Posts

Showing posts from January, 2020

ಕುದುರೆ ಪುರಾಣ

ಐಶ್ವರ್ಯದ ಸಂಕೇತವಾದ ಕುದುರೆ    ಸಾಕುಮೃಗಗಳ ಪೈಕಿ ಬಹಳ ಘನತೆ, ಹೆಮ್ಮೆ ಮತ್ತು ಗೌರವವಿರುವ ಒಂದು ಆಡಂಬರ ಪ್ರಾಣಿಯಾಗಿದೆ ಕುದುರೆ.    ಪವಿತ್ರ ಕುರ್‌ಆನಿನಲ್ಲಿ ಈ ಪ್ರಾಣಿಯ ಬಗ್ಗೆ ಹಲವಾರು ಕಡೆ ಉಲ್ಲೇಖವಿದೆ. ಅಲ್ಲದೆ ಅಲ್ಲಾಹನು ಇದರ ಹೆಸರೇಳಿ ಆಣೆ ಹಾಕಿದ ಅಧ್ಯಾಯ (ಸೂರಃ) ಕೂಡ ಪವಿತ್ರ ಕುರ್‌ಆನಿನಲ್ಲಿದೆ. ಮಾತ್ರವಲ್ಲ ಈ ಮೃಗದ ಮಹತ್ವವನ್ನು ಎತ್ತಿ ಹೇಳಿ ಡಝನುಗಟ್ಟಳೆ ಸಹೀಹಾದ ಪ್ರವಾದಿ ಹದೀಸುಗಳು ವರದಿಯಾಗಿದೆ. ಒಟ್ಟಿನಲ್ಲಿ ಕುದುರೆಯನ್ನು ಇತರ ಮೃಗಗಳಿಗೆ ಹೋಲಿಸಿದರೆ ಕುದುರೆಗಿರುವ ಸ್ಥಾನಮಾನ, ಘನತೆ ಮತ್ತು ಗೌರವ ಇತರ ಮೃಗಗಳಿಗೆ ಇಲ್ಲ.    ಮನುಷ್ಯನನ್ನು ಹೊರತುಪಡಿಸಿ ಪ್ರಾಣಿಗಳಲ್ಲಿ ಇಷ್ಟೊಂದು ಚೆಲುವಾದ ಸುಂದರ ಜೀವಿ ಬೇರೊಂದಿಲ್ಲ ಎಂದು ಹಿಜ್‌ರಾ ಏಳನೆಯ ಶತಮಾನದ ಪ್ರಸಿದ್ಧ ಪಂಡಿತ ಇಮಾಮ್ ಖಝ್‌ವೀನಿಯವರು ಅಭಿಪ್ರಾಯ ಪಟ್ಟಿದ್ದಾರೆ.   ಗಂಡು ಹೆಣ್ಣು ಪರಸ್ಪರ ನಾಲ್ಕು ವರ್ಷ ಪ್ರಾಯವಾಗುವಾಗಲೇ ಲೈಂಗಿಕ ಚಟುವಟಿಕೆಯಲ್ಲಿ ತೊಡಗುತ್ತದೆ. ಗರ್ಭಧಾರಣೆಯಾಗಿ ಹನ್ನೊಂದು - ಹನ್ನೆರಡು ತಿಂಗಳಾಗುವಾಗ ಮರಿ ಹಾಕುತ್ತದೆ. ಬರೇ ಒಂದೇ ಒಂದು ಮರಿ ಮಾತ್ರ.     ಕುದುರೆಯು ಸುಮಾರು ನಲುವತ್ತರಿಂದ ಐವತ್ತು ವರ್ಷಗಳ ತನಕ ಬದುಕುತ್ತದೆ. ಕೆಲವೊಂದು ಕುದುರೆಗಳು ಸುಮಾರು ತೊಂಬತ್ತು ವರ್ಷಗಳ ತನಕವೂ ಬದುಕುವುದಿದೆ.    ಕುದುರೆಗೆ ಆಯಾಸ, ದಣಿವು, ನಿತ್ರಾಣ, ಬಳಲಿಕೆ ಎಂಬುದು ಇಲ್ಲವೇ ಇ...

ಮದೀನ ಪ್ರಣಯಂ

Image
ಯಾ ರಸೂಲುಲ್ಲಾಹ್ ﷺ ತಮ್ಮ ﷺ ಕಾಲಿಗೆ ಒಂದು ಮುಳ್ಳು ಚುಚ್ಚಿದರೂ ಸಹಿಸದ ಸ್ವಹಾಬಿ ಶ್ರೇಷ್ಠರ ಪವಿತ್ರ ಪ್ರೀತಿಯ ಮುಂದೆ ನನ್ನ ಪ್ರೀತಿ ಏನೂ ಅಲ್ಲ.. ಯಾ ಅಲ್ಲಾಹ್ ಮುತ್ತು ಹಬೀಬ್ ﷺ ತಂಙಳ್ ರವರನ್ನು ನಿಷ್ಕಳಂಕ ಹೃದಯದಿಂದ ಪ್ರೀತಿಸಲು ತೌಫೀಖ್ ನೀಡು ಅಲ್ಲಾಹ್.. ಶಮೀಮಾ ಕನ್ನಂಗಾರ್ NOOR-UL-FALAH ISLAMIC STORE 

ಶ‌ಅ್‌ರೇ ಮುಬಾರಕ್‌ನ ಕಾವಲುಗಾರ ಇಮಾಮ್ ಬುಖಾರಿ!

ಶ‌ಅ್‌ರೇ ಮುಬಾರಕ್‌ನ ಕಾವಲುಗಾರ ಇಮಾಮ್ ಬುಖಾರಿ!    ಪವಿತ್ರ ಕುರ್‌ಆನಿನ ನಂತರ ಮುಸ್ಲಿಂ ಜಗತ್ತು ಬಹಳ ಹೆಮ್ಮೆ ಮತ್ತು ಗೌರವದಿಂದ ಕಾಣುವ ಒಂದು ಗ್ರಂಥವಾಗಿದೆ "ಸಹೀಹುಲ್ ಬುಖಾರಿ. ಅಥವಾ ಅಲ್ ಜಾಮಿಅ್ ಅಲ್ ಸಹೀಹ್."        ಹಿಜ್‌ರಾ ವರ್ಷ ನೂರ ತೊಂಬತ್ತ ನಾಲ್ಕರಲ್ಲಿ ಹುಟ್ಟಿ ಇನ್ನೂರ ಐವತ್ತಾರರಲ್ಲಿ (194-256) ವಿಧಿವಶರಾದ ಈ ಜ್ಞಾನ ತೇಜಸ್ಸಿನ ಬಗ್ಗೆ ತಿಳಿಯದವರು ಮುಸ್ಲಿಮ್ ಜಗತ್ತಿನಲ್ಲಿ ಯಾರೂ ಇರಲಿಕ್ಕಿಲ್ಲ.      ಪ್ರವಾದಿ ಮುಹಮ್ಮದ್ (ಸ) ರ ಸುಮಾರು ಏಳು ಸಾವಿರದ ಐನೂರ ಅರುವತ್ತಮೂರು (7563) ಸಹೀಹಾದ ಪವಿತ್ರ ಹದೀಸುಗಳನ್ನು ಒಂದು ಗ್ರಂಥದಲ್ಲಿ ಕ್ರೋಡೀಕರಿಸಿ ಹೊರತರಲು ಈ ಜ್ಞಾನಬೆಳಕಿಗೆ ಸುಮಾರು ಹದಿನಾರು ವರ್ಷಗಳು ಬೇಕಾಯಿತು. ಕೆಲವೊಮ್ಮೆ ಒಂದು ಹದೀಸಿಗೆ ಬೇಕಾಗಿ ಈ ಮಹಾತ್ಯಾಗಿ ಬೆಳಗಿನಿಂದ ಸಂಜೆಯ ವರೆಗೆ ಸಂಚಾರ ಮಾಡುತ್ತಿದ್ದರು. ಹದೀಸ್ ಕೈವಶವಿರುವ ವ್ಯಕ್ತಿಗೆ ಅಥವಾ ಅವರ ಚಾರಿತ್ರ್ಯಿಕ್ಕೆ ಇತಿಹಾಸದಲ್ಲಿ ಎಲ್ಲಾದರೂ ಏನಾದರೂ ಎಂದಾದರೂ ಒಂದು ಪುಟ್ಟ ಕಪ್ಪುಚುಕ್ಕೆ (Black Point) ಇದೆಯೆಂದು ತಿಳಿದರೆ ಹೋದ ದಾರಿಯಲ್ಲೇ ಯಾವುದೇ ಬೇಸರವಿಲ್ಲದೆ ವಾಪಾಸು ಬರುತ್ತಿದ್ದರು. ಸಹೀಹಾದ ಒಂದು ಹದೀಸ್ ದೊರೆತರೆ ತನ್ನ ಮುದ್ರಣ ಮಾಡಲಿರುವ ಹದೀಸ್ ಕ್ರೋಡೀಕರಣ ಗ್ರಂಥವಾದ "ಸಹೀಹುಲ್ ಬುಖಾರಿ" ಯಲ್ಲಿ ಲಿಖಿತ ರೂಪದಲ್ಲಿ ಸೇರ್ಪಡೆ ಮಾಡುವ ಮುನ್ನ ಉಝು ಮಾಡಿ ಹದೀಸ್ ದೊರೆತ ಸಂತೋಷದಲ್ಲ...

ಪವಿತ್ರ ಕುರ್‍ಆನ್

Image
يَٰٓأَيُّهَا ٱلَّذِينَ ءَامَنُوا۟ لَا يَسْخَرْ قَوْمٌۭ مِّن قَوْمٍ عَسَىٰٓ أَن يَكُونُوا۟ خَيْرًۭا مِّنْهُمْ وَلَا نِسَآءٌۭ مِّن نِّسَآءٍ عَسَىٰٓ أَن يَكُنَّ خَيْرًۭا مِّنْهُنَّ ۖ وَلَا تَلْمِزُوٓا۟ أَنفُسَكُمْ وَلَا تَنَابَزُوا۟ بِٱلْأَلْقَٰبِ ۖ بِئْسَ ٱلِٱسْمُ ٱلْفُسُوقُ بَعْدَ ٱلْإِيمَٰنِ ۚ وَمَن لَّمْ يَتُبْ فَأُو۟لَٰٓئِكَ هُمُ ٱلظَّٰلِمُونَ ಓ ಸತ್ಯವಿಶ್ವಾಸಿಗಳೇ, ಒಂದು ವಿಭಾಗ ಇನ್ನೊಂದು ವಿಭಾಗವನ್ನು ಪರಿಹಾಸ್ಯ ಮಾಡದಿರಲಿ. ಅವರು (ಪರಿಹಾಸ್ಯಕ್ಕೊಳಗಾದವರು) ಇವರಿಗಿಂತ ಉತ್ತಮರಿರಲೂಬಹುದು. ಸ್ತ್ರೀಯರು ಇತರ ಸ್ತ್ರೀಯರನ್ನೂ ಪರಿಹಾಸ್ಯ ಮಾಡದಿರಲಿ. ಅವರು (ಪರಿಹಾಸ್ಯ ಕ್ಕೊಳಗಾದ ಸ್ತ್ರೀಯರು) ಇವರಿಗಿಂತ ಉತ್ತಮರಿರಲೂಬಹುದು. ನೀವು ನಿಮ್ಮನ್ನೇ ಹಳಿದುಕೊಳ್ಳಬೇಡಿರಿ. ಮತ್ತು ಪರಸ್ಪರ ಅಡ್ಡ ಹೆಸರಿನಿಂದ ಕರೆದುಕೊಳ್ಳದಿರಿ. ಸತ್ಯ ವಿಶ್ವಾಸ ಸ್ವೀಕರಿಸಿದ ಬಳಿಕ ಅಧಾರ್ಮಿಕ ಹೆಸರು ಎಷ್ಟೊಂದು ನಿಕೃಷ್ಟ. ಯಾರು ಇದರಿಂದ ಪಶ್ಚಾತ್ತಾಪಪಟ್ಟು ಮರಳುವುದಿಲ್ಲವೋ ಅವರೇ ಅಕ್ರಮಿಗಳು⁷. (ಪವಿತ್ರ ಖುರಾನ್ ಅಧ್ಯಾಯ-49 ಆಯತ್-11) ವಿವರಣೆ: 7. ಕುಟುಂಬಗಳು, ನೆರೆಹೊರೆಯವರು, ಸಹೋದ್ಯೋಗಿಗಳು, ಸಹಪಾಠಿಗಳು, ಸಹಯಾತ್ರಿಕರು ಮುಂತಾದ ಹಲವು ದೆಸೆಗಳಲ್ಲಿ ಮನುಷ್ಯರು ಒಟ್ಟಾಗಿ ಬಾಳುವ ಸಂಘಜೀವಿಗಳು. ಆದ್ದರಿಂದ ಪರಸ್ಪರ ಪಾಲಿಸಬೇಕಾದ ಉತ್ತಮ ಗುಣಗಳು ಇದ್ದರೆ...

ಅನುಕರಣೆ

ಸುತ್ತ,ಮುತ್ತಲ್ಲೆಲ್ಲಾ ಗಾಡವಾದ ನಿಶ್ಯಬ್ದವೂ ಆವರಿಸಿಕೊ೦ಡಿದೆ. ಅ೦ದಿನ ಎಲ್ಲಾ ದಿನಚರಿಗಳಿಗೂ ತೆರೆಯನ್ನೆಳೆದು ಎಲ್ಲರೂ ಗಾಡನಿದ್ರೆಯಲ್ಲಿದ್ದಾರೆ. ಒಬ್ಬರು ತನ್ನ ಹೊದಿಕೆಯನ್ನು ಸರಿಸಿ ಮೆಲ್ಲನೆ ಎದ್ದೇಳುತ್ತಿದ್ದಾರೆ. ಯಾರನ್ನೂ ಉಪ್ರದವಿಸದೆ ಅವರು ವುಳುವು (ಅ೦ಗಶುದ್ದಿ) ಮಾಡಿ. ನಮಾಝಿನಲ್ಲಿ ತಲ್ಲೀನರಾದರು. ಸೂರ್ಯನು ನಿದ್ರೆಯಿ೦ದೇಳಲು ಇನ್ನೂ ಸಮಯವಿದೆ. ಅವರು ಗಾಡ ಪ್ರಾರ್ಥನೆಯಲ್ಲಿದ್ದಾರೆ. ದೀರ್ಘವಾದ ಸುಜೂದುಗಳು, ಸುದೀರ್ಘವಾದ ರುಕೂಹುಗಳು, ಕಣ್ಣೀರಿ೦ದ ಕೂಡಿದ ತೌಭಾದ ಸ್ವರ. ಸ್ನೇಹನಿದಿಯಾದ ಸರ್ವಶಕ್ತನಲ್ಲಿ ಎಲ್ಲವನ್ನೂ ಹೇಳುತ್ತಿದ್ದಾರೆ. ಹೊಸಾ ಪ್ರಭಾತವನ್ನು ಸ್ವೀಕರಿಸುವಾಗ ಆ ಮನಸ್ಸು ಮತ್ತು ಜೀವನ ಎಷ್ಟು ಆಹ್ಲಾದಕರಮಯವಾಗಿರುತ್ತದೆ...! ರಾತ್ರಿ ನಮಾಝ್ ಅದು ಅತ್ಯಧಿಕ ಪುಣ್ಯಕರವಾದ ಸುನ್ನತ್ ನಮಾಜಾಗಿದೆ. ವಿಶ್ವಾಸವನ್ನು ಬಲಪಡಿಸಲು, ಮನಸ್ಸನ್ನು ಎಕಾಗ್ರತೆಯಲ್ಲಿರಿಸಲು, ಪಾಪಗಳಿ೦ದ ಮೋಜಿತರಾಗಲು ಅತ್ಯುತ್ತಮವಾದ ಒ೦ದು ಅವಕಾಶವಾಗಿದೆ 'ತಹಜ್ಜೂದ್' ನಮ್ಮೋಳಗಿನ ತಕ್ವಾಃ, ಇಮಾನ್'ಗಳಿಗೆ ಯಾವುದೇ ಕೊರತೆಯೂ ಬಾರದ೦ತೆ ನೆಲೆನಿಲ್ಲಿಸಲು ತಹಜ್ಜೂದಿನ ಕುರ್'ಆನ್ ಪಾರಾಯಣ ಮತ್ತು ಪ್ರಾರ್ಥನೆಗಳು ಪ್ರಚೋದನೆಯನ್ನು ನೀಡುತ್ತದೆ. ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರು ರಾತ್ರಿ ನಮಾಜನ್ನು ಬಹಳವಾಗಿ ಪ್ರೋತ್ಸಾಹಿಸುತ್ತಿದ್ದರು. ಇಹ,ಪರಲೋಕಗಳಲ್ಲಿರುವ ಅದರ ಶ್ರೇಷ್ಠತೆಯನ್ನು ವಿವರಿಸುತ್ತಿದ್ದರು. ನೆಬಿ ಸಲ್ಲಲ್ಲಾಹು ...

ಅನ್ಯಾಯ ಮತ್ತು ಶೋಷಣೆ

ನೀವು ಯಾವಾಗಲೂ ಅಲ್ಲಾಹನ ಸಾನಿಧ್ಯದಲ್ಲಿರುವುರೆ೦ದೂ ಮರಣಶಯ್ಯಾವಸ್ಥೆಯಲ್ಲಿರುವಿರೆ೦ದೂ ಅಲ್ಲಾಹನ ವಿಚಾರಣೆಯನ್ನು ಎದುರಿಸುತ್ತಾ ಸ್ವರ್ಗದ ನಿರೀಕ್ಷೆಯಲ್ಲಿರುವುರೆ೦ದೂ ಭಾವಿಸಿರಿ. ಅನ್ಯಾಯ ಮತ್ತು ಶೋಷಣೆಯನ್ನು ತ್ಯಾಜಿಸಿರಿ... ನಿಮ್ಮ ಸೇನೆಯ ಪ್ರೀತಿ ವಿಶ್ವಾಸವನ್ನು ಉಳಿಸಿಕೊಳ್ಳಿ. ಅಲ್ಲಾಹನ ಮಾರ್ಗದಲ್ಲಿ ಹೋರಾಡುತ್ತಿರುವಾಗ ಬೆನ್ನು ತೋರಿಸದೆ ಶೌರ್ಯದಿ೦ದ ಹೋರಾಡಿರಿ. ಆದರೆ ನಿಮ್ಮ ವಿಜಯ ಮಹಿಳೆಯರ ಮತ್ತು ಮಕ್ಕಳ ರಕ್ತದಿ೦ದ ಕಳ೦ಕಿತವಾಗದಿರಲಿ. ಖರ್ಜೂರದ ತೋಟಗಳನ್ನು, ಹೊಲಗದ್ದೆಗಳನ್ನು ದ್ವ೦ಸಗೊಳಿಸದಿರಿ. ಜಾನುವಾರುಗಳನ್ನು ಕೊಲ್ಲದಿರಿ. ಒಪ್ಪ೦ದ ಮಾಡಿಕೊ೦ಡರೆ, ಒಪ್ಪ೦ದಕ್ಕೆ ಬದ್ದರಾಗಿರಿ. ದ೦ಡಯಾತ್ರೆಯಲ್ಲಿ ಮು೦ದುವರಿಯುವಾಗ ಆಶ್ರಮಗಳಲ್ಲಿ, ಮಠಗಳಲ್ಲಿ ವಾಸಿಸುತ್ತಿರುವ ಸನ್ಯಾಸಿಗಳನ್ನು ನೀವು ಕಾಣುವಿರಿ. ಅವರು ಸೃಷ್ಟಿಕರ್ತನನ್ನು ತಮ್ಮದೇ ಆದ ರೀತಿಯಲ್ಲಿ ಆರಾಧಿಸ ಬಯಸುತ್ತಾರೆ. ಅವರನ್ನು ಅವರ ಪಾಡಿಗೆ ಬಿಟ್ಟುಬಿಡಿ; ಅವರ ಆಶ್ರಮಗಳನ್ನು ಹಾನಿಗೊಳಿಸದಿರಿ. -( ಇಸ್ಲಾಮಿನ ಪ್ರಥಮ ಖಲೀಫಾ ಹ. ಅಬೂಬಕ್ಕರ್ ಸಿದ್ದೀಕ್(ರ.ಅ)

ವಿವಾಹವಾದಾಗ ಅಥವಾ ಮೃಗವನ್ನು ಖರೀದಿಸಿದಾಗ

ವಿವಾಹವಾದಾಗ ಅಥವಾ ಮೃಗವನ್ನು ಖರೀದಿಸಿದಾಗ اللَّهُمَّ إِنِّي أَسْأَلُكَ خَيْرَهَا وَخَيْرَ مَا جَبَلْتَهَا عَلَيْهِ˓ وَأَعُوذُ بِكَ مِنْ شَرِّهَا وَشَرِّ مَا جَبَلْتَهَا عَلَيْهِ ಓ ಅಲ್ಲಾಹ್! ನಾನು ಈಕೆಯ ಒಳಿತನ್ನು ಮತ್ತು ಈಕೆಯನ್ನು ನೀನು ಯಾವುದಕ್ಕಾಗಿ ಸೃಷ್ಟಿಸಿದ್ದೀಯೋ ಅದರ ಒಳಿತನ್ನು ಬೇಡುತ್ತಿದ್ದೇನೆ. ಮತ್ತು ಈಕೆಯ ಕೆಡುಕಿನಿಂದ ಮತ್ತು ಈಕೆಯನ್ನು ಯಾವುದಕ್ಕಾಗಿ ಸೃಷ್ಟಿಸಿದ್ದೀಯೋ ಅದರ ಕೆಡುಕಿನಿಂದ ನಾನು ನಿನ್ನೊಂದಿಗೆ ರಕ್ಷೆ ಬೇಡುತ್ತಿದ್ದೇನೆ. ಅಲ್ಲಾಹುಮ್ಮ ಇನ್ನೀ ಅಸ್ಅಲುಕ ಖೈರಹಾ ವಖೈರ ಮಾ ಜಬಲ್ತಹಾ ಅಲೈಹಿ, ವಅಊದು ಬಿಕ ಮಿನ್ ಶರ್ರಿಹಾ ವಶರ್ರಿ ಮಾ ಜಬಲ್ತಹಾ ಅಲೈಹಿ ಅಬೂ ದಾವೂದ್ 2/248; ಇಬ್ನ್ ಮಾಜ 1/617; ನೋಡಿ: ಸಹೀಹ್ ಇಬ್ನ್ ಮಾಜ 1/324

ಒಳ್ಳೆಯ ಅಥವಾ ಕೆಟ್ಟ ಕನಸನ್ನು ಕಂಡರೆ

ಒಳ್ಳೆಯ ಅಥವಾ ಕೆಟ್ಟ ಕನಸನ್ನು ಕಂಡರೆ يَنْفُثُ عَنْ يَسَارِهِ (ثلاثاً) - يَسْتَعِيذُ بِاللَّهِ مِنَ الشَّيطَانِ وَمِنْ شَرِّ مَا رَأَى (ثَلاَثَ مَرَّاتٍ) - لاَ يُحَدِّثْ بِهَا أَحَداً - يَــتَحَوَّلُ عَنْ جَنْبِهِ الَّذِي كَانَ عَلَيْهِ ಎಡಭಾಗಕ್ಕೆ ಮೂರು ಸಲ ಉಗಿಯಬೇಕು. ಶೈತಾನನಿಂದ ಮತ್ತು ತಾನು ಕಂಡ ಕನಸಿನ ಕೆಡುಕಿನಿಂದ ರಕ್ಷಿಸಲು ಅಲ್ಲಾಹನೊಂದಿಗೆ ಮೂರು ಸಲ ರಕ್ಷೆ ಬೇಡಬೇಕು. ಆ ಕನಸಿನ ಬಗ್ಗೆ ಯಾರೊಂದಿಗೆ ಮಾತನಾಡಬಾರದು. ಮಗ್ಗುಲನ್ನು ಬದಲಿಸಿ ಮಲಗಬೇಕು. ಮುಸ್ಲಿಮ್ 4/1772 ಮುಸ್ಲಿಮ್ 4/1772, 4/1773 ಮುಸ್ಲಿಮ್ 4/1772 ಮುಸ್ಲಿಮ್ 4/1773

ಬೆಳಗ್ಗೆ ಮತ್ತು ಸಂಜೆ

ಬೆಳಗ್ಗೆ ಮತ್ತು ಸಂಜೆ أَعُوذُ بِاللَّهِ مِنَ الشَّيْطَانِ الرَّجِيمِ. اللَّهُ لاَ إِلَهَ إِلاَّ هُوَ الْحَيُّ الْقَيُّومُ لاَ تَأْخُذُهُ سِنَةٌ وَلاَ نَوْمٌ لَّهُ مَا فِي السَّمَاوَاتِ وَمَا فِي الۡأَرْضِ مَن ذَا الَّذِي يَشْفَعُ عِنْدَهُ إِلاَّ بِإِذْنِهِ يَعْلَمُ مَا بَيْنَ أَيْدِيهِمْ وَمَا خَلْفَهُمْ وَلاَ يُحِيطُونَ بِشَىْءٍ مِّنْ عِلْمِهِ إِلاَّ بِمَا شَاءَ وَسِعَ كُرْسِيُّهُ السَّمَاوَاتِ وَالۡأَرْضَ وَلاَ يَؤُودُهُ حِفْظُهُمَا وَهُوَ الْعَلِيُّ الْعَظِيمُ ಅಲ್ಲಾಹ್! ಅವನಲ್ಲದೆ ಆರಾಧನೆಗೆ ನೈಜ ಹಕ್ಕುದಾರರಾಗಿ ಅನ್ಯರಿಲ್ಲ, ಅವನು ಎಂದೆಂದಿಗೂ ಬದುಕಿರುವವನೂ ಎಲ್ಲವನ್ನೂ ನಿಯಂತ್ರಿಸುವವನೂ ಆಗಿದ್ದಾನೆ. ತೂಕಡಿಕೆಯಾಗಲಿ ನಿದ್ರೆಯಾಗಲಿ ಅವನನ್ನು ಬಾಧಿಸದು. ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವುದೆಲ್ಲವೂ ಅವನದ್ದು. ಅವನ ಅನುಮತಿಯಿಲ್ಲದೆ ಅವನ ಬಳಿ ಶಿಫಾರಸು ಮಾಡುವವನು ಯಾರಿದ್ದಾನೆ? ಅವರ ಮುಂದಿರುವುದನ್ನೂ ಹಿಂದಿರುವುದನ್ನೂ ಅವನು ಅರಿಯುತ್ತಾನೆ. ಅವನ ಅರಿವಿನಿಂದ ಅವನು ಇಚ್ಛಿಸಿದ್ದನ್ನಲ್ಲದೆ ಬೇರೇನನ್ನೂ ಆವರಿಸಿಕೊಳ್ಳಲು ಅವರಿಗೆ ಸಾಧ್ಯವಿಲ್ಲ. ಅವನ ಕುರ್ಸೀ ಆಕಾಶಗಳನ್ನೂ ಭೂಮಿಯನ್ನೂ ವ್ಯಾಪಿಸಿದೆ. ಅವುಗಳ ಸಂರಕ್ಷಣೆಯು ಅವನಿಗೊಂದು ವಿಷಯವೇ ಅಲ್ಲ. ಅವನು ಅತ್ಯುನ್ನತನೂ ಮಹೋನ್ನತನೂ ಆಗಿದ್ದಾನೆ. ಅಲ್ಲಾಹು ಲಾ...

ಸಾಲವನ್ನು ಹಿಂದಿರುಗಿಸುವಾಗ

ಸಾಲವನ್ನು ಹಿಂದಿರುಗಿಸುವಾಗ بَارَكَ اللَّهُ لَكَ فِي أَهْلِكَ وَمَالِكَ˓ إِنَّمَا جَزَاءُ السَّلَفِ الْحَمْدُ وَالْأَدَاءُ ನಿನ್ನ ಕುಟುಂಬದಲ್ಲಿ ಮತ್ತು ನಿನ್ನ ಸಂಪತ್ತಿನಲ್ಲಿ ಅಲ್ಲಾಹು ನಿನಗೆ ಬರಕತ್ ನೀಡಲಿ. ಸಾಲಗಳ ಪ್ರತಿಫಲವು ಕೇವಲ ಸ್ತುತಿ ಮತ್ತು ಮರುಪಾವತಿ. ಬಾರಕಲ್ಲಾಹು ಲಕ ಫೀ ಅಹ್ಲಿಕ ವಮಾಲಿಕ ಇನ್ನಮಾ ಜಝಾಉ ಸ್ಸಲಫಿ ಅಲ್‍ಹಮ್ದು ವಲ್ಅದಾಅ್ ಅನ್ನಸಾಈ ಅಮಲುಲ್ ಯೌಮಿ ವಲ್ಲಲಿಲಃದಲ್ಲಿ (ಪುಟ 300); ಇಬ್ನ್ ಮಾಜ 2/809. ನೋಡಿ: ಸಹೀಹ್ ಇಬ್ನ್ ಮಾಜ 2/55.

ಉಡುಪು ಧರಿಸುವಾಗ ಹೇಳುವುದು

ಉಡುಪು ಧರಿಸುವಾಗ ಹೇಳುವುದು الْحَمْدُ لِلَّهِ الَّذِي كَسَانِي هَذَا (الثَّوْبَ) وَرَزَقَنِيهِ مِنْ غَـيـْرِ حَوْلٍ مِنِّي وَلَا قُـوَّةٍ ಸ್ವಶಕ್ತಿಯಾಗಲಿ, ಸ್ವಸಾಮರ್ಥ್ಯವಾಗಲಿ ಇಲ್ಲದ ನನಗೆ ಈ ಉಡುಪನ್ನು ಉಡಿಸಿದ ಮತ್ತು ಇದನ್ನು ನನಗೆ ಒದಗಿಸಿದ ಅಲ್ಲಾಹನಿಗೆ ಸರ್ವಸ್ತುತಿ ಅಲ್‍ಹಮ್ದುಲಿಲ್ಲಾಹಿಲ್ಲದೀ ಕಸಾನೀ ಹಾದ ಸ್ಸೌಬ ವರಝಕನೀಹಿ ಮಿನ್ ಗೈರಿ ಹೌಲಿನ್ ಮಿನ್ನೀ ವಲಾ ಕುವ್ವಃ ಅಬೂ ದಾವೂದ್, ಅತ್ತಿರ್ಮಿದಿ, ಇಬ್ನ್ ಮಾಜ. ನೋಡಿ: ಇರ್ವಾಉಲ್ ಗಲೀಲ್ 7/47

ನಿದ್ದೆಯಿಂದ ಎದ್ದೇಳುವಾಗ ಹೇಳುವ ದಿಕ್ರ್‍ಗಳು

ನಿದ್ದೆಯಿಂದ ಎದ್ದೇಳುವಾಗ ಹೇಳುವ ದಿಕ್ರ್‍ಗಳು إِنَّ فِي خَلْقِ السَّمَاوَاتِ وَالْأَرْضِ وَاخْتِلَافِ اللَّيْلِ وَالنَّهَارِ لَآيَاتٍ لِأُولِي الْأَلْبَابِ˓ الَّذِينَ يَذْكُرُونَ اللَّهَ قِيَامًا وَقُعُودًا وَعَلَى جُنُوبِهِمْ وَيَتَفَكَّرُونَ فِي خَلْقِ السَّمَاوَاتِ وَالْأَرْضِ رَبَّنَا مَا خَلَقْتَ هَذَا بَاطِلًا سُبْحَانَكَ فَقِنَا عَذَابَ النَّارِ˓ رَبَّنَا إِنَّكَ مَنْ تُدْخِلِ النَّارَ فَقَدْ أَخْزَيْتَهُ وَمَا لِلظَّالِمِينَ مِنْ أَنْصَارٍ˓ رَبَّنَا إِنَّنَا سَمِعْنَا مُنَادِيًا يُنَادِي لِلْإِيمَانِ أَنْ آمِنُوا بِرَبِّكُمْ فَآمَنَّا رَبَّنَا فَاغْفِرْ لَنَا ذُنُوبَنَا وَكَفِّرْ عَنَّا سَيِّئَاتِنَا وَتَوَفَّنَا مَعَ الْأَبْرَارِ˓ رَبَّنَا وَآتِنَا مَا وَعَدْتَنَا عَلَى رُسُلِكَ وَلَا تُخْزِنَا يَوْمَ الْقِيَامَةِ إِنَّكَ لَا تُخْلِفُ الْمِيعَادَ˓ فَاسْتَجَابَ لَهُمْ رَبُّهُمْ أَنِّي لَا أُضِيعُ عَمَلَ عَامِلٍ مِنْكُمْ مِنْ ذَكَرٍ أَوْ أُنْثَى بَعْضُكُمْ مِنْ بَعْضٍ فَالَّذِينَ هَاجَرُوا وَأُخْرِجُوا مِنْ دِيَارِهِمْ وَأُوذُوا فِي سَبِيلِي وَقَاتَلُوا وَقُت...

ಒಳ್ಳೆಯ ಅಥವಾ ಕೆಟ್ಟ ಕನಸನ್ನು ಕಂಡರೆ

ಒಳ್ಳೆಯ ಅಥವಾ ಕೆಟ್ಟ ಕನಸನ್ನು ಕಂಡರೆ يَنْفُثُ عَنْ يَسَارِهِ (ثلاثاً) - يَسْتَعِيذُ بِاللَّهِ مِنَ الشَّيطَانِ وَمِنْ شَرِّ مَا رَأَى (ثَلاَثَ مَرَّاتٍ) - لاَ يُحَدِّثْ بِهَا أَحَداً - يَــتَحَوَّلُ عَنْ جَنْبِهِ الَّذِي كَانَ عَلَيْهِ ಎಡಭಾಗಕ್ಕೆ ಮೂರು ಸಲ ಉಗಿಯಬೇಕು. ಶೈತಾನನಿಂದ ಮತ್ತು ತಾನು ಕಂಡ ಕನಸಿನ ಕೆಡುಕಿನಿಂದ ರಕ್ಷಿಸಲು ಅಲ್ಲಾಹನೊಂದಿಗೆ ಮೂರು ಸಲ ರಕ್ಷೆ ಬೇಡಬೇಕು. ಆ ಕನಸಿನ ಬಗ್ಗೆ ಯಾರೊಂದಿಗೆ ಮಾತನಾಡಬಾರದು. ಮಗ್ಗುಲನ್ನು ಬದಲಿಸಿ ಮಲಗಬೇಕು. ಮುಸ್ಲಿಮ್ 4/1772 ಮುಸ್ಲಿಮ್ 4/1772, 4/1773 ಮುಸ್ಲಿಮ್ 4/1772 ಮುಸ್ಲಿಮ್ 4/1773

ರಾತ್ರಿ ನಿದ್ದೆಯಲ್ಲಿ ಭಯವಾದರೆ ಅಥವಾ ಏಕಾಂಗಿಯಾಗಿ ನಿದ್ದೆ ಮಾಡುವಾಗ ಭಯವಾದರೆ

ರಾತ್ರಿ ನಿದ್ದೆಯಲ್ಲಿ ಭಯವಾದರೆ ಅಥವಾ ಏಕಾಂಗಿಯಾಗಿ ನಿದ್ದೆ ಮಾಡುವಾಗ ಭಯವಾದರೆ أَعُوذُ بِكَلِمَاتِ اللَّهِ التَّامَّاتِ مِنْ غَضَبِهِ وَعِقَابِهِ˓ وَشَرِّ عِبَادِهِ˓ وَمِنْ هَمَزَاتِ الشَّيَاطِينِ وَأَنْ يَحْضُرُونِ ಅಲ್ಲಾಹನ ಪರಿಪೂರ್ಣವಾದ ವಚನಗಳೊಂದಿಗೆ ಅವನ ಕ್ರೋಧದಿಂದ ಮತ್ತು ಶಿಕ್ಷೆಯಿಂದ, ಅವನ ದಾಸರ ಕೆಡುಕುಗಳಿಂದ ಮತ್ತು ಶೈತಾನನ ದುರ್ಬೋಧನೆಗಳಿಂದ ಮತ್ತು ಅವರು ನನ್ನ ಬಳಿ ಹಾಜರಾಗುವುದರಿಂದ ನಾನು ರಕ್ಷೆ ಬೇಡುತ್ತಿದ್ದೇನೆ. ಅಊದು ಬಿಕಲಿಮಾತಿಲ್ಲಾಹಿ ತ್ತಾಮ್ಮತಿ ಮಿನ್ ಗದಬಿಹೀ ವಇಕಾಬಿಹೀ, ವಶರ್ರಿ ಇಬಾದಿಹೀ, ವಮಿನ್ ಹಮಝಾತಿ ಶ್ಶಯಾತೀನಿ ವಅನ್ ಯಹ್ದುರೂನ್ ಅಬೂ ದಾವೂದ್ 4/12. ನೋಡಿ: ಸಹೀಹು ತ್ತಿರ್ಮಿದಿ 3/171.

"ಕಾಡಿಗೆ ಓಡಿದ ಹಂದಿ"

"ಕಾಡಿಗೆ ಓಡಿದ ಹಂದಿ" ಆರನೇ ಖಲೀಫಾ ಎಂದು ಖ್ಯಾತರಾದ ಮುತವಕ್ಕಲ್ ರ.ಅ ರವರ ಕಾಲದಲ್ಲಿ ನಡೆದ ಘಟನೆ.. ಇಮಾಮರೊಬ್ಬರು ನಮಾಜು ಮಾಡುತ್ತಿದ್ದರು. ಅವರ ಮನಸ್ಸು ಅದರಲ್ಲಿ ಲೀನವಾಗಿದೆ. ಭಕ್ತಿ ಪೂರ್ಣ ನಮಾಝ್ ಮಾಡುತ್ತಿದ್ದಾರೆ. ಅವರ ಮನಸ್ಸು ನಮಾಜು ಬಿಟ್ಟು ಎಲ್ಲೂ ಕದಲುವುದಿಲ್ಲ. ವಿನಯಾನ್ವಿತರಾಗಿ ನಮಾಜು ಮಾಡುತ್ತಿದ್ದಾರೆ. ಗಾಂಭೀರ್ಯತೆ ತುಂಬಿದ ನಮಾಜು... ಅಲ್ಲೊಬ್ಬ ದುಷ್ಟನಿದ್ದ. ಆತನ ಮನದಲ್ಲಿ ಏನೋ ಆನಿಸಿತು. ಇದು ತಕ್ಕ ಸಮಯವೆಂದು ನಮಾಜಿನಲ್ಲಿ ತಲ್ಲೀನನಾಗಿರುವ ಆ ಇಮಾಮರನ್ನು ಉಪದ್ರ ಮಾಡತೊಡಗಿದ. ನಮಾಝ್ ಬಾತಿಲ್ ಆಗುವ ಕಾರ್ಯವನ್ನು ಯತೇಚ್ಚ ಮಾಡತೊಡಗಿದ. ಆತನಿಗೆ ಸಮಾಧಾನವಾಗಲಿಲ್ಲ. ತನಗೆ ಏನೆಲ್ಲಾ ಸಾಧ್ಯವೋ ಅದನ್ನು ಮಾಡಿ ಮುಗಿಸಿದ. ಎಲ್ಲಾ ರೀತಿಯ ತೊಂದರೆಗಳನ್ನು ನೀಡಿದ....  ನಿರಂತರವಾಗಿ ಅವರಿಗೆ ತೊಂದರೆ ಉಂಟಾದರೂ ಅವರು ನಮಾಜು ಬಿಡಲಿಲ್ಲ. ಸಹನೆ ಪಾಲಿಸಿದರು. ನಮಾಝ್ ಪೂರ್ತಿಯಾಗುವ ತನಕ ಎಲ್ಲವನ್ನೂ ಸಹಿಸಿದರು. ಈತನ ಉಪದ್ರವಗಳ ನಡುವೆ ನಮಾಜನ್ನು ಸಂಪೂರ್ಣವಾಗಿ ಪೂರ್ತಿಗೊಳಿಸಿದರು. ತನಗೆ ನಮಾಜಿನಲ್ಲಿ ತೊಂದರೆ ನೀಡಿದ ವ್ಯಕ್ತಿ ಯಾರಾಗಿರಬಹುದೆಂದು ತಿರುಗಿ ನೋಡಿದಾಗ ಆಶ್ಚರ್ಯ ಕಾಡಿದೆ... ಆ ದುಷ್ಟನ ಮುಖ ಹಂದಿಯ ಮುಖದಂತೆ ರೂಪಾಂತರಗೊಂಡಿದೆ. ಮತ್ತೆ ಆತ ಅಲ್ಲಿ ನಿಲ್ಲಲಿಲ್ಲ. ಅಲ್ಲೊಂದು ದೊಡ್ಡದಾದ ಅರಣ್ಯವೊಂದಿತ್ತು. ಅದರೊಳಗೆ ಓಡಿಹೋಗಿ ಮಾಯವಾಯಿತು. ಇದನ್ನು ಅಲ್ಲಿರುವ ಹಲವಾರು ಜನರು ನೇರ ದರ್ಶಿಸಿದರು. ಬೆರಗುಗಣ...

"ಬಡ್ಡಿ ತಿಂದವ ಕತ್ತೆಯಾದ"

"ಬಡ್ಡಿ ತಿಂದವ ಕತ್ತೆಯಾದ"  ಜಗತ್ ವಿಖ್ಯಾತ ವಿದ್ವಾಂಸರಾದ ಅಬೂಹಫ್ಸ್ ಸಮರ್ಕಂದಿ (ರ) ರವರು ಅವರ ಉಸ್ತಾದರಿಂದ ಉಲ್ಲೇಖಿತ ಘಟನೆ.. ಆ ಉಸ್ತಾದರ ಅಜ್ಜರವರಿಗೆ ಪವಿತ್ರ ಹರಮಿನಲ್ಲಿ ಉಂಟಾದ ಅನುಭವವನ್ನು ಈ ರೀತಿ ವಿವರಿಸುತ್ತಾರೆ.. ನಾನು ಹಜ್ ನಿರ್ವಹಿಸುವ ನಿಮಿತ್ತ ಪವಿತ್ರ ಹರಮಿಗೆ ತಲುಪಿದ್ದೆನು. ಸತ್ಕರ್ಮಗಳಲ್ಲಿ ನಿರತರಾಗಬೇಕಾದ ಸಮಯವಾದ್ದರಿಂದ ಸತ್ಕರ್ಮಗಳೆಡೆಗೆ ಹೆಚ್ಚಿನ ಒತ್ತು ನೀಡುತ್ತಿದ್ದೆ. ಒಂದು ದಿನ ಹೀಗೆ ತ್ವವಾಫ್ ಮಾಡುತ್ತಿರುವಾಗ ಒಬ್ಬ ಸ್ಪುರದ್ರೂಪಿ ಯುವಕನನ್ನು ಕಾಣಲು ಸಾಧ್ಯವಾಯಿತು. ಆತನ ತುಟಿಗಳು ಏನೋ ಮಂತ್ರಿಸುತ್ತಿದ್ದವು. ನಾನು ಆತನ ಸಮೀಪಕ್ಕೆ ಹೋದೆ. ಆತನ ತುಟಿಗಳ ಎಡೆಯಲ್ಲಿ ಬರುವ ಶಬ್ದವನ್ನು ಕಿವಿಗೊಟ್ಟು ಆಲಿಸಿದೆ. ಏನೊಂದು ಆಶ್ವರ್ಯ !!! ನಿರಂತರ ಸ್ವಲಾತ್ ಹೇಳುತ್ತಿದ್ದ. ನಾನು ಆತನಲ್ಲಿ ಕೇಳಿದೆ.. “ಓ ಯುವಕ... ಹಜ್ ಕರ್ಮ ನಿರ್ವಹಿಸಲು ತಾನೆ ಇಲ್ಲಿಗೆ ಬಂದದ್ದು!!!"ಈ ವೇಳೆಯಲ್ಲಿ ಹಜ್ ಗಲ್ಲದೆ ಯಾರಾದರೂ ಹರಮಿಗೆ ಬರುತ್ತಾರೆಯೇ..? ಎಂಬ ಪ್ರಶ್ನಾರ್ಥಕ ರೂಪದಲ್ಲಿತ್ತು ಆತನ ಹಾವ-ಭಾವ. ಹಜ್ ನಿರ್ವಹಣೆಯ ವೇಳೆಯಲ್ಲಿ ಒಂದೊಂದು ಸ್ಥಳದಲ್ಲಿ ನಿರ್ದೇಶಿಸಲ್ಪಟ್ಟ ಪ್ರತ್ಯೇಕವಾದ ದ್ಸಿಕ್ರ್ ಹಾಗೂ ಪ್ರಾರ್ಥನೆಗಳನ್ನು ಹೇಳಬೇಕಲ್ಲವೇ..? ನೀನು ಯಾಕೆ ಪ್ರತಿಯೊಂದು ಗಳಿಗೆಯಲ್ಲೂ ಸ್ವಲಾತ್ ಹೇಳುವುದರಲ್ಲೇ ನಿರತರಾಗಿದ್ದೀಯಾ...? ತಕ್ಷಣ ಆತ ನನ್ನ ವದನವನ್ನು ದಿಟ್ಟಿಸಿ ನೋಡಿದ. ಅದೊಂದು ಸುದೀರ್ಘ ಚರಿತ್ರ...

"ವ್ಯರ್ಥಗೊಂಡ ಮೂರು ಪ್ರಾರ್ಥನೆಗಳು"

"ವ್ಯರ್ಥಗೊಂಡ ಮೂರು ಪ್ರಾರ್ಥನೆಗಳು" ಬನೂ ಇಸ್ರಾಯೀಲರ ಕಾಲದಲ್ಲಿ ನಡೆದ ಘಟನೆ. ಆ ಊರಿನಲ್ಲಿ ಒಬ್ಬ ದೇವಭಕ್ತನಿದ್ದ. ಎಂದೂ ಆರಾಧನೆಯಲ್ಲಿ ತಲ್ಲೀನರಾಗುತ್ತಿದ್ದ. ಎಲ್ಲವನ್ನೂ ದೇವ ಸಾಮೀಪ್ಯ ಗಳಿಸಲು ಮೀಸಲಿಟ್ಟಿದ್ದ. ಮಹಾ ಮನುಷ್ಯ. ಈತನ ಆರಾಧನೆಯನ್ನು ಮೆಚ್ಚಿದ ಅಲ್ಲಾಹನು ಮೂರು ವರಗಳನ್ನು ಕರುಣಿಸಿದ. ಅವುಗಳನ್ನು ಮುಂದಿಟ್ಟು ಪ್ರಾರ್ಥನೆ ನಡೆಸಿದರೆ ಉತ್ತರ ಸುನಿಶ್ಚಿತ. ಏನು ಬೇಕಾದರೂ ಕೇಳಬಹುದು.  ತಕ್ಷಣ ಮನದಿಂಗಿತ ನೆರವೇರುತ್ತದೆ. ಆತನದ್ದು ಪುಟ್ಟ ವಿಭಕ್ತ ಕುಟುಂಬ. ಹೆಂಡತಿ ಮತ್ತು ಪುಟ್ಟ ಬಾಲಕ ಮನೆಯಲ್ಲಿರುವುದು..  ತನಗೆ ಸಿಕ್ಕಿದ ಮೂರು ವರದ ಸುವಾರ್ತೆಯನ್ನು ತನ್ನ ಸಹಧರ್ಮಿಣಿಯೊಂದಿಗೆ ಹಂಚಿದ. ಉತ್ತರ ಖಚಿತವಿರುವ ಪ್ರಾರ್ಥನೆ ಎಂದಾಗ ಆಕೆ ಇನ್ನಷ್ಟು ಆವೇಶ ಭರಿತಳಾದಳು. ಅವಳ ಸಂತೋಷಕ್ಕೆ ಪಾರವೇ ಇಲ್ಲ. ಅವಳು ತನ್ನ ಯೋಚನಾ ಲಹರಿಯಲ್ಲಿ ನಲಿದಾಡತೊಡಗಿದಳು. ತನ್ನ ಮನದಾಸೆಯನ್ನು ಗಂಡನೊಂದಿಗೆ ಹಂಚಬೇಕು. ಬಹುಕಾಲದ ಮನದಿಂಗಿತವನ್ನು ಕುದುರಿಸಬೇಕು. ಗಂಡನನ್ನು ಸಮೀಪಿಸಿದಳು... “ಪ್ರಿಯ ಪತಿಯವರೇ... ತಮಗೆ ಲಭಿಸಿದ ವರವೊಂದನ್ನು ನನಗಾಗಿ ಮೀಸಲಿಡಬಹುದೇ..? " ತನ್ನ ಸಹ ಧರ್ಮಿಣಿಯ ಬೇಡಿಕೆಯನ್ನು ತಳ್ಳಿ ಹಾಕಲು ಆತನಿಗೆ ಮನಸ್ಸು ಬರಲಿಲ್ಲ. ಏನಾದರೂ ಪ್ರೀತಿಯ ಪತ್ನಿಯಲ್ಲವೇ..? ಅವಳಿಗಾಗಿ ಒಂದು ವರವನ್ನು ಮೀಸಲಿರಿಸಿದ. "ತನ್ನ ಸಹ ಧರ್ಮಿಣಿಯೊಂದಿಗೆ ಕೇಳಿದ ನಿನ್ನ ಮನದಾಳದ ಅಭಿಲಾಶೆ ಏನು..?" ಬನೂ ಇಸ್ರಾಯೀಲ...

"ದೇವಾಜ್ಞೆ ಧಿಕ್ಕಾರಿಗಳ ಅಂತ್ಯ.."

"ದೇವಾಜ್ಞೆ ಧಿಕ್ಕಾರಿಗಳ ಅಂತ್ಯ.." ಹಝ್ರತ್ ದಾವೂದ್ ನಬಿ ಅ.ಸ ರವರು ಆಡಳಿತ ನಡೆಸುವ ಕಾಲ. "ಅಯ್ ಲತ್" ಎಂಬುವುದು ಮದೀನಾ ಮತ್ತು ಶಾಮಿನ ನಡುವೆ ಪ್ರಕೃತಿ ರಮಣೀಯ ದೃಶ್ಯಗಳಿಂದ ಕಂಗೊಳಿಸುವ ಪುಟ್ಟ ಪಟ್ಟಣ. ಅದು ಕಡಲ ತೀರ ಪ್ರದೇಶವಾಗಿದ್ದರಿಂದ ಅದರ ಸೊಗಸಿಗೆ ವಿಶೇಷ ಮೆರುಗು ಇತ್ತು. ಎಂದೂ ಜನಜಂಗುಳಿ. ಸಹಸ್ರಾರು ಜನರ ದಂಡೇ ನಿತ್ಯ ದರ್ಶನ. ಮೀನುಗಾರಿಕೆ ಅವರ ಮುಖ್ಯ ಕಸುಬು. ನಿತ್ಯವೂ ಕಡಲಿಗೆ ಹೋಗುತ್ತಾರೆ. ಸಿಕ್ಕಿದ ಮೀನನ್ನು ಮಾರಿ ಜೀವನವನ್ನು ಮುಂದೂಡುತ್ತಾರೆ. ಮತ್ಯಾವುದೇ ಸ್ಪೆಶಲ್ ನೌಕರಿ ಆ ಜನತೆಗಿರಲಿಲ್ಲ...  ಅದೊಂದು ಮುಂಜಾವು ಮೂಡಣ ದಿಕ್ಕಿನಲ್ಲಿ ಸೂರ್ಯನು ಉದಯದ ಅಂಚಿನಲ್ಲಿದ್ದಾನೆ. ಜನರು ಎದ್ದು ತಮ್ಮ ನಿತ್ಯ ಕೆಲಸಕ್ಕೆ ಪೂರ್ವ ಸಿದ್ಧತೆಯ ತಯಾರಿಯಲ್ಲಿದ್ದಾರೆ. ರಾಜಭಟರು ಗಲ್ಲಿ ಗಲ್ಲಿಗೆ ನುಗ್ಗಿದರು. ಎಲ್ಲೆಡೆ ಢಂಗುರಭಾರಿಸಿದರು. ರಾಜಾಜ್ಞೆ... ರಾಜಾಜ್ಞೆ .... ಎಂಬ ಶಬ್ದ ಮೊಳಗಿತು. ಜನರು ತಮ್ಮ ಕೆಲಸಕಾರ್ಯಗಳನ್ನು ಬಿಟ್ಟು ಅದರತ್ತ ಚಿತ್ತವನ್ನು ಹರಿಸತೊಡಗಿದರು. "ಎಲ್ಲಾ ಶುಕ್ರವಾರ ಪವಿತ್ರ ಜಮುಆ ನಮಾಝಿಗೆ ಸರ್ವರು ಸಂಘಮಿಸಬೇಕು.." ರಾಜಾಜ್ಞೆಯ ಘೋಷಣೆಯಾಯಿತು... ಅದನ್ನು ಜನರು ಗಂಭೀರವಾಗಿ ಪರಿಗಣಿಸಿದರು. ಕಾರಣ ದಾವೂದ್ ನಬಿ (ಅ) ಕೇವಲ ರಾಜ್ಯದ ಕಾರ್ಯವೈಕರಿಯನ್ನು ನೋಡಿಕೊಳ್ಳುವ ಅರಸ ಮಾತ್ರವಾಗಿರಲಿಲ್ಲ. ಸೃಷ್ಟಿಕರ್ತನ ಸಂದೇಶವನ್ನು ಜನತೆಗೆ ತಲುಪಿಸುವ ಪ್ರವಾದಿ ಕೂಡಾ ಹೌದು. ಆದರೆ...

ಎಂಟಾಣೆಯ ಕಾರುಬಾರು

ಎಂಟಾಣೆಯ ಕಾರುಬಾರು   ಒಮ್ಮೆ ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಒಂದು ಕಂದೂರ (ಖಮೀಸ್) ಖರೀದಿಸಲು ಬಜಾರಿಗೆ ಹೋದರು. ಹೋಗುವಾಗ ಪ್ರವಾದಿಯವರ ಜೇಬಿನಲ್ಲಿ ಎಂಟು ದಿರ್‌ಹಮ್ ಇತ್ತು.     ದಾರಿಮಧ್ಯೆ ಯಾವುದೋ ಒಂದು ಮನೆಯ ದಾಸಿ ಹುಡುಗಿ (ಕೆಲಸದಾಳು) ಬಹಳ ಬೇಸರದಿಂದ ಅಳುತ್ತಿದ್ದಳು. ಪ್ರವಾದಿಯವರು ಅವಳಲ್ಲಿ ಕೇಳಿದರು. "ನೀನು ಯಾಕೆ ಅಳುತ್ತಿರುವಿ..? ಏನು ಕಾರಣ..? ಏನಾಗಿದೆ ನಿನಗೆ ಹೇಳು..?" ಆಗ ಅವಳು ಹೇಳಿದಳು. "ನಾನು ಒಂದು ಮನೆಯಲ್ಲಿ ಕೆಲಸಕ್ಕಿದ್ದೇನೆ. ಇವತ್ತು ಮನೆಯವರು ಸಾಮಾನು ಖರೀದಿಸಲು ಎರಡು ದಿರ್‌ಹಮ್ ಕೊಟ್ಟು ನನ್ನನ್ನು ಬಜಾರಿಗೆ ಕಳುಹಿಸಿದ್ದರು. ಆದರೆ ದಾರಿಮಧ್ಯೆ ಆ ಹಣ ನನ್ನಿಂದ ಎಲ್ಲೋ ಬಿದ್ದು ಹೋಗಿದೆ. ಎಲ್ಲಿ ಎಂದು ಗೊತ್ತಿಲ್ಲ. ಈಗ ಖಾಲಿ ಕೈಯಲ್ಲಿ ಮನೆಗೆ ಹೋದರೆ ನನ್ನನ್ನು ಹೊಡೆಯುತ್ತಾರೆ."    ಇದನ್ನು ಕೇಳಿದಾಕ್ಷಣ ತನ್ನ ಕೈಯಲ್ಲಿದ್ದ ಎಂಟು ದಿರ್‌ಹಮಿನಿಂದ ಎರಡು ದಿರ್‌ಹಮನ್ನು ಅವಳಿಗೆ ಕೊಟ್ಟು ನೇರವಾಗಿ ಬಜಾರಿಗೆ ಹೋಗಿ ಅಲ್ಲಿ ಒಂದು ಅಂಗಡಿಯಿಂದ ನಾಲ್ಕು ದಿರ್‌ಹಮ್ ಕೊಟ್ಟು ಒಂದು ಒಳ್ಳೆಯ ದರ್ಜೆಯ ಕಂದೂರ ಖರೀದಿಸಿದರು.     ಹೊಸ ಕಂದೂರ ಖರೀದಿಸಿ ಮನೆಗೆ ಮರಳಿ ಬರುವಾಗ ಒಬ್ಬ ಬಡಪಾಯಿಯು ದಾರಿಯಲ್ಲಿ "ನನಗೆ ಧರಿಸಲು ವಸ್ತ್ರ ಇಲ್ಲ. ಯಾರಾದರು ನನಗೆ ಒಂದು ವಸ್ತ ಕೊಟ್ಟರೆ ನಾಳೆ ಅವನಿಗೆ ಪರಲೋಕದಲ್ಲಿ ಅಲ್ಲಾಹನು ಸ್ವರ್ಗದ ವಸ್ತ್ರ ಉಡಿಸುವನ...

ಮದೀನ ಪ್ರಣಯಂ

Image
ಯಾ ರಸೂಲುಲ್ಲಾಹ್ ﷺ ಮರಣದ ಮುಂಚೆ ಆ ಮದೀನ ನಗರಕ್ಕೆ ಆಗಮಿಸಬೇಕು.. ಅಲ್ಲಿಯ ಪುಣ್ಯ ಮಣ್ಣನ್ನು ಹಿಡಿದು ಚುಂಬಿಸಬೇಕು.. ಆ ಹಸಿರು ಖುಬ್ಬವನ್ನು ಕಣ್ಣು ತುಂಬಾ ನೋಡಿ ಆಸ್ವಾದಿಸಬೇಕು.. ತಮ್ಮಯ ﷺ ಪುಣ್ಯ ರೌಳಾದ ಹತ್ತಿರ ಪ್ರಾರ್ಥನೆ ಮಾಡುವಾಗ ಮಲಕುಲ್ ಮೌತ್ ಬಂದು ನನ್ನ ರೂಹ್ ಹಿಡಿಯಬೇಕು.. ಜನ್ನತುಲ್ ಬಖೀಹ್ ನಲ್ಲಿ ದಫನಗೈಯ್ಯುವ ಭಾಗ್ಯ ನನ್ನದಾಗಬೇಕು.. ಈ ಪಾಪಿಯ ಆಸೆಯನ್ನು ಈಡೇರಿಸುವೆಯಾ ಯಾ ಅಲ್ಲಾಹ್.. ಶಮೀಮಾ ಕನ್ನಂಗಾರ್

ಮದೀನ ಪ್ರಣಯಂ

Image
ಹೃದಯ ಪಾಪಗಳಿಂದ ಕೊಳೆತು ಹೋಗಿದೆ.. ಆದರೂ ತಮ್ಮನ್ನು ﷺ ನೋಡಲು ಈ ಕಣ್ಣು ಆಗ್ರಹಿಸುತ್ತಿದೆ.. ತಮ್ಮಯ ﷺ ಸನ್ನಿಧಿಗೆ ಬಂದು ಸಲಾಮುನ್ ಅಲೈಕ ಯಾ ರಸೂಲುಲ್ಲಾಹ್ ﷺ ಎಂದು ಹೇಳಲು ನಾಲಗೆ ತವಕಿಸುತ್ತಿದೆ.. ಯಾ ಅಲ್ಲಾಹ್ ಮರಣದ ಮುಂಚೆ ಭೂಮಿಯಲ್ಲಿರುವ ಆ ಸ್ವರ್ಗವನ್ನು ನೋಡಲು ತೌಫೀಖ್ ನೀಡು.. ಆ ಪುಣ್ಯ ಸನ್ನಿಧಿಗೆ ತೆರಳಲು ನನಗೆ ಭಾಗ್ಯ ನೀಡು ಅಲ್ಲಾಹ್.. (ಆಮೀನ್) ಶಮೀಮಾ ಕನ್ನಂಗಾರ್

ಮುಂಜಾನೆ ಇಬ್ಬನಿ

Image
ಮುಂಜಾನೆ ಇಬ್ಬನಿ ಎಷ್ಟೇ ತಿರುವುಗಳು ಬಂದರೂ ತಿರುಗಿ ನೋಡದೆ ಮುಂದೆ ಗುರಿಯತ್ತ ಸಾಗುವುದೇ ನಾವು ನದಿಗಳಿಂದ ಕಲಿಯಬೇಕಾದ ಪಾಠ.. NOOR-UL-FALAH

ಪಾತ್ರೆಗಳು

ಪಾತ್ರೆಗಳು ಸ್ವರ್ಣ, ಬೆಳ್ಳಿಯ ಪಾತ್ರೆಗಳನ್ನು ಹೊರತುಪಡಿಸಿ ಉಳಿದ ಯಾವುದೇ ರೀತಿಯ ಪಾತ್ರೆಪಗಡೆಗಳನ್ನು ಉಪಯೋಗಿಸಬಹುದಾಗಿದೆ. ಈ ವಿಷಯದ ಚರ್ಚೆಗಾಗಿ ಇಮಾಂ ನವವೀ (ರ) ತಮ್ಮ ರಿಯಾಸ್ವಾಲಿಹೀನ್ ಗ್ರಂಥದಲ್ಲಿ ಒಂದು ಅಧ್ಯಾಯವನ್ನೇ ಮೀಸಲಿರಿಸಿದ್ದಾರೆ. ಅಲ್ಲಿ ಚರ್ಚಿಸಲಾದ ಕೆಲವು ಹದೀಸುಗಳನ್ನು ನೋಡಬಹುದು. ಅನಸ್ (ರ) ಹೇಳಿದರು. ನಮಾಝಿನ ಸಮಯವಾದಾಗ ಸಮೀಪದಲ್ಲಿ ಮನೆಗಳಿದ್ದವರೆಲ್ಲಾ ಮನೆಗೆ ಹೋಗಿ ಅಂಗಶುದ್ದಿ ನಿರ್ವಹಿಸಿ ಬಂದರು. ಕೆಲವರು ಮಾತ್ರ ಉಳಿದರು. ಆಗ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಬಳಿಗೆ ಒಂದು ಕಲ್ಲಿನ ಪಾತ್ರೆ ತರಲಾಯಿತು. ಸರಿಯಾಗಿ ಕೈ ಹಾಕಲೂ ಸಾಧ್ಯವಾಗದಷ್ಟು ಕಿರಿದಾದ ಪಾತ್ರ ಅದು. ಉಳಿದವರೆಲ್ಲರೂ ಅದರಿಂದ ಅಂಗಶುದ್ದಿ ಮಾಡಿದರು. ನೀವು ಎಷ್ಟು ಮಂದಿ ಇದ್ದೀರಿ ಎಂಬ ಪ್ರಶ್ನೆಗೆ ಎಂಬತ್ತಕ್ಕೂ ಅಧಿಕ ಎಂಬ ಉತ್ತರ ಲಭಿಸಿತ್ತು.. NOOR-UL-FALAH

ಅಂಗಾತ ಮಲಗಬಹುದು

ಅಂಗಾತ ಮಲಗಬಹುದು ಅಬ್ದುಲ್ಲಾಹಿಬ್ನು ಝೈದ್ ಅಲ್ ಮಾಸಿನಿ (ರ) ಹೇಳಿದರು: •ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಒಂದು ಕಾಲಿನ ಮೇಲೆ ಮತ್ತೊಂದು ಕಾಲನ್ನು ಇಟ್ಟು, ಅಂಗಾತ ಮಲಗಿರುವುದನ್ನು ನಾನು ಕಂಡಿದ್ದೇನೆ. (ಬುಖಾರಿ, ಸ್ವಲಾತ್ 8. 55, ಮುಸ್ಲಿಮ್, ಲಿಬಾಸ್ 37/75). ಅಬೂಹುರೈರ (ರ) ರಿಂದ ವರದಿ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿದರು: •ದೇಹ ಹಾಗೂ ವಸ್ತ್ರಗಳನ್ನು ಶುದ್ದೀಕರಿಸಿ ರಾತ್ರಿ ಮಲಗಿ ನಿದ್ರಿಸುವವರೊಂದಿಗೆ ಸ್ವಚ್ಛತೆಯಿಂದಿರುವ ಓರ್ವ ಮಲಕ್ ಇರುತ್ತದೆ. ಆ ವ್ಯಕ್ತಿ ಎಚ್ಚರಗೊಳ್ಳುವಾಗೆಲ್ಲಾ ಆ ಮಲಕ್, ಅಲ್ಲಾಹುವೇ, ಈ ದಾಸನ ಪಾಪಗಳನ್ನು ಮನ್ನಿಸು. ಈತ ಶುದ್ಧಿಯಿರುವವನಾಗಿದ್ದಾನೆ ಎಂದು ಪ್ರಾರ್ಥಿಸುತ್ತದೆ. (ಖಸೀನತುಲ್ ಅಸ್ಸಾರ್ ), NOOR-UL-FALAH

ಪರದೆ

ಪರದೆ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ತಮ್ಮ ಮನೆಯ ಬಾಗಿಲಿಗೆ ಪರದೆಯನ್ನು ಉಪಯೋಗಿಸುತ್ತಿದರು, ಕಅಬ್‌ಬ್‌ನು ಮಾಲಿಕ್ (ರ) ಇಬ್ನು ಅಬೀ ಹದ್ರದಿಯವರೊಂದಿಗೆ ತಮಗೆ ಬರಬೇಕಾದ ಸಾಲವನ್ನು ಹಿಂದಿರುಗಿಸುವಂತೆ ಕೇಳಿದರು. (ಮಾತಿಗೆ ಮಾತು ಬೆಳೆದು ಅವರ ನಡುವೆ ವಾಕ್ಸಮರ ನಡೆದವು), ಮಸೀದಿಯಲ್ಲಿ ಅವರಿಬ್ಬರು ಗಲಾಟೆಯೆಬ್ಬಿಸಿದರು. ಆಗ ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಮನೆಯಲ್ಲಿದ್ದರು. ಗಲಾಟೆ ಕೇಳಿ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಮನೆಯ ಪರದೆ ಸರಿಸಿ, “ಯಾ..ಕಾಬ್" ಎಂದು ಕರೆದರು. ಕಅಬ್ ಅತ್ತ ನೋಡಿದಾಗ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಸಾಲದ ಅರ್ಧದಷ್ಟನ್ನು ಕಡಿಮೆ ಮಾಡುವಂತೆ ಸಂಜ್ಞೆಮಾಡಿದರು. ಕಅಬ್ (ರ) ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಆಜ್ಞೆಯನ್ನು ಅನುಸರಿಸಿದರು. ಬಳಿಕ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಇಬ್ನು ಅಬೀ ಹದ್ರದೀಯೊಂದಿಗೆ ಉಳಿದ ಮೊತ್ತವನ್ನು ಹಿಂದಿರುಗಿಸುವಂತೆ ಸೂಚಿಸಿದರು.. (ಬುಖಾರಿ ಕಿತಾಬುಸ್ಸಲಾಡ್, ಮುಸ್ಲಿಮ್ ಕಿತಾಬುಲ್ ಮುಸಾಫಾತ್) NOOR-UL-FALAH

ಅಗ್ನಿ ಮಾಂದ್ಯ ನಿವಾರಣೆಗೆ. ಮತ್ತು ಅಜೀರ್ಣ, ಹುಳಿತೇಗು ನಿವಾರಣೆಗೆ..

ಉತ್ತಮ ಆರೋಗ್ಯಕ್ಕಾಗಿ ಮನೆಮದ್ದುಗಳು ಅಗ್ನಿ ಮಾಂದ್ಯ ನಿವಾರಣೆಗೆ. ▪ಬೆಳ್ಳುಳ್ಳಿಯನ್ನು ಜಜ್ಜಿ ನೀರಿನಲ್ಲಿ ಕುದಿಸಿ ಸೋಸಿಕೊಂಡು ಜೇನು ಬೆರೆಸಿ ಕುಡಿಯಬೇಕು.. ▪ಹಸಿಶುಂಠಿ ರಸ 4 ಚಮಚ, ಪುದಿನ ಸೊಪ್ಪಿನ ರಸ ಒಂದು ಚಮಚ ನಿಂಬೆರಸ, ಜೇನು ಒಂದು ಚಮಚ ಮಿಶ್ರ ಮಾಡಿ ಬೆಳಿಗ್ಗೆ ಸೇವಿಸಬೇಕು. ಅಜೀರ್ಣ, ಹುಳಿತೇಗು ನಿವಾರಣೆಗೆ.. ▪ಓಮಕಾಳಿನ ಪುಡಿ ಎರಡು ಚಮಚದಷ್ಟನ್ನು ಒಂದು ದೊಡ್ಡ ಲೋಟ ನೀರಿಗೆ ಬೆರೆಸಿ ಕುದಿಸಿ ಅರ್ಧಕ್ಕೆ ಇಳಿದಾಗ ಅದಕ್ಕೆ ಒಂದು ಚಮಚ ಕಲ್ಲು ಸಕ್ಕರೆ, ಇಲ್ಲವೆ ಸಕ್ಕರೆ ಬೆರೆಸಿ ಚೆನ್ನಾಗಿ ಕದಡಿ ಸ್ವಲ್ಪ ಸ್ವಲ್ಪವಾಗಿ ಕುಡಿದರೆ ಮೇಲಿನ ದೋಷಗಳೆಲ್ಲಾ ನಿವಾರಣೆಯಾಗುವುದು. ▪ಕೊತ್ತಂಬರಿ ಬೀಜ, ಜೀರಿಗೆ, ಬಡೆಸೋಪ್ಪು ಇವುಗಳ ಕಷಾಯಕ್ಕೆ ಒಂದಿಷ್ಟು ಏಲಕ್ಕಿ ಪುಡಿಯನ್ನು ಬೆರೆಸಿ ಪ್ರತಿದಿನ ಬೆಳಿಗ್ಗೆ ಕುಡಿಯಬೇಕು. ▪ಪುದಿನ ಸೊಪ್ಪಿನ ರಸ ಎರಡು ಚಮಚ, ಜೇನು ತುಪ್ಪ ಒಂದು ಚಮಚ ಬೆರೆಸಿ ಊಟಕ್ಕೆ ಮುಂಚೆ ಸೇವಿಸಬೇಕು.. NOOR-UL-FALAH 

ನಿದ್ರಾರಾಹಿತ್ಯಕ್ಕೆ ಪರಿಹಾರ

ಉತ್ತಮ ಆರೋಗ್ಯಕ್ಕಾಗಿ ಮನೆಮದ್ದುಗಳು ನಿದ್ರಾರಾಹಿತ್ಯಕ್ಕೆ ಪರಿಹಾರ •5ಗ್ರಾಂ ಅಶ್ವಗಂಧಿ ಚೂರ್ಣ, ಒಂದು ಚಮಚ ಸಕ್ಕರೆ ಅರ್ಧ ಚಮಚ ತುಪ್ಪ ಹಾಲಿನಲ್ಲಿ ಬೆರೆಸಿ ಕುದಿಸಿ ಮಲಗುವುದಕ್ಕಿಂತ ಅರ್ಧ ಗಂಟೆ ಮುಂಚೆ ಕುಡಿಯಬೇಕು. ಶಾಂತ ನಿದ್ರೆ ಬರುವುದಲ್ಲದೆ, ದುಸ್ವಪ್ನಗಳು ಬೀಳುವುದಿಲ್ಲ. •ಒಂದು ಚಮಚ ಜೇನಿನಲ್ಲಿ ನುಣ್ಣಗೆ ಪುಡಿ ಮಾಡಿದ ಸಬ್ಬಸಿಗೆ ಬೀಜದ ಚೂರ್ಣವನ್ನು ಒಂದು ಚಿಟಕಿಯಷ್ಟು ಅರ್ಧ ಕಪ್ಪು ನೀರಿನಲ್ಲಿ ಮಿಶ್ರಮಾಡಿ ಮಲಗುವುದಕ್ಕಿಂತ ಮುಂಚೆ ಕುಡಿಯಬೇಕು. ಮಕ್ಕಳಿಗೆ ಅರ್ಧ ಪ್ರಮಾಣ ಮಾತ್ರ ಹಾಕಬಹುದು. ಚೆನ್ನಾಗಿ ನಿದ್ದೆ ಬರುವುದು.. •ಬೂದುಗುಂಬಳದ ಸಿಪ್ಪೆ ಬೀಜಗಳನ್ನು ಒಟ್ಟಿಗೆ ನುಣ್ಣಗೆ ಅರೆದು ಪೇಸ್ಟಿನಂತೆ ಮಾಡಿಕೊಳ್ಳಬೇಕು. ಸ್ವಲ್ಪ ಕೊಬ್ಬರಿ ಎಣ್ಣೆಯಲ್ಲಿ ಬೆರೆಸಿ ಕಾಯಿಸಿ ಆರಿದ ನಂತರ ತಲೆಗೆ ಹಚ್ಚಿಕೊಂಡು ಬೆರಳಾಡಿಸಿ ತಿಕ್ಕಿಕೊಳ್ಳಬೇಕು. ನೆಮ್ಮದಿಯ ನಿದ್ರೆ ಬರುವುದು.. NOOR-UL-FALAH

ಕೊಬ್ಬು ಕರಗಿಸಲು

ಉತ್ತಮ ಆರೋಗ್ಯಕ್ಕಾಗಿ ಮನೆಮದ್ದುಗಳು ಕೊಬ್ಬು ಕರಗಿಸಲು •ಜೇನುತುಪ್ಪ ಎರಡು ಚಮಚ, ನಿಂಬೆ ಹಣ್ಣಿನ ರಸ ಎರಡು ಚಮಚ, ಕಾಯಿಸಿ ಆರಿಸಿದ ನೀರು ಇಲ್ಲವೆ ಬಿಸಿ ನೀರು ಒಂದು ಕಪ್ಪು ಈ ಮೂರನ್ನು ಚೆನ್ನಾಗಿ ಮಿಶ್ರಮಾಡಿ ಬೆಳಿಗ್ಗೆ ಎದ್ದ ಕೂಡಲೆ ಬರೀ ಹೊಟ್ಟೆಯಲ್ಲಿ ಸತತ ಮೂರು ತಿಂಗಳುಗಳ ಕಾಲ ಸೇವಿಸಿದರೆ ದೇಹದ ಕೊಬ್ಬು ಕರಗಿ ಸ್ಥೂಲ ಕಾಯ ನಿವಾರಣೆಯಾಗುವುದು ಹಾಗೂ ದೇಹದ ತೂಕವು ಕಮ್ಮಿಯಾಗಿ ದೇಹವು ಹಗುರವಾಗುವುದು. •ಒಂದು ಪೂರ್ಣ ನಿಂಬೆ ಹಣ್ಣಿನ ರಸಕ್ಕೆ ಎರಡು ಚಮಚ ಜೇನು ಬೆರೆಸಿ ಒಂದು ಅರ್ಧ ಕಪ್ಪು ನೀರಿನಲ್ಲಿ ಮಿಶ್ರಮಾಡಿ ಪ್ರತಿನಿತ್ಯ ಬೆಳಿಗ್ಗೇನೇ ಕುಡಿಯುತ್ತಿರಬೇಕು.. •100 ಗ್ರಾಂ ಬೆಳ್ಳುಳ್ಳಿಯನ್ನು ಸಿಪ್ಪೆ ಸುಳಿದು ನುಣ್ಣಗೆ ಜಜ್ಜಿಕೊಳ್ಳಬೇಕು. ಅರ್ಧ ಲೀಟರ್ ಅಪ್ಪಟ ಹಾಲಿನಲ್ಲಿ ಬೆರೆಸಿ ಕುದಿಸಬೇಕು. ಕುದಿದು ಗಟ್ಟಿಯಾದಾಗ ಇಳಿಸಿಕೊಂಡು ಅವರೆ ಕಾಳಿನ ಗಾತ್ರದ ಮಾತ್ರೆಗಳನ್ನು ಮಾಡಿಟ್ಟುಕೊಳ್ಳಬೇಕು. ಪ್ರತಿದಿನ ಬೆಳಿಗ್ಗೆ ಒಂದು ಅಥವಾ ಎರಡು ಮಾತ್ರೆಗಳನ್ನು ಬಿಸಿ ನೀರಿನೊಂದಿಗೆ ಸೇವಿಸಬೇಕು. ಬಿಟ್ಟು ಬಿಡದೆ 48 ದಿನಗಳು ಸೇವಿಸಿದರೆ ದೇಹದ ಕೊಬ್ಬು ಕರಗುವುದು ದೇಹ ಹಗುರವಾಗುವುದು.. NOOR-UL-FALAH

ಅತಿಸಾರ ಹತೋಟಿಗೆ

ಉತ್ತಮ ಆರೋಗ್ಯಕ್ಕಾಗಿ ಮನೆಮದ್ದುಗಳು ಅತಿಸಾರ ಹತೋಟಿಗೆ ✪ಅರ್ಧ ಚಮಚ ಓಮದ ಕಾಳಿಗೆ ಒಂದಿಷ್ಟು ಬೆಲ್ಲ ಬೆರೆಸಿ ದಿನದಲ್ಲಿ ಮೂರಾಲ್ಕು ಬಾರಿ ಅಗಿದು ನುಂಗುತ್ತಿರಬೇಕು.. ✪ದಾಳಿಂಬೆ ಹಣ್ಣಿನ ಸಿಪ್ಪೆಯ ಚೂರ್ಣಕ್ಕೆ ಬಿಸಿನೀರು ಬೆರೆಸಿ ಕುಡಿಯಬೇಕು. (ಚಿಕ್ಕವರು ಅರ್ಧ ಚಮಚ). ✪ನೆಲ್ಲಿಕಾಯಿ ಚೂರ್ಣ ಅರ್ಧ ಚಮಚ, ನಿಂಬೆರಸ ಅರ್ಧ ಚಮಚ, ಸಕ್ಕರೆ ಅರ್ಧ ಚಮಚ ಒಟ್ಟು ಮಾಡಿ ಕುಡಿಯಲು ಕೊಡಬೇಕು. ✪ಮೆಂತ್ಯದ ಕಾಳಿನ ಪುಡಿಯನ್ನು ದಿನಕ್ಕೆ 3 ಬಾರಿ ಮಜ್ಜಿಗೆಯೊಂದಿಗೆ ಸೇವಿಸಬೇಕು.. NOOR-UL-FALAH

ಕೂದಲು ಉದುರುವುದು:

ಉತ್ತಮ ಆರೋಗ್ಯಕ್ಕಾಗಿ ಮನೆಮದ್ದುಗಳು ಕೂದಲು ಉದುರುವುದು: •ನಿತ್ಯವೂ ಮೂಲಂಗಿ ತಿನ್ನುವುದರಿಂದ ಕೂದಲಿಗೆ ಶಕ್ತಿ ಉಂಟಾಗುತ್ತದೆ. •ಬಿಸಿ ಮಾಡಿದ ಕಬ್ಬಿಣ ನೀರಿನಿಂದ ತಲೆಯನ್ನು ತೊಳೆದರೆ ಕೂದಲು ಉದುರುವುದು ನಿಲ್ಲುತ್ತದೆ. •ಮೈಲಾಂಜಿ ಸೊಪ್ಪನ್ನು ವಿನಗಿರಿಯಲ್ಲಿ ಅರೆದು ಅದನ್ನು ತಲೆಗೆ ಲೇಪಿಸಿದರೆ ತಲೆಹೊಟ್ಟು ನಿಲ್ಲುತ್ತದೆ. •ಉಪ್ಪನ್ನು ವಿನಗಿರಿಯಲ್ಲಿ ಹುಡಿಮಾಡಿ ಅದರಿಂದ ತಲೆ ತೊಳೆದರೆ ತಲೆಹೊಟ್ಟು ನಿಲ್ಲುತ್ತದೆ. •ಬೆಳ್ಳುಳ್ಳಿಯನ್ನು ಜೇನುತುಪ್ಪದಲ್ಲಿ ಮಿಕ್ಸ್ ಮಾಡಿ ತಲೆಕೂದಲು ಇಡೀ ತೆಗೆದ ನಂತರ ತಲೆಗೆ ಲೇಪಿಸಿದರೂ ತಲೆಹೊಟ್ಟು ನಿಲ್ಲುತ್ತದೆ. *ಕೂದಲು ಕಪ್ಪಾಗಿಸಲು* •ಸಾಸಿವೆಯನ್ನು ನೀರು ಹಾಗೂ ವಿನಗಿರಿಯಲ್ಲಿ ನೆನೆಹಾಕಿ ಅರೆದು ಕೂದಲಿಗೆ ಹಾಕಬೇಕು. •ಸಾಸಿವೆಯನ್ನು ಹುಡಿಮಾಡಿ ಅದನ್ನು ಮೈಲಾಂಜಿ ಸೊಪ್ಪಿನೊಂದಿಗೆ ಮಿಕ್ಸ್ ಮಾಡಿ ತಲೆಗೆ ಲೇಪಿಸಿದರೆ ಕೂದಲು ಬಹಳ ಕಪ್ಪಾಗುತ್ತದೆ.. NOOR-UL-FALAH

ಕ್ರಿಮಿ ಹುಳು, ಜಂತುಹುಳು ನಿವಾರಣೆಗೆ

ಉತ್ತಮ ಆರೋಗ್ಯಕ್ಕಾಗಿ ಮನೆಮದ್ದುಗಳು ಕ್ರಿಮಿ ಹುಳು, ಜಂತುಹುಳು ನಿವಾರಣೆಗೆ •ಕ್ಯಾರೆಟನ್ನು ತುರಿದು, ರುಬ್ಬಿ ರಸ ಹಿಂಡಿಕೊಂಡು ಪ್ರತಿದಿನ ಬೆಳಿಗ್ಗೆ ಒಂದು ಚಮಚ ದಷ್ಟು ಕೆಲವು ದಿನಗಳವರೆಗೆ ಕುಡಿಸುತ್ತಿದ್ದರೆ ಮಕ್ಕಳ ಕರುಳಿನಲ್ಲಿ ಕ್ರಿಮಿ ಹುಳು ಗಳೆಲ್ಲಾ ನಾಶವಾಗುತ್ತದೆ. ಮೂತ್ರವು ಸ್ವಚ್ಛವಾಗುತ್ತದೆ. ಹೊಟ್ಟೆಯಲ್ಲಿ ಹುಳುವಿನ ಬಾಧೆ ಇರುವುದಿಲ್ಲ, •ಪುದಿನ ಸೊಪ್ಪಿನ ರಸ ಒಂದು ಚಮಚ, ಒಂದು ಚಮಚ ಜೇನು ಬೆರೆಸಿ ಬೆಳೆಗೆ ಸೇವಿಸಬೇಕು. ಮಕ್ಕಳಿಗೆ ಕೆಲವು ದಿನಗಳವರೆಗೆ ಪ್ರಯೋಗ ಮಾಡುವುದರಿಂದ ಷಗಳು ನಿವಾರಣೆಯಾಗಿ ಜಂತುಹುಳುಗಳು ಮಲದಲಿ ಹೊರ ಹೋಗುತ್ತದೆ. •ಒಂದು ಚಮಚ ಬೆಳ್ಳುಳ್ಳಿ ರಸಕ್ಕೆ ಒಂದು ಚಮಚ ಜೇನು ಬೆರೆಸಿ ಮಕ್ಕಳಿಗೆ ಬೆಳಿಗೆ ಕುಡಿಸುವುದರಿಂದ ಹೊಟ್ಟೆ ಹುಳು ನಾಶವಾಗುತ್ತದೆ.. NOOR-UL-FALAH

ಅಧಿಕ ಋತುಸ್ರಾವದ ಹತೋಟಿಗೆ

ಉತ್ತಮ ಆರೋಗ್ಯಕ್ಕಾಗಿ ಮನೆಮದ್ದುಗಳು ಅಧಿಕ ಋತುಸ್ರಾವದ ಹತೋಟಿಗೆ ▪ಅಶ್ವಗಂಧಿ ಚೂರ್ಣ 5 ಗ್ರಾಮಿನಷ್ಟು ಹಾಲಿನಲ್ಲಿ ಕುದಿಸಿ ಸಕ್ಕರೆ ಬೆರೆಸಿ ದಿನದಲ್ಲಿ ಎರಡು ಬಾರಿ ಕುಡಿಯಬೇಕು.. ▪ಬೆಳ್ಳುಳ್ಳಿಯನ್ನು ಬೆಲ್ಲದೊಂದಿಗೆ ಜಜ್ಜಿ ಒಂದು ಕಡಲೆ ಕಾಳಿನಷ್ಟು ರಾತ್ರಿ ಮಲಗುವುದಕ್ಕಿಂತ ಮುಂಚೆ ನುಂಗಿ ನೀರು ಕುಡಿಯಬೇಕು.. ▪ಎರಡು ಚಮಚ ಹಾಗಲ ಕಾಯಿ ರಸ, ಒಂದು ಚಮಚ ಇಲ್ಲವೆ ಒಂದು ನಿಂಬೆ ಹಣ್ಣಿನ ರಸ ಬೆರೆಸಿ ಬೆಳಿಗ್ಗೆನೇ ಕುಡಿಯುತ್ತಾ ಬಂದರೆ ಮುಟ್ಟಿನ ದೋಷಗಳೆಲ್ಲಾ ನಿವಾರಣೆಯಾಗುವುದು.. ▪ನಾಲ್ಕು ಚಮಚ ಗಜ್ಜರಿ ರಸವನ್ನು ಅರ್ಧ ಹೋಳು ನಿಂಬೆ ರಸದಲ್ಲಿ ಬೆಳಿಗ್ಗೆ ಕುಡಿಯುವುದರಿಂದ ಕಾಲಕಾಲಕ್ಕೆ ಮುಟ್ಟಾಗುತ್ತದೆ.. NOOR-UL-FALAH

ಮನೆಗೊಂದು ಮದ್ದು

ಉತ್ತಮ ಆರೋಗ್ಯಕ್ಕಾಗಿ ಮನೆಮದ್ದುಗಳು ಅಂಗೈ ಅಂಗಾಲು ಉರಿ ನಿವಾರಣೆಗೆ ▪ಕೊತ್ತಂಬರಿ ಬೀಜ, ಜೀರಿಗೆಗಳನ್ನು ಸಮ ಪ್ರಮಾಣದಲ್ಲಿ ನಯವಾಗಿ ಅರೆದು ಕೆಲವು ಗಂಟೆಗಳ ಕಾಲ ನೆನೆಸಿಟ್ಟು ಕಿವುಚಿ ಇಲ್ಲವೆ ಮಿಕ್ಸಿಯಲ್ಲಿ ತಿರುವಿ, ಶೋಧಿಸಿ ಸಂಗ್ರಹಿಸಿಡಿರಿ. ಈ ಕಷಾಯಕ್ಕೆ ಕಲ್ಲು ಸಕ್ಕರೆ ಬೆರೆಸಿ ಆಗಾಗ ಕುಡಿಯುತ್ತಿರಬೇಕು.. ▪ ನೆಲ್ಲಿಕಾಯಿ ಚೂರ್ಣ ಒಂದು ಚಮಚದಷ್ಟು ಒಂದು ಕಪ್ಪು ಮಜ್ಜಿಗೆಯಲ್ಲಿ ಬೆರೆಸಿ ದಿನಕ್ಕೆ ಎರಡು ಬಾರಿ ಕುಡಿಯಬೇಕು. ಮತ್ತು ನೆಲ್ಲಿಕಾಯಿ ಪುಡಿಯನ್ನು ಪೇಸ್ಟ್‌ನಂತೆ ಮಾಡಿಕೊಂಡು ಅಂಗಾಲು ಹಿಮ್ಮಡಿ ಅಂಗೈಗಳಿಗೆ ಲೇಪಿಸಿಕೊಂಡರೆ ಉರಿ ಕಮ್ಮಿಯಾಗುವುದು.. NOOR-UL-FALAH

ಪವಿತ್ರ ಕುರ್‍ಆನ್

Image
ಪವಿತ್ರ ಕುರ್'ಆನ್ ٱلَّذِينَ يُنفِقُونَ أَمْوَٰلَهُم بِٱلَّيْلِ وَٱلنَّهَارِ سِرًّۭا وَعَلَانِيَةًۭ فَلَهُمْ أَجْرُهُمْ عِندَ رَبِّهِمْ وَلَا خَوْفٌ عَلَيْهِمْ وَلَا هُمْ يَحْزَنُونَ ಇರುಳೂ ಹಗಲೂ ಗುಪ್ತವಾಗಿಯೂ ಜಾಹೀ ರಾಗಿಯೂ ತಮ್ಮ ಧನಗಳನ್ನು ದಾನ ನೀಡು ವವರಿಗೆ ಅವರ ಪ್ರಭುವಿನ ಬಳಿ ಪ್ರತಿಫಲವಿದೆ. ಅವರಿಗೆ ಯಾವ ಭಯವೂ ಇರದು. ಅವರು ದುಃಖಿಸಬೇಕಾಗಿಯೂ ಇಲ್ಲ. (ಕುರ್'ಆನ್ -2: 274)

ಪವಿತ್ರ ಕುರ್‍ಆನ್

Image
 ಪವಿತ್ರ ಕುರ್'ಆನ್ وَهُوَ الَّذِي مَرَجَ الْبَحْرَيْنِ هَـٰذَا عَذْبٌ فُرَاتٌ وَهَـٰذَا مِلْحٌ أُجَاجٌ وَجَعَلَ بَيْنَهُمَا بَرْزَخًا وَحِجْرًا مَّحْجُورًا ಅವನು ಎರಡು ಸಮುದ್ರಗಳನ್ನು ಸೇರಿಸಿಟ್ಟಿರು ವವನು. ಒಂದು ರುಚಿಕರವಾದ ಸಿಹಿ ನೀರು. ಇನ್ನೊಂದು ಕಹಿಯಾದ ಉಪ್ಪು ನೀರು. ಇವೆರಡರ ಮಧ್ಯೆ ಒಂದು ಬಲವಾದ ತೆರೆಯನ್ನು ನಿರ್ಮಿಸಿರುವನು. (ಅವು ಪರಸ್ಪರ ಬೆರೆಯದಂತೆ ಮಾಡುವ) ಒಂದು ಗಟ್ಟಿಯಾದ ತಡೆಯನ್ನೂ ನಿರ್ಮಿಸಿರುವನು. (ಕುರ್'ಆನ್ -25: 53)    ಮುಖ್ಯ ವಸ್ತುಸ್ಥಿತಿಯ ಪ್ರತಿಪಾದನೆಯ ಜೊತೆಗೆ ಉಪ್ಪು ನೀರು ಹಾಗೂ ಶುದ್ಧ ನೀರಿನಲ್ಲಿ ಏನೆಲ್ಲ ಲಭ್ಯವೆಂಬುದನ್ನೂ ಈ ವಾಕ್ಯಗಳು ಸೂಚಿಸುತ್ತದೆ. ಮೀನು ಮತ್ತು ದೇಹಾಲಂಕಾರ ವಸ್ತುಗಳಾದ ಹರಳು ಮುತ್ತುಗಳು ಇವುಗಳಲ್ಲಿ ಸೇರಿವೆ. ಇನ್ನೂಂದು ವಿಷಯವೇನೆಂದರೆ ನದಿಗಳು ಕಡಲು ಸೇರುವ ಅಳಿವೆ ಬಾಗಿಲಲ್ಲಿ ನದಿನೀರು ಉಪ್ಪು ನೀರಲ್ಲಿ ಬೆರೆಯದೆ ಬೇರ್ಪಟ್ಟು ನಿಲ್ಲುವ ವಿಸ್ಮಯಕರ ವಿಚಾರವಾಗಿದೆ. ಯೂಪ್ರಟೀಸ್ ಮತ್ತು ಟೈಗ್ರೀಸ್ ನದಿಗಳಲ್ಲಿ ಮಾತ್ರವಲ್ಲ ಬೇರೆ ನದಿಗಳ ಹೆಸರು ಇಲ್ಲಿ ಹೇಳÀದಿದ್ದರೂ ಎಲ್ಲ ನದಿಗಳಿಗೂ ಇದು ಅನ್ವಯವಾಗುತ್ತದೆ. ತುಂಬಿ ಹರಿಯುತ್ತಿರುವ ಮಿಸಿಸಿಪ್ಪಿಕ್ ಹಾಗೂ ಯಂಗ್‌ಸಿಕ್ ನದಿಗಳ ಅಳಿವೆಗಳಲ್ಲೂ ಈ ವಿಶೇಷತೆಯನ್ನು ಕಾಣಬಹುದು. ಅವುಗಳು ನೀರು ಸಮುದ್ರಕ್ಕೆ ಬಹಳ ದೂರದವರೆಗೆ ಹರಿಯುವವರೆಗೂ ಬೆರೆತುಕೊಳ್ಳುವುದಿಲ್ಲ. (ಬೈಬಲ್ ಖ...

ಪವಿತ್ರ ಕುರ್‍ಆನ್

Image
ರಕ್ತ ದಾನ ಮಾಡಿ ಇನ್ನೊಂದು ಜೀವಕ್ಕೆ ಉಡುಗೊರೆ ನೀಡಿ. ಯಾರು ರಕ್ತದಾನ ಮಾಡಬಹುದು? * ಹೆಣ್ಣು ಗಂಡೆಂಬ ಬೇಧವಿಲ್ಲದೇ 18 ರಿಂದ 60 ವರ್ಷದ ಒಳಗಿರುವ ಎಲ್ಲಾ ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಬಹುದು. * ಗಂಡಸರು 3 ತಿಂಗಳಿಗೊಮ್ಮೆ ಮತ್ತು ಹೆಂಗಸರು 4 ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. * ದಾನಿಯ ದೇಹದ ತೂಕ 45 ಕೆಜಿ ಗಿಂತ ಹೆಚ್ಚಿರಬೇಕು. * ರಕ್ತದಲ್ಲಿ ಹಿಮೋಗ್ಲೊಬಿನ್ ಅಂಶ 12.5 ಗ್ರಾಂ ಗಿಂತ ಹೆಚ್ಚಿರಬೇಕು. ಯಾರು ರಕ್ತದಾನ ಮಾಡಬಾರದು? * ಯಾವುದಾದರೂ ಕಾಯಿಲೆಯಿಂದ ನರಳುತ್ತಿದ್ದರೆ ಅಥವಾ ಅನಾರೋಗ್ಯದಿಂದ ಬಳಲುತ್ತಿದ್ದರೆ ರಕ್ತದಾನ ಮಾಡಬಾರದು. * ಮದ್ಯಪಾನ ಹಾಗೂ ಮಾದಕ ದ್ರವ್ಯ ಸೇವನೆ ಮಾಡಿದಾಗ ರಕ್ತದಾನ ಮಾಡಬಾರದು. * ಮಹಿಳೆಯರು, ತಿಂಗಳ ಮುಟ್ಟಿನ ಸಮಯದಲ್ಲಿ ಗರ್ಭಿಣಿಯರಾಗಿದ್ದಾಗ, ಎದೆ ಹಾಲುಣಿಸುತ್ತಿರುವಾಗ ಮತ್ತು ಹೆರಿಗೆಯ ನಂತರ 6 ತಿಂಗಳು ರಕ್ತದಾನ ಮಾಡಬಾರದು. * ಯಾವುದೇ ವ್ಯಕ್ತಿ ಕಾಯಿಲೆಯ ವಿರುದ್ಧ ಲಸಿಕೆ ಪಡೆದಿದ್ದರೆ ಅಂತಹವರು ಲಸಿಕೆ ಪಡೆದ 4 ವಾರಗಳವರೆಗೆ ರಕ್ತದಾನ ಮಾಡಬಾರದು. * ಮಲೇರಿಯಾ ರೋಗಕ್ಕೆ ಚಿಕಿತ್ಸೆ ಪಡೆದಿದ್ದರೆ ಚಿಕಿತ್ಸೆ ಪಡೆದ ನಂತರದ ಮೂರು ತಿಂಗಳು ರಕ್ತದಾನ ಮಾಡಬಾರದು. * ಆಸ್ಪರಿನ್ ಸೇವಿಸಿದ್ದರೆ, ಅಂತಹ ವ್ಯಕ್ತಿ ಮಾತ್ರೆ ಸೇವಿಸಿದ ನಂತರ ಮೂರು ದಿನ ರಕ್ತದಾನ ಮಾಡಬಾರದು. * ಆಸ್ಪರಿನ್ ಸೇವಿಸಿದ್ದರೆ, ಅಂತಹ ವ್ಯಕ್ತಿ ಮಾತ್ರೆ ಸೇವಿಸಿದ ನಂತರ ಮೂರು ದಿನ ರಕ್ತದಾನ ಮಾಡಬಾ...