Posts

Showing posts from August, 2019

ಪುಣ್ಯ ಮದೀನ

ಪುಣ್ಯ ಮದೀನಾ-02 صلّوا على الحبيب ಕಂಪಿಸಿತು ಮದೀನಾ ಪ್ರದೇಶವೇ ಅದು ಹಲವು ವರ್ಷದ ಬಳಿಕ ಬಿಲಾಲ್ رضي الله عنه ರವರ ಆಝಾನ್ ಧ್ವನಿಯ ಕೇಳಿ.., ಕಣ್ಣೀರು ಧಾರೆ ಧಾರೆ ಸುರಿಯಿತು ಅದು ಪುಣ್ಯ ನೆಬಿ ﷺ ರ ನೆನದು ಬಿಲಾಲ್ رضي الله عنه ರ ಪ್ರೇಮದ ಕಟ್ಟೆ ಹೊಡೆದು.., ಸಾಧ್ಯವಿಲ್ಲವೇ ನಮಗೆ ಆ ಪ್ರೇಮದ ಒಂದಂಶವಾದರು ಪಡೆಯಲು.., ಕರುಣಿಸುವಿರೇ ಓ ಪುಣ್ಯ ನೆಬಿ ﷺ ರೇ ನಿಮ್ಮ ಪ್ರೇಮಿಗಳ ಸಾಲಿನಲ್ಲಿ ಸೇರಲು.., الصــلوة والسلام عليك يارسول الله ﷺ ಅಶ್ಫಾಕ್ ಕಟ್ಟತ್ತಾರ್ NOOR-UL-FALAH ISLAMIC STORE

ಪರ್ವತವೇ ನಡುಗಿತು

ಪತ್ನಿಯ ಸುಳ್ಳಿಗೆ ಪರ್ವತವೇ ನಡುಗಿತು ಅರಬ್ ರಾಜ್ಯದ ಒಂದು ಮನೆಯಲ್ಲಿ ದಂಪತಿಗಳಿಬ್ಬರು ವಾಸಿಸುತ್ತಿದ್ದರು ಪತ್ನಿ ಸೌಂದರ್ಯವತಿಯಾಗಿದ್ದಳು ಪತಿ ಕೆಲಸಕ್ಕೆ ಹೊರಗೆ ಹೋಗುವಾಗ ಮನೆಗೆ ಹೊರಗಿನಿಂದ ಬೀಗ ಜಡಿದರೆ ಪತ್ನಿ ಒಳಗಿಂದ ಭದ್ರವಾಗಿ ಚಿಲಕ ಹಾಕುತ್ತಿದ್ದಳು.. ಯಾರು ಬಂದರೂ ಕಿಟಕಿಯಿಂದಲೇ ಮಾತಾಡಿ ಬಿಟ್ಟು ಬಿಡಬೇಕೆಂದು ಪತಿಯ ಕಟ್ಟಾಜ್ಞೆಯಿತ್ತು.. ಪತ್ನಿಯು ಕೂಡ ಬಹಳ ಜಾಗರುಕತೆಯಿಂದ ಪತಿಯ ಮಾತಿಗೆ ಬೆಲೆ ಕೊಟ್ಟು ಜೀವನ ಕಳೆಯುತ್ತಿದ್ದಳು.. ಕಾರಣ ಅವಳು ಉತ್ತಮ ಹೇಣ್ಣಾಗಿದ್ದಳು.. (ನಮ್ಮ ಸಮುದಾಯದಲ್ಲು ಅದೆಷ್ಟೊ ಸ್ತ್ರೀಗಳಿದ್ದಾರೆ ಆದರೆ ಕೆಲವೊಮ್ಮೆ ಕೆಲವು ಕೆಟ್ಟ ನಿಮಿಷಗಳಲ್ಲಿ ಅವರು ಕೂಡ ದಾರಿ ತಪ್ಪುತ್ತಿರುತ್ತಾರೆ ಸಂಧರ್ಭ ಸಮಯ ಅವಕಾಶ ಇದಕ್ಕೆ ಕಾರಣ) ಈ ಸ್ತ್ರೀ ವಾಶಿಸುವ ಮನೆಯ ದಾರಿಯಲ್ಲಿ ಒಬ್ಬ ಯುವಕ ನಡೆದು ಹೋಗುತ್ತಿದ್ದ.. ದಿನಾಲು ಅದೇ ದಾರಿಯಲ್ಲಿ ಕೆಲಸಕ್ಕೆಂದು ನಡೆದು ಹೋಗುವ ಅವನು ಒಮ್ಮೆ ಆ ಮನೆಯ ಕಿಟಕಿಗೆ ಕಣ್ಣಾಯಿಸಿದಾಗ ಅಲ್ಲೊಂದು ಸೌಂದರ್ಯವತಿಯಾದ ಹೆಣ್ಣನ್ನು ಕಂಡ.. ಮೊದಲ ಬಾರಿ ಅಕಸ್ಮಿಕವಾಗಿ ಕಂಡರೂ ಎರಡನೇ ಬಾರಿ ಅವನು ನೋಡಿದ್ದು ಅವಳ ಸೌಂದರ್ಯವನ್ನು.. ಮನೆಯಲ್ಲಿ ಒಬ್ಬಂಟಿಗಳಾಗಿ ಬೋರ್ ಹೊಡೆಯುತ್ತಿದ್ದ ಅವಳಿಗೆ ಅವನ ನೋಟವು ಬಿಲ್ಲಿನ ಬಾಣದಂತೆ ಮನಸ್ಸಿಗೆ ನಾಟಿ ಬಿಟ್ಟಿತು..!! (ಒಂದು ಹೆಣ್ಣು ಮತ್ತು ಗಂಡು ಮಾತ್ರ ಇರುವಲ್ಲಿ ಮೂರನೆಯವನು ಶೈತಾನನೆಂದು ನಬಿವಚನವಿದೆ) ಮೊದನೆ ದಿನ ಸವಿದ ಸೌಂದರ್ಯವನ್ನು ಎರಡನೇ ದಿ...

ಮಗುವಾಗಿರುವಾಗ ತೊಟ್ಟಿಲಲ್ಲಿ ಮಾತನಾಡಿದ ಆ ಮೂವರು

ಮಗುವಾಗಿರುವಾಗ ತೊಟ್ಟಿಲಲ್ಲಿ ಮಾತನಾಡಿದ ಆ ಮೂವರು ಅಬೂ ಹುರೈರಾ (ರ)ರವರಿಂದ ವರದಿ. ಪ್ರವಾದಿ (ಸ.ಅ) ರು ಹೇಳಿದರು; ತೊಟ್ಟಿಲಲ್ಲಿ ಈ ಮೂವರಲ್ಲದೆ ಬೇರೆ ಯಾರು ಮಾತಾಡಿಲ್ಲ. (ಮೊದಲನೆಯವರು) ಈಸ ನಬಿ(ಅ). (ಎರಡನೆಯವರು ) ಬನೀ ಇಸ್ರಾಯಿಲರಲ್ಲಿ ಜುರೈಜ್ ಎಂಬುವರಿದ್ದರು. ಅವರು ನಮಾಝ್ ನಿರ್ವಹಿಸುತ್ತಿರುವಾಗ ಅವರ ತಾಯಿ ಅವರನ್ನು ಕರೆದರು. (ಅವರು ತನ್ನೊಂದಿಗೆ ಹೇಳಿಕೊಂಡರು) ನಾನು ನಮಾಝನ್ನು ಮಂದುವರಿಸಲೇ ಅಥವಾ ಅವರಿಗೆ ಉತ್ತರಿಸಲೇ? (ಅವರು ನಮಾಝ್ ನಿರ್ವಹಿಸತೊಡಗಿದರು.) ತಾಯಿಗೆ ಉತ್ತರಿಸಲಿಲ್ಲ. ಅವರ ತಾಯಿ ಹೇಳಿದರು: ಓ ಅಲ್ಲಾಹ್ ಇವನು ವೇಶ್ಯೆಯ ಮುಖವನ್ನು ಕಾಣದೇ ಮರಣ ಬಾರದಿರಲಿ. ಹಾಗೆ ಅವರು ತನ್ನ ವಾಸಸ್ಥಳದಲ್ಲಿರುವಾಗ ಒಬ್ಬ ವೇಶ್ಯೆ ಅವರನ್ನು ಆಕರ್ಷಿಸಲು ಪ್ರಯತ್ನಿಸಿದಳು. ಆದರೆ ಅದನ್ನು ಅದನ್ನು ನಿರಾಕರಿಸಿದರು. ಆ ಸ್ತ್ರೀಯು ಒಬ್ಬ ಕುರಿಕಾಯುವವನೊಂದಿಗೆ ಹೋಗಿ ದೇಹ ಸಂಬಂಧವನ್ನು ಹೊಂದಿದಳು, ಕೆಲವು ಸಮಯದ ನಂತರ ಮಗುವಿಗೆ ಜನ್ಮವಿತ್ತು ಇದು ಜುರೈಜ್ ನದ್ದು ಎಂದು ಹೇಳತೊಡಗಿದಳು. ಅಲ್ಲಿಯ ಜನರು ಜುರೈಜನ್ನು ಅವರ ವಾಸ ಕೊಠಾರದಿಂದ ಹೊರ ಹಾಕಿ ಅದನ್ನು ಕೆಡವಿ ಹಾಕಿ ಅವರನ್ನು ತೆಗಳಲು ಶುರುಮಾಡಿದರು. ಜುರೈಜ್ ಉದೂಃ (ಅಂಗಶುದ್ದಿ) ಮಾಡಿ ನಮಾಝ್ ನಿರ್ವಹಿಸಿದರು. ನಂತರ ಮಗುವಿನೆಡಗೆ ಹೋಗಿ ಹೆಳಿದರು; ಓ ಮಗು ನಿನ್ನ ತಂದೆ ಯಾರು? ಮಗು ಉತ್ತರಿಸಿತು; ಒಬ್ಬ ಕುರಿಕಾಯುವವನು. (ಇದನ್ನು ಕೇಳಿದ ನಂತರ) ಅಲ್ಲಿಯ ಜನರು ಹೇಳಿದರು; ನಾವು ನಿಮ್ಮ ...

ಏಳು ಪ್ರವಾದಿ ಚರ್ಯೆಗಳು

ಮಗು ಜನಿಸಿದಾಗ ಅನುಸರಿಸಬೇಕಾದ 7 ಪ್ರವಾದಿ ಚರ್ಯೆಗಳು ಮಕ್ಕಳ ಜನನವೆಂಬುದು ಇಡೀ ಕುಟುಂಬಕ್ಕೇ ಸಂತೋಷದ ವಿಚಾರವಾಗಿದೆ. ಮಗು ಜನಿಸುವುದರೊಂದಿಗೆ ತಂದೆ ತಾಯಿಗೆ ಸಂತೋಷದ ಮಹಾ ಸಾಗರವನ್ನೇ ಹೊತ್ತು ತರುತ್ತದೆ. ಮುಸ್ಲಿಮ್ ಕುಟುಂಬದಲ್ಲಿ ಒಂದು ಮಗು ಜನಿಸಿದರೆ ಅನುಸರಿಸಬೇಕಾದ ಕೆಲವು ಪ್ರವಾದಿ ಚರ್ಯೆಗಳಿವೆ. ಆದರೆ ಹೊಸ ತಲೆ ಮಾರಿನಲ್ಲಿ ಕೆಲವು ಕಡೆ ಈ ಪ್ರವಾದಿ ಚರ್ಯೆಗಳನ್ನು ಅವಗಣಿಸಲಾಗುತ್ತದೆ ಎಂಬುದು ಖೇದಕರ. ಈ ಒಂದು ಸಣ್ಣ ಲೇಖನದಲ್ಲಿ ಆ ಎಲ್ಲಾ ಪ್ರವಾದಿ ಚರ್ಯೆಗಳನ್ನು ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದೇನೆ. 1. ಅಲ್ಲಾಹನ ಅನುಗ್ರಹಕ್ಕೆ ಕೃತಜ್ಞತೆ ಸಲ್ಲಿಸುವುದು: ಹೆಣ್ಣಾಗಲಿ ಗಂಡಾಗಲಿ ಮಕ್ಕಳು ಅಲ್ಲಾಹನ ಅನುಗ್ರಹವಾಗಿದ್ದಾರೆ. ಅದಕ್ಕಾಗಿ ಅಲ್ಲಾಹನಿಗೆ ಕೃತಜ್ಞತೆ ಸಲ್ಲಿಸುವುದು. ಕೆಲವು ಕುಟುಂಬಗಳಲ್ಲಿ ಹೆಣ್ಣು ಮಕ್ಕಳಿಗಿಂತ ಗಂಡು ಮಕ್ಕಳಿಗೆ ಹೆಚ್ಚಿನ ಪ್ರಾಧಾನ್ಯತೆ ಇರುತ್ತದೆ. ಅಂತಹ ತಂದೆ ತಾಯಿಗಳು ತಮಗೆ ಜನಿಸಿದ ಮಗು ಹೆಣ್ಣಾದರೆ ಅಲ್ಲಾಹನಿಗೆ ಕೃತಜ್ಞತೆ ಸಲ್ಲಿಸುವ ಬದಲು ನಮಗೆ ಹೆಣ್ಣು ಮಗು ಅಂತ ಪೆಚ್ಚು ಮೋರೆ ಹಾಕಿ ಅಲ್ಲಾಹನ ಅನುಗ್ರಹವನ್ನು ನಿರಾಕರಿಸುವ ಮನೋವೃತ್ತಿಯನ್ನು ನಾವು ಕಾಣುತ್ತಿದ್ದೇವೆ. ಮಗು ಹೆಣ್ಣಾಗಿರುವುದಕ್ಕೆ ಆಸ್ಪತ್ರೆಯಲ್ಲೇ ಬಿಟ್ಟು ಹೋದ ಎಷ್ಟೋ ಘಟನೆಗಳನ್ನು ನಾವು ನೋಡಿದ್ದೇವೆ. ಆದುದದರಿಂದ ಇಂತಹ ಪ್ರವೃತ್ತಿಗಳನ್ನು ತ್ಯಜಿಸಬೇಕಾಗಿದೆ. ಅಲ್‌ಹಂದುಲಿಲ್ಲಾಹ್ ಎಂದು ಹೇಳುವ ಪರಿಪಾಠವನ್ನು ಬೆಳೆಸ...

ಯಾತ್ರಿಕನಂತೆ ಜೀವಿಸು

ಯಾತ್ರಿಕನಂತೆ ಜೀವಿಸು ಪ್ರವಾದಿ ವಚನದ ವ್ಯಾಖ್ಯಾನ ಲೌಕಿಕ ಜೀವನದ ವಾಸ್ತವಿಕತೆ ಮತ್ತು ಅದರ ಅವಸ್ಥೆಯನ್ನು ಬಹಳ ಸ್ಪಷ್ಟವಾಗಿ ಚಿತ್ರೀಕರಿಸುತ್ತಾ ಆ ವಾಸ್ತವಿಕತೆಯನ್ನು ಒಳಗೊಂಡು ಜೀವಿಸಲು ಇದೊಂದು ವಚನದ ಮೂಲಕ ಪ್ರವಾದಿ (ಸ.ಅ)ರು ನಮಗೆ ಕಲಿಸಿದ್ದಾರೆ. “ಇಬ್ನು ಉಮರ್ (ರ)ವರದಿ ಮಾಡುತ್ತಾರೆ; ”ಪ್ರವಾದಿ (ಸ.ಅ) ನನ್ನ ಹೆಗಲ ಮೇಲೆ ಕೈ ಇರಿಸಿ ಈ ರೀತಿ ಉಪದೇಶಿಸಿದರು; “ನೀನು ಇಹಲೋಕದಲ್ಲಿ ಓರ್ವ ವಿದೇಶಿಯಂತೆ ಅಥವಾ ಓರ್ವ ಪ್ರಯಾಣಿಕನಂತೆ ಬದುಕಬೇಕು .” (ಬುಖಾರಿ). ಈ ಉಪದೇಶವನ್ನು ನನ್ನ ಹೆಗಲನ್ನು ಹಿಡಿದು ವಿಶೇಷವಾಗಿ ಪ್ರಸ್ತಾಪಿಸಿದ್ದಾರೆ. ಈ ಉಪದೇಶವು ಬಹಳ ಮಹತ್ವವುಳ್ಳದ್ದು ಅದೇ ರೀತಿ ಬಹಳ ಪ್ರಾಮುಖ್ಯತೆಯನ್ನು ನೀಡಬೇಕಾಗಿದೆ ಎಂಬುದನ್ನು ಇದು ಸೂಚಿಸುತ್ತದೆ. ಮನುಷ್ಯನ ನಿಜವಾದ ಶಾಶ್ವತವಾದ ವಾಸಸ್ಥಾನವು ಪರಲೋಕವಾಗಿದೆ. ಪರಲೋಕ ಜೀವನಕ್ಕೆ ಅಗತ್ಯವಾದ ವಸ್ತುಗಳನ್ನು ಸಂಗ್ರಹಿಸಲಿಕ್ಕಾಗಿ ನಾವು ಇಹಲೋಕಕ್ಕೆ ಬಂದಿರುತ್ತೇವೆ. ಪ್ರತಿಯೊಬ್ಬರಿಗೂ ಒಂದು ನಿರ್ದಿಷ್ಟ ಸಮಯದವರೆಗೆ ಕೆಲಸ ಮಾಡಲು ಮತ್ತು ಪರಲೋಕಕ್ಕೆ ಅಗತ್ಯವಾದ ವಸ್ತುಗಳನ್ನು ಸಂಗ್ರಹಿಸಲು ಅವಕಾಶವನ್ನು ನೀಡಲಾಗಿದೆ. ಅವನ ಅವದಿಯು ಮುಗಿದ ಕೂಡಲೇ ಮರಳಿ ಹೋಗಲೇಬೇಕು. ಅವಿತುಕೊಳ್ಳಲು ಅಥವಾ ಹಣಪಾವತಿಸಿ ತಪ್ಪಿಸಿಕೊಳ್ಳಲು ಖಂಡಿತವಾಗಿ ಸಾಧ್ಯವಿಲ್ಲ. ಇಹಲೋಕ ಮತ್ತು ಪರಲೋಕ ಜೀವನವನ್ನು ಜೊತೆಯಾಗಿ ಪರಿಗಣಿಸಿದರೆ ಇಹಲೋಕ ಜೀವನವು ಸಂಪೂರ್ಣ ಪ್ರಯಾಣವಾಗಿದೆ. ಉದಾ:- “ಓರ್ವ ಪ್ರಯಾಣಿಕ...

ಪಶ್ಚಾತಾಪ ಮತ್ತು ಕ್ಷಮೆ)

ಪಶ್ಚಾತಾಪ ಮತ್ತು ಕ್ಷಮೆ.. ಯಾರಾದರೂ ನಮಗೆ ಕೆಡುಕನ್ನು ಮಾಡಿದಲ್ಲಿ ಅಥವಾ ತಪ್ಪು ರೀತಿಯಲ್ಲಿ ನಮ್ಮೊಂದಿಗೆ ವರ್ತಿಸಿದಲ್ಲಿ, ನಾವವರನ್ನು ಕ್ಷಮಿಸುವುದರಲ್ಲಿ ಒಳಿತಿದೆ. ಕಹಿ ಘಟನೆಯ ಕುರಿತು ಇಲ್ಲವೇ ಕೆಡುಕು ಬಯಸಿದ ವ್ಯಕ್ತಿಯ ಕುರಿತು ಪದೇ ಪದೇ ಯೋಚಿಸಿದರೆ  ಸೇಡಿಗೆ ಸೇಡು ತೀರಿಸಿಕೊಳ್ಳಬೇಕೆಂಬ ಪ್ರತಿಕಾರದ ಮನೋಭಾವ ನಮ್ಮಲ್ಲಿ ಹುಟ್ಟುತ್ತದೆ. ಮನಸ್ಸಿನ ನೆಮ್ಮದಿಯನ್ನು ಹಾಳು ಮಾಡುತ್ತದೆ, ನಮ್ಮ ಸುತ್ತೆಲ್ಲ ಸಂತಸದ ಹೊನಲಿದ್ದರೂ ಅದನ್ನು ನಾವು ಗುರುತಿಸುವುದೇ ಇಲ್ಲ.  ಇದಕ್ಕೆಲ್ಲ ಒಂದೇ ಪರಿಹಾರ ಸ್ನೇಹಿತರೆ, ತಪ್ಪು ಮಾಡಿದವರ ಎದುರಲ್ಲಿಯೇ ಕುಳಿತು ಮಾತನಾಡಿ.  “ನೀನೆಷ್ಟೇ ತಪ್ಪು ಮಾಡಿದರೂ, ನನಗೆ ಕೆಡುಕು ಬಯಸಿದರೂ, ನಾನು ನಿನ್ನನ್ನು ಕ್ಷಮಿಸಿರುವೆ” ಎಂದು ಮನದಲ್ಲಿ ಅಂದುಕೊಂಡು ಅವರತ್ತ ಹೂವಿನ ನಗೆಯನ್ನು ಬೀರಿ. ಹೀಗೆ ಮಾಡಿದಲ್ಲಿ ಸಂತಸ, ಸಮಾಧಾನ, ಶಾಂತಿ, ನೆಮ್ಮದಿ ಎಲ್ಲಿದ್ದರೂ ನಿಮ್ಮ ಜೋಳಿಗೆಯಲ್ಲಿ ಬಂದು ಬೀಳುತ್ತವೆ. ತಿಳಿದೋ ತಿಳಿಯದೆನೋ ಮಾಡಿದ ತಪ್ಪನ್ನು ಕ್ಷಮಿಸುವುದರಿಂದ ಕೆಡುಕು ಬಯಸುವವರು ಕೂಡ ಮನ ಪರಿವರ್ತನೆ ಹೊಂದಬಹುದು. ದ್ವೇಷ, ರೋಷ, ಕ್ಲೇಷ ಇವುಗಳಿಂದ ವೈರತ್ವ ಬೆಳೆಯುವುದೇ ಹೊರತು ಪ್ರೀತಿ ನೆಲೆಸಲಾರದು. ಅಲ್ಲದೇ, ಯಾರಲ್ಲಿಯೂ ಶಾಂತಿ ಉಳಿಯುದಿಲ್ಲ. ಉದಾಹರಣೆಗೆ ನಾನೊಂದು ನೈಜ ಘಟನೆಯನ್ನು ತಮ್ಮ ಮುಂದಿಡಲು ಇಷ್ಟ ಪಡುತ್ತೇನೆ. ಮಂಗಳೂರು ಎಂಬ ಮಾಯಾನಗರಿಯ ಅಫ್ಸಾನ ಎನ್ನುವ ಹುಡುಗಿ, ಚಿಕ್ಕ ವಯ...

ಪುಣ್ಯ ಮದೀನ

ಪುಣ್ಯ ಮದೀನಾ – 01 ➖➖➖➖➖➖➖➖ صلّوا على الحبيب ﷺ 💓 ದೇಹವನ್ನೇ ಸಮರ್ಪಿಸಿದರು ಆ ಸ್ವಹಬರೆಲ್ಲರೂ.., ಎದೆಯನ್ನೇ ಸೀಳೋ ಬಾಣದ ಮುಂದೆಯೂ ಅಂಜಲಿಲ್ಲ ಆ ಸ್ವಹಾಬರೆಲ್ಲರೂ.., ಕರಳನ್ನೇ ಕಿತ್ತೆಗೆದಾಗಲೂ ಹೆದರಲಿಲ್ಲ ಆ ಸ್ವಹಾಬರೆಲ್ಲರೂ ಕಾರಣ ವಿಷ್ಟೇ ಹಬೀಬ್ ﷺ ರ ಮೇಲೆ ಇಟ್ಟಿದ್ದರು ಪ್ರೇಮದ ಗೋಪುರವನ್ನೇ ಆ ಸ್ವಹಾಬರೆಲ್ಲರೂ.., ಅವರಂತೆ ಪ್ರೀತಿಸಲು ಅರಿಯದ ಪಾಪಿಗಳೇ ಆಗಿರುವೆವು ನಾವು.., ಸಿಗಬಹುದೇ ಭಾಗ್ಯ ಹಬೀಬ್ ﷺ ರ ಪ್ರೇಮಿಗಳ ಸಾಲಿನಲ್ಲಿ ಸೇರಲು ನಾವು..,  💞 الصــلوة والسلام عليك يارسول الله ﷺ 💞 ➖➖➖➖➖➖➖ ಅಶ್ಫಾಕ್ ಕಟ್ಟತ್ತಾರ್

ಕೊಡಗಿನ ಸುಲ್ತಾನ್ ಸೂಫಿ ಶಹೀದ್(ರ)

ಕೊಡಗಿನ ಸುಲ್ತಾನ್ ಸೂಫೀ ಶಹೀದ್ [ರ] ಎಮ್ಮೆಮಾಡು    بِسْمِللّهِ رَحْمٰنِ رَحِيمْ ಇಸ್ಲಾಂ ಧರ್ಮವು ಮಾನವನ ಉತ್ಪತ್ತಿಯ ಕಾಲದಿಂದಲೇ ಅವನಿಗೆ ಮಾರ್ಗದರ್ಶನ ನೀಡುವ ಸಲುವಾಗಿ ಸೃಷ್ಟಿಕರ್ತನು ರೂಪಿಸಿದ ಜೀವನ-ವ್ಯವಸ್ಥೆಯಾಗಿದೆ.ಅದರ ಪ್ರಚಾರ ಪ್ರವೃತ್ತಿ ಮೊದಲ ಮಾನವ ಹಾಗೂ ಮೊದಲ ಪ್ರವಾದಿ ಆದಂ(ಅ) ಅವರಿಂದ ಶುಭಾರಂಭಗೊಂಡಿತು ಕಾಲಾಂತರದಲ್ಲಿ ಲಕ್ಷಕ್ಕೂ ಮಿಕ್ಕಿದ ಪ್ರವಾದಿಗಳನ್ನು ಅಲ್ಲಾಹನು ಆರಿಸಿ ಕಳುಹಿಸಿದನು.                 ಅಂತ್ಯ ಪ್ರವಾದಿ ಮುಹಮ್ಮದ್ ನಬಿ (ಸ) -ರ ಮುಖಾಂತರ ಸಂಪೂರ್ಣ ಇಸ್ಲಾಮಿನ ಪ್ರಚಾರವು ಅರೇಬಿಯಾ ದೇಶದಲ್ಲಿ ಪ್ರಾಬಲ್ಯಕ್ಕೆ ಬಂದಾಗ ಇತ್ತ ಭಾರತದಲ್ಲೂ ಅದರ ಪ್ರಭಾಕಿರಣಗಳು ಹರಡಿ ಮನುಕುಲದ ಪಿತ ಆದಂ ನಬಿ (ಅ) ರವರ ಪಾದಸ್ಪರ್ಶದಿಂದ ಪಾವನಗೊಂಡ ಶ್ರೀಲಂಕಾದ ಆದಂ ಪರ್ವತವನ್ನು ಕಂಡು ಕೃತಾರ್ಥರಾಗಲೆಂದು ಹೊರಟ ನಬಿ(ಸ.ಅ) ರ ಶಿಷ್ಯ ವೃಂದದವರ ಮುಖಾಂತರ ಇಲ್ಲಿಗೂ ಇಸ್ಲಾಂ ತಲುಪಿತು.ಚೇರಮಾನ್ ಪೆರುಮಾಲ್ ಮುಖೇನ ಮಾಲಿಕ್ ದಿನಾರ್ ಮತ್ತು ಸಂಗಡಿಗರು ಇಲ್ಲಿ ಬಂದು ದೀನೀ ಪ್ರಬೋಧನೆ ನೀಡಿದ ಚರಿತ್ರೆ ನಮಗೆಲ್ಲರಿಗೂ ತಿಳಿದೇಇದೆ.         ಹಿಜ್-ರಾ ಒಂದನೇ ಶತಕದಲ್ಲೇ ಭಾರತಕ್ಕೆ ತಲುಪಿದ ಪ್ರಸ್ತುತ ಸ್ವಹಾಬಿಗಳು ಇಲ್ಲಿ ನಡೆಸಿದ ಇಸ್ಲಾಮಿಕ್ ಮಿಶನರಿ ಪ್ರವರ್ತಿಗಳ ಫಲವಾಗಿ ಕೇರಳ ಮತ್ತು ಕರ್ನಾಟಕದ ಕೆಲವೊಂದು ಪ್ರದೇಶಗಳಾದ ಮಂಗ...

ಫ್ರೈಡೇ ಸ್ಪೇಷಲ್

ಫ್ರೈಡೇ ಸ್ಪೇಷಲ್ ಅಬೂ ’ಉಬೈದ(ರ)ರ ಜುಹ್‌ದ್(ಅನಿಶ್ಚಿತತೆ) ಮತ್ತು ಉಮರ್(ರ)ರ ಕಣ್ಣೀರು, ಅಬ್ದುಲ್ಲಾಹ್ ಬಿನ್ ’ಉಮರ್(ರ) ವರದಿ ಮಾಡಿದಂತೆ, ಅಲ್-ಷಾಮ್‌ಗೆ”ಉಮರ್ ಬಿನ್ ಖತ್ತಾಬ್(ರ) ಬಂದಾಗ, ಅಬೂ ’ಉಬೈದ(ರ)ರಿಗೆ ಹೇಳಿದರು: “ನಮ್ಮನ್ನು ನಿಮ್ಮ ಮನೆಗೆ ಕರೆದೊಯ್ಯಿರಿ.” ಅಬೂ ’ಉಬೈದ(ರ)ರು ಕೇಳಿದರು, “ನನ್ನ ಮನೆಯಲ್ಲಿ ಏನು ಮಾಡುವಿರಿ?” ’ಉಮರ್(ರ) ಹೇಳಿದರು, “ಹಾಗೆಯೇ ಅಲ್ಲಿಗೆ ಕರೆದೊಯ್ಯಿರಿ” ಅಬೂ ’ಉಬೈದ(ರ) ಹೇಳಿದರು, “(ಕರೆದೊಯ್ದರೆ) ನೀವು ನಮ್ಮನ್ನು ನೋಡಿ ಕಣ್ಣೀರು ಹರಿಸುವಿರಷ್ಟೇ.” ಅವರು ಮನೆಯನ್ನು ಪ್ರವೇಶಿಸಿದಾಗ ಅದರಲ್ಲಿ ಏನನ್ನೂ(ಪೀಠೋಪಕರಣಗಳ ಸಜ್ಜುಗೊಳಿಸಿರುವಿಕೆಯನ್ನು) ಕಾಣಲಿಲ್ಲ. ’ಉಮರ್(ರ) ಕೇಳಿದರು, “ನಿಮ್ಮ ವಸ್ತುಗಳೆಲ್ಲಿ? ಚಿಂದಿ, ನೀರಿನ ಚೀಲ ಮತ್ತು ತಟ್ಟೆಯ (ಹರಿವಾಣವ)ನ್ನು ಹೊರತುಪಡಿಸಿದರೆ ನಾನು ಇನ್ನೇನನ್ನೂ ಕಾಣುತ್ತಿಲ್ಲ. ಮತ್ತು ನೀವೊಬ್ಬ ರಾಜ್ಯಪಾಲರಾಗಿದ್ದೀರಿ! ನಿಮ್ಮಲ್ಲಿ ಆಹಾರವಿದೆಯೇ?” ಆಗ ’ಉಬೈದ(ರ)ರು ಹಳೆಯ ಗಡಿಗೆಯ ಬಳಿಗೆ ಹೋಗಿ ಕೆಲ ತುಂಡು-ತುಣುಕುಗಳನ್ನು ಹೊರತೆಗೆದರು. ಅದನ್ನು ಕಂಡು ’ಉಮರ್(ರ)ರು ಕಣ್ಣೀರಿಡಲು ಆರಂಭಿಸಿದರು. ಅಬೂ ’ಉಬೈದ(ರ) ಅವರಿಗೆ ಹೇಳಿದರು, ನಾನು ಮೊದಲೇ ತಿಳಿಸಿದ್ದೆ “ನೀವು ನನಗಾಗಿ ದುಃಖಿಸುವಿರಿ ಎಂದು. ಓ ಉಮ್ಮುಲ್ ಮುಅ’ಮಿನೀನ್(ಸತ್ಯವಿಶ್ವಾಸಿಗಳ ಸರದಾರರೇ), ವಿಶ್ರಾಂತಿಯ  ಸ್ಥಳದಲ್ಲಿ ಯಾವುದು ನಮಗೆ ನೆರವಾಗುವುದೋ ಅಷ್ಟು ಮಾತ್ರ ಈ ದುನ್ಯಾ(ಇಹಲೋಕ)ದಲ್...

ಮೀನಿನ ಹೊಟ್ಟೆಯಲ್ಲಿ ಜೀವಿಸಿದ ಯೂನುಸ್ ನಬಿ ಅಲೈಹಿಸ್ಸಲಾಮ್

بِسْمِ اللهِ الرَّحْمَٰنِ الرَّحِيمْ  السَّـــــــلاَمُ عَلَيــْــكُم وَرَحْمَةُ اللهِ وَبَرَكـَـاتُه  ಪ್ರೀತಿಯ ಸ್ನೇಹಿತರೇ...            ನೀವೆಲ್ಲರೂ ಈ ಚರಿತ್ರೆಯನ್ನು ಅರಿತವರಾಗಿರಬಹುದು.  ಆದರೂ ಆ ಚರಿತ್ರೆಯನ್ನ ಮತ್ತೊಮ್ಮೆ ನೆನಪಿಸುವುದಕ್ಕಾಗಿ ಕಳುಹಿಸುತ್ತಿದ್ದೇನೆ.  ಅಲ್ಲಾಹನ ಪ್ರವಾದಿಯಾದ ಯೂನುಸ್ ನಬಿ ಅಲೈಹಿಸ್ಸಲಾಮ್ ರವರ  ಜೀವನ ಚರಿತ್ರೆಯ ಕುರ್.ಆನಿನಲ್ಲಿ ಉಲ್ಲೇಖಿಸದ ಪ್ರಧಾನವಾದ ಕೆಲವು ವಿಷಯಗಳನ್ನು ಇದರಲ್ಲಿ ಉಲ್ಲೇಖಿಸಲಾಗಿದೆ.  ಸರ್ವ ಶಕ್ತನಾದ ಅಲ್ಲಾಹನ ನಾಮದಿಂದ ಚರಿತ್ರೆಯನ್ನು ಆರಂಬಿಸುವೆನು ಮೀನನ ಹೊಟ್ಟೆಯಲ್ಲಿ ಜೀವಿಸಿದ ಯೂನುಸ್ ನಬಿ (ಅ)   ಬನೂಇಸ್ರಾಹಿಲ್ ಯೂಸುಫ್ ನಬಿ (ಅ) ರ ಸಹೊದರ ಬಿನ್.ಯ್ಯಾಮಿನ್ ಪರಂಪರೆದಿಂದ ಬಂದ ಒಂದು ಕುಟುಂಬ ವಾಗಿದೆ "ಮತಾ" ಎಂಬ ವಯಸ್ಸಾದ ದಂಪತಿಗಳು... النسب:- يونس بن متي بن ماثان بن رجيم بن ايناشاه بن سليمان (ಮತಾ ಎಂಬುದು ತಾಯಿಯ ಹೆಸರೆಂದು ತಂದೆಯೇ ಹೆಸರೆಂದು ಚರಿತ್ರೆ ಪಂಡಿತರಲ್ಲಿ ಅಭಿಪ್ರಾಯವಿದೆ )  ಸುಖ ಜಿವನ ನಡೆಸುತ್ತಿದ್ದ ಅವರಿಗೆ ಅಲ್ಲಾಹನು ಮಕ್ಕಳನ್ನು ನೀಡಿಲ್ಲ ಎಂಬ ಬೇಸರವಿತ್ತೇ ಹೋರತು ಬೇರೇ ಯಾವ ತೊಂದರೆಯು ಇಲ್ಲದೆ ಸುಃಖವಾಗಿ ಜೀವಿಸುತ್ತಿದ್ದರು  ಒಂದು ದಿನ ಮಡದಿ ಮಹಾನರಾದ ಅಯ್ಯೂಬ್ ನಬಿ (ಅ.ವ)ರು ರೋಗ ಸಮನಕ...

ಸಾಜೀದ

ಸಾಜೀದ ಆತ್ಮೀಯ ಓದುಗರಲ್ಲಿ... ಈ ಕಥೆ ನನ್ನ ಕಲ್ಪನೆಯಲ್ಲ ಒಂದು ಯತೀಂ ಸಹೋದರಿ ತನ್ನ ಜೀವನದಲ್ಲಿ ನಡೆದಂತಹ ಘಟನೆಯನ್ನು ನನ್ನೊಂದಿಗೆ ಹಂಚಿಕೊಂಡಿದ್ದನ್ನು ಅವರ ಅನುಮತಿಯಂತೆ ಕಾದಂಬರಿ ರೂಪದಲ್ಲಿ ನಿಮ್ಮ ಮುಂದೆ ತಂದಿದ್ದೇನೆ ಯತೀಂರ ಸಮಸ್ಯೆಗಳ ನಡುವೆ ಹುದುಗಿ ಹೋಗುವ ವಿಷಯಗಳು ಈ ಕಾದಂಬರಿಯ ನಾಯಕಿ ತೋಡಿಕೊಂಡ ನೈಜ ಕಥೆಯನ್ನು ಎಳೆ ಎಳೆಯಾಗಿ ಬಿಡಿಸಿ ನಿಮ್ಮ ಮುಂದೆ ಇಡುತ್ತಿದ್ದೇನೆ...                    . . .      ಬ್ಯಾರಿ ಇನ್ಸ್ಟಿಟ್ಯೂಟ್ ಕಾಲೇಜಿನ ಮಧ್ಯಾಹ್ನದ ತರಗತಿ ಮುಗಿದ ನಂತರ ಎಲ್ಲ ವಿದ್ಯಾರ್ಥಿನಿಯರು ಹೊರಂಗಣದಲ್ಲಿ ಕುಳಿತು ಹರಟೆ ಹೊಡೆಯುತ್ತಿದ್ದರು ಆದರೆ ಸಾಜೀದ ಮಾತ್ರ ಎಂದಿನಂತೆ ಯಾರೊಂದಿಗೂ ಬೆರೆಯದೆ ನೇರವಾಗಿ ಕಾಲೇಜಿನ ಎದುರು ಇದ್ದ ಪಾರ್ಕಿನತ್ತ ನಡೆದಳು.. ಹಸಿರು ಹುಲ್ಲು ಹಾಸಿನ ಮೇಲೆ ಕುಳಿತಿದ್ದ ಸಾಜೀದ ಎಂದಿನಂತಿರಲಿಲ್ಲ ಅವಳ ಪಕ್ಕದಲ್ಲಿಯೇ ಕುಳಿತಿದ್ದ ಹಕೀಂ ಸಾಜೀದ ಅನ್ಯಮನಸ್ಕಳಾಗಿರುವುದನ್ನು ಗಮನಿಸಿದ್ದ ಕಾರಣ ಕೇಳಬೇಕೆನಿಸಿದರೂ ಅವಳಾಗಿಯೇ ಹೇಳಲಿ ಎಂದು ಅವನು ಕೂಡ ಮೌನವಾಗಿದ್ದ_ "ಹಕೀ.. ಏನಾಯಿತು..? ಯಾಕೆ ಸುಮ್ಮನೆ ಕುಳಿತುಬಿಟ್ಟೆ.." ಸಾಜೀದಳೇ ಕೇಳಿದಳು              "ನೀನೇ ಏನೋ ಯೋಚಿಸುತ್ತಾ ಕುಳಿತಿದ್ದೀಯಾ ನಾನೇಕೆ ತೊಂದರೆ ಕೊಡಲಿ ಎಂದು ಸುಮ್ಮನಾದೆ...