆತಿಕ (ರ) ಅತೀ ಸುಂದರಿಯಾಗಿದ್ದರು.ಪತ್ನಿಯ ಸೌಂಧರ್ಯದಲ್ಲಿ ಆಕರ್ಷಿತನಾಗಿ ಪತಿ ಯಾದ ಅಬ್ದುಲ್ಲ (ರ) ಯುದ್ಧಕ್ಕೆ ಹೋಗುವುದು ಕೂಡಾ ಮರೆತು ಬಿಟ್ಟರು. ಈ ಕಾರಣದಿಂದ ಸಿದ್ದೀಖ್ (ರ) ರವರು ಮಗನಲ್ಲಿ ಆತಿಕ (ರ) ತಲಾಖ್ ಹೇಳುವಂತೆ ಆಞ್ಞಾಪಿಸಿದರು.ತಂದೆಯ ಮಾತಿಗೆ ಬೆಲೆ ಕೊಟ್ಟು ಅ...

ಜಲೀಲ್ ಔಲಾದೇ ಚರಿತ್ರೆ

عِنْدَ ذِكْرِ الصَّالِحِينَ تَنْزِلُ الرَّحْمَةُ ಶೈಖುಲ್ ಜಲೀಲ್ ಔಲಾದೇ ಉಮ್ಮೇ ಬತೂಲ್ ಸಯ್ಯಿದುನಾ ಇಮಾಂ ಮುಹಮ್ಮದ್ ಬಿನ್ ಸುಲೈಮಾನುಲ್ ಜಝೂಲಿ رَضِىَ اللّٰەُ عَنْهُ ಮುಹಮ್ಮದ್ ಹುಸೈನ್ ರಝಾ. بسم اللّٰہ الرحمٰن الرحیم اَلصَّلَاةُ وَالسَّلَامُ عَلَيْكَ يَا سَيَّدِ يَارَسُولُ اللّٰه ﷺ ಮುಸ್ಲಿ ಉಮ್ಮತ್ ಗಳ ನಲ್ಮೆಗಾಗಿ ಬಹಳಷ್ಟು ಅಕಾಬಿರ್ ಉಲಮಾಗಳು ನಾನಾ ಜ್ಞಾನ ಶಾಖೆಗೆ ಒಳಪಟ್ಟ ಧಾರಾಳ ಲಕ್ಷಗಟ್ಟಲೆ ಗ್ರಂಥಗಳನ್ನು ರಚಿಸಿದ್ದಾರೆ ಅದರಲ್ಲಿ ನಬೀಯೇ ಕರೀಂ ರಊಫುರ್ರಹೀಮ್ صَلَّى اللهُ تَعَالٰى عَلَيْهِ وَاٰلِهٖ وَسَلَّم ರವರ ಪವಿತ್ರ ವಚನಗಳನ್ನು ಶೇಖರಿಸಿ ಬರೆಯಲಾದ ಹದೀಸ್, ತಫ್ಸೀರ್, ಫಿಖ್ಹ್, ತಾರೀಖ್, ಸೀರತ್, ಗ್ರಂಥಗಳ ಹೊರತು ಪಡಿಸಿದರೆ ಆಶೀಖೀನ್ ಗಳ ಮನಸ್ಸಿಗೆ ಅವರ್ಣನೀಯ ಸಂತೋಷ ಸಂತೃಪ್ತಿ ಆಹ್ಲಾದವನ್ನು ಉಂಟುಮಾಡುವ ಕೆಲವು ಗ್ರಂಥಗಳಂತೂ ಜಗತ್ತಿನ ಮೂಲೆ ಮೂಲೆಗಳಲ್ಲೂ ಸುಪ್ರಸಿದ್ಧ ಹಾಗೂ ಜನ ಸಾಮಾನ್ಯರೆಡೆಯಲ್ಲೂ ಕೂಡ ಅತ್ಯಂತ ಮೆಚ್ಚುಗೆಯನ್ನು ಹಾಗೂ ಬೇಡಿಕೆಯನ್ನು ಗಳಿಸಿದ್ದು ಅದ್ಭುತವೇ ಸರಿ! ಅದರಲ್ಲಿ ನಬೀಯೇ ರಹ್ಮತ್ ಶಫೀಯೇ ಉಮ್ಮತ್ صَلَّى اللهُ تَعَالٰى عَلَيْهِ وَاٰلِهٖ وَسَلَّم ರವರ ಜೀವನ ಚರಿತ್ರೆಯನ್ನು ಸಂಗ್ರಹಿಸಿ ಬರೆಯಲಾದ ಸೀರತ್ ಗ್ರಂಥಗಳೂ ಹಾಗೂ ನಬಿ صَلَّى اللهُ تَعَالٰى عَلَيْهِ وَاٰلِهٖ وَسَلَّم ರವರ ಶ್ರೇಷ್ಠತೆ ಹಾಗೂ ಸ್ವಲಾತ್ ಮತ...

ಜ್ಞಾನ ಕಿರಣ ಅಸ್ಮಾಉಲ್ ಹುಸ್ನ

ಜ್ಞಾನದ ಕಿರಣ ಅಸ್ಮಾಉಲ್ ಹುಸ್ನ ಮತ್ತು ಅದರ ಪ್ರತ್ಯೇಕತೆಗಳು ಅಲ್ಲಾಹುವಿನ 99 ಪರಿಶುದ್ದವಾದ ನಾಮಧೇಯಕ್ಕೆ ಅದ್ಭುತವಾದ ಪ್ರತ್ಯೇಕತೆಗಳಿವೆ. ವಿಶೇಷವಾಗಿ ಮಲಗಿ ನಿದ್ರಿಸುವುದಕ್ಕೆ ಮುಂಚಿತವಾಗಿ ಶುದ್ದನಾಗಿ ಏಕಾಂತದಲ್ಲಿ ಕುಳಿತು ಹೇಳಿದರೆ ಅದ್ಭುತವಾದ ಪ್ರತ್ಯೇಕತೆಗಳು ದೊರೆಯಲಿವೆ ಎಂಬುದು ಪಂಡಿತರುಗಳ ಅಭಿಪ್ರಾಯ. ಪ್ರತಿಯೊಂದು ಇಸ್ಮನ್ನೂ ಒಂದಕ್ಕಿಂತ ಹೆಚ್ಚು ಬಾರಿ ಹೇಳುವುದೂ ಇಸ್ಮ್ ಗಿಂತ ಮೊದಲು "ಯಾ (یاَ)" ಸೇರಿಸಬೇಕು. ಇದರಿಂದಾಗಿ ನಿದ್ರೆಯಲ್ಲಿರುವಾಗಲೂ ಹಲವಾರು ಅದ್ಭುತಗಳನ್ನು ಕಾಣಬಹುದು. ನಮಗೆ ಸಂಭಂಧಿಸಿ ಮುಚ್ಚಿರುವ ಬಾಗಿಲುಗಳು ತೆರೆಯಲ್ಪಡುವುದು ಸಂಪೂರ್ಣ ವುಳೂವಿನೊಂದಿಗೆ ಖಿಬ್ಲಾದ ಮುಂದೆ ಕುಳಿತು ಅಲ್ಲಾಹುವಿನ ಪರಿಶುದ್ದ ನಾಮವನ್ನು ಅತ್ಯಂತ ಗೌರವಪೂರ್ಣವಾಗಿಯೂ ಸಂಪೂರ್ಣವಾಗಿ ಅರ್ಥಮಾಡಿಕೊಂಡು ಭಕ್ತಿಯಲ್ಲೂ ಹೇಳಬೇಕು.. ಮುಂದಿನ ಭಾಗದಲ್ಲಿ ಅಲ್ಲಾಹನ ಪ್ರತಿಯೊಂದು ನಾಮಗಳಿಗಿರುವ ಪ್ರತ್ಯೇಕತೆಯನ್ನು ತಿಳಿಸಲಾಗುವುದು.. ಅಲ್ಲಾಹನ ನಾಮಧೇಯಗಳಿಗಿರುವ ಮಹತ್ವವನ್ನು ಅರಿಯೋಣ.. 1. الله ಒಬ್ಬನು یا الله یا هو ಎಂದು ಎಲ್ಲಾ ದಿವಸವೂ ಸಾವಿರ ಬಾರಿ ನಿಯಮಿತವಾಗಿ ಹೇಳಿದರೆ ಅವನಿಗೆ ಪರಿಪೂರ್ಣವಾದ ದೃಡ ಮನಸ್ಸು ದೊರಕುವುದು. ಇಮಾಂ ಸುಹ್ರವರ್ದಿ ತಙಳ್ ಹೇಳಿದರು ಒಬ್ಬನು ಶುಕ್ರವಾರ ನಮಾಝಿಗಿಂತ ಮೊದಲು ಸಂಪೂರ್ಣ ಶುದ್ದನಾಗಿಯೂ ಸ್ವಚ್ಚವಾಗಿಯೂ ಏಕಾಂತವಾಗಿ 200 ಬಾರಿ ಇದನ್ನು ಹೇಳಿದರೆ ಅವನ ಉದ್ದೇಶಗಳು...

ಮುಂಜಾನೆ ಇಬ್ಬನಿ

ಮುಂಜಾನೆ ಇಬ್ಬನಿ 01 ಅಲ್ಲಾಹನ ದೀನ್'ನನ್ನು ಕಲಿಯುವಾಗ ನಿಮ್ಮ ದಿನದ ಹಲವಾರು ಕೆಲಸಗಳು ತಪ್ಪಿ ಹೋಗಬಹುದು.. ಆದರೆ ನೀವು ಸರಿಯಾಗಿ ಚಿಂತಿಸಿ ನೋಡಿದರೆ ನಿಮಗೆ ಅಗತ್ಯವಿಲ್ಲದವುಗಳು ಮಾತ್ರ ತಪ್ಪಿ ಹೋಗಿರಬಹುದು.. ಅಗತ್ಯವಿರುವಂತಹದ್ದು ಖಂಡಿತ ನಿಮಗೆ ಸಿಗುತ್ತಿರಬಹುದು.. ಅಲ್ಲಾಹನ ಗ್ರಂಥವನ್ನು(ಪವಿತ್ರ ಕುರ್‍ಆನ್) ಕಲಿತು ಅರ್ಥಮಾಡಿಕೊಂಡರೆ ಸಿಗುವ ಸುಖವು ಲೋಕದ ಯಾವುದೇ ವಸ್ತುವಿನಿಂದ ಸಿಗಲಾರದು.. ಇದನ್ನು ನೀವು ಸ್ವತಃ ಅನುಭವಿಸುವಿರಿ.. 02 ಈ ಲೋಕದಲ್ಲಿ ಮನೆ, ಮಕ್ಕಳು, ಉಡುಗೆ-ತೊಡುಗೆಗಳು, ಸಂಪತ್ತು-ಅನ್ನಪಾನೀಯಗಳು ಇವೆಲ್ಲವನ್ನೂ ಪಡೆದವರು ಕೂಡಾ ಯಾವುದೋ ಕೊರತೆಯನ್ನು ಅನುಭವಿಸುತ್ತಿದ್ದಾರೆ. ಎಲ್ಲಿಯೋ ಯಾವುದೋ ವಿಷಯದಲ್ಲಿ ಕೊರಗುತ್ತಿದ್ದಾರೆ. ನಾವು ಈ ಲೋಕಕ್ಕೆ ಬಂದಿದ್ದೇವೆ. ಸೃಷ್ಟಿಕರ್ತನು ಕೊಟ್ಟ ಎಲ್ಲ ಅನುಗ್ರಹಗಳನ್ನು ಉಪಯೋಗಿಸುತ್ತಿದ್ದೇವೆ. ಆದರೆ ಆತನ ಹಕ್ಕು ತೀರಿಸಲಿಲ್ಲ.. 03 ಅಲ್ಲಾಹನು ನಮಗೆ ಎಷ್ಟೆಲ್ಲಾ ಉಪಕಾರ ಮಾಡಿದನು. ನಮ್ಮನ್ನು ಮನುಷ್ಯನಾಗಿ ಸೃಷ್ಟಿಸಿದನು. ಮನುಷ್ಯನಿಗೆ ಬೇಕಾಗಿರುವ ಎಲ್ಲ ಅನುಗ್ರಹಗಳನ್ನು ನೀಡಿದನು. ಕಣ್ಣು, ಕೈಕಾಲುಗಳು, ಆಲೋಚಿಸುವ ಮನಸ್ಸು, ಬುದ್ಧಿ, ಆರೋಗ್ಯ, ಯೌವನ, ಗಾಳಿ, ನೀರು, ಬೆಳಕು… ಸರ್ವ ಸವಲತ್ತುಗಳನ್ನು ನೀಡಿದನು. ನಮ್ಮನ್ನು ಮುಸ್ಲಿಮರನ್ನಾಗಿ ಮಾಡಿದನು. ಮುಹಮ್ಮದ್ ಮುಸ್ತಫಾ (ಸ.ಅ)ರ ಉಮ್ಮತ್‌ ಆಗಿ ಮಾಡಿದನು. ಅವನ ಧರ್ಮದ ಜ್ಞಾನ ನೀಡಲಿಕ್ಕಾಗಿ ಕುರ್‌ಆನನ್ನು ನಮಗಾಗಿ ತ...