Posts

Showing posts from January, 2021

ಅದಕ್ಕೆ ಕಾರಣ ಒಂದು ತಪ್ಪಾಗಿತ್ತು..!

  ಅದಕ್ಕೆ ಕಾರಣ ಒಂದು ತಪ್ಪಾಗಿತ್ತು..! ಇಬ್‌ನು ಅಬ್ಬಾಸ್ ಹೇಳುತ್ತಾರೆ :  80 ವರ್ಷಗಳ ಕಾಲ ಸೃಷ್ಟಿಕರ್ತನಾದ ಅಲ್ಲಾಹನ ಆರಾಧನೆಯಲ್ಲಿ ಜೀವಿಸಿದ್ದ ಒಬ್ಬ ಮಹಾತ್ಮರಿದ್ದರು. ಅವರ ಜೀವನದ ಕೊನೆಯ ಘಳಿಗೆಯಲ್ಲಿ ಅವರಿಂದ ಒಂದು ತಪ್ಪು ಸಂಭವಿಸಿತು. ಆ ತಪ್ಪು ಅವರಲ್ಲಿ ಭಯದ ಹಿಮಾಲಯವನ್ನೇ ಸೃಷ್ಟಿಸಿತು. ಭಯವಿಹ್ವಲನಾದ ಮಹಾತ್ಮರು ಎಲ್ಲೆಂದಿಲ್ಲದೆ ಪರಿಭ್ರಾಂತರಾಗಿ ಓಡಿ ಮರುಭೂಮಿಗೆ ತಲುಪಿದರು. ಅಲ್ಲಿ ಅವರು ಕೂಗಿ ಕೇಳುತ್ತಾರೆ..  "ಬಹಳಷ್ಟು ಮರಳ ಗುಡ್ಡಗಳೂ, ಮುಳ್ಳುಗಿಡಗಳೂ, ವನ್ಯಮೃಗಗಳೂ ಅವಿತು ಕುಳಿತಿರುವ ಹಲವಾರು ವಂಚನೆಯ ಬೀಡಾದ ಮರುಭೂಮಿಯೇ, ನನ್ನ ಸೃಷ್ಟಿಕರ್ತನಿಂದ ನನ್ನನ್ನು ಅಡಗಿಸಲು ಸಾಧ್ಯವಿರುವ ಯಾವುದಾದರೂ ಸ್ಥಳ ನಿನ್ನಲ್ಲಿದ್ದರೆ ನನಗೆ ತಿಳಿಸಿಕೊಡವೆಯಾ..? ಮಹಾತ್ಮರ ಪ್ರಶ್ನೆಯನ್ನು ಕೇಳಿ ಅಲ್ಲಾಹನ ಆಜ್ಞೆಯ ಪ್ರಕಾರ ಆ ಮರುಭೂಮಿ ಮಾತನಾಡಲು ಪ್ರಾರಂಭಿಸಿತು...  "ಓ ಮನುಷ್ಯ, ನನ್ನಲ್ಲಿನ ಮುಳ್ಳಿನ ಗಿಡಗಳಿಗೂ, ಮರಳಿನ ಗುಡ್ಡಗಳಿಗೂ ಬೇರೆಲ್ಲ ವಸ್ತುಗಳಿಗೂ ಅವಗಳಿಗೆ ಜವಾಬ್ದಾರಿ ವಹಿಸಿಕೊಟ್ಟು ಒಂದು ಮಲಕನ್ನು ಅಲ್ಲಾಹು ನೇಮಿಸಿದ್ದಾನೆ. ಅವರ ಕಣ್ಣು ತಪ್ಪಿಸಿ ಬೇರೇನನ್ನೂ ನಡೆಸಲು ನನಗೆ ಸಾಧ್ಯವಿಲ್ಲ. ಮತ್ತೆ ನಾನು ಹೇಗೆ ನಿನಗೆ ಅಭಯವನ್ನು ನೀಡಲಿ...!?  ಮರುಭೂಮಿ ತನ್ನ ನಿಸ್ಸಹಾಯಕತೆಯನ್ನು ತೋಡಿಕೊಂಡಿತು. ಮರುಭೂಮಿಯ ಆ ಅಶಕ್ತತೆಯ ಮಾತನ್ನು ಕೇಳಿದ ಅವರು ತನ್ನ ನಿರೀಕ್ಷೆಯನ್ನು ಕೈಬಿಡದೆ ಸಮುದ್ರದ ...

ಕಣ್ಣಿನ ಕಪ್ಪುಕಲೆಗೆ ಪರಿಹಾರ:

ಕಣ್ಣಿನ ಕಪ್ಪುಕಲೆಗೆ ಪರಿಹಾರ: ಕಣ್ಣಿನ ಮೇಲೆ ಮತ್ತು ಕಣ್ಣಿನ ಸುತ್ತ ಇರುವ ಕಪ್ಪು ಕಲೆಗಳನ್ನು ತೆಗೆದುಹಾಕಲು ಈ ಪ್ರಬಲವಾದ ಮನೆಮದ್ದನ್ನು ಪ್ರಯತ್ನಿಸಿ.  ▪️ಟೊಮೆಟೊ ರಸವನ್ನು ಹೊರತೆಗೆದು. ಅರ್ಧ ಚಮಚ ನಿಂಬೆರಸವನ್ನು ಮತ್ತು ಟೀಸ್ಪೂನ್ ಕಡಲೆಹಿಟ್ಟನ್ನು ಮಿಶ್ರಣ ಮಾಡಿ ಪೇಸ್ಟ್‌ನ್ನು ಕಪ್ಪು ಕಲೆಯ ಮೇಲೆ ಹಚ್ಚಿ 15 ರಿಂದ 20 ನಿಮಿಷಗಳವರೆಗೆ ಬಿಡಿ. ನಂತರ ತಣ್ಣೀರಿನಿಂದ ತೊಳೆಯಿರಿ.  =============================                          ಸಂಗ್ರಹ:                   ಮನೆ ಮದ್ದುಗಳು               ಸಂ: ✒️ಅಬೂರಿಫಾನ ============================= ನಿಮ್ಮ ಸುರಕ್ಷತೆಗೆ ಸಾಮಾಜಿಕ ಅಂತರವನ್ನು ಕಾಪಾಡಿ ಮಾಸ್ಕ್ ಉಪಯೋಗಿಸಿ. ಕುರ್‌ಆನ್ ದ್ಸಿಕ್ರ್‌ಗಳು ಪಠಿಸುತ್ತಿರಿ ಪ್ರತೀ ಕ್ಷಣವು ನಾಲಗೆಯೂ ಸ್ವಲಾತನ್ನು ಜಪಿಸುತ್ತಿರಲಿ. اللَّهُمَّ صَلِّ عَلَى سَيِّدِنَا مُحَمَّدٍ النَّبِيِّ الأُمِّيِّ الْحَبِيبِ الْعَالِي الْقَدْرِ الْعَظِيمِ الْجَاهِ وَعَلَى آلِهِ وَصَحْبِهِ وَسَلِّمْ. ============================= ✤𝙇𝙞𝙠𝙚 & 𝙎𝙝𝙖𝙧𝙚✤ ✦𝙋𝙧𝙖𝙮 𝙛𝙤𝙧 𝙪𝙨 ✦ 𝗔𝗥𝗨𝗥 ?...

ಕುಟುಂಬ ಬಂಧ

ಕುಟುಂಬ ಬಂಧ ಪ್ರವಾದಿ ﷺ ಹೇಳುತ್ತಾರೆ: ಕುಟುಂಬ ಬಂಧವನ್ನು ವಿಚ್ಛೇದಿಸುವವನು ಸ್ವರ್ಗ ಪ್ರವೇಶಿಸಲಾರನು. (ಹದೀಸ್- ಇಮಾಂ ಬುಖಾರಿ,ಮುಸ್ಲಿಮ್) ▪ಒಳಿತನ್ನು ಕಲಿಯಲು ಅಲ್ಲಾಹನು ನಮಗೆ ಅನುಗ್ರಹಿಸಲಿ. ಆಮೀನ್ 🤲🏻▪ ತಾಜುದ್ದೀನ್ ಸಖಾಫಿ,ನಾವುಂದ ✳✳✳✳✳✳✳✳✳✳

ಹೆಣ್ಮಕ್ಕಳ ಸಂರಕ್ಷಣೆ:

ಹೆಣ್ಮಕ್ಕಳ ಸಂರಕ್ಷಣೆ: ಆಯಿಶಾ(ರ.ಅ) ಅವರಿಂದ ಉಲ್ಲೇಖ:  ಒಮ್ಮೆ ಸ್ತ್ರೀಯೋರ್ವಳು ತನ್ನ ಇಬ್ಬರು ಹೆಣ್ಮಕ್ಕಳೊಂದಿಗೆ ಭಿಕ್ಷೆ ಯಾಚಿಸುತ್ತಾ ನನ್ನ ಬಳಿಗೆ ಬಂದಳು. ಆಗ ನನ್ನಲ್ಲಿ ಸ್ವಲ್ಪ ಖರ್ಜೂರವಲ್ಲದೆ ಬೇರೇನೂ ಇರಲಿಲ್ಲ. ನಾನು ಅದನ್ನು ಆಕೆಗೆ ನೀಡಿದಾಗ, ಅವಳು ಅದನ್ನು ಪಾಲುಮಾಡಿ ತಾನು ತಿನ್ನದೆ ಮಕ್ಕಳಿಗೆ ಕೊಟ್ಟಳು. ಆಕೆ ತೆರಳಿದ ಬಳಿಕ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಆಗಮಿಸಿದಾಗ ನಾನು ಈ ಘಟನೆಯನ್ನು ಅವರಿಗೆ ವಿವರಿಸಿದೆ. ಆಗ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದರು.  ಯಾರಾದರೂ ಹೆಣ್ಮಕ್ಕಳ ಕಾರಣದಿಂದ ಪರೀಕ್ಷಿಸಲ್ಪಟ್ಟು, ಅವರನ್ನು ಸಂರಕ್ಷಿಸಿ ಸಲಹಿದರೆ ಅವರಿಗೆ ಆ ಹೆಣ್ಣು ಮಗು ನರಕದ ರಕ್ಷಣೆಯ ಗುರಾಣಿಯಾಗಿ ಮಾರ್ಪಡುವುದು. (ಬುಖಾರಿ, ಮುಸ್ಲಿಮ್)  ಕೆಎಂ ಜಲೀಲ್ ಕುಂದಾಪುರ ಕಾರ್ಯನಿರ್ವಾಹಕರು: ನೂರುಲ್ ಫಲಾಹ್ ಸಮೂಹ ಸಂಸ್ಥೆ(ರಿ) ============================= ಅಲ್ಲಾಹನು ಹರಾಂಗೊಳಿಸಿದ ಎಲ್ಲಾ ಕಾರ್ಯಗಳಿಂದ ದೂರವಿರಿ, ಪರಲೋಕದಿ ವಿಜಯಿಯಾಗಲು ಇಹಲೋಕವು ಸತ್ಕರ್ಮಗಳಿಂದ ಕೂಡಿರಲಿ, ಟಿವಿ, ಸಿರೀಯಲ್, ಮ್ಯೂಸಿಕ್‌ನೊಂದಿಗೆ ಎಲ್ಲ ರೀತಿಯ ಹರಾಂಗಳಿಂದ ಮುಕ್ತವಾಗಿ ನಮ್ಮ ದಿನನಿತ್ಯದ ಬದುಕಿನಲ್ಲಿ ಕುರ್‍ಆನ್ ಪಾರಾಯಣ ಅಧಿಕಗೊಳಿಸಿರಿ, ದುಆಃ ದ್ಸಿಕ್ರ್‌ಗಳೊಂದಿಗೆ, ಪ್ರತೀ ಕ್ಷಣವು ನಾಲಗೆಯೂ ಸ್ವಲಾತನ್ನು ಜಪಿಸುತ್ತಿರಲಿ. اللَّهُمَّ صَلِّ عَلَى سَيِّدِنَا مُحَمَّدٍ النَّبِيِّ...

ನೀರು,ಉಪ್ಪು ತಡೆಯಬಾರದು

ನೀರು,ಉಪ್ಪು ತಡೆಯಬಾರದು ಆಯಿಶಾ ಬೀವಿ(ರ.ಅ) ರಿಂದ ವರದಿ- ಸ್ವಹಾಬಿಗಳು ಹಬೀಬ್ ﷺ ಕೇಳುತ್ತಾರೆ: ನಬಿಯವರೇ.. ಯಾವ ವಸ್ತುಗಳನ್ನು ಕೊಡದೇ ತಡೆದಿಡಬಾರದು? ಪ್ರವಾದಿ ﷺ ಹೇಳುತ್ತಾರೆ: ನೀರು, ಉಪ್ಪು, ಬೆಂಕಿ ಇವುಗಳನ್ನು ತಡೆದಿಡಬೇಡಿ. (ಹದೀಸ್- ಸ್ವಹೀಹ್) ▪ಒಳಿತನ್ನು ಕಲಿಯಲು ಅಲ್ಲಾಹನು ನಮಗೆ ಅನುಗ್ರಹಿಸಲಿ. ಆಮೀನ್ 🤲🏻▪ ತಾಜುದ್ದೀನ್ ಸಖಾಫಿ,ನಾವುಂದ ✳✳✳✳✳✳✳✳✳✳

ಅತ್ತು ಮುಗಿಸಿದ ಜನ್ಮ..!

  ಅತ್ತು ಮುಗಿಸಿದ ಜನ್ಮ..! ರಿಯಾಹುನಿಲ್ ಖೈಸಿಯ್ಯ್‌ರನ್ನು ನಮಗೆ ಪರಿಚಯವಿದೆ. ಅಲ್ಲಾಹನ ಸ್ಮರಣೆಯಲ್ಲಿ ಅತ್ತು ಅತ್ತು ಪ್ರಜ್ಞೆ ತಪ್ಪಿ ವಫಾತ್ ಆದ ಮಹಾತ್ಮರು. ಆದ್ದರಿಂದ ಮಹಾತ್ಮರ ಕುರಿತು ಹೆಚ್ಚೆಚ್ಚು ತಿಳಿಯುವುದು ನಮ್ಮ ಉತ್ತಮ ಭವಿಷ್ಯಕ್ಕೆ ಉಪಕಾರವಾದೀತು. ರಿಯಾಹುನಿಲ್ ಖೈಸಿಯ್ಯ್ ಹೇಳುತ್ತಾರೆ,  "ನನ್ನ ಜೀವನದಲ್ಲಿ ನಾನು 40 ಕ್ಕಿಂತಲೂ ಹೆಚ್ಚು ತಪ್ಪುಗಳನ್ನು ಮಾಡಿದ್ದೇನೆ. ಆ ಒಂದೊಂದು ತಪ್ಪಿಗೂ ಒಂದು ಲಕ್ಷದಂತೆ ಇಸ್ತಿಗ್‌ಫಾರ್ (ಕ್ಷಮೆಯಾಚನೆ) ಹೇಳಿದ್ದೇನೆ.  [ಇಲ್ಲಿ ಹೇಳಿದ ತಪ್ಪು ಕೆಲವೊಮ್ಮೆ ನಾವು ಮೊದಲು ಕೆಲವು ಚರಿತ್ರೆಗಳಲ್ಲಿ ಹೇಳಿದ ಹಾಗೆ; ಸಂಭವಿಸಿದ ಒಂದು ವಿಷಯದ ಕುರಿತು ನನ್ನಿಂದ ಹಾಗಾಗದಿರುತ್ತಿದ್ದರೆ ಎಂದು ಚಿಂತಿಸಿದ್ದನ್ನು ಮಹಾ ಪಾಪವಾಗಿ ಕಂಡ ಮಹಾತ್ಮರ ರೀತಿ ಚಿಂತಿಸಿದ ತಪ್ಪುಗಳಾಗಿರಬಹುದು. ಅವರ ವಿನಯವಾಗಿದೆ ಇಂತಹಾ ಪ್ರಯೋಗಗಳಿಂದ ನಮಗೆ ತಿಳಿಯುವುದು.] ರಿಯಾಹುನಿಲ್ ಖೈಸಿಯ್ಯ್‌ರಿಗೆ ಕಬ್ಬಿಣದ ಕೋಳವೊಂದಿತ್ತು. ರಾತ್ರಿಯಾದರೆ ಮಹಾತ್ಮರು ಆ ಕೋಳವನ್ನು ತನ್ನ ಕತ್ತಿನ ಮೂಲಕ ಹಾಕಿ ಮುಂಜಾನೆಯವರೆಗೆ ಆಳುತ್ತಿದ್ದರು. ತಾನೊಬ್ಬ ಪಾಪಿ ಎಂಬ ಭಾವನೆಯನ್ನು ಸ್ವಯಂ ಸೃಷ್ಟಿಸಿ ಅದರ ಮೂಲಕ ತನ್ನ ಯಜಮಾನನೊಂದಿಗೆ ಕ್ಷಮೆಯಾಚನೆಗೆ ಶಕ್ತಿಯನ್ನೂ ಭಕ್ತಿ ವರ್ಧಿಸಲೂ ಮಹಾತ್ಮರ ಈ ಪ್ರವೃತ್ತಿ (ಕೋಳವನ್ನು ಬಂಧಿಸುವುದು) ಸಹಾಯಕವಾಗಿರಬಹುದು.  ಬೇರೊಂದು ಸಂದರ್ಭದಲ್ಲಿ ರಿಯಾಹುನಿಲ್ ಖೈಸಿಯ್ಯ್ ರ ಸಂಬಂಧಿಕ...

ಗರ್ಭಧಾರಣೆಗೆ, ಸಂತಾನ ಭಾಗ್ಯಕ್ಕೆ

ಗರ್ಭಧಾರಣೆಗೆ, ಸಂತಾನ ಭಾಗ್ಯಕ್ಕೆ 10 ಗ್ರಾಮಿನಷ್ಟು ಅಶ್ವಗಂಧಿ ಚೂರ್ಣವನ್ನು ಒಂದು ಲೋಟ ಹಾಲು, ಒಂದು ಲೋಟ ನೀರು ಬೆರೆಸಿ ಕುದಿಸಬೇಕು. ನೀರೆಲ್ಲಾ ಇಂಗಿದ ಮೇಲೆ ಉಳಿದ ಭಾಗಕ್ಕೆ ಸಕ್ಕರೆ ಬೆರೆಸಿ ಮುಟ್ಟಾದ 3 ನೇ ದಿನದಿಂದ 7 ದಿನಗಳು ಸೇವಿಸಬೇಕು. ಅನಂತರ ರತಿ ಸುಖವನ್ನು ಅನುಭವಿಸಬೇಕು. ಇದೇ ರೀತಿ ಗಂಡಸರೂ ಸೇವಿಸಬೇಕು. ಒಂದೇ ಸಾರಿ ಫಲಪ್ರದವಾಗದಿದ್ದರೆ ಪ್ರತಿ ಋತು ಕಾಲದಲ್ಲೂ ಏಳುದಿನ ಸೇವಿಸುತ್ತಿರಬೇಕು. ಗರ್ಭನಿಂತಲ್ಲಿ ನಂತರವೂ ಸ್ತ್ರೀಯರು ಕಮ್ಮಿ ಪ್ರಮಾಣದಲ್ಲಿ ಸೇವಿಸುತ್ತಿರಬೇಕು. ಗರ್ಭವು ಬೆಳೆಯಲು ಸಹಕಾರಿಯಾಗುತ್ತದೆ. =============================                          ಸಂಗ್ರಹ:                   ಮನೆ ಮದ್ದುಗಳು               ಸಂ: ✒️ಅಬೂರಿಫಾನ ============================= ನಿಮ್ಮ ಸುರಕ್ಷತೆಗೆ ಸಾಮಾಜಿಕ ಅಂತರವನ್ನು ಕಾಪಾಡಿ ಮಾಸ್ಕ್ ಉಪಯೋಗಿಸಿ. ಕುರ್‌ಆನ್ ದ್ಸಿಕ್ರ್‌ಗಳು ಪಠಿಸುತ್ತಿರಿ ಪ್ರತೀ ಕ್ಷಣವು ನಾಲಗೆಯೂ ಸ್ವಲಾತನ್ನು ಜಪಿಸುತ್ತಿರಲಿ. اللَّهُمَّ صَلِّ عَلَى سَيِّدِنَا مُحَمَّدٍ النَّبِيِّ الأُمِّيِّ الْحَبِيبِ الْعَالِي الْقَدْرِ الْعَظِيمِ الْجَاهِ وَعَلَى آلِهِ وَصَحْبِ...

ತುಳಸಿ, (Myrtle, ‏Basil, ريحان)

ತುಳಸಿ, (Myrtle, Basil, ريحان) ✍🏻ಯೂಸುಫ್ ನಬ್‌ಹಾನಿ ಕುಕ್ಕಾಜೆ    ▪ ಪವಿತ್ರ ಕುರ್‌ಆನಿನಲ್ಲಿ ಅಲ್ಲಾಹನು ಈ ತುಳಸಿಯ ಬಗ್ಗೆ ಉಲ್ಲೇಖಿಸಿದ್ದಾನೆ. "ಶಾಶ್ವತ ಭವನವಾದ ಸ್ವರ್ಗದಲ್ಲಿ ತುಳಸಿಯಿದೆ. ಸ್ವರ್ಗ ನಿವಾಸಿಗಳಿಗೆ ಅದರ ವಾಸನೆಯ ಸಹಾನುಭೂತಿಯೂ ಅಲ್ಲಿದೆ" ಎಂದು ಅಲ್ಲಾಹನು ಹೇಳಿರುವುದಾದರೆ ಅದರ ಮಹತ್ವದ ಬಗ್ಗೆ ಅರಿವಾಗುತ್ತದೆ.      ▪ "ಮುತ್ತು, ಮಾಣಿಕ್ಯದಿಂದ ಅಲಂಕರಿಸಿದ ಪ್ರಕಾಶಭರಿತ ಸ್ವರ್ಗವು ತುಳಸಿಯ ವಾಸನೆಯಿಂದ ಘಮಘಮಿಸುತ್ತಿದೆ" ಎಂದು ಇಬ್‌ನ್ ಮಾಜಃ ವರದಿ ಮಾಡಿದ ಒಂದು ಹದೀಸಿನಲ್ಲಿದೆ. ಅಂತೆಯೇ "ಒಬ್ಬನಿಗೆ ಯಾರಾದರೂ ತುಳಸಿಯನ್ನು ಹದಿಯಯಾಗಿ ಕೊಟ್ಟರೆ ಅದನ್ನು ತಿರಸ್ಕರಿಸಬಾರದು" ಎಂದು ಬೇರೊಂದು ಹದೀಸಿನಲ್ಲಿ ವರದಿಯಾಗಿದೆ.    ▪ ತುಳಸಿಯ ವಾಸನೆಯನ್ನು ಆಘ್ರಾಣಿಸುವುದರಿಂದ ಮೂಲವ್ಯಾಧಿ ಖಾಯಿಲೆಗೆ ಫಲ ಸಿಗುವುದೆಂದು ಇಬ್ನ್ ಸೀನಾರಂತಹಾ ವೈದ್ಯಲೋಕದ ಪಂಡಿತರು ಹೇಳಿರುತ್ತಾರೆ. ಅದರ ಎಲೆಯನ್ನು ಜಜ್ಜಿ ಗುಲಾಬಿ ನೀರಿನಲ್ಲಿ ಮಿಶ್ರಣ ಮಾಡಿ ಮೂಲವ್ಯಾಧಿಗೆ ಸವರಿದರೆ ಬಹಳ ಫಲ ಕೊಡುತ್ತದೆ.     ▪ ಇದರ ಬೀಜವನ್ನು ಒಂಟೆಯ ರಕ್ತದಲ್ಲಿ ಮಿಶ್ರಣ ಮಾಡಿ ಕಂಕುಳಿಗೆ ಹಚ್ಚಿ ಎರಡು ತಾಸು ಕಳೆದು ತೊಳೆದರೆ ಅಲ್ಲಿನ ಕೆಟ್ಟ ವಾಸನೆ ಮಾಯವಾಗುತ್ತದೆ.      ▪ ಇದರ ವಾಸನೆಯನ್ನು ಆಘ್ರಾಣಿಸುವುದರಿಂದ ತಲೆ ಸುತ್ತುವ ತೊಂದರೆ, ಮೂಗಿನಲ್ಲಿ ರಕ್ತ ಬರುವುದು ಇತ್ಯಾದಿ ತೊ...

ದರಿದ್ರರು ಮತ್ತು ದುರ್ಬಲರು ಸ್ವರ್ಗದ ವಿಭಾಗದಲ್ಲಿ:

ದರಿದ್ರರು ಮತ್ತು ದುರ್ಬಲರು ಸ್ವರ್ಗದ ವಿಭಾಗದಲ್ಲಿ: ಅಬೂಸಈದಿಲ್ ಖುದ್ರಿ(ರ.ಅ) ಅವರಿಂದ ನಿವೇದನೆ: ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದರು: ಒಮ್ಮೆ ಸ್ವರ್ಗ ಮತ್ತು ನರಕದ ಮಧ್ಯೆ ವಿವಾದವೇರ್ಪಟ್ಟಿತು. ನರಕವು ಸ್ವಚ್ಛಾಧಿಪತಿಗಳು ಮತ್ತು ಅಹಂಕಾರಿಗಳು ತನ್ನ ವಿಭಾಗದವರೆಂದು ವಾದಿಸಿದರೆ, ಸ್ವರ್ಗವು ದರಿದ್ರರು ಮತ್ತು ದುರ್ಬಲರು ನನ್ನ ವಿಭಾಗಕ್ಕೆ ಸೇರಿದವರೆಂದು ವಾದಿಸಿತು. ಆಗ ಅಲ್ಲಾಹನು ಅವರ ನಡುವೆ ತೀರ್ಪು ನೀಡುತ್ತಾನೆ.  ಓ ಸ್ವರ್ಗವೇ ನೀನು ನನ್ನ ಕರುಣೆಯಾಗಿರುವಿ. ನಾನಿಚ್ಛಿಸಿದವರಿಗೆ ನಿನ್ನ ಮೂಲಕ ನಾನು ಕರುಣೆಯನ್ನು ವರ್ಷಿಸುತ್ತೇನೆ. ಓ ನರಕವೇ, ನೀನು ನನ್ನ ಶಿಕ್ಷೆಯಾಗಿರುವಿ. ನಾನಿಚ್ಚಿಸಿದವರನ್ನು ನಿನ್ನ ಮೂಲಕ ಶಿಕ್ಷಿಸುತ್ತೇನೆ. ನಿಮ್ಮಿಬ್ಬರಿಗೂ ತುಂಬುವಷ್ಟನ್ನು ನಾನು ಕೊಡುವೆನು. (ಮುಸ್ಲಿಮ್)  ಕೆಎಂ ಜಲೀಲ್ ಕುಂದಾಪುರ ಕಾರ್ಯನಿರ್ವಾಹಕರು: ನೂರುಲ್ ಫಲಾಹ್ ಸಮೂಹ ಸಂಸ್ಥೆ(ರಿ) ============================= ಅಲ್ಲಾಹನು ಹರಾಂಗೊಳಿಸಿದ ಎಲ್ಲಾ ಕಾರ್ಯಗಳಿಂದ ದೂರವಿರಿ, ಪರಲೋಕದಿ ವಿಜಯಿಯಾಗಲು ಇಹಲೋಕವು ಸತ್ಕರ್ಮಗಳಿಂದ ಕೂಡಿರಲಿ, ಟಿವಿ, ಸಿರೀಯಲ್, ಮ್ಯೂಸಿಕ್‌ನೊಂದಿಗೆ ಎಲ್ಲ ರೀತಿಯ ಹರಾಂಗಳಿಂದ ಮುಕ್ತವಾಗಿ ನಮ್ಮ ದಿನನಿತ್ಯದ ಬದುಕಿನಲ್ಲಿ ಕುರ್‍ಆನ್ ಪಾರಾಯಣ ಅಧಿಕಗೊಳಿಸಿರಿ, ದುಆಃ ದ್ಸಿಕ್ರ್‌ಗಳೊಂದಿಗೆ, ಪ್ರತೀ ಕ್ಷಣವು ನಾಲಗೆಯೂ ಸ್ವಲಾತನ್ನು ಜಪಿಸುತ್ತಿರಲಿ. اللَّهُمَّ صَلِّ عَلَى سَ...

ಚಿಕ್ಕದಾದ ಅಡಿಕೆಯಲ್ಲಿ ಅಡಗಿದೆ ದೊಡ್ಡ ದೊಡ್ಡ ಆರೋಗ್ಯಕಾರಿ ಅಂಶಗಳು:

ಚಿಕ್ಕದಾದ ಅಡಿಕೆಯಲ್ಲಿ ಅಡಗಿದೆ ದೊಡ್ಡ ದೊಡ್ಡ ಆರೋಗ್ಯಕಾರಿ ಅಂಶಗಳು: ಅಡಿಕೆ ಗಾತ್ರದಲ್ಲಿ ಚಿಕ್ಕದಾದರೂ ಆರೋಗ್ಯಕ್ಕೆ ಬಹಳ ದೊಡ್ಡದಾಗಿದೆ. ಇದರಲ್ಲಿ ಹಲವು ಬಗೆಯ ಆರೋಗ್ಯಕಾರಿ ಅಂಶಗಳು ಅಡಗಿವೆ, ಅವುಗಳ ಬಗ್ಗೆ ನಾವಿಂದು ತಿಳಿಯೋಣ ಬನ್ನಿ.  ▪️ಮೂತ್ರ ಮಾರ್ಗದಲ್ಲಿ ಏನಾದರೂ ಸಮಸ್ಯೆ ಇದ್ದರೆ ಹಸುವಿನ ತುಪ್ಪದಲ್ಲಿ 2/3 ಗ್ರಾಂ ನಷ್ಟು ಅಡಿಕೆ ಪುಡಿಯನ್ನು ಬೆರಸಿ ಸೇವಿಸುವುದರಿಂದ ನೋವು ಬೇಗ ನಿವಾರಣೆಯಾಗುತ್ತದೆ.   ▪️ಅಡಿಕೆ ನೀರು ಸೇವಿಸುವುದರಿಂದ ಮೂತ್ರ ಮಾರ್ಗದಲ್ಲಿ ನೋವು ನಿವಾರಣೆಯಾಗಿ ಮೂತ್ರ ಸಲೀಸಾಗಿ ಹೊರ ಹೋಗುತ್ತದೆ.  ▪️ಮಕ್ಕಳಲ್ಲಿ ಬಾಯಿಹುಣ್ಣು ಸಮಸ್ಯೆ ಕಂಡುಬಂದರೆ, ಅಡಿಕೆ ಕಷಾಯ ಮಾಡಿ ಮುಕ್ಕಳಿಸುವುದರಿಂದ ಬಾಯಿಹುಣ್ಣು ಸಮಸ್ಯೆ ಬೇಗ ಗುಣವಾಗುತ್ತದೆ.  ▪️ಹಲ್ಲು ನೋವು ಕಡಿಮೆಯಾಗಲು ಅಡಿಕೆಯನ್ನು ಸುಟ್ಟು ಅದರ ಬೂದಿಯಿಂದ ಹಲ್ಲು ಉಜ್ಜಿದರೆ ಹಲವು ನೋವು ನಿವಾರಣೆಯಾಗುತ್ತದೆ.   ▪️ಸಂದು ನೋವು ಕಾಣಿಸಿಕೊಂಡರೆ ಎಳ್ಳೆಣ್ಣೆ ಜೊತೆ ಅಡಿಕೆ ಪುಡಿಯನ್ನು ಬೆರಸಿ ನೋವಿರುವ ಜಾಗಕ್ಕೆ ಮಸಾಜ್ ರೀತಿಯಲ್ಲಿ ಮಾಡೋದ್ರಿಂದ ನೋವು ಶಮವಾಗುತ್ತದೆ.  ▪️ಚರ್ಮದಲ್ಲಿ ತುರಿಕೆ ಸಮಸ್ಯೆ ಬಂದರೆ, ಸಾಸಿವೆ ಎಣ್ಣೆಯೊಂದಿಗೆ ಅಡಿಕೆಯನ್ನು ಸುಟ್ಟು ಬೂದಿ ಮಾಡಿ ಆ ಅದನ್ನು ಸಾಸಿವೆ ಎಣ್ಣೆ ಜೊತೆ ಲೇಪಿಸಿದರೆ ಈ ಸಮಸ್ಯೆ ನಿವಾರಣೆಯಾಗುತ್ತದೆ.   ▪️ಗಾಯವಾಗಿ ಅತಿಯಾಗಿ ರಕ್ತ ಸೋರುತ್ತಿದ್ದರೆ, ಅಡಿಕೆ ಕ...

ಅವರು ಈಗಲೂ ಅಳುತ್ತಿದ್ದಾರೆ

        ಅವರು ಈಗಲೂ ಅಳುತ್ತಿದ್ದಾರೆ "ರಿಯಾವುನಿಲ್ ಖೈಸಿಯ್ಯ್" ಇಂದಿನ ನಮ್ಮ ಚರಿತ್ರೆಯ ನಾಯಕ. ಆ ಹೆಸರು ತಖ್‌ವಾದ ಕಣ್ಣೀರಿನಿಂದ ತುಂಬಿ ತುಳುಕಿದ ಕಾರಣದಿಂದ ಅಲ್ಲಾಹನನ್ನು ಭಯ ಪಟ್ಟು ಹರಿಯುವ ಕಣ್ಣೀರಿನ ಹೊಳೆಗಳಲ್ಲಿ ಮಹಾತ್ಮರ ಕಣ್ಣೀರು ಆಗಾಗ ಹಳ್ಳವಾಗಿ ಹರಿಯುವುದು ಸ್ವಾಭಾವಿಕವಲ್ಲವೇ..? ಬೇರೊಂದರ್ಥದಲ್ಲಿ ಹೇಳುವುದಾದರೆ ಆ ಕಣ್ಣೀರಿನ ತೀಕ್ಷ್ಣತೆಯ ಮುಂದೆ ಯಾವುದೇ ಅಗ್ನಿಯೂ ಉರಿಯಲು ಧೈರ್ಯಪಡದು. ಒಂದೆರಡು ಮಂದಿಯಲ್ಲ, ಆ ಜೀವನದೊಂದಿಗೆ ಅತ್ಯಂತ ಸಮೀಪದಿಂದ ಅರಿತ ಎಲ್ಲರಿಗೂ ಹೇಳಕ್ಕಿರುವುದು ಮಹಾತ್ಮರ ಅಳುವಿನ ಕುರಿತಾಗಿದೆ. ಒಬ್ಬ ವ್ಯಕ್ತಿಯ ಸ್ವಭಾವವನ್ನು ತಿಳಿಯಬೇಕಾದರೆ ಅವರೊಂದಿಗೆ ಸಹವರ್ತಿಸಿದ ವ್ಯತ್ಯಸ್ಥ ಜನರೊಂದಿಗೆ ಅವರ ಕುರಿತು ಇರುವ ಅಭಿಪ್ರಾಯವನ್ನು ಕೇಳಿ ತಿಳಿದರೆ ಸಾಕು. ಈ ಬಾರಿ ನಮ್ಮೊಂದಿಗೆ ಅಭಿಪ್ರಾಯ ವನ್ನು ವಿವರಿಸುವುದು ಮುಆದ್ ಅಬೂ ಔನ್ ಎಂಬವರಾಗಿದ್ದಾರೆ. ನಾನು ಮಖ್‌ಬರದ ಸಮೀಪ ಚಿಂತಾಮಗ್ನನಾಗಿ ನಿಂತಿದ್ದೆ. ಸಮಯ ಮಗ್ರಿಬ್ ಕಳೆದಿದೆ. ಯಾರೋ ಒಬ್ಬರು ದೂರದಿಂದ ನಡೆದು ಬರುವುದನ್ನು ಗಮನಿಸಿದೆ. ಅದು ಮಹಾತ್ಮರಾದ ರಿಯಾವುನಿಲ್ ಖೈಸಿಯ್ಯ್ ಎಂದು ತಿಳಿಯಲು ಹೆಚ್ಚು ಸಮಯ ಬೇಕಾಗಿ ಬರಲಿಲ್ಲ. ಆ ಸ್ಮಶಾನ ಮೌನದಲ್ಲಿ ನಾನು ಮೌನವಾಗಿ ಕುಳಿತಿದ್ದೆ. ಮಹಾತ್ಮರು ಮಖ್‌ಬರವನ್ನು ದಾಟಿ ಹೋದರು. ಆದರೆ ಮರಣ ಹೊಂದಿ ಮಲಗಿರುವವರ ನಿಶ್ಶಬ್ಧತೆಯಲ್ಲಿ ಮಹಾತ್ಮರ ಬಿಕ್ಕಿ ಬಿಕ್ಕಿ ಅಳುವ ಶಬ್ದವು ಚೀರುವಂತೆ ನನ್...

ಅಹಂಕಾರದಿಂದ ನಾಶ

ಅಹಂಕಾರದಿಂದ ನಾಶ ಪ್ರವಾದಿ ﷺ ಹೇಳುತ್ತಾರೆ: ಸ್ವಯಂ ಅಹಂಕಾರ ವನ್ನು ತೋರಿಸುತ್ತಾ ದೊಡ್ಡತನದೊಂದಿಗೆ ನಡೆದರೆ, ಅಲ್ಲಾಹನು ಅವನನ್ನು ಅತ್ಯಂತ ಕೋಪದೊಂದಿಗೆ ನೋಡುತ್ತಾನೆ. (ಹದೀಸ್- ಇಮಾಂ ಅಹ್ಮದ್,ಇಬ್ನುಮಾಜ) ▪ಒಳಿತನ್ನು ಕಲಿಯಲು ಅಲ್ಲಾಹನು ನಮಗೆ ಅನುಗ್ರಹಿಸಲಿ. ಆಮೀನ್ 🤲🏻▪ ತಾಜುದ್ದೀನ್ ಸಖಾಫಿ,ನಾವುಂದ ✳✳✳✳✳✳✳✳✳✳

ಧರ್ಮವು ಬಹಳ ಸರಳವಾಗಿದೆ:

ಧರ್ಮವು ಬಹಳ ಸರಳವಾಗಿದೆ: ಮಾನವಕುಲದ ಸೃಷ್ಟಿಕರ್ತನು ಮಾನವಕುಲಕ್ಕಾಗಿ ಮೆಚ್ಚಿದ ಧರ್ಮವನ್ನು ಮಾನವಕುಲಕ್ಕೆ ಪರಿಚಯಿಸಿದವರು ಪ್ರವಾದಿ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರವರು ಈ ಹಿಂದೆ ಜಗತ್ತಿಗೆ ಬಂದ ಪ್ರವಾದಿಗಳು ತಂದಿದ್ದ ಧರ್ಮವನ್ನೇ ಅದರ ಅಂತಿಮ ರೂಪದಲ್ಲಿ ಜಗತ್ತಿನ ಮುಂದಿಟ್ಟರು. ಈ ಧರ್ಮವು ಪ್ರಕೃತಿ ಧರ್ಮವಾಗಿದೆ. ಇದು ಸಂಪೂರ್ಣವಾಗಿ ಮಾನವ ಪ್ರಕೃತಿಗೆ ಅನುಗುಣವಾದ ಧರ್ಮವಾಗಿದೆ. ಇದರ ವಿಶೇಷತೆಯೇನೆಂದರೆ ಇದು ಎಲ್ಲ ಜಟಿಲತೆಗಳಿಂದ ಮುಕ್ತವಾಗಿದೆ. ಇದು ಮಾನವನ ಮೇಲೆ ಯಾವುದೇ ಅಸ್ವಾಭಾವಿಕ ಅಥವಾ ಅನಗತ್ಯ ನಿರ್ಬಂಧವನ್ನು ಹೇರುವುದಿಲ್ಲ. ಮನುಷ್ಯನಿಗೆ ಪಾಲಿಸಲು ಸಾಧ್ಯವಾಗದಂತಹ ಯಾವುದೇ ಅಪ್ರಾಯೋಗಿಕ ಹೊಣೆಯನ್ನು ಹೊರಿಸುವುದಿಲ್ಲ. ಇಸ್ಲಾಮಿನ ಈ ಸರಳತೆಯೇ ಇಸ್ಲಾಮಿನ ಸೌಂದರ್ಯವಾಗಿದೆ. ಸಂ: ಕೆಎಂ ಜಲೀಲ್ ಕುಂದಾಪುರ ಕಾರ್ಯನಿರ್ವಾಹಕರು: ನೂರುಲ್ ಫಲಾಹ್ ಸಮೂಹ ಸಂಸ್ಥೆ(ರಿ) ============================= ಅಲ್ಲಾಹನು ಹರಾಂಗೊಳಿಸಿದ ಎಲ್ಲಾ ಕಾರ್ಯಗಳಿಂದ ದೂರವಿರಿ, ಪರಲೋಕದಿ ವಿಜಯಿಯಾಗಲು ಇಹಲೋಕವು ಸತ್ಕರ್ಮಗಳಿಂದ ಕೂಡಿರಲಿ, ಟಿವಿ, ಸಿರೀಯಲ್, ಮ್ಯೂಸಿಕ್‌ನೊಂದಿಗೆ ಎಲ್ಲ ರೀತಿಯ ಹರಾಂಗಳಿಂದ ಮುಕ್ತವಾಗಿ ನಮ್ಮ ದಿನನಿತ್ಯದ ಬದುಕಿನಲ್ಲಿ ಕುರ್‍ಆನ್ ಪಾರಾಯಣ ಅಧಿಕಗೊಳಿಸಿರಿ, ದುಆಃ ದ್ಸಿಕ್ರ್‌ಗಳೊಂದಿಗೆ, ಪ್ರತೀ ಕ್ಷಣವು ನಾಲಗೆಯೂ ಸ್ವಲಾತನ್ನು ಜಪಿಸುತ್ತಿರಲಿ. اللَّهُمَّ صَلِّ عَلَى سَيِّدِنَا مُحَمَّدٍ ا...

ಬೊಜ್ಜು ಕಡಿಮೆ ಮಾಡಲು ನಿಂಬೆ ಹಾಗು ಶುಂಠಿ:

ಬೊಜ್ಜು ಕಡಿಮೆ ಮಾಡಲು ನಿಂಬೆ ಹಾಗು ಶುಂಠಿ: ನಿಮ್ಮ ದೇಹದಲ್ಲಿನ ಬೇಡವಾದ ಬೊಜ್ಜನ್ನು ಕಡಿಮೆ ಮಾಡಲು ನಿಮ್ಮ ಮನೆಯಲ್ಲಿ ಸುಲಭವಾಗಿ ಸಿಗುವಂತಹ ಈ ಪದಾರ್ಥಗಳು ಸಾಕು. ಮನೆ ಮದ್ದುಗಳನ್ನು ಬಳಸಿ ನಿಮ್ಮ ದೇಹದ ಬೊಜ್ಜನ್ನು ಕಡಿಮೆ ಮಾಡಬಹುದು.  ▪️ಇತ್ತೀಚಿನ ದಿನಗಳಲ್ಲಿ ಕೆಲವರಲ್ಲಿ ಈ ಬೊಜ್ಜಿನ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿದೆ, ಇದರ ನಿವಾರಣೆಗೆ ಕಷ್ಟ ಪಡುತ್ತಿರುವ ಜನರು ಇದ್ದಾರೆ. ದೇಹದಲ್ಲಿ ಸರಿಯಾದ ವ್ಯಾಯಾಮ ಇಲ್ಲದೆ ಕೂತಿರುವ ಜಾಗದಲ್ಲಿ ಕೂತು ಕೆಲಸ ಮಾಡುವ ಕಾರಣದಿಂದ ದೇಹದಲ್ಲಿ ಬೊಜ್ಜು ಬೆಳೆಯಲಾರಂಭಿಸುತ್ತದೆ. ಬೊಜ್ಜು ನಿವಾರಣೆಗೆ ಬೇಕಾಗುವ ಪದಾರ್ಥಗಳು: ನಿಂಬೆಹಣ್ಣು, ಹಸಿ ಶುಂಠಿ, ಜೇನುತುಪ್ಪ.  ಇವುಗಳು ಸಾಕು ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡಲು. ▪️ಮೊದಲು ಒಂದು ಚಿಕ್ಕ ಪಾತ್ರೆಯಲ್ಲಿ 2ಅಥವಾ ಮೂರೂ ಲೋಟ ಬಿಸಿನೀರನ್ನು ಮಾಡಿಕೊಳ್ಳಬೇಕು, ಅದರಲ್ಲಿ 2-3 ನಿಂಬೆಯನ್ನು ರಿಂಗ್ ಆಕಾರದಲ್ಲಿ ಕಟ್ ಮಾಡಿ ಬಿಸಿನೀರಲ್ಲಿ ಹಾಕಬೇಕು. ನಂತರ ಶುಂಠಿಯನ್ನು ತುರಿದು ಬಿಸಿನೀರಲ್ಲಿ ಹಾಕಿ ಚೆನ್ನಾಗಿ ಮಿಶ್ರಣಮಾಡಬೇಕು. ▪️ಅರ್ಧ ಗಂಟೆಗಳ ಕಾಲ ಹಾಗೆ ತಣ್ಣಗಾಗಲು ಬಿಡಬೇಕು, ನಂತರ ಅದನ್ನು ಸೋಸಿಕೊಂಡು ಒಂದು ಗ್ಲಾಸ್ ನಲ್ಲಿ ಹಾಕಿ ಅದಕ್ಕೆ ಒಂದು ಚಮಚ ಜೇನು ತುಪ್ಪವನ್ನು ಬೆರಸಿ ಪ್ರತಿದಿನ ಬೆಳಗ್ಗೆ ಇದನ್ನು ಸೇವಿಸುವುದರಿಂದ ದೇಹದಲ್ಲಿನ ಬೊಜ್ಜನ್ನು ಬಹುಬೇಗನೆ ನಿವಾರಿಸಿಕೊಳ್ಳಬಹುದು.  ============================= ...

ನೆರೆಹೊರೆಯವರನ್ನು ಪ್ರೀತಿಸಿದ ಮಹಿಳೆ

ನೆರೆಹೊರೆಯವರನ್ನು ಪ್ರೀತಿಸಿದ ಮಹಿಳೆ ಪ್ರವಾದಿ ﷺ ರೊಂದಿಗೆ ಸ್ವಹಾಬಿಗಳು ಹೇಳುತ್ತಾರೆ: ಒಬ್ಬಾಕೆ ಮಹಿಳೆ ಖಡ್ಡಾಯ ನಮಾಝ್ ಮಾಡುತ್ತಾ ಮನೆಯಲ್ಲಿರುವ ಹಾಲನ್ನು ದಾನ ಮಾಡುತ್ತಾ ತನ್ನ ನೆರೆಹೊರೆಯರಿಗೆ ಯಾವುದೇ ತೊಂದರೆಗಳನ್ನು ನೀಡದೇ ಜೀವಿಸುತ್ತಾಳೆ. ಪ್ರವಾದಿ ﷺ ಹೇಳುತ್ತಾರೆ: ಆ ಮಹಿಳೆ ಸ್ವರ್ಗದಲ್ಲಾಗಿದ್ದಾಳೆ. (ಹದೀಸ್-ಅಹ್ಮದ್,ಹಾಕಿಂ) ▪ಒಳಿತನ್ನು ಕಲಿಯಲು ಅಲ್ಲಾಹನು ನಮಗೆ ಅನುಗ್ರಹಿಸಲಿ. ಆಮೀನ್ 🤲🏻▪ ತಾಜುದ್ದೀನ್ ಸಖಾಫಿ,ನಾವುಂದ ✳✳✳✳✳✳✳✳✳✳

ಇರಾಕಿ ವಿದ್ವಾಂಸರನ್ನು ಅಚ್ಚರಿ ಮೂಡಿಸಿದ ಫತ್ವಾ

ಇರಾಕಿ ವಿದ್ವಾಂಸರನ್ನು ಅಚ್ಚರಿ ಮೂಡಿಸಿದ ಫತ್ವಾ ورفع إليه سؤال في رجل حلف بالطلاق الثلاث إنه لا بدّ أن يعبد الله عز وجل عبادة ينفرد بها دون جميع الناس في وقت تلبسه بها، فماذا يفعل من العبادات؟؛فأجاب علي الفور :يأتى مكة ، ويخلى له المطاف، ويطوف سبعا وحده، وينحل يمينه" فأعجب علماء العراق، وكانوا قد عجزوا عن الجواب عنها (طبقات الشعرانى -١/١٢٧) ಒಮ್ಮೆ ಶೈಖ್‌‌ ಜೀಲಾನಿ (ರ)ರವರು ಸಮೀಪ ಒಂದು ಪ್ರಶ್ನೆಗೆ ಧಾರ್ಮಿಕ ತೀರ್ಪನ್ನು ಹುಡುಕುತ್ತಾ ಒಬ್ಬರು ಬಂದರು. ಪ್ರಶ್ನೆ:ಒಬ್ಬರು ತನ್ನ ಪತ್ನಿಯಲ್ಲಿ ಹೇಳಿದರು "ನನೊಂದು ಆರಾಧನೆಯನ್ನು ನಿರ್ವಹಿಸುಬೇಕೆಂದಿದ್ದೇನೆ. ನಾನು ಅದನ್ನು ನಿರ್ವಹಿಸುವಾಗ ಯಾವುದೇ ಒಬ್ಬನು ಆ ಆರಾಧನೆಯನ್ನು ಅದೇ ಸಮಯದಲ್ಲಿ ನಿರ್ವಹಿಸಬಾರದು.ಇಲ್ಲದಿದ್ದರೆ ನಾನು ನಿನ್ನನ್ನು ಮೂರು ತ್ವಲಾಖ್ ಹೇಳಿದೆ". ಇದರಿಂದ ರಕ್ಷಣೆ ಹೊಂದಲು ಈ ವ್ಯಕ್ತಿ ಯಾವ ಆರಾಧನೆಯನ್ನು ‌ನಿರ್ವಹಿಸಬೇಕು? ತಕ್ಷಣ ಶೈಖ್‌ರವರು ಈ ರೀತಿ ಉತ್ತರಿಸಿದರು: ಆ ವ್ಯಕ್ತಿ ಪವಿತ್ರ ಮಕ್ಕಾಗೆ ಹೋಗಬೇಕು ಅವರಿಗೆಬೇಕಾಗಿ ಮತ್ವಾಫ್(ತವಾಫ್ ನಿರ್ವಹಿಸುವ ಸ್ಥಳ ) ಬಿಟ್ಟು ಕೊಡಬೇಕು! ತದನಂತರ ಅವರೊಬ್ಬರೇ ತ್ವವಾಫ್ ನಿರ್ವಹಿಸಿದರೆ ಅವರು ತನ್ನ ಮಡದಿಯಲ್ಲಿ ಹೇಳಿದ ಆ ತಾಕೀತಿನಿಂದ ಖಂಡಿತವಾಗಿಯೂ ರಕ್ಷೆ ಹೊಂದುತ್ತಾರೆ.ಯುಕ್ತಿಯಿಂದ ಉದಯಿಸಿದ ಇಂತಹ ಉತ್ತರವನ್ನು ಕೇಳಿ ಇರಾಕ...

ಶಅ್‌ವಾನತುಲ್ ಆಬಿದ ಎಂಬ ಸ್ತ್ರೀ ರತ್ನ..!

  ಶಅ್‌ವಾನತುಲ್ ಆಬಿದ ಎಂಬ ಸ್ತ್ರೀ ರತ್ನ..! ಶಅ್‌ವಾನತುಲ್ ಆಬಿದ ಎಂದಾಗಿದೆ ಚರಿತ್ರೆಯಲ್ಲಿ ಅವರ ಹೆಸರು. ಆಬಿದತ್ ಎಂಬ ಹೆಸರು ಮಹದಿ ಶಅ್‌ವಾನತ್‌ರ ಜೊತೆ ಸೇರಿದ್ದು ಅವರು ಆರಾಧನೆಯಿಂದ ಸದಾ ಸಮಯವನ್ನು ವ್ಯಯಿಸಲು ತೊಡಗಿದ ನಂತರವಾಗಿದೆ. ರಾತ್ರಿಯಾದರೆ ಅಲ್ಲಾಹನ ಸ್ಮರಣೆಯಲ್ಲಿ ಸುಬ್‌ಹಿ ತನಕ ಅಳುವುದಾಗಿದೆ ಮಹದಿಯ ದಿನಚರಿ. ಮಹದಿಯ ಅಳುವನ್ನು ಕಂಡು ಅವರೊಂದಿಗೆ ಮರುಕಪಟ್ಟು ಹಲವರೂ ಉಪದೇಶದ ಧ್ವನಿಯಲ್ಲಿ ಅವರೊಂದಿಗೆ ಹೇಳಿದರು, "ನೀವು ನಿಮ್ಮ ಸ್ವ ಶರೀರವನ್ನು ಕಾಪಾಡಬೇಕು. ನೀವು ಹೀಗೆ ಅಳುವುದಾದರೆ ನಿಮ್ಮ ಶರೀರವು ಕ್ಷೀಣಿಸುವುದು. ಇದನ್ನು ಕೇಳಿದಾಗ ಮಹದಿ ಹೇಳುತ್ತಾರೆ...  "ಅಲ್ಲಾಹನಾಣೆ ನಾನು ಈ ಕಣ್ಣೀರಿಗೆ ಬದಲಾಗಿ ರಕ್ತವನ್ನು ಅತ್ತು ನನ್ನ ಶರೀರದ ರಕ್ತವೆಲ್ಲಾ ಬತ್ತಿ ಹೋಗುವುದನ್ನು ಇಷ್ಟಪಡುತ್ತೇನೆ". ಹೀಗೆ ಹೇಳಿದ ನಂತರ ಮಹದಿ ಹೇಳುತ್ತಾರೆ..  "ಯಾ ಖುದಾ.., ನಿನ್ನನ್ನು ತಿಳಿದ ನಂತರ ತಪ್ಪು ಮಾಡುವವನಿಗೆ ನೀನು ಕ್ಷಮೆ ನೀಡಬೇಕು ಅಲ್ಲಾಹ್..."  ಒಂದು ದಿನ ಮಹದಿ ಪ್ರಾರ್ಥಿಸುತ್ತಾರೆ..  "ಅಲ್ಲಾಹನೇ, ನಿನಗೆ ನನ್ನೊಂದಿಗಿನ ಸ್ನೇಹವಿದೆಯಲ್ಲವೇ... ಆ ಕಾರಣದಿಂದ ನನಗೆ ನೀನು ಕ್ಷಮೆ ನೀಡಬೇಕು".  ಈ ಪ್ರಾರ್ಥನೆಯನ್ನು ಕೇಳಿದಾಗ ಮಹದಿಯ ಸುತ್ತಲಿದ್ದವರು ಕೇಳಿದರು, "ನಿಮಗೆ ಅಲ್ಲಾಹನೊಂದಿಗೆ ಸ್ನೇಹವಿರಬಹುದು. ಆದರೆ ಅಲ್ಲಾಹನಿಗೆ ನಿಮ್ಮೊಂದಿಗೆ ಪ್ರೀತಿಯಿದೆಯೆಂದು ಹೇಗೆ ತಿಳಿಯಿತು.....

ಸಹನೆ

ಸಹನೆ ಸುಹೈಬ್(ರ.ಅ) ವರದಿ: ಸತ್ಯ ವಿಶ್ವಾಸಿಗಳ ಸ್ಥಿತಿ ಆಶ್ಚರ್ಯವೇ ಸರಿ. ಅವರ ಎಲ್ಲಾ ಕಾರ್ಯಗಳೂ ಅವನಿಗೆ ಒಳಿತಾಗಿವೆ. ಸತ್ಯ ವಿಶ್ವಾಸಿಗಳಲ್ಲದವರಿಗೆ ಇಂತಹ ಸ್ಥಿತಿ ಇಲ್ಲ. ಅವನು ಸಂತುಷ್ಟನಾದರೆ ಕೃತಜ್ಞತೆ ಪ್ರಕಟಿಸುತ್ತಾನೆ. ಅದು ಅವನ ಮಟ್ಟಿಗೆ ಒಳಿತಾಗುತ್ತದೆ. ಸಂಕಷ್ಟಗಳು ಬಂದೆರಗಿದಾಗ ಅವನು ಸಹನೆ ಕೈಗೊಳ್ಳುತ್ತಾನೆ. ಅದೂ ಅವನಿಗೆ ಒಳಿತಾಗುತ್ತದೆ. (ಮುಸ್ಲಿಮ್)  ಕೆಎಂ ಜಲೀಲ್ ಕುಂದಾಪುರ ಕಾರ್ಯನಿರ್ವಾಹಕರು: ನೂರುಲ್ ಫಲಾಹ್ ಸಮೂಹ ಸಂಸ್ಥೆ(ರಿ) ============================= ಅಲ್ಲಾಹನು ಹರಾಂಗೊಳಿಸಿದ ಎಲ್ಲಾ ಕಾರ್ಯಗಳಿಂದ ದೂರವಿರಿ, ಪರಲೋಕದಿ ವಿಜಯಿಯಾಗಲು ಇಹಲೋಕವು ಸತ್ಕರ್ಮಗಳಿಂದ ಕೂಡಿರಲಿ, ಟಿವಿ, ಸಿರೀಯಲ್, ಮ್ಯೂಸಿಕ್‌ನೊಂದಿಗೆ ಎಲ್ಲ ರೀತಿಯ ಹರಾಂಗಳಿಂದ ಮುಕ್ತವಾಗಿ ನಮ್ಮ ದಿನನಿತ್ಯದ ಬದುಕಿನಲ್ಲಿ ಕುರ್‍ಆನ್ ಪಾರಾಯಣ ಅಧಿಕಗೊಳಿಸಿರಿ, ದುಆಃ ದ್ಸಿಕ್ರ್‌ಗಳೊಂದಿಗೆ, ಪ್ರತೀ ಕ್ಷಣವು ನಾಲಗೆಯೂ ಸ್ವಲಾತನ್ನು ಜಪಿಸುತ್ತಿರಲಿ. اللَّهُمَّ صَلِّ عَلَى سَيِّدِنَا مُحَمَّدٍ النَّبِيِّ الأُمِّيِّ الْحَبِيبِ الْعَالِي الْقَدْرِ الْعَظِيمِ الْجَاهِ وَعَلَى آلِهِ وَصَحْبِهِ وَسَلِّمْ. ============================= Let me recommend you this noorulfalah application https://bit.ly/3qsRGcF ✤𝙇𝙞𝙠𝙚 & 𝙎𝙝𝙖𝙧𝙚✤ ✦𝙋𝙧𝙖𝙮 𝙛𝙤𝙧 𝙪𝙨 ✦ 𝗡𝗢𝗢𝗥-...

ಮದರಸ ಕಲಿಯುತ್ತಿದ್ದಾಗ ಮಲಕುಗಳು ಭೇಟಿಯಾಗುತ್ತಿದ್ದರು!

ಮದರಸ ಕಲಿಯುತ್ತಿದ್ದಾಗ ಮಲಕುಗಳು ಭೇಟಿಯಾಗುತ್ತಿದ್ದರು! أنه سئل:متى علمت أنك ولي لله تعالى؟قال: كنت وأنا ابن عشر سنين في بلدنا أخرج من داري وأذهب إلى المكتب فأرى الملائكة عليهم السلام تمشي حولي , فإذا وصلت إلى المكتب سمعت الملائكة يقولون:أفسحوا الطريق لولي الله حتى يجلس "  فمر بنا رجل لم أعرفه يومئذ فسمع الملائكة يومئذ تقول ذلك فقال لأحدهم ما هذا الصبي فقال له يكون له شأن عظيم هذا يعطى فلا يمنع ويمكن فلا يحجب ويقرب فلا يمكر به ثم عرفت ذلك الرجل بعد أربعين سنة فإذا هو من ابدال ذلك الوقت-(بهجة الأسرار-٢١) ಶೈಖ್ ಅಬ್ದುರ್ರಝಾಖ್ (ರ) ವಿವರಿಸುತ್ತಾರೆ:ಓರ್ವರು ಶೈಖ್ ಅಬ್ದುಲ್ ಖಾದಿರ್(ರ)ರವರ ಬಳಿ ಬಂದು ತಾವು ಅಲ್ಲಾಹನ ವಲಿಯ್ಯ್ ಎಂದು ತಮಗೆ ಯಾವಾಗ ತಿಳಿದದ್ದು.ನಾನು ಹತ್ತು ವಯಸ್ಸಿನ ವರೆಗೆ ತಾಯ್ನಾಡಿನಲ್ಲೇ ಇದ್ದೆ. ಮನೆಯಿಂದ ದೀನಿ ಜ್ಞಾನ ಕರಗತ ಮಾಡಲು ಮದರಸಕ್ಕೆ ಹೋಗುವಾಗ ಅಲ್ಲಿ ತನ್ನ ಸಹಪಾಠಿಗಳೊಂದಿಗೆ ಅಲ್ಲಾಹನ ಮಲಾಇಕತ್‌ಗಳು ನನ್ನ ಕುರಿತು ಈ ರೀತಿ ಹೇಳುದಾಗಿ ನಾ ಕೇಳಿದೆ "ಮಕ್ಕಳೇ ನೀವು ಅಲ್ಲಾಹನ ಇಷ್ಟ ದಾಸರಿಗೆ ಕೂರಲು ಸ್ಥಳ ಬಿಟ್ಟು ಕೊಡಿ"!!! ಹೀಗೆ ಒಂದು ದಿವಸ ನಮ್ಮ ಬಳಿ ಅಪರಿಚಿತ ವ್ಯಕ್ತಿಯೊಬ್ಬರು ಬಂದರು ಅವರೂ ಕೂಡ ಮಲಕುಗಳು ಈ ರೀತಿ ಹೇಳುವುದನ್ನು ಕೇಳಿದರು.ಆಗ ಮಲಕುಗಳಲ್ಲೊಬ್ಬರಲ್ಲಿ ಅವ...

ಉಮ್ಮಾ.. ನಾನೊಬ್ಬನನ್ನು ಕೊಂದೆ...!

  ಉಮ್ಮಾ.. ನಾನೊಬ್ಬನನ್ನು ಕೊಂದೆ...! ಅರ್ಧ ರಾತ್ರಿ ಕಳೆದರೂ ನಿದ್ರಿಸದ ರಬೀಅ್ ಬಿನ್ ಖುಸೈಮೀಯೊಂದಿಗೆ ಮಗಳು ಕೇಳುತ್ತಾರೆ "ಯಾಕಪ್ಪಾ ಅರ್ಧ ರಾತ್ರಿ ಜನರೆಲ್ಲಾ ನಿದ್ರಿಸಿದರೂ ತಾವು ನಿದ್ರಿಸದೆ ಕುಳಿತಿರುವುದು..? "ಅಲ್ಲ ಮಗಳೇ, ರಾತ್ರಿಯಲ್ಲಿ ಆಝ್ರಾಈಲ್ ನನ್ನ ರೂಹ್ ಹಿಡಿಯಲು ಬಂದರೆ ಎಂಬ ಭಯದಲ್ಲಿದ್ದೇನೆ.."  ಮಹಾತ್ಮರ ಉತ್ತರಿಸಿದರು. ಮತ್ತೊಮ್ಮೆ ನಿದ್ರಿಸದೆ ಅಳುತ್ತಾ ಕ್ಷೀಣಿಸಿದ್ದ ರಬೀಅ್ ಬಿನ್ ಖುಸೈಮೀ ಯೊಂದಿಗೆ ತಾಯಿ ಆಶ್ಚರ್ಯದೊಂದಿಗೆ ಕೇಳುತ್ತಾರೆ "ಇಷ್ಟೊಂದು ಅಳಲು ಮಾತ್ರ  ನೀನು ಯಾರನ್ನಾದರೂ ಕೊಂದಿದ್ದೀಯಾ...?" ಕೊಂದಿದ್ದರೆ ನಮಗೆ ಆ ಕೊಳ್ಳಲ್ಪಟ್ಟ ಮನೆಯವರೊಂದಿಗೆ ಕ್ಷಮೆ ಕೇಳೋಣ. ಅತ್ತು ಅತ್ತು ಕ್ಷೀಣಿಸಿದ ನಿನ್ನ ಈ ರೂಪವನ್ನು ಕಂಡು ಅವರು ಕ್ಷಮೆ ನೀಡದಿರಲಾರರು. ತನ್ನ ಮಗನನ್ನು ಏನೂ ಮಾಡಲಾರರೆಂಬ ವಿಶ್ವಾಸದಿಂದಲೂ, ಮಗನ ಅಳುವನ್ನೂ, ನಿದ್ರಿಸದಿರುವುದನ್ನೂ, ಕ್ಷೀಣವನ್ನೂ ಕಂಡಾಗ ಒಂದು ತಾಯಿಗೆ ಉಂಟಾಗುವ ವಾತ್ಸಲ್ಯದಿಂದ ಈ ಪ್ರಶ್ನೆಗಳು ಮಹಾತ್ಮರ ತಾಯಿಯಿಂದ ಉದಿಸಿದ್ದು.  ಅನಿರೀಕ್ಷಿತವಾಗಿ ಮಗನು ಉತ್ತರಿಸಿದರು..  "ಅದೇ, ನಾನೊಬ್ಬನನ್ನು ಕೊಂದಿದ್ದೇನೆ...!! ಆ ತಾಯಿಯು ಒಂದು ಕ್ಷಣ ಸ್ತಬ್ಧರಾಗಿ ನಿಂತರು.  'ತನ್ನ ಮಗ ಒಬ್ಬನನ್ನು ಕೊಲ್ಲುವನೇ' ಎಂಬ ಭಯದಿಂದ ಪ್ರಶ್ನೆಯು ಆ ತಾಯಿಯ ಕಣ್ಣುಗಳಿಂದ ಪ್ರತಿಫಲಿಸಿತು.  ರಬೀಅ್ ಮುಂದುವರೆದು ಹೇಳುತ್ತಾರೆ,  "ಉಮ್ಮಾ.., ನಾ...

ಹಲ್ಲು ನೋವು ಹಾಗೂ ಹುಳುಕಾಗಿದೆಯೇ.?

ಹಲ್ಲು ನೋವು ಹಾಗೂ ಹುಳುಕಾಗಿದೆಯೇ.? ಬಹಳಷ್ಟು ಜನರಲ್ಲಿ ಹಲ್ಲುಗಳು ಹುಳುಕಾಗಿರುತ್ತವೆ ಹಾಗೂ ಪದೇ ಪದೇ ಹಲ್ಲು ನೋವು ಕಾಣಿಸಿಕೊಳ್ಳುತ್ತದೆ, ಈ ನೋವು ಬಂದರೆ ಸಹಿಸಲು ಆಗುವುದಿಲ್ಲ ಅಷ್ಟೊಂದು ನೋವು ಕೊಡುತ್ತದೆ. ಇವುಗಳ ನಿವಾರಣೆಗೆ ಮನೆಯಲ್ಲಿಯೇ ಇದೆ ಔಷಧಿ ಅದು ಹೇಗೆ ಅನ್ನೋದನ್ನು ತಿಳಿಸುತ್ತವೆ ನೋಡಿ.  ಹಲ್ಲುಗಳಲ್ಲಿ ಹುಳುಕು ಹಲ್ಲು ಇದ್ದರೆ ಮನೆಯಲ್ಲಿನ ಈ ಪದಾರ್ಥಗಳನ್ನು ಬಳಸಿ ನಿವಾರಿಸಿಕೊಳ್ಳಬಹುದು:  ▪️ಅರ್ಧ ಚಮಚ ಅಡುಗೆ ಉಪ್ಪನ್ನು ಒಂದು ಗ್ಲಾಸ್ ನೀರಲ್ಲಿ ಹಾಕಿ ಅದನ್ನು ಚನ್ನಾಗಿ ಮಿಶ್ರಣ ಮಾಡಿ ಬಾಯಲ್ಲಿ ಹಾಕಿ ಮುಕ್ಕಳಿಸುವುದರಿಂದ ಹುಳುಕಾಗಿರುವ ಹಲ್ಲು ನಿವಾರಣೆಯಾಗುತ್ತದೆ ಉಪ್ಪಿನಂಶ ಹುಳುಕು ಹಲ್ಲನ್ನು ನಿವಾರಿಸುತ್ತದೆ ಹೀಗೆ ದಿನದಲ್ಲಿ ೩-೪ ಬಾರಿ ಮಾಡಬೇಕು. ▪️ಹುಳುಕು ಹಣ್ಣಿನಿಂದ ಹಲ್ಲು ನೋವು ಇದ್ದರೆ, ಮನೆಯಲ್ಲಿ ಹಸಿ ಈರುಳ್ಳಿಯನ್ನು ರೌಂಡ್ ಆಗಿ ಕಟ್ ಮಾಡಿ ಹಲ್ಲಿನ ಮೇಲೆ ಇಡುವುದರಿಂದ ಹಾಲಿನಲ್ಲಿರುವ ಕೆಟ್ಟ ಬ್ಯಾಕ್ಟೀರಿಯಾಗಳು ನಿವಾರಣೆಯಾಗಿ ಹಲ್ಲು ನೋವು ಕಡಿಮೆಯಾಗುತ್ತದೆ. ಸುಲಭವಾಗಿ ಪರಿಹರಿಸುವ ಈರುಳ್ಳಿ ಹಲ್ಲು ನೋವಿಗೆ ಮನೆಮದ್ದಾಗಿದೆ. ▪️ಹುಳುಕು ಹಲ್ಲು ನಿವಾರಿಸುವ ಮತ್ತೊಂದು ವಿಧಾನ ಅಂದರೆ, ಒಂದು ಗ್ಲಾಸ್ ಬಿಸಿನೀರಿನಲ್ಲಿ ಎರಡು ಪೇರಳೆ ಎಲೆ ಹಾಗು ಒಂದು ಸ್ಪೂನ್ ಉಪ್ಪನ್ನು ಹಾಕಿ ೨೦ ನಿಮಿಷಗಳ ಕಾಲ ಹಾಗೆ ಬಿಡಿ. ನಂತರ ಆ ನೀರನ್ನು ಬಾಯಲ್ಲಿ ಹಾಕಿ ಮುಕ್ಕುಳಿಸಿ ಹುಳುಕು ಹಲ್ಲು ನಿವಾರಣೆಯಾಗುತ್ತದೆ....

ತಾಯಿ-ತಂದೆ:

ತಾಯಿ-ತಂದೆ: ಒಮ್ಮೆ ಒಬ್ಬ ವ್ಯಕ್ತಿಯು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರವರ ಸನ್ನಿಧಿಗೆ ಬಂದು ನನ್ನ ಸದ್ವರ್ತನೆಗೆ ಅತಿ ಹೆಚ್ಚು ಅರ್ಹರು ಯಾರು? ಎಂದು ಪ್ರಶ್ನಿಸಿದರು. ಆಗ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ನಿನ್ನ ತಾಯಿ ಎಂದು ಉತ್ತರಿಸಿದರು. ಆ ವ್ಯಕ್ತಿ ಬಳಿಕ ಯಾರು?ಎಂದು ಪ್ರಶ್ನಿಸಿದರು. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ನಿನ್ನ ತಾಯಿ ಎಂದರು. ಆ ವ್ಯಕ್ತಿ ಪುನಃ ಆನಂತರ ಯಾರು? ಎಂದು ಕೇಳಿದರು. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ನಿನ್ನ ತಾಯಿ ಎಂದು ಉತ್ತರಿಸಿದರು. ಅವರ ಬಳಿಕ ಯಾರು? ಎಂದು ಅವರು ಮತ್ತೆ ಪ್ರಶ್ನಿಸಿದಾಗ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ನಿನ್ನ ತಂದೆ ಎಂದು ಹೇಳಿದರು.  [ಅಬೂಹುರೈರಾ(ರ.ಅ)ರವರಿಂದ ವರದಿ:]  (ಬುಖಾರಿ, ಮುಸ್ಲಿಂ) ಕೆಎಂ ಜಲೀಲ್ ಕುಂದಾಪುರ ಕಾರ್ಯನಿರ್ವಾಹಕರು: ನೂರುಲ್ ಫಲಾಹ್ ಸಮೂಹ ಸಂಸ್ಥೆ(ರಿ) ============================= ಅಲ್ಲಾಹನು ಹರಾಂಗೊಳಿಸಿದ ಎಲ್ಲಾ ಕಾರ್ಯಗಳಿಂದ ದೂರವಿರಿ, ಪರಲೋಕದಿ ವಿಜಯಿಯಾಗಲು ಇಹಲೋಕವು ಸತ್ಕರ್ಮಗಳಿಂದ ಕೂಡಿರಲಿ, ಟಿವಿ, ಸಿರೀಯಲ್, ಮ್ಯೂಸಿಕ್‌ನೊಂದಿಗೆ ಎಲ್ಲ ರೀತಿಯ ಹರಾಂಗಳಿಂದ ಮುಕ್ತವಾಗಿ ನಮ್ಮ ದಿನನಿತ್ಯದ ಬದುಕಿನಲ್ಲಿ ಕುರ್‍ಆನ್ ಪಾರಾಯಣ ಅಧಿಕಗೊಳಿಸಿರಿ, ದುಆಃ ದ್ಸಿಕ್ರ್‌ಗಳೊಂದಿಗೆ, ಪ್ರತೀ ಕ್ಷಣವು ನಾಲಗೆಯೂ ಸ್ವಲಾತನ್ನು ಜಪಿಸುತ್ತಿರಲಿ. اللَّهُمَّ صَلِّ عَلَى سَيِّدِنَا مُحَمَّدٍ ال...

ಅಲ್ಲಾಹನ ಭರವಸೆಯೊಂದೇ ಸಾಕು:

ಅಲ್ಲಾಹನ ಭರವಸೆಯೊಂದೇ ಸಾಕು: ಇಬ್ನ್ ಅಬ್ಬಾಸ್(ರ.ಅ) ಅವರಿಂದ ವರದಿ:  ಪ್ರವಾದಿ ಇಬ್ರಾಹಿಮ್‌(ಅಲೈಹಿವಸಲ್ಲಮ್)ರವರು ಅಗ್ನಿಕುಂಡಕ್ಕೆ ಎಸೆಯಲ್ಪಟ್ಟಾಗ ನಮಗೆ ಅಲ್ಲಾಹನು ಸಾಕು ಭರವಸೆಯಿಡಲು ಅತ್ಯುತ್ತಮನು (ಹಸ್ಬುನಲ್ಲಾಹ್ ವನಿಅ್‌ಮಲ್ ವಕೀಲ್) ಎಂದು ಹೇಳಿದ್ದರು. ಪ್ರವಾದಿ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಕೂಡಾ ಹಾಗೆ ಹೇಳಿದ್ದಾರೆ. ಜನರು ನಿಮ್ಮನ್ನು ನಾಶಪಡಿಸಲು ಒಗ್ಗೂಡಿದ್ದಾರೆ. ನೀವು ಭಯಪಡಿರಿ. ಎಂದು ಹೇಳಲ್ಪಟ್ಟಾಗ ಅವರ (ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಮತ್ತು ಬದ್‌ರ್ ಯುದ್ಧದಲ್ಲಿ ಪಾಲ್ಗೊಂಡವರು) ಈಮಾನ್ ವರ್ಧಿಸಿ ಅವರು ಈ ರೀತಿ ಹೇಳಿದರು, ನಮಗೆ ಅಲ್ಲಾಹನು ಸಾಕು ಭರವಸೆಯಿಡಲು ಆತನೇ ಅತ್ಯುತ್ತಮನು.(ಬುಖಾರಿ)  ಕೆಎಂ ಜಲೀಲ್ ಕುಂದಾಪುರ ಕಾರ್ಯನಿರ್ವಾಹಕರು: ನೂರುಲ್ ಫಲಾಹ್ ಸಮೂಹ ಸಂಸ್ಥೆ(ರಿ) ============================= ಅಲ್ಲಾಹನು ಹರಾಂಗೊಳಿಸಿದ ಎಲ್ಲಾ ಕಾರ್ಯಗಳಿಂದ ದೂರವಿರಿ, ಪರಲೋಕದಿ ವಿಜಯಿಯಾಗಲು ಇಹಲೋಕವು ಸತ್ಕರ್ಮಗಳಿಂದ ಕೂಡಿರಲಿ, ಟಿವಿ, ಸಿರೀಯಲ್, ಮ್ಯೂಸಿಕ್‌ನೊಂದಿಗೆ ಎಲ್ಲ ರೀತಿಯ ಹರಾಂಗಳಿಂದ ಮುಕ್ತವಾಗಿ ನಮ್ಮ ದಿನನಿತ್ಯದ ಬದುಕಿನಲ್ಲಿ ಕುರ್‍ಆನ್ ಪಾರಾಯಣ ಅಧಿಕಗೊಳಿಸಿರಿ, ದುಆಃ ದ್ಸಿಕ್ರ್‌ಗಳೊಂದಿಗೆ, ಪ್ರತೀ ಕ್ಷಣವು ನಾಲಗೆಯೂ ಸ್ವಲಾತನ್ನು ಜಪಿಸುತ್ತಿರಲಿ. اللَّهُمَّ صَلِّ عَلَى سَيِّدِنَا مُحَمَّدٍ النَّبِيِّ الأُمِّيِّ الْحَبِيبِ الْعَا...

ಶುಕ್ರವಾರ ಮುಂಜಾನೆ ಈ ದ್ಸಿಕ್ರ್ ಹೇಳಿದರೆ

ಶುಕ್ರವಾರ ಮುಂಜಾನೆ ಈ ದ್ಸಿಕ್ರ್ ಹೇಳಿದರೆ ﻋﻦ ﺃﻧﺲ رضي الله عنه، ﻋﻦ اﻟﻨﺒﻲّ -ﺻﻠﻰ  اﻟﻠﻪ ﻋﻠﻴﻪ ﻭﺳﻠﻢ- ﻗﺎﻝ: "ﻣﻦ ﻗﺎﻝ ﺻﺒﻴﺤﺔ ﻳﻮﻡ اﻟﺠﻤﻌﺔ ﻗﺒﻞ ﺻَﻼﺓِ اﻟﻐَﺪَاﺓِ: ﺃﺳْﺘَﻐْﻔِﺮُ اﻟﻠَّﻪَ اﻟَّﺬﻱ ﻻ ﺇِﻟﻪَ ﺇِﻻَّ ﻫُﻮَ اﻟﺤَﻲَّ اﻟﻘَﻴُّﻮﻡَ ﻭﺃﺗﻮﺏ ﺇﻟﻴﻪ؛ ﺛﻼﺙ ﻣﺮاﺕ، ﻏَﻔَﺮَ اﻟﻠَّﻪُ ﺗَﻌﺎﻟﻰ ﺫُﻧُﻮﺑَﻪُ ﻭَﻟَﻮْ ﻛَﺎﻧَﺖْ ﻣِﺜْﻞَ ﺯَﺑَﺪِ اﻟﺒَﺤْﺮِ". (أذكار لنووى:١/٩٢) ಶುಕ್ರವಾರ ಶುಭೋದಯ ಸುಬ್‌ಹ್ ನಮಾಝಿನ ಮುಂಚಿತವಾಗಿ ಯಾರಾದರೊಬ್ಬರು ಮೂರು ಬಾರಿ ಈ ದ್ಸಿಕ್ರ್‌ ನ್ನು ಹೇಳಿದರೆ أَسْتَغْفِرُ اللهَ الَّذِي لاإِلهَ إلَّا هُوَ الْحَيُّ القَيُّومُ وَأَتُوبُ إِلَيْه (٣) ಅಲ್ಲಾಹನು ಅವನ ಎಲ್ಲಾ ಸಣ್ಣ ಪಾಪಗಳನ್ನು ಕ್ಷಮಿಸುತ್ತಾನೆ.ಅದು ಸಮುದ್ರದ ಅಲೆಯಷ್ಟು ಇದ್ದರೂ ಸರಿ. (ಅದ್ಸ್‌ಕಾರ್-1/92) ✍ ನೌಷಾದ್ ಸಖಾಫಿ ಮುರ  ಪ್ರಚಾರ: NOOR-UL-FALAH ORGANIZATION

ನಿದ್ರೆ, ನಷ್ಟ ಹೊಂದುವ ರಾತ್ರಿಗಳು..!

  ನಿದ್ರೆ, ನಷ್ಟ ಹೊಂದುವ ರಾತ್ರಿಗಳು..! ಸಮಯ ಅರ್ಧ ರಾತ್ರಿ. ಕತ್ತಲಿನಲ್ಲಿ ಮತ್ತೊಂದು ಕತ್ತಲಾಗಿ ಮಹಾತ್ಮರಾದ ಹಸನುಲ್ ಬಸ್ವರಿ ರವರ ಮನೆ, ನಿಶೆಯ ನಿಶ್ಯಬ್ಧತೆಯಲ್ಲಿ ವಿಲೀನವಾಗಿತ್ತು. ತಕ್ಷಣ ಹಸನುಲ್ ಬಸ್ವರಿ ರವರ ಮನೆಯ ಕೋಣೆಯಿಂದ ಅಳುವಿನ ಶಬ್ಧ ಕೇಳಿ ಬಂತು. ಅತ್ಯಂತ ನಿಶ್ಯಬ್ಧವಾದ ಕಾರಣದಿಂದ ಅಳುವಿನ ಶಬ್ಧವು ಬಾನೆತ್ತರಕ್ಕೆ ಕೇಳುತ್ತಿತ್ತು. ಶಬ್ದವನ್ನು ಕೇಳಿದ ಮನೆಯವರೆಲ್ಲರೂ ಎಚ್ಚೆತ್ತರು. ಹಸನುಲ್ ಬಸ್ವರಿ ಅಳುತ್ತಿದ್ದಾರೆ. ಅವರ ಅಳುವನ್ನು ಕಂಡು ಮನೆ ಮಂದಿಯೆಲ್ಲಾ ಅತ್ತರು. ಅಳುವಿನೆಡೆಯಲ್ಲಿ ಯಾರೋ ಮಹಾತ್ಮರೊಂದಿಗೆ ಕೇಳಿದರು 'ಯಾಕಾಗಿ ಅಳುತ್ತಿದ್ದೀರಿ...?'  ಅದಕ್ಕೆ ಹಸನುಲ್ ಬಸ್ವರಿ ನೀಡಿದ ಉತ್ತರ ಅದ್ಭುತಗೊಳಿಸುವಂತಿತ್ತು. ಅದು ನನ್ನಿಂದ ಮೊದಲೊಮ್ಮೆ ಉಂಟಾದ ಒಂದು ತಪ್ಪು ನನಗೆ ಒಮ್ಮೆಲೆ ನೆನಪಿಗೆ ಬಂತು. ಅದನ್ನಾಲೋಚಿಸಿದಾಗ ನನಗೆ ಅಳದಿರಲು ಸಾಧ್ಯವಾಗಲಿಲ್ಲ.    ವರ್ಷಗಳ ಮುಂಚೆ ಯಾವಾಗಲೋ ಉಂಟಾದ ತಪ್ಪನ್ನು ಆಲೋಚಿಸಿ ನಿದ್ರೆಯಿಂದ ಥಟ್ಟನೆ ಎದ್ದು ಅಳುವ ಹಸನುಲ್ ಬಸ್ವರಿ ನಮ್ಮನ್ನು ಆಶ್ಚರ್ಯಪಡಿಸುವುದಿಲ್ಲವೇ..!? (ಇಲ್ಲಿ ಮಹಾತ್ಮರು ಮಾಡಿದ ತಪ್ಪು; ಒಂದೊಮ್ಮೆ ಮೊದಲೊಮ್ಮೆ ನಾವು ಹೇಳಿದ ಹಾಗೆ, ತನ್ನಿಂದುಂಟಾದ ಒಂದು ವಿಷಯವನ್ನು, ಅದು ಸಂಭವಿಸದಿದ್ದರೆ ಎಂದು ಹೇಳಿದ ಕಾರಣದಿಂದ ವರ್ಷಗಳ ಕಾಲ ಅತ್ತ ಮಹಾತ್ಮರ ರೀತಿಯಲ್ಲಾಗಬಹುದು. ಅವರಿಗೆ ಅದೆಲ್ಲಾ ದೊಡ್ಡ ಪಾಪಗಳಾಗಿವೆ. ಅಲ್ಲದೆ, ಹಸನುಲ್ ಬಸ್ವರಿ ...

ಪಾದಗಳಿಗೆ ಕೊಬ್ಬರಿ ಎಣ್ಣೆ:

ಪಾದಗಳಿಗೆ ಕೊಬ್ಬರಿ ಎಣ್ಣೆ:  ಪಾದಗಳಿಗೆ ಕೊಬ್ಬರಿ ಎಣ್ಣೆಯಿಂದ ಮಸಾಜ್ ಮಾಡುವುದರಿಂದ ಎಷ್ಟೆಲ್ಲ ಲಾಭಗಳಿವೆ ಎಂಬುದನ್ನು ನಾವಿಂದು ನಿಮಗೆ ತಿಳಿಸುತ್ತೇವೆ ನೋಡಿ. ಮಲಗುವ ಸಮಯದಲ್ಲಿ ಕೆಲವು ನಿಮಿಷ ಮಸಾಜ್ ಮಾಡುವುದರಿಂದ ಸಿಗುವ ಲಾಭವೇನು ಅನ್ನೋದು ಇಲ್ಲಿದೆ ನೋಡಿ. ▪️ಮೊದಲು ಕಾಲುಗಳನ್ನು ಸ್ವಚ್ಛವಾಗಿ ತೊಳೆದುಕೊಂಡ ನಂತರ ಅವುಗಳನ್ನು ಒಂದು ಬಟ್ಟೆಯಿಂದ ಚನ್ನಾಗಿ ಒರೆಸಿ, ನಂತರ ಎರಡು ಕಾಲಿನ ಪಾದಗಳನ್ನು ಎಣ್ಣೆಬಳಸಿ ಮಸಾಜ್ ಮಾಡುವುದರಿಂದ ದೇಹದಲ್ಲಿನ ಉಷ್ಣತೆ ನಿವಾರಣೆಯಾಗುತ್ತದೆ ಹಾಗು ಪದಗಳ ಉರಿ ಮತ್ತು ಕಣ್ಣು ಉರಿ ಸಮಸ್ಯೆ ಇದ್ದರೆ ನಿವಾರಣೆಯಾಗುತ್ತದೆ. ▪️ಅಷ್ಟೇ ಅಲ್ಲದೆ ಪ್ರತಿದಿನ ರಾತ್ರಿ ಮಲಗುವಾಗ ಎರಡೂ ಪಾದಗಳಿಗೆ ಈ ಎಣ್ಣೆಯಿಂದ ಮಸಾಜ್‌ ಮಾಡಿದರೆ ಕಣ್ಣಿನ ದೃಷ್ಟಿ ವೃದ್ಧಿಯಾಗುತ್ತದೆ. ಅಷ್ಟೇ ಅಲ್ಲದೆ ದೈಹಿಕ ಹಾಗು ಮಾನಸಿಕ ಒತ್ತಡ ನಿವಾರಣೆಯಾಗುತ್ತದೆ. ರಾತ್ರಿ ಮಲಗುವಾಗ ಸುಖವಾದ ನಿದ್ರೆ ನಿಮ್ಮದಾಗುತ್ತದೆ, ದೇಹದ ದಣಿವು ದೂರವಾಗುತ್ತದೆ.  ▪️ಸಾಸಿವೆ ಎಣ್ಣೆ ಹಾಗು ಕೊಬ್ಬರಿ ಎಣ್ಣೆ ಎರಡು ಕೂಡ ನಮ್ಮ ಆರೋಗ್ಯಕ್ಕೆ ಒಳ್ಳೆಯದು, ಇವುಗಳಲ್ಲಿ ಯಾವುದಾದರು ಒಂದನ್ನು ನೀವು ಬಳಸಬಹುದು.   ಇನ್ನಷ್ಟು ಉಪಯುಕ್ತವಾದ ಮನೆ ಔಷಧಿಗಳನ್ನು ನೂರುಲ್ ಫಲಾಹ್‌ದಲ್ಲಿ ಪಡೆಯಿರಿ =============================                          ಸಂಗ್ರ...

ಅವರೆಲ್ಲಿ ನಾವೆಲ್ಲಿ..!

  ಅವರೆಲ್ಲಿ ನಾವೆಲ್ಲಿ..! ಆ ದಿನ ನಮ್ಮ ಜುಮುಆ ಹಸನುಲ್ ಬಸ್ವರಿ ರವರ ಜೊತೆಯಾಗಿತ್ತು. ಜುಮುಆದ ನಂತರ ನಾವೆಲ್ಲರೂ ಮಹಾತ್ಮರಾದ ಹಸನುಲ್ ಬಸ್ವರಿಯವರ ಸುತ್ತಲೂ ನೆರೆದೆವು. ನಮ್ಮನ್ನು ಕಂಡದ್ದು ಮಹಾತ್ಮರು ಜೋರಾಗಿ ಅಳಲು ಪ್ರಾರಂಭಿಸಿದರು. ಏನು ಮಾಡಬೇಕೆಂದು ತೋಚದೆ ನಾವು ದಿಗ್ಭ್ರಾಂತರಾದೆವು.  ಸಲ್ಮತ್ ಬಿನ್ ಆಮೀನ್ ಸ್ವಲ್ಪ ತಡವರಿಸಿ ನಂತರ ಮುಂದುವರೆಸುತ್ತಾರೆ 'ನಾವು ಮಹಾತ್ಮರೊಂದಿಗೆ ಕೇಳಿದೆವು'  ಏನಾಯಿತು..?  ತಾವು ಅಳುವುದೇ..?  ಸ್ವರ್ಗ ಲಭಿಸುವುದೆಂದು ಸಂತೋಷವಾರ್ತೆ ತಿಳಿಸಲ್ಪಟ್ಟದ್ದಾಗಿ ಸ್ವಪ್ನವನ್ನು ಕಂಡ ವ್ಯಕ್ತಿಯಲ್ಲವೇ ತಾವು..! ಮತ್ತೇಕೆ ಹೀಗೆ ಅಳುತ್ತಿರುವುದು...?  ಆ ಪ್ರಶ್ನೆ ಬೇಕಾಗಿರಲಿಲ್ಲ. ಕಾರಣ ಆ ಪ್ರಶ್ನೆ ಮಹಾತ್ಮರ ಅಳುವಿನ ಶಕ್ತಿಯನ್ನು ಹೆಚ್ಚಿಸಿತ್ತು.  ಅಳು ನಿಲ್ಲಿಸಿದ ನಂತರ ಮಹಾತ್ಮರಾದ ಹಸನುಲ್ ಬಸ್ವರಿ ಹೇಳುತ್ತಾರೆ 'ನಾನು ಹೇಗೆ ಅಳದಿರಲಿ..! ಅಲ್ಲಾಹನ ರಸೂಲರ ಸ್ವಹಾಬಿಗಳಲ್ಲಿ ಯಾರಾದರೂ ನಮ್ಮ ಈ ಮಸ್ಜಿದ್ ಗೆ ಬರುವುದಾದರೆ ಈ ಕಿಬಲ ಮಾತ್ರವೇ ಅವರಿಗೆ ಸಿಗಬಹುದು. ಅಲ್ಲದೆ ನಮ್ಮಲೊಂದು ಹೇಳತಕ್ಕ ಸತ್ಕರ್ಮಗಳು ಯಾವುದೂ ಸಿಗಲಿಕ್ಕಿಲ್ಲ.  ದುಃಖದೊಂದಿಗೆ ಮಹಾತ್ಮರು ಮುಂದುವರೆಸುತ್ತಾರೆ 'ಸ್ವಹಾಬಿಗಳನ್ನೂ ನಮ್ಮನ್ನೂ ನಾವು ಹೇಗೆ ತಾರತಮ್ಯಗೊಳಿಸಲು ಸಾಧ್ಯ..?  ಅವರ ಹಾಗೂ ನಮ್ಮೆಡೆಯಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ಮನುಷ್ಯನನ್ನು ಅವನ ಅತ್ಯಾಸೆಗಳು ನಾಶ...

ಪ್ರತಿಯೊಂದು ಕಾರ್ಯವೂ ಸೂಕ್ಷ್ಮತೆಯಿಂದ

ಪ್ರತಿಯೊಂದು ಕಾರ್ಯವೂ ಸೂಕ್ಷ್ಮತೆಯಿಂದ ﻋَﻦِ اﻟْﺤَﺴَﻦِ رضي الله عنه ﻗَﺎﻝَ: «ﻣَﺎ ﺿَﺮَﺑْﺖُ ﺑِﺒَﺼَﺮِﻱ، ﻭَﻻَ ﻧَﻄَﻘْﺖُ ﺑِﻠِﺴَﺎﻧِﻲ، ﻭَﻻَ ﺑَﻄَﺸْﺖُ ﺑِﻴَﺪِﻱ، ﻭَﻻَ ﻧَﻬَﻀْﺖُ ﻋَﻠَﻰ ﻗَﺪَﻣَﻲَّ، ﺣَﺘَّﻰ ﺃَﻧْﻈُﺮَ ﻋَﻠَﻰ ﻃَﺎﻋَﺔٍ ﺃَﻭْ ﻋَﻠَﻰ ﻣَﻌْﺼِﻴَﺔٍ، ﻓَﺈِﻥْ ﻛَﺎﻧَﺖْ ﻃَﺎﻋَﺔٌ ﺗَﻘَﺪَّﻣْﺖُ ﻭَﺇِﻥْ ﻛَﺎﻧَﺖْ ﻣَﻌْﺼِﻴَﺔٌ ﺗَﺄَﺧَّﺮْﺕُ» (الورع لإبن أبي الدنيا:١١٦) ಹಸನ್ (ರ) ಹೇಳುತ್ತಾರೆ: ನಾನು ಯಾವುದಾದರೊಂದು ಕಾರ್ಯ ಕ್ರಮವನ್ನು ನೋಡಲೋ, ಏನಾದರು ಮಾತನಾಡಲೋ,ಯಾವುದೇ ವಸ್ತುವನ್ನು ಹಿಡಿಯಲೋ,ಅಥವಾ ಎಲ್ಲಿಗಾದರು ಹೋಗಲೋ ಉದ್ದೇಶಿಸಿದರೆ ಆ ಚಟುವಟಿಕೆ ಒಳಿತಿನದ್ದೋ ಅಥವಾ ಕೆಡುಕಿನಿಂದ ಬೆರೆತದ್ದೋ ಎಂದು ತಿಳಿಯದೆ ಯಾವುದಕ್ಕೂ ಸಜ್ಜಾಗಲ್ಲ. ಒಳಿತಿನದ್ದಾದರೆ ಅದಕ್ಕೆ ಮುನ್ನಡೆಯುವೆ, ಕೆಡುಕಿನದ್ದಾದರೆ ಅದರಿಂದ ಹಿಂಜರಿಯುವೆ. (ಅಲ್ ವರ‌ಅ್:116) ✍ ನೌಷಾದ್ ಸಖಾಫಿ ಮುರ  ಪ್ರಚಾರ: NOOR-UL-FALAH ORGANIZATION

ಅಲ್ಲಾಹನ ಭರವಸೆಯೊಂದೇ ಸಾಕು:

ಅಲ್ಲಾಹನ ಭರವಸೆಯೊಂದೇ ಸಾಕು: ಇಬ್ನ್ ಅಬ್ಬಾಸ್(ರ.ಅ) ಅವರಿಂದ ವರದಿ:  ಪ್ರವಾದಿ ಇಬ್ರಾಹಿಮ್‌(ಅಲೈಹಿವಸಲ್ಲಮ್)ರವರು ಅಗ್ನಿಕುಂಡಕ್ಕೆ ಎಸೆಯಲ್ಪಟ್ಟಾಗ ನಮಗೆ ಅಲ್ಲಾಹನು ಸಾಕು ಭರವಸೆಯಿಡಲು ಅತ್ಯುತ್ತಮನು(ಹಸ್ಬುನಲ್ಲಾಹ್ ವನಿಅ್‌ಮಲ್ ವಕೀಲ್) ಎಂದು ಹೇಳಿದ್ದರು. ಪ್ರವಾದಿ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಕೂಡಾ ಹಾಗೆ ಹೇಳಿದ್ದಾರೆ. ಜನರು ನಿಮ್ಮನ್ನು ನಾಶಪಡಿಸಲು ಒಗ್ಗೂಡಿದ್ದಾರೆ. ನೀವು ಭಯಪಡಿರಿ. ಎಂದು ಹೇಳಲ್ಪಟ್ಟಾಗ ಅವರ (ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಮತ್ತು ಬದ್‌ರ್ ಯುದ್ಧದಲ್ಲಿ ಪಾಲ್ಗೊಂಡವರು) ಈಮಾನ್ ವರ್ಧಿಸಿ ಅವರು ಈ ರೀತಿ ಹೇಳಿದರು, ನಮಗೆ ಅಲ್ಲಾಹನು ಸಾಕು ಭರವಸೆಯಿಡಲು ಆತನೇ ಅತ್ಯುತ್ತಮನು. (ಬುಖಾರಿ)  ಕೆಎಂ ಜಲೀಲ್ ಕುಂದಾಪುರ ಕಾರ್ಯನಿರ್ವಾಹಕರು: ನೂರುಲ್ ಫಲಾಹ್ ಸಮೂಹ ಸಂಸ್ಥೆ(ರಿ) ============================= ಅಲ್ಲಾಹನು ಹರಾಂಗೊಳಿಸಿದ ಎಲ್ಲಾ ಕಾರ್ಯಗಳಿಂದ ದೂರವಿರಿ, ಪರಲೋಕದಿ ವಿಜಯಿಯಾಗಲು ಇಹಲೋಕವು ಸತ್ಕರ್ಮಗಳಿಂದ ಕೂಡಿರಲಿ, ಟಿವಿ, ಸಿರೀಯಲ್, ಮ್ಯೂಸಿಕ್‌ನೊಂದಿಗೆ ಎಲ್ಲ ರೀತಿಯ ಹರಾಂಗಳಿಂದ ಮುಕ್ತವಾಗಿ ನಮ್ಮ ದಿನನಿತ್ಯದ ಬದುಕಿನಲ್ಲಿ ಕುರ್‍ಆನ್ ಪಾರಾಯಣ ಅಧಿಕಗೊಳಿಸಿರಿ, ದುಆಃ ದ್ಸಿಕ್ರ್‌ಗಳೊಂದಿಗೆ, ಪ್ರತೀ ಕ್ಷಣವು ನಾಲಗೆಯೂ ಸ್ವಲಾತನ್ನು ಜಪಿಸುತ್ತಿರಲಿ. اللَّهُمَّ صَلِّ عَلَى سَيِّدِنَا مُحَمَّدٍ النَّبِيِّ الأُمِّيِّ الْحَبِيبِ الْعَا...

ಫಿಖ್ಹ್ ಪ್ರಶ್ನೋತ್ತರ

   ಕೂದಲನ್ನು ದಸ್ಟ್ ಬಿನ್ ಗೆ ಹಾಕಬಹುದೇ...?    ಮಹಿಳೆಯರು ತಲೆ ಬಾಚಿದಾಗ ಉದುರುವ ಕೂದಲುಗಳನ್ನು ಹೂತು ಬಿಡಲು ಸ್ಥಳ ಸೌಕರ್ಯವಿಲ್ಲದಿದ್ದರೆ ಅದನ್ನು ಕಾಗದದಲ್ಲಿ ಸುರುಟಿ ಡಸ್ಟ್ ಬಿನ್ ಗೆ ಹಾಕಬಹುದೇ...?  ಡಸ್ಟ್ ಬಿನ್ ನಲ್ಲಿರುವ ಇತರ ತ್ಯಾಜ್ಯ ವಸ್ತುಗಳ ಜತೆಗೆ ಅದು ಹೂಳಲ್ಪಡುವ/ ತ್ಯಾಜ್ಯಗಳ ನಡುವೆ ಮುಚ್ಚಲ್ಪಡುವ ಸಾಧ್ಯತೆಗಳಿರುವುದರಿಂದ ಹಾಗೆ ಡಸ್ಟ್ ಬಿನ್ ಗೆ ಕಾಗದದಲ್ಲಿ ಸುರುಟಿ ಹಾಕುವುದಕ್ಕೆ ತೊಂದರೆಯಿಲ್ಲ.  🔹🔹🔹🔹🔹🔹🔹🔹🔹🔹🔹🔹🔹 NOORUL FALAH ISLAMIC ORGANISATION 

ಫಿಖ್ಹ್ ಪ್ರಶ್ನೋತ್ತರ

   ಮಗ್ರಿಬ್ ನಮಾಝ್ ಖಳಾ ಆಗುವುದು ಯಾವಾಗ...?    ಅಸ್ವರ್ ನಮಾಝ್ 5.30ರ ಹೊತ್ತಿಗೆ ಖಳಾ ಆಗುತ್ತದೆ ಎಂದು ಕೆಲವರು ಹೇಳುತ್ತಾರೆ. ಇದು ಸರಿಯೇ..? ಮಗ್ರಿಬ್ ನಮಾಝ್ ಎಷ್ಟು ನಿಮಿಷದೊಳಗೆ ಖಳಾ ಆಗುತ್ತದೆ..? ತಿಳಿಸಿ.  ಅಸ್ವರ್ ನಮಾಝ್ ನ ಸಮಯವೂ ಸೂರ್ಯಾಸ್ತಮಾನದ ತನಕವಿದೆ. ಸೂರ್ಯಾಸ್ತಮಾನದೊಂದಿಗೆ ಅಸ್ವರ್ ನಮಾಝ್ 'ಖಳಾ' ಆಗುತ್ತದೆ. ಒಂದು ವಸ್ತುವಿನ ನೆರಳು, (ಮಧ್ಯಾಹ್ನದ ನೆರಳನ್ನು ಹೊರತುಪಡಿಸಿ) ಆ ವಸ್ತುವಿನ ಎರಡರಷ್ಟು ಉದ್ದ ಇರುವಾಗ ಅಸ್ವರ್ ನಮಾಝ್ ನ ಉತ್ತಮ ಸಮಯ ಮುಗಿಯುತ್ತದೆ. ಆ ಸಮಯವಾಗುವುದಕ್ಕಿಂತ ಮುಂಚಿತವಾಗಿಯೇ ನಮಾಝ್ ನಿರ್ವಹಿಸಬೇಕು. *ಸ್ವಲಾತುಲ್ ಉಸ್ತಾ* ಎಂಬ ಮಹತ್ವವಿರುವ ಈ ನಮಾಝನ್ನು ಸಮಯದ ಕೊನೆಯ ತನಕ ಮುಂದೂಡಬಾರದು. ಆದರೂ ಸೂರ್ಯಾಸ್ತಮಾನದ ತನಕ ನಮಾಝನ್ನು 'ಅದಾ' ಎಂದೇ ಪರಿಗಣಿಸಲಾಗುವುದು.       ಪ್ರಬಲಾಭಿಪ್ರಾಯದಂತೆ ಮಗ್ರಿಬ್ ನಮಾಝ್ ನ ಸಮಯ ಪಶ್ಚಿಮ ದಿಗಂತದ ಕೆಂಪು ಮಾಯವಾಗುವ ತನಕ ಅಂದರೆ ಇಶಾ ತನಕವಿದೆ. ಇಶಾ ಆರಂಭವಾದೊಡನೆ ಮಗ್ರಿಬ್ ಖಳಾ ಆಗುತ್ತದೆ. ಐದು ರಕಅತ್ ನಮಾಝ್ ನಿರ್ವಹಿಸುವ ಹಾಗೂ ಅದಕ್ಕಾಗಿ ಸಿದ್ಧರಾಗಲು ಅಗತ್ಯವಿರುವ ಸಮಯ ಮುಗಿಯುವಾಗ ಮಗ್ರಿಬ್ ನ 'ಅದಾ' ಸಮಯ ಮುಗಿದು ನಂತರ 'ಖಳಾ' ಆಗುತ್ತದೆಯೆಂಬ ಒಂದು ಅಭಿಪ್ರಾಯವಿದೆ. ಆದರೆ ಮದ್ಸ್ ಹಬ್ ನಲ್ಲಿ ಪ್ರಬಲವಾದ ಅಭಿಪ್ರಾಯ ಮೊದಲು ಹೇಳಿದಂತೆ ಮಗ್ರಿಬ್ ನ ಸಮಯ ಇಶಾ ತನಕ ಇದೆ ಎಂಬುವುದಾಗಿದೆ. ಈ ಅಭಿಪ್ರಾಯ...

ಕಳ್ಳರ ಮನೆಗೆ ಸ್ಥಳಾಂತರಗೊಂಡ ಇಮಾಮರು!

ಕಳ್ಳರ ಮನೆಗೆ ಸ್ಥಳಾಂತರಗೊಂಡ ಇಮಾಮರು!  ▪️ ಪ್ರಖ್ಯಾತ ಪಂಡಿತ ಇಮಾಮ್ ಅಬೂ ಸಯೀದ್ (ರ) ರವರ ಮನೆಗೆ ಒಮ್ಮೆ ಕಳ್ಳರು ಬಂದರು. ಮನೆಗೆ ನುಗ್ಗಿದ ಕಳ್ಳರು ಮನೆಯಲ್ಲಿರುವ ಕೆಲವು ಸಾಮಾನುಗಳನ್ನು ಬಿಟ್ಟು ಉಳಿದ ಎಲ್ಲಾ ಸಾಮನುಗಳನ್ನು ಕದ್ದುಕೊಂಡು ಹೋದರು.     ▪️ ಅಷ್ಟರಲ್ಲಿ ಇಮಾಮರು ಅವರು ಬಾಕಿ ಬಿಟ್ಟ ಸಾಮಾನುಗಳನ್ನು ಹೊತ್ತುಕೊಂಡು ಅವರನ್ನು ಹಿಂಬಾಲಿಸಿ ನಡೆದರು. ಈ ಅದ್ಭುತ ದೃಶ್ಯವನ್ನು ಕಂಡ ಕಳ್ಳರು ಅವರಲ್ಲಿ ಕೇಳಿದರು. "ನೀವ್ಯಾಕೆ ಈ ಸರಂಜಾಮುಗಳನ್ನು ಹೊತ್ತುಕೊಂಡು ನಮ್ಮನ್ನು ಹಿಂಬಾಲಿಸಿ ಬರುತ್ತಿದ್ದೀರಿ.? ನಿಮಗೆ ಏನು ಬೇಕು?" ಇಮಾಮರು ಹೇಳಿದರು. "ಏನಿಲ್ಲ. ನೀವು ನನ್ನ ಮನೆಯ ಹೆಚ್ಚಿನ ಎಲ್ಲಾ ಅಗತ್ಯವಾದ ಸಾಮಾನುಗಳನ್ನು ಕದ್ದುಕೊಂಡು ಬಂದಿದ್ದೀರಿ. ಬರೀ ಕೆಲವು ಅತ್ಯಗತ್ಯವಲ್ಲದ ಸಾಮಾನುಗಳನ್ನು ಬಿಟ್ಟಿದ್ದೀರಿ. ನನಗೆ ಇನ್ನು ಈ ಮನೆಯಲ್ಲಿ ವಾಸಮಾಡಬೇಕಾದರೆ ಎಲ್ಲವೂ ಹೊಸತಾಗಿ ಖರೀದಿಸಬೇಕು. ಅದಕ್ಕೋಸ್ಕರ ನೀವು ವಾಸಿಸುವ ಮನೆಯಲ್ಲಿಯೇ ಬಿಡಾರಮಾಡುವ ಎಂಬ ಉದ್ದೇಶದಿಂದ ಈ ಸಾಮಾನುಗಳನ್ನು ಹೊತ್ತುಕೊಂಡು ನಿಮ್ಮೊಂದಿಗೆ ಬಂದಿದ್ದೇನೆ."    ▪️ ಇಮಾಮರಿಂದ ಈ ಬುದ್ಧಿಂತಿಕೆಯ ಮಾತುಗಳನ್ನು ಕೇಳಿದಾಗ ಕಳ್ಳರು ಕದ್ದ ಸಾಮಾನುಗಳನ್ನು ಅಲ್ಲೇ ಬಿಟ್ಟು ಹೋದರು. ✍🏻ಸಂಗ್ರಹ:ಚರಿತ್ರೆ ಗ್ರಂಥಗಳಿಂದ. ಯೂಸುಫ್ ನಬ್‌ಹಾನಿ ಕುಕ್ಕಾಜೆ  NOORUL FALAH ISLAMIC ORGANISATION 

ದಿನದ ಬೋಧನೆ 9

ನಿಷ್ಕಳಂಕವಾಗಿ ದ್ಸಿಕ್ರ್ ಹೇಳುವಾಗ ಮನಸ್ಸಿಗೆ ಆನಂದವನ್ನು ನೀಡುತ್ತದೆ. ದ್ಸಿಕ್ರ್ ಹೇಳುವ ರೀತಿಯಲ್ಲಿ ಹೇಳಿದರೆ ಮನಸ್ಸಿನ ಬೇಸರಗಳು, ಎಷ್ಟು ದೊಡ್ಡ ಟೆನ್'ಶನ್'ಗಳು ಮಾಯವಾಗುತ್ತದೆ. ಹಾಗೆ ದ್ಸಿಕ್ರ್ ಹೇಳುವಾಗ ಅಲ್ಲಾಹನಿಗೆ ಹತ್ತಿರವಾಗಲು ಕಾರಣವಾಗುತ್ತದೆ ಹಾಗೂ ನಮ್ಮ ಪಾಪಗಳು ಕ್ಷಮಿಸಲ್ಪಡುತ್ತದೆ.       ಇನ್ನು ದ್ಸಿಕ್ರ್'ನ ಕುರಿತು ಹದೀಸ್'ಗಳಲ್ಲಿ ತಿಳಿಯೋಣ.     "ನೀವು ಸದಾಕಾಲ ಅಲ್ಲಾಹನನ್ನು ಸ್ಮರಿಸುತ್ತಲಿರಿ. ದಾಸರ ಮಟ್ಟಿಗೆ ಇಹ ಮತ್ತು ಪರಲೋಕದಲ್ಲಿ ಅಲ್ಲಾಹನನ್ನು ಸ್ಮರಿಸುವುದಕ್ಕಿಂತ ಮಿಗಿಲಾದ ಸತ್ಕರ್ಮ ಮತ್ತೊಂದಿಲ್ಲ." (ಬೈಹಖೀ)     "ಸಂಜೆ ಮುಂಜಾನೆಗಳಲ್ಲಿ ದ್ಸಿಕ್ರ್ ಹೇಳುವುದು ಅಲ್ಲಾಹನ ಮಾರ್ಗದಲ್ಲಿ ಯುದ್ಧದಲ್ಲಿ ಏರ್ಪಡುವುದಕ್ಕಿಂತ ಶ್ರೇಷ್ಠವಾಗಿದೆ" (ದೈಲಮಿ)     "ಅಲ್ಲಾಹನ ಸ್ಮರಣೆ ರೋಗ ಶಮನವಾಗಿದೆ. ಜನರ ಸ್ಮರಣೆ ರೋಗವಾಗಿದೆ" (ಬೈಹಖೀ)      "ಸ್ವರ್ಗವಾಸಿಗಳು ಅಲ್ಲಾಹನಿಗೆ ದ್ಸಿಕ್ರ್ ಹೇಳುವ ಅವಕಾಶವು ಕೈ ತಪ್ಪಿ ಹೋದ ಕುರಿತಲ್ಲದೆ ಬೇರೆ ಯಾವುದರ ಬಗ್ಗೆಯೂ ದುಃಖಿಸಲಾರರು" (ಬೈಹಖೀ, ತಬ್ರಾನೀ)      "ಅಲ್ಲಾಹನ ಭಯ ನಿಮಿತ್ತ ಭೂಮಿಗೆ ಕಣ್ಣೀರು ತೊಟ್ಟಿಕ್ಕಿದರೆ ಅಂಥವನಿಗೆ ಲೋಕವಸಾನ ದಿನದಲ್ಲಿ ಶಿಕ್ಷೆ ಇರಲಾರದು" (ಹಾಕಿಮ್)      "ನನ್ನನ್ನು ದಾಸನೋರ್ವನು ಸ್ಮರಿಸಿದರೆ ನಾನು ಮಲಕ್'ಗಳ ಒಂದು ವಿಭಾಗದೊ...

ದಿನದ ಬೋಧನೆ 8

ದ್ಸಿಕ್ರ್ : ತಿಳಿಯಿರಿ, ಅಲ್ಲಾಹನ ಸ್ಮರಣೆಯಿಂದಲೇ ಮನಸ್ಸಮಾಧಾನ ಲಭ್ಯವಾಗುತ್ತದೆ.(ಸೂರತುಲ್ ಅರ್ರ'ಅದ್)      ದ್ಸಿಕ್ರ್'ನಿಂದ ದೈಹಿಕ, ಮಾನಸಿಕ ಹಾಗೂ ಆರ್ಥಿಕ ಕ್ಲೇಶಗಳು ದೂರವಾಗುವುದು. ಕಷ್ಟಕಾರ್ಪಣ್ಯ, ದುರಂತಗಳಿಂದ ರಕ್ಷಣೆ ಲಭಿಸುವುದು. ಸುದುದ್ದೇಶಗಳು ಪೂರ್ತಿಯಾಗುವುದು. ಜೀವನದಲ್ಲಿ ಸುಖ, ಶಾಂತಿ, ಒಳಿತು ನೆಲೆಗೊಳ್ಳುವುದು. ಏನಾದರೂ ತೊಂದರೆಗೆ ಸಿಲುಕಿದರೆ ದ್ಸಿಕ್ರ್ ನಿಮಿತ್ತ ಅದರಿಂದ ವಿಮೋಚನೆ ಪಡೆಯಲು ಸಾಧ್ಯವಿದೆ. ದ್ಸಿಕ್ರ್'ನಿಂದ ಮಾನಸಿಕ ಒತ್ತಡಗಳು ದೂರವಾಗಿ ಮನಸ್ಸಿಗೆ ಪ್ರಸನ್ನತೆ ಆವರಿಸಿಕೊಳ್ಳುವುದು.     ಅಲ್ಲಾಹನನ್ನು ಸ್ಮರಿಸುವ ಹೃದಯವು ಜೀವಂತವಿರುವ ಹಾಗೂ ಸ್ಮರಿಸದೇ ಇರುವ ಹೃದಯವು ಸತ್ತ ಶವದ ಹಾಗೆ ಎಂಬುವುದನ್ನು ಮರೆಯದಿರಿ.     ನಾವು ದಿನನಿತ್ಯ ಅಲ್ಲಾಹನ ಸ್ಮರಣೆಗಾಗಿ ಕನಿಷ್ಠ ವೇಳೆಯನ್ನಾದರೂ ಸದುಪಯೋಗಪಡಿಸಿಕೊಳ್ಳುವ ಸ್ವಭಾವವನ್ನು ರೂಢಿಸಿಕೊಳ್ಳಲು ಪ್ರಯತ್ನಿಸಬೇಕು.    ಕುರ್'ಆನಿನಲ್ಲಿ ಅನೇಕ ಕಡೆ ದ್ಸಿಕ್ರ್'ನ ಕುರಿತು ಹೇಳಿದೆ.    "ನೀವು ಯಶಸ್ವಿಯಾಗಲು ಧಾರಾಳವಾಗಿ ದ್ಸಿಕ್ರ್ ಹೇಳಿರಿ" (ಸೂರತ್ತುಲ್ ಜುಮುಅ)      "ನಮಾಝ್ ನಿರ್ವಹಿಸಿದ ಬಳಿಕ ನೀವು ನಿಂತುಕೊಂಡು, ಕೂತುಕೊಂಡು, ಒರಗಿಕೊಂಡು ಅಲ್ಲಾಹನ ದ್ಸಿಕ್ರ್ ಹೇಳಿರಿ" (ಸೂರತುನ್ನಿಸಾಅ್)      "ನೀವು ಅಲ್ಲಾಹನ ನಾಮವನ್ನು ಉಚ್ಚರಿಸಿರಿ (ಇತರ ಯೋಚನ...

ದಿನದ ಬೋಧನೆ 7

    ಅಬೂಹುರೈರಾ(ರ) ಅವರಿಂದ ನಿವೇದನೆ. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿದರು: ದ್ಸಿಕ್ರ್ ಹೇಳುವವರನ್ನು ಹುಡುಕಿಕೊಂಡು ದಾರಿಗಳಲ್ಲಿ ಸಂಚರಿಸುವ ಕೆಲವು ಮಲಕ್'ಗಳಿದ್ದಾರೆ. ಅಂಥವರನ್ನು ಕಂಡಾಗ ಅವರು "ನೀವು ನಿಮ್ಮ ಗಮ್ಯ ಸ್ಥಾನಕ್ಕೆ ಬನ್ನಿರಿ ಎಂದು ಹೇಳಿಕೊಂಡು ತಮ್ಮ ರೆಕ್ಕೆಗಳನ್ನು ಬಿಚ್ಚಿ ಪ್ರಥಮ ಆಕಾಶದ ತನಕ ಅವರನ್ನು ಆವರಿಸಿಕೊಳ್ಳುವರು. ಬಳಿಕ ಆ ಮಲಕ್'ಗಳು ಅಲ್ಲಾಹನ ಸನ್ನಿಧಿಗೆ ತೆರಳಿದಾಗ ಅಲ್ಲಾಹ್ ತಿಳಿದುಕೊಂಡೇ ಅವರನ್ನುದ್ದೇಶಿಸಿ ಕೇಳುತ್ತಾನೆ:     " ನನ್ನ ದಾಸರು ಏನನ್ನು ಹೇಳುತ್ತಿದ್ದಾರೆ"? ಮಲಕ್'ಗಳು ವಿವರಿಸುತ್ತಾರೆ‌. ಅವರು ನಿನ್ನ ಸ್ತುತಿ ಕೀರ್ತನೆಗಳಲ್ಲಿ ಮಗ್ನರಾಗಿ ನಿನ್ನ ಮಹಾನತೆ ಮತ್ತು ಶ್ರೇಷ್ಠತೆಯನ್ನು ಕೊಂಡಾಡುತ್ತಿದ್ದಾರೆ.   ಅಲ್ಲಾಹ್ : ಅವರು ನನ್ನನ್ನು ನೋಡಿದ್ದಾರೆಯೇ?   ಮಲಕ್'ಗಳು : ಇಲ್ಲ. ಅಲ್ಲಾಹನಾಣೆಗೂ ಸತ್ಯ. ಅವರು ನಿನ್ನನ್ನು ನೋಡಿಯೇ ಇಲ್ಲ.   ಅಲ್ಲಾಹ್ : ಹೀಗಿರುವಾಗ ನನ್ನನ್ನು ನೋಡಿರುತ್ತಿದ್ದರೆ ಸ್ಥಿತಿ ಏನಾಗಿರುತ್ತಿತ್ತು?   ಮಲಕುಗಳು : ಅವರು ನಿನ್ನನ್ನು ನೋಡಿರುತ್ತಿದ್ದರೆ ಅತ್ಯಧಿಕ ಆರಾಧಿಸುತ್ತಿದ್ದರು.     ಅಲ್ಲಾಹ್ : ಸರಿ, ಅವರು ನನ್ನೊಂದಿಗೆ ಏನನ್ನು ಅಪೇಕ್ಷಿಸುತ್ತಿದ್ದಾರೆ?   ಮಲಕುಗಳು : ಅವರು ನಿನ್ನಿಂದ ಸ್ವರ್ಗವನ್ನು ಅಪೇಕ್ಷಿಸುತ್ತಿದ್ದಾರೆ.   ಅಲ್ಲಾಹ್ : ಅವರು ಸ್ವರ್ಗವನ್ನು ನೋಡಿ...

ದಿನದ ಬೋಧನೆ 6

      ದ್ಸಿಕ್ರ್'ನ ಕುರಿತು ಇನ್ನೂ ಹಲವಾರು ಹದೀಸ್'ಗಳನ್ನು ಗಮನಿಸೋಣ.    ಒಬ್ಬ ದಾಸನು ನನ್ನ ಸ್ಮರಣೆಯಿಂದ ತನ್ನ ತುಟಿಗಳನ್ನು ಚಲಿಸುತ್ತಲಿದ್ದರೆ ನಾನು ಅವನ ಜೊತೆಯಲ್ಲಿರುವೆನು. (ಇಬ್ನು ಮಾಜ, ಹಾಕಿಮ್)     ಕರ್ಮಗಳಲ್ಲಿ ಯಾವುದು ಶ್ರೇಷ್ಠವೆಂದು ಅಲ್ಲಾಹನ ರಸೂಲರೊಂದಿಗೆ (ಸ್ವಲ್ಲಲ್ಲಾಹು ಅಲೈಹಿವಸಲ್ಲಮ್) ಕೇಳಿದಾಗ ಅವರು ಹೇಳಿದರು: ನಿನ್ನ ನಾಲಿಗೆ ಅಲ್ಲಾಹನ ದ್ಸಿಕ್ರ್'ನಿಂದ ಪಸೆಯಾಗಿದ್ದ ಸ್ಥಿತಿಯಲ್ಲಿ ಮರಣ ಹೊಂದುವುದಾಗಿದೆ.      ಒಮ್ಮೆ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಸ್ವಹಾಬಿಗಳೊಂದಿಗೆ ಕೇಳಿದರು: ಸತ್ಕರ್ಮದಲ್ಲಿ ಬೆಳ್ಳಿ ಬಂಗಾರದ ದಾನಕ್ಕಿಂತಲೂ ಶ್ರೇಷ್ಠವಾದ ಒಂದು ಕರ್ಮವನ್ನು ನಾನು ನಿಮಗೆ ತಿಳಿಸಿಕೊಡಲೇ? ಸ್ವಹಾಬಿಗಳು ಏಕಕಂಠದಲ್ಲಿ ಆಗಲಿ ಎಂದಾಗ ಅವರು ಹೀಗೆಂದರು: ಅದು ಅಲ್ಲಾಹನ ಸ್ಮರಣೆ(ದ್ಸಿಕ್ರ್)ಯಾಗಿದೆ.     ಅಲ್ಲಾಹನ ಸಂಪ್ರೀತಿಯನ್ನು ಅರಸಿಕೊಂಡು ದ್ಸಿಕ್ರ್ ಹೇಳಲು ಒಗ್ಗೂಡುವ ತಂಡದೊಂದಿಗೆ ಆಕಾಶಲೋಕದ ಒಂದು ಮಲಕ್ ಹೀಗೆನ್ನುವರು: ನಿಮ್ಮ ಪಾಪಗಳೆಲ್ಲ ಕ್ಷಮಿಸಲ್ಪಟ್ಟ ನೆಲೆಯಲ್ಲಿ ಚದುರಿಹೋಗಿರಿ. ನಿಮ್ಮ ಕೆಡುಕುಗಳು ಒಳಿತುಗಳಾಗಿ ಮಾರ್ಪಟ್ಟಿದೆ (ತಿರ್ಮುದಿ)     ಅಲ್ಲಾಹನ ದ್ಸಾತ್, ಸ್ವಿಫಾತ್ ಮುಂತಾದವುಗಳ ಕುರಿತು ಚಿಂತಿಸುವುದು ಹೃದಯದ ದ್ಸಿಕ್ರ್ ಆಗಿದೆ. ಅಲ್ಲಾಹನ ಸ್ತುತಿ, ಪ್ರಶಂಸೆ ಮೊದಲಾದವುಗಳ ಹೆಸರಲ್ಲಿ ಗುರುತಿಸಲ...

ದಿನದ ಬೋಧನೆ 5

        ದ್ಸಿಕ್ರ್'ನ ಶಿಷ್ಠಾಚಾರಗಳು : ಏಕಾಂಗಿ ಮತ್ತು ಸಾಮೂಹಿಕವಾಗಿ ದ್ಸಿಕ್ರ್ ಹೇಳುವಾಗ ಪಾಲಿಸಬೇಕಾದ ಹಲವಾರು ಶಿಷ್ಠಾಚಾರಗಳಿವೆ.    ದ್ಸಿಕ್ರ್ ಹೇಳುವವನ ವಸ್ತ್ರಗಳು ಶುಚಿಯಾಗಿರಬೇಕು, ವುಳೂ'ಅ್(ಅಂಗಸ್ನಾನ) ಇರಬೇಕು,  ಕೆಲಸ ಮತ್ತು ಆಹಾರ ಹಲಾಲ್ ಆಗಿರಬೇಕು, ಸಂಪೂರ್ಣ ಶುದ್ಧಿಯಾಗಿರಬೇಕು, ಪಶ್ಚಾತ್ತಾಪದ ಮೂಲಕ ಹೃದಯವನ್ನು ಶುದ್ಧೀಕರಿಸಬೇಕು, ಹೃದಯಕ್ಕೆ ಸಂಬಂಧಿಸಿದ ಎಲ್ಲಾ ರೋಗಗಳಿಂದ ಮುಕ್ತರಾಗಿರಬೇಕು, ಐಹಿಕ ಕಾರ್ಯಗಳ ಕುರಿತ ಎಲ್ಲಾ ಯೋಚನೆಗಳನ್ನು ಹೃದಯದಿಂದ ದೂರವಿಡಬೇಕು, ಶೈತಾನನ ದುರ್ಬೋಧನೆಗಳಿಂದ ಮನಸ್ಸಿನಲ್ಲಿ ಉದ್ಭವಿಸುವ ಕೆಟ್ಟ ವಿಚಾರಗಳಿಂದ ಮುಕ್ತರಾಗಲು ತೀವ್ರ ಪರಿಶ್ರಮ ಅಗತ್ಯ, ಅಲ್ಲಾಹನ ಮುಂದೆ ತನ್ನ ಕೊರತೆ ಮತ್ತು ವಿಧೆಯತೆಯನ್ನು ತೋಡಿಕೊಳ್ಳಬೇಕು, ನಿಂತುಕೊಂಡು ದ್ಸಿಕ್ರ್ ಹೇಳುವಾಗ ದ್ಸಿಕ್ರ್'ನಲ್ಲಿ ನಿರತರಾದವರ ಹಿಂದೆ ನಿಂತುಕೊಳ್ಳಬೇಕು.      ಕುಳಿತುಕೊಂಡು ದ್ಸಿಕ್ರ್ ಹೇಳುವಾಗ ಸಭೆಯ ಅಗತ್ಯವಾದ ಜಾಗಕ್ಕೆ ತೆರಳಿ ಕುಳಿತುಕೊಳ್ಳಬೇಕು, ದ್ಸಿಕ್ರ್ ಹೇಳುವಾಗ ಗಮನವು ಸಂಪೂರ್ಣವಾಗಿ ಅದರ ಮೇಲೆ ಕೇಂದ್ರೀಕರಿಸಬೇಕು, (ಅಶೃದ್ಧೆಯಿಂದ ದ್ಸಿಕ್ರ್ ಹೇಳಿದರೂ ಅದು ಸ್ವೀಕರಿಸಲ್ಪಡುತ್ತದೆ. ಆದರೆ ದ್ಸಿಕ್ರ್'ನ ಪೂರ್ಣ ಪ್ರತಿಫಲ ದೊರೆಯಬೇಕಾದರೆ ಏಕಾಗ್ರತೆ ಅಗತ್ಯ) ಸದ್ಗುಣ ಸಂಪನ್ನನಾಗಿರಬೇಕು. ದ್ಸಿಕ್ರ್ ಹೇಳಲು ಕೂರುವ ಜಾಗವು ಪ್ರತ್ಯೇಕವಾಗಿದ್ದು ಶುದ್ದಿಯಿಂದ ಕೂ...

ದಿನದ ಬೋಧನೆ 4

       ರಾತ್ರಿ ಇಶಾ, ರವಾತಿಬ್ ನಮಾಝ್ ನಂತರ ವಿತ್ರ್ ನಮಾಝನ್ನು ತಪ್ಪದೇ ನಿತ್ಯವು ನಿರ್ವಹಿಸಿರಿ,      ಬೆಳಿಗ್ಗೆ ಸೂರ್ಯೋದಯದ ನಂತರವಿರುವ ನಮಾಝ್ ಆಗಿದೆ ಲುಹಾ ನಮಾಝ್, ಚೆನ್ನಾಗಿ ವುಳೂ ನಿರ್ವಹಿಸಿ, ತಕ್ವಾ, ಇಖ್ಲಾಸ್'ನೊಂದಿಗೆ ಲುಹಾ ನಮಾಝ್ ನಿರ್ವಹಿಸುವುದು ಐಶ್ಚರ್ಯ ವೃದ್ಧಿಯಾಗಲು, ಜೀವನದಲ್ಲಿ ಬರ್ಕತ್ ಲಭ್ಯವಾಗಲು ಕಾರಣವಾಗುತ್ತದೆ. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿದರು; ಶರೀರದ ಎಲ್ಲಾ ನರನಾಡಿಗಳಿಗೆ ದಾನ ಕೊಡಬೇಕಾಗಿದೆ, ನರನಾಡಿಗಳ ದಾನವು ಅದು ಲುಹಾ ನಮಾಝ್ ಆಗಿದೆ. ಮನೆಯಲ್ಲಿರುವ ಮಹಿಳೆಯರೂ, ಮಕ್ಕಳೂ, ಗಂಡಸರೂ ಲುಹಾ ನಮಾಝನ್ನು ನಿರ್ವಹಿಸಲು ಮರೆಯದಿರಿ, ಕೆಲಸಕಾರ್ಯಗಳಿಗೆ ಹೋಗಬೇಕಾದ ಗಂಡಸರು (ಉದಾಹರಣೆಗೆ 9 ಗಂಟೆಗೆ ಕೆಲಸಕ್ಕೆ ಹೋಗಬೇಕಾದರೆ 8:30 ಕ್ಕೆ ಕನಿಷ್ಟ ಎರಡು ರಕ'ಅತ್ ಆದರೂ ಲುಹಾ ನಮಾಝ್ ನಿರ್ವಹಿಸಿರಿ.        ಮಹ್'ಶರಾ ಎಂಬ ಮೈದಾನದಲ್ಲಿ ವಿಚಾರಣೆಗಾಗಿ ಒಗ್ಗೂಡಿಸಲ್ಪಡುವ ದಿನ ಅಂದು ತಮ್ಮ ಫರ್'ಲ್ ನಮಾಝ್'ಗಳನ್ನು ಪರಿಶೋಧಿಸುವಾಗ ಅದರಲ್ಲಿ ತಪ್ಪುಗಳು ಸಂಭವಿಸಿದರೆ ಅವರು ಸುನ್ನತ್ ನಮಾಝ್'ಗಳನ್ನು ನಿರ್ವಹಿಸಿದ್ದಾರ ಎಂದು ನೋಡಲು ಮಲಕುಗಳಲ್ಲಿ ಅಲ್ಲಾಹನು ಆಜ್ಞಾಪಿಸುತ್ತಾನೆ. ಆಗ ಮಲಕುಗಳು ಸುನ್ನತ್ ನಮಾಝ್ ನಿರ್ವಹಿಸಿದ್ದಾರ ಎಂದು ದಾಖಲೆಗಳಲ್ಲಿ ನೋಡುತ್ತಾರೆ, ಸುನ್ನತ್ ನಮಾಝ್' ನಿರ್ವಹಿಸಿದ್ದಲ್ಲಿ ಫರ್'ಳ್ ನಮಾಝ್'ಗಳಲ್ಲಿ ಸಂಭ...

ದಿನದ ಬೋಧನೆ 3

       ನಮಾಝ್ ಸ್ವರ್ಗದ ಕೀಲಿಕೈ ಆಗಿದೆ. ನಮಾಝ್ ಮಾಡದವರಿಗೆ ಇಸ್ಲಾಮಿನಲ್ಲಿ ಯಾವ ಸ್ಥಾನಮಾನವೂ ಇಲ್ಲ. ಒಬ್ಬ ಮುಸ್ಲಿಮ್ ಹಾಗೂ ಕಾಫಿರ್ ನಡುವಿನ ವ್ಯತ್ಯಾಸ ನಮಾಝ್ ಆಗಿದೆ. ಮಸೀದಿಯ ಮಿನಾರಗಳಲ್ಲಿ ಐದು ಸಲ ಬಾಂಗಿನ ಧ್ವನಿಯು ಕೇಳುವಾಗ (ಬನ್ನಿ ನಮಾಝ್'ಗೆ, ಬನ್ನಿ ವಿಜಯಕ್ಕೆ ) ಎಂದು ಕರೆಯುವಾಗ ಇಂದು ಕೆಲವೊಂದು ಯುವಕರು ಮಸೀದಿಗೆ ನಮಾಝ್ ನಿರ್ವಹಿಸಲು ಹೋಗದೆ ಬೀದಿ ಬದಿಗಳಲ್ಲಿ, ಅಂಗಡಿ ಬಾಗಿಲುಗಳಲ್ಲಿ, ಕಟ್ಟೆಗಳಲ್ಲಿ ಕೂತು ಸಮಯವನ್ನು ವ್ಯರ್ಥ ಮಾಡುತ್ತಿರುವುದು ಕಾಣಬಹುದಾಗಿದೆ. ಯುವಕರು ಚಿಂತಿಸಬೇಕಾದ ಒಂದು ಕಾರ್ಯವಾಗಿದೆ ನಮಾಝ್. ಸಮಯದ ಆರಂಭದಲ್ಲಿ ಇಮಾಮ್ ಜಮಾಅತ್ತಾಗಿ ನಮಾಝ್ ನಿರ್ವಹಿಸುವುದು ಉತ್ತಮವಾಗಿದೆ. ನಮಾಝ್ ಕಳಾ ಮಾಡುವುದರಿಂದ ನಾಳೆ ಪರಲೋಕದಲ್ಲಿ ಕಠಿಣ ಶಿಕ್ಷೆಗೆ ಗುರಿಯಾಗುವಿರಿ. ಪರಲೋಕದಲ್ಲಿ ಮೊತ್ತ ಮೊದಲು ವಿಚಾರಣೆ ನಡೆಯುವುದು ನಮಾಝ್'ನ ಕುರಿತಾಗಿದೆ. ನಮಾಝ್ ನಿರ್ವಹಿಸುವಾಗ ಇಖ್ಲಾಸ್'ನೊಂದಿಗೆ ನಿರ್ವಹಿಸಿರಿ. ಸತ್ಯವಿಶ್ವಾಸಿಗಳಿಗೆ ನಮಾಝ್ ಆನಂದವನ್ನು ತರುತ್ತದೆ.     7 ವಯಸ್ಸಾಗುವಾಗ ನಿಮ್ಮ ಮಕ್ಕಳಿಗೆ ನಮಾಝ್ ಮಾಡಲು ಕಲಿಸಿರಿ, ನಮಾಝ್ ಬಗ್ಗೆ ಅಭಿರುಚಿ ಹುಟ್ಟಿಸಿರಿ. ಹತ್ತು ವರ್ಷ ಪ್ರಾಯವಾದಾಗ ನಮಾಝ್ ಮಾಡುವಲ್ಲಿ ಅವರು ಅಸಡ್ಡೆ ತೋರಿದರೆ ತಕ್ಕ ಶಿಕ್ಷೆ ನೀಡಿರಿ. ನಮಾಝ್'ನ ಬಗ್ಗೆ ಅಶ್ರದ್ಧೆಯನ್ನು ನೀವು ಸಹಿಸಲಾರಿರಿ ಎಂಬುದನ್ನು ನಿಮ್ಮ ಮಕ್ಕಳಿಗೆ ನಡೆನುಡಿಗಳಿಂದ ಸ್ಪಷ...

ದಿನದ ಬೋಧನೆ 2

    ಖಡ್ಡಾಯವಾದ ಐದು ವಕ್ತ್ ನಮಾಝ್'ನ ಮುಂಚೆ ಹಾಗೂ ನಂತರದ ರವಾತಿಬ್ ಸುನ್ನತ್ ನಮಾಝ್'ಗಳನ್ನು ನಿತ್ಯ ನಿರ್ವಹಿಸಿರಿ. ಅದರಲ್ಲೂ ಸುಬುಹಿಯ ಫರ್'ಳ್ ನಮಾಝ್'ಗೆ ಮುಂಚೆ ಇರುವ ಎರಡು ರಕ'ಅತ್ ಸುನ್ನತ್ ನಮಾಝನ್ನು ಯಾವತ್ತೂ ಕೈ ಬಿಡಬೇಡಿರಿ. ಆಕಾಶ ಭೂಮಿಯಲ್ಲಿರುವ ಎಲ್ಲಾ ವಸ್ತುಗಳಿಗಿಂತ ನಿಮಗೆ ಉತ್ತಮವಾದುದು ಸುಬುಹಿಯ ಮುಂಚೆ ಇರುವ ಎರಡು ರಕ'ಅತ್ ಸುನ್ನತ್ ನಮಾಝ್ ಆಗಿದೆ. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿದರು: *ಅಶ್ವ(ಕುದುರೆ) ಸೈನ್ಯ ನಿಮ್ಮನ್ನು ಬೆನ್ನೆಟ್ಟಿ ಬಂದರೂ ಸುಬುಹಿಯ ಮುಂಚೆ ಇರುವ ಎರಡು ರಕ'ಅತ್ ಸುನ್ನತ್ ನಮಾಝನ್ನು ಕೈ ಬಿಡದಿರಿ* ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಈ ನುಡಿಯು ಅದರ ಮಹತ್ವವನ್ನು ಎತ್ತಿ ಹೇಳುತ್ತಿದೆ. ಸುಬುಹಿಯ ಸಮಯವು ಬರ್ಕತ್'ನ ಸಮಯವಾಗಿದೆ. ಆ ಸಮಯದಲ್ಲಿ ನಿದ್ರೆ ಮಾಡದಿರಿ. ಸುಬುಹಿ ಬಾಂಗಿಗೆ ಸ್ವಲ್ಪ ಮುಂಚೆಯಾದರೂ ಎದ್ದೇಳಿರಿ. ಚೆನ್ನಾಗಿ ವುಳೂಅ್ ನಿರ್ವಹಿಸಿ ಕನಿಷ್ಟ ಎರಡು ರಕ'ಅತ್ ಆದರೂ ತಹಜ್ಜುದ್ ನಮಾಝ್ ನಿರ್ವಹಿಸಿ ನಂತರ ಅಲ್ಲಾಹನಲ್ಲಿ ಪಾಪ ವಿಮೋಚನೆ ಬೇಡಿರಿ. ಮಾಡಿದ ತಪ್ಪುಗಳಿಗೆ ಕಣ್ಣೀರಿಳಿಸಿ ಪಾಶ್ಚಾತ್ತಾಪ ಪಡಿರಿ. ಪ್ರಾರ್ಥನೆಗೆ ಉತ್ತಮ ಸಮಯವಾಗಿದೆ ಅದು. ಅರ್ಧರಾತ್ರಿಯಲ್ಲಿ ಎಲ್ಲರೂ ಒಳ್ಳೆಯ ನಿದ್ರೆಯಲ್ಲಿರುವಾಗ ಎದ್ದು ವುಳೂಅ್ ನಿರ್ವಹಿಸಿ ತನ್ನನ್ನು ಸೃಷ್ಟಿಸಿ ಪರಿಪಾಲಿಸುತ್ತಿರುವ, ತನಗೆ ಆರೋಗ್ಯವನ್ನು ನೀಡಿದ, ರಾಜಾಧಿರಾಜ...

ದಿನದ ಬೋಧನೆ 1

              ಒಳಿತಿನ ನುಡಿಗಳು (ಒಳಿತಿನ ಬೋಧಕರಾಗಿರಿ, ಕೆಡುಕನ್ನು ವಿರೋಧಿಸಿರಿ ನೀವು ವಿಜಯಿಗಳಾಗಲು.)         ಜನರೇ, ಅಲ್ಲಾಹನನ್ನು ಭಯಪಡಿರಿ. ನೀವು ತಕ್ವಾ ಉಳ್ಳವರಾಗಿ, ಐದು ವಕ್ತ್ ನಮಾಝನ್ನು ಕ್ಲಪ್ತ ಸಮಯಕ್ಕೆ ಸರಿಯಾಗಿ ನಿರ್ವಹಿರಿ. ನಮಾಝ್'ಗೆ ನಿಲ್ಲುವಾಗ ಇದು ನನ್ನ ಕೊನೆಯ ನಮಾಝ್ ಎಂಬ ರೀತಿಯಲ್ಲಾಗಲಿ ನಮ್ಮ ನಮಾಝ್. ನಮಾಝ್'ನಲ್ಲಿ ನಿಲ್ಲುವಾಗ ನಾನು ಅಲ್ಲಾಹನ ಮುಂದೆ ನಿಂತಿದ್ದೇನೆ ಎಂಬ ಭೋದವಿರಲಿ, ಪವಿತ್ರ ಕ'ಅಬಾದ ಒಡೆಯನಾದ ಅಲ್ಲಾಹನಿಗೆ ಸಾಷ್ಟಾಂಗ (ಸುಜೂದ್) ಮಾಡುವಾಗ ಒಬ್ಬ ದಾಸನು ತನ್ನ ಸೃಷ್ಟಿಕರ್ತನಾದ ಅಲ್ಲಾಹುವಿಗೆ ಹತ್ತಿರವಾಗುವ ಸಮಯವದು. ಆದ್ದರಿಂದ ಸುಜೂದ್'ಗಳನ್ನು ದೀರ್ಘಗೊಳಿಸಿರಿ. ತನ್ನನ್ನು ಸೃಷ್ಟಿಸಿ ಪರಿಪಾಲಿಸುತ್ತಿರುವ ರಾಜಾಧಿರಾಜನಾದ ಅಲ್ಲಾಹನಿಗೆ ವಿನಯದೊಂದಿಗೆ ಶಿರಬಾಗುವಾಗ(ಸುಜೂದ್) ಆ ಸಮಯದಲ್ಲಿ ಆಗುವ ಆನಂದವೇ ಹೇಳ ತೀರದು. ದಾಸನು ಅಲ್ಲಾಹನೊಂದಿಗೆ ಸಮೀಪವಾಗುವ ಸಮಯವದು ಆ ಪರಮಾನಂದವನ್ನು ರುಚಿಸಿ ನೋಡಿದವರಿಗೆ ಗೊತ್ತು ಆ ಸಂತೋಷ. ಆದ್ದರಿಂದ ತಕ್ವಾದೊಂದಿಗೆ, ಇಖ್ಲಾಸ್'ನೊಂದಿಗೆ ನಮಾಝ್ ನಿರ್ವಹಿಸಿರಿ, ಸುನ್ನತ್ ನಮಾಝ್'ಗಳನ್ನು ಹೆಚ್ಚಚ್ಚಾಗಿ ನಿರ್ವಹಿಸಿರಿ. ಪಾಪಗಳಿಂದ ದೂರ ನಿಲ್ಲಲು ಅದು ಕಾರಣವಾಗುವುದು ಎಂಬುವುದನ್ನು ಮರೆಯದಿರೋಣ. ಅಲ್ಲಾಹನು ತೌಫೀಕ್ ನೀಡಲಿ. ಅಲ್ಲಾಹನು ಇದನ್ನು ಸ್ವಾಲಿಹಾದ ಅಮಲಿನಲ್ಲಿ ಸೇರಿಸಲಿ. ಆಮೀನ್. ಹ...

ಪರನಿಂದನೆ:

ಪರನಿಂದನೆ:   ಒಮ್ಮೆ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು. ಪರನಿಂದೆ ಎಂದರೇನೆಂದು ನಿಮಗೆ ಗೊತ್ತೇ? ಎಂದು ಕೇಳಿದರು. ಸಹಾಬಿಗಳು ಅಲ್ಲಾಹನು ಮತ್ತು ಅವನ ಸಂದೇಶವಾಹಕ(ಸ.ಅ)ರು ಹೆಚ್ಚು ಬಲ್ಲವರು ಎಂದು ಪ್ರತಿಕ್ರಿಯಿಸಿದಾಗ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು.  ನೀವು ನಿಮ್ಮ ಸಹೋದರನ ಕುರಿತು ಅವನಿಗೆ ಅಪ್ರಿಯವಾದುದನ್ನು ಹೇಳುವುದು ಎಂದರು.  ಆ ಸಂದರ್ಭ ಒಬ್ಬರು ನಾನು ಹೇಳುವುದು ಸಹೋದರನಲ್ಲಿದ್ದರೆ? ಎಂದು ವಿಚಾರಿಸಿದಾಗ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಹೀಗೆಂದರು.  ನೀನು ಹೇಳಿದ ದೋಷವು ಅವನಲ್ಲಿದ್ದರೆ ಅದು ಗೀಬತ್ (ಪರನಿಂದೆ) ಎನಿಸುತ್ತದೆ. ಇನ್ನು ಅದು ಅವನಲ್ಲಿ ಇಲ್ಲವೆಂದಾದರೆ ನೀನು ಅವನ ಮೇಲೆ ಸುಳ್ಳಾರೋಪ ಹೊರಿಸಿದಂತಾಗುತ್ತದೆ. (ಅಬೂಹುರೈರ(ರ.ಅ)ರವರಿಂದ ವರದಿ:)  (ಮುಸ್ಲಿಮ್)  ಕೆಎಂ ಜಲೀಲ್ ಕುಂದಾಪುರ ಕಾರ್ಯನಿರ್ವಾಹಕರು: ನೂರುಲ್ ಫಲಾಹ್ ಸಮೂಹ ಸಂಸ್ಥೆ(ರಿ) ============================= ಅಲ್ಲಾಹನು ಹರಾಂಗೊಳಿಸಿದ ಎಲ್ಲಾ ಕಾರ್ಯಗಳಿಂದ ದೂರವಿರಿ, ಪರಲೋಕದಿ ವಿಜಯಿಯಾಗಲು ಇಹಲೋಕವು ಸತ್ಕರ್ಮಗಳಿಂದ ಕೂಡಿರಲಿ, ಟಿವಿ, ಸಿರೀಯಲ್, ಮ್ಯೂಸಿಕ್‌ನೊಂದಿಗೆ ಎಲ್ಲ ರೀತಿಯ ಹರಾಂಗಳಿಂದ ಮುಕ್ತವಾಗಿ ನಮ್ಮ ದಿನನಿತ್ಯದ ಬದುಕಿನಲ್ಲಿ ಕುರ್‍ಆನ್ ಪಾರಾಯಣ ಅಧಿಕಗೊಳಿಸಿರಿ, ದುಆಃ ದ್ಸಿಕ್ರ್‌ಗಳೊಂದಿಗೆ, ಪ್ರತೀ ಕ್ಷಣವು ನಾಲಗೆಯೂ ಸ್ವಲಾತನ್ನು ಜಪಿಸುತ್ತಿರಲಿ. اللَّهُمَّ صَلِ...

ಖಲೀಫಾ ಉಸ್ಮಾನ್(ರ) ಸ್ವಭಾವ

ಖಲೀಫಾ ಉಸ್ಮಾನ್(ರ) ಸ್ವಭಾವ عَنْ عَبْدِ الرَّحْمَنِ بْنِ عُثْمَانَ الْقُرَشِيِّ ، أَنّ رَسُولَ اللَّهِ صَلَّى اللَّهُ عَلَيْهِ وَسَلَّمَ دَخَلَ عَلَى ابْنَتِهِ وَهِي تَغْسِلُ رَأْسَ عُثْمَانَ رَضِيَ اللَّهُ عَنْهُمَا ، فَقَالَ : " يَا بُنَيَّةُ ، أحْسِني إِلَى أَبِي عَبْدِ اللَّهِ فَإِنَّهُ أَشْبَهُ أَصْحَابِي بِي خُلُقًا " . (المعجم الكبير للطبراني:٩٨) ಅಬ್ದುರ್ರಹ್ಮಾನ್ ಬ್‌ನು ಉಸ್ಮಾನ್(ರ)ರಿಂದ ನಿವೇದನೆ: ಬೀವಿ ರುಖಿಯ್ಯ (ರ)ಒಮ್ಮೆ ತನ್ನ ‌ಗಂಡ ಉಸ್ಮಾನ್(ರ) ರವರ ತಲೆ ತೊಳೆಯುವತ್ತಿರುವಾಗ ಮಗಳನ್ನು ನೋಡಲು ತಂದೆಯವರಾದ ಪ್ರವಾದಿ ﷺِ ರವರು ಬಂದರು. ಆ ಸಮಯದಲ್ಲಿ ನೆಬಿﷺِರವರು ಮಗಳೊಂದಿಗೆ ಈ ರೀತಿ‌‌ ಹೇಳಿದರು: ಓ ನನ್ನ ಪ್ರೀತಿಯ ಮಗಳೇ! ನೀ ಅಬೂ ಅಬ್‌ದಿಲ್ಲಾಹಿ(ಉಸ್ಮಾನ್.ರ) ರೊಂದಿಗೆ ಒಳ್ಳೆಯ ರೀತಿಯಲ್ಲಿ ನಡೆಯಬೇಕು ಕಾರಣ ನನ್ನ ಅನುಚರರ ಪೈಕಿ ಸದ್ಗುಣ ಸಂಸ್ಕಾರಗಳಲ್ಲಿ ನನ್ನೊಂದಿಗೆ ಅತ್ಯಂತ ತುಲನೆಯಿರುವ ವ್ಯಕ್ತಿ ಇವರಾಗಿದ್ದಾರೆ. (ಮುಅ್‌ಜಮುಲ್ ಕಬೀರ್:98) ✍ ನೌಷಾದ್ ಸಖಾಫಿ ಮುರ  ಪ್ರಚಾರ: NOOR-UL-FALAH ORGANIZATION

ಒಳಿತಿನೆಡೆಗೆ ಸುಲಭ ದಾರಿ

ಒಳಿತಿನೆಡೆಗೆ ಸುಲಭ ದಾರಿ ಅಬೂಹುರೈರಾ(ರ.ಅ) ಅವರಿಂದ ವರದಿ: ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ನನ್ನೊಂದಿಗೆ ಹೇಳಿದರು: ಸೂರ್ಯ ಉದಯಿಸುವ ಪ್ರತಿಯೊಂದು ದಿನ ಮನುಷ್ಯನು ತನ್ನ ಅವಯವಗಳ ಸಂಥಿಗಳ ಲೆಕ್ಕಾಚಾರ ಪ್ರಕಾರ ದಾನ ಮಾಡಬೇಕಾಗುತ್ತದೆ. ಇಬ್ಬರ ನಡುವೆ ನ್ಯಾಯಪಾಲಿಸುವುದು ದಾನವಾಗಿದೆ. ಒಬ್ಬರಿಗೆ ತನ್ನ ಸವಾರಿಯ ಮೇಲೆ ಏರಲು ಅಥವಾ ಸರಕನ್ನು ಏರಿಸಲು ಸಹಾಯ ಮಾಡುವುದು ದಾನವಾಗಿದೆ. ನಲ್ಮೆಯ ಮಾತು ದಾನವಾಗಿದೆ. ನಮಾಝಗೆ ತೆರಳುವಾಗ ಇಡುವ ಪ್ರತಿಯೊಂದು ಹೆಜ್ಜೆಯೂ ದಾನವಾಗಿದೆ. ದಾರಿಯಲ್ಲಿರುವ ಅಡೆತಡೆಗಳನ್ನು ನೀಗಿಸುವುದು ಕೂಡಾ ದಾನವಾಗಿದೆ. (ಬುಖಾರಿ, ಮುಸ್ಲಿಮ್)  ಕಾರ್ಯನಿರ್ವಾಹಕರು: ನೂರುಲ್ ಫಲಾಹ್ ಸಮೂಹ ಸಂಸ್ಥೆ(ರಿ) ============================= ಅಲ್ಲಾಹನು ಹರಾಂಗೊಳಿಸಿದ ಎಲ್ಲಾ ಕಾರ್ಯಗಳಿಂದ ದೂರವಿರಿ, ಪರಲೋಕದಿ ವಿಜಯಿಯಾಗಲು ಇಹಲೋಕವು ಸತ್ಕರ್ಮಗಳಿಂದ ಕೂಡಿರಲಿ, ಟಿವಿ, ಸಿರೀಯಲ್, ಮ್ಯೂಸಿಕ್‌ನೊಂದಿಗೆ ಎಲ್ಲ ರೀತಿಯ ಹರಾಂಗಳಿಂದ ಮುಕ್ತವಾಗಿ ನಮ್ಮ ದಿನನಿತ್ಯದ ಬದುಕಿನಲ್ಲಿ ಕುರ್‍ಆನ್ ಪಾರಾಯಣ ಅಧಿಕಗೊಳಿಸಿರಿ, ದುಆಃ ದ್ಸಿಕ್ರ್‌ಗಳೊಂದಿಗೆ, ಪ್ರತೀ ಕ್ಷಣವು ನಾಲಗೆಯೂ ಸ್ವಲಾತನ್ನು ಜಪಿಸುತ್ತಿರಲಿ. اللَّهُمَّ صَلِّ عَلَى سَيِّدِنَا مُحَمَّدٍ النَّبِيِّ الأُمِّيِّ الْحَبِيبِ الْعَالِي الْقَدْرِ الْعَظِيمِ الْجَاهِ وَعَلَى آلِهِ وَصَحْبِهِ وَسَلِّمْ. ===================...

ಅಲ್ಲಾಹು ಪ್ರೀತಿಸಿದರೆ!

ಅಲ್ಲಾಹು ಪ್ರೀತಿಸಿದರೆ! ﻋَﻦْ ﺃَﺑِﻲ ﻫُﺮَﻳْﺮَﺓَ، ﻋَﻦِ اﻟﻨَّﺒِﻲِّ ﺻَﻠَّﻰ اﻟﻠﻪُ ﻋَﻠَﻴْﻪِ ﻭَﺳَﻠَّﻢَ، ﻗَﺎﻝَ: " ﺇِﺫَا ﺃَﺣَﺐَّ اﻟﻠَّﻪُ اﻟﻌَﺒْﺪَ ﻧَﺎﺩَﻯ ﺟِﺒْﺮِﻳﻞَ: ﺇِﻥَّ اﻟﻠَّﻪَ ﻳُﺤِﺐُّ ﻓُﻼَﻧًﺎ ﻓَﺄَﺣْﺒِﺒْﻪُ، ﻓَﻴُﺤِﺒُّﻪُ ﺟِﺒْﺮِﻳﻞُ، ﻓَﻴُﻨَﺎﺩِﻱ ﺟِﺒْﺮِﻳﻞُ ﻓِﻲ ﺃَﻫْﻞِ اﻟﺴَّﻤَﺎءِ: ﺇِﻥَّ اﻟﻠَّﻪَ ﻳُﺤِﺐُّ ﻓُﻼَﻧًﺎ ﻓَﺄَﺣِﺒُّﻮﻩُ، ﻓَﻴُﺤِﺒُّﻪُ ﺃَﻫْﻞُ اﻟﺴَّﻤَﺎءِ، ﺛُﻢَّ ﻳُﻮﺿَﻊُ ﻟَﻪُ اﻟﻘَﺒُﻮﻝُ ﻓِﻲ اﻷَﺭْﺽِ. (صحيح البخاري :٣٢٠٩) ಅಬೂಹುರೈರ(ರ) ರಿಂದ ವರದಿ: ಪ್ರವಾದಿ ಶ್ರೇಷ್ಠರುﷺِ ರವರು ಹೇಳಿದರು ಅಲ್ಲಾಹನು ತನ್ನ ದಾಸನನ್ನು ಪ್ರೀತಿಸಿದರೆ ಜಿಬ್‌ರೀಲ್ (ಅ)ರನ್ನು ಕರೆದು ಈ ರೀತಿ ಹೇಳುವನು: ನಾನು‌ ಈ ದಾಸನನ್ನು ಪ್ರೀತಿಸುತ್ತಿದ್ದೇನೆ ನೀನು ಕೂಡ ಪ್ರೀತಿಸು! ಹಾಗೆ ಸಂದೇಶವಾಹಕರು ಆ ವ್ಯಕ್ತಿಯನ್ನು ಸ್ನೇಹಿತನನ್ನಾಗಿಸಿ ನಂತರ ಆಕಾಶದಲ್ಲಿ ನೆಲೆಸಿರುವ ಸರ್ವರನ್ನು ಕರೆದು ಹೇಳುತ್ತಾರೆ ಖಂಡಿತವಾಗಿಯೂ ಅಲ್ಲಾಹನು ಈ ಮಹೋನ್ನತ ವ್ಯಕ್ತಿಯನ್ನು ಪ್ರೀತಿಸುತ್ತಿದ್ದಾನೆ.ನೀವು ಸಹ ಅವರನ್ನು ಪ್ರೀತಿಸಿ! ಹಾಗೆ ಅವರೆಲ್ಲರೂ ಆ ದಾಸರನ್ನು ಪ್ರೀತಿಸುತ್ತಾರೆ.ಹಾಗೆಯೇ ಭೂ ಲೋಕದಲ್ಲಿ ಅವರಿಗೆ ಸರ್ವಾಂಗೀಕಾರ ಲಭಿಸುತ್ತದೆ. ‌ (ಸ್ವಹೀಹುಲ್ ಬುಖಾರಿ:3209) ✍ ನೌಷಾದ್ ಸಖಾಫಿ ಮುರ  ಪ್ರಚಾರ: NOOR-UL-FALAH ORGANIZATION

ಪಿಶಾಚಿ ಬರುವುದಿಲ್ಲ

ಪಿಶಾಚಿ ಬರುವುದಿಲ್ಲ وأخرج الدرامى عن ابن مسعود رضي الله عنه موقوفا "من قرأ أربع آيات من أول سورة البقرة وآية الكرسى وآيتين بعد آية الكرسى وثلاثا من آخر سورة البقرة لم يقربه ولا أهله يومئذ شيطان (خزينة الأسرار:٦٦) ಇಬ್ನ್ ಮಸ್‌ಊದ್ (ರ)ರವರಿಂದ ಹೇಳಿಕೆ: ಯಾರಾದರೂ ಸೂರಃ ಅಲ್ ಬಖರದ ಮೊದಲನೆಯ ನಾಲ್ಕು ಶ್ಲೋಕಗಳು ಹಾಗು ಆಯತುಲ್ ಕುರ್ಸಿಯ್ಯ್ ಮತ್ತೆ ಇದರ ನಂತರವಿರುವ ಎರಡು ಆಯತ್ ಹಾಗೂ ಬಖರ ಸೂರಃದ ಕೊನೆಯ ಮೂರು ಆಯತುಗಳು ಪಾರಾಯಣಗೈದರೆ ಆ ದಿನ ಅವನ ಬಳಿಯೂ ಅವನ‌ ಕುಟುಂಬದ ಬಳಿಯೂ ಪಿಶಾಚಿ ಬರುವುದಿಲ್ಲ.(ಖಝೀನತುಲ್ ಅಸ್ರಾರ್:66) ✍ ನೌಷಾದ್ ಸಖಾಫಿ ಮುರ  ಪ್ರಚಾರ: NOOR-UL-FALAH ORGANIZATION®

ನಿಸ್ವಾರ್ಥತೆ

ನಿಸ್ವಾರ್ಥತೆ ಇಬ್ನ್ ಅಬ್ಬಾಸ್(ರ.ಅ) ನಿವೇದನೆ: ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಅಲ್ಲಾಹನಿಂದ ಉಲ್ಲೇಖಿಸುತ್ತಾರೆ: ಅಲ್ಲಾಹನು ಒಳಿತು ಮತ್ತು ಕೆಡುಕುಗಳನ್ನು ನಿರ್ಣಯಿಸಿ ವಿವರಿಸಿಕೊಟ್ಟ. ಒಬ್ಬನು ಒಂದು ಸತ್ಕರ್ಮವನ್ನೆಸಗುವ ಸಂಕಲ್ಪ ಮಾಡಿದ ನಂತರ ಅದನ್ನು ಕಾರ್ಯರೂಪಕ್ಕೆ ತರಲು ಸಾಧ್ಯವಾಗದಿದ್ದರೂ ಅಲ್ಲಾಹನ ಸನ್ನಿಧಿಯಲ್ಲಿ ಅದೊಂದು ಪುಣ್ಯವಾಗಿ ದಾಖಲಿಸಲ್ಪಡುತ್ತದೆ. ಸಂಕಲ್ಪಿಸಿದ ಒಳಿತನ್ನು ಮಾಡಿದರೆ ಹತ್ತರಿಂದ ಏಳೂನೂರು ಮತ್ತು ಅದಕ್ಕಿಂತಲೂ ಮಿಗಿಲಾದ ಪುಣವಾಗಿ ದಾಖಲಿಸಲ್ಪಡುತ್ತದೆ. ಒಬ್ಬನು ಒಂದು ಕೆಡುಕು ಮಾಡಲಿಚ್ಚಿಸಿ ನಂತರ ಅದರಿಂದ ವಿಮುಖನಾದರೆ ಅದೊಂದು ಪುಣ್ಯವಾಗಿ ದಾಖಲಿಸಲ್ಪಡುತ್ತದೆ. ಇನ್ನು ಆ ಕೆಡುಕನ್ನು ಕಾರ್ಯ ರೂಪಕ್ಕೆ ತಂದರೆ ಅದನ್ನು ಕೇವಲ ಒಂದು ಕೆಡುಕಾಗಿ ಮಾತ್ರ ದಾಖಲಿಸಲಾಗುತ್ತದೆ. (ಬುಖಾರಿ, ಮುಸ್ಲಿಮ್)  ಕಾರ್ಯನಿರ್ವಾಹಕರು: ನೂರುಲ್ ಫಲಾಹ್ ಸಮೂಹ ಸಂಸ್ಥೆ(ರಿ) ============================= ಅಲ್ಲಾಹನು ಹರಾಂಗೊಳಿಸಿದ ಎಲ್ಲಾ ಕಾರ್ಯಗಳಿಂದ ದೂರವಿರಿ, ಪರಲೋಕದಿ ವಿಜಯಿಯಾಗಲು ಇಹಲೋಕವು ಸತ್ಕರ್ಮಗಳಿಂದ ಕೂಡಿರಲಿ, ಟಿವಿ, ಸಿರೀಯಲ್, ಮ್ಯೂಸಿಕ್‌ನೊಂದಿಗೆ ಎಲ್ಲ ರೀತಿಯ ಹರಾಂಗಳಿಂದ ಮುಕ್ತವಾಗಿ ನಮ್ಮ ದಿನನಿತ್ಯದ ಬದುಕಿನಲ್ಲಿ ಕುರ್‍ಆನ್ ಪಾರಾಯಣ ಅಧಿಕಗೊಳಿಸಿರಿ, ದುಆಃ ದ್ಸಿಕ್ರ್‌ಗಳೊಂದಿಗೆ, ಪ್ರತೀ ಕ್ಷಣವು ನಾಲಗೆಯೂ ಸ್ವಲಾತನ್ನು ಜಪಿಸುತ್ತಿರಲಿ. اللَّهُمَّ صَلِّ عَلَى سَيِّدِنَا مُحَ...

ಸುಖ ನಿದ್ರೆಗೆ:

ಸುಖ ನಿದ್ರೆಗೆ: ಮಲಗುವ ಮುನ್ನ ಜೇನು ಬೆರೆಸಿದ ಹಾಲು ಕುಡಿಯಿರಿ.  ಮಲಗುವ ಮುನ್ನ ಜೇನುಬೆರೆಸಿದ ಹಾಲನ್ನು ಕುಡಿಯುವುದು ಭಾರತದಲ್ಲಿ ನೂರಾರು ವರ್ಷಗಳಿಂದ ನಡೆದುಬರುತ್ತಿರುವ ಸಂಪ್ರದಾಯವಾಗಿದೆ. ಹಾಲು ಮತ್ತು ಜೇನು ಅತ್ಯುತ್ತಮ ಜೋಡಿಯಾಗಿದೆ. ಹಾಲಿನಲ್ಲಿರುವ ಟ್ರಿಫ್ಟೋಫ್ಯಾನ್ ಎಂಬ ಪೋಷಕಾಂಶವನ್ನು ದೇಹ ಹೀರಿಕೊಳ್ಳುವಂತಾಗಲು ಜೇನು ನೆರವು ನೀಡುತ್ತದೆ. ತನ್ಮೂಲಕ ಮೆದುಳಿಗೆ ಮುದನೀಡುವ ರಸದೂತದ ಮಟ್ಟವನ್ನು ಹೆಚ್ಚಿಸಲು ಹಾಗೂ ಸುಖನಿದ್ದೆ ಪಡೆಯಲು ನೆರವಾಗುತ್ತದೆ. =============================                          ಸಂಗ್ರಹ:                   ಮನೆ ಮದ್ದುಗಳು               ಸಂ: ✒️ಅಬೂರಿಫಾನ ============================= ನಿಮ್ಮ ಸುರಕ್ಷತೆಗೆ ಸಾಮಾಜಿಕ ಅಂತರವನ್ನು ಕಾಪಾಡಿ ಮಾಸ್ಕ್ ಉಪಯೋಗಿಸಿ. ಕುರ್‌ಆನ್ ದ್ಸಿಕ್ರ್‌ಗಳು ಪಠಿಸುತ್ತಿರಿ ಪ್ರತೀ ಕ್ಷಣವು ನಾಲಗೆಯೂ ಸ್ವಲಾತನ್ನು ಜಪಿಸುತ್ತಿರಲಿ. اللَّهُمَّ صَلِّ عَلَى سَيِّدِنَا مُحَمَّدٍ النَّبِيِّ الأُمِّيِّ الْحَبِيبِ الْعَالِي الْقَدْرِ الْعَظِيمِ الْجَاهِ وَعَلَى آلِهِ وَصَحْبِهِ وَسَلِّمْ. ============================= ✤𝙇...

ಪುತ್ರಿಯ ಸಂಕಷ್ಟ ಕಂಡು ಕಣ್ಣಂಚಿನಲ್ಲಿ ನೀರು ಜಿನುಗಿತು.!:

ಪುತ್ರಿಯ ಸಂಕಷ್ಟ ಕಂಡು ಕಣ್ಣಂಚಿನಲ್ಲಿ ನೀರು ಜಿನುಗಿತು.!: ಜಾಬಿರ್(ರ)ರವರಿಂದ ವರದಿ: ಒಂದು ಸಲ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಪುತ್ರಿ ಫಾತಿಮಾ(ರ.ಅ)ರವರ ಮನೆಗೆ ಬಂದರು. ಫಾತಿಮಾ(ರ.ಅ)ರವರು ಧಾನ್ಯವನ್ನು ಕುಟ್ಟಿ ಪುಡಿ ಮಾಡುತ್ತಿದ್ದರು. ಒಂಟೆಯ ರೋಮದಿಂದ ನೇಯ್ದ ಒಂದು ಥರ ಬಟ್ಟೆಯನ್ನಾಗಿತ್ತು ಅಂದು ಅವರು ಧರಿಸಿದ್ದುದು, ಪುತ್ರಿ ಫಾತಿಮಾ(ರ.ಅ)ರವರ ಬಡತನದ ಪ್ರಾರಬ್ಧತೆಯನ್ನು ಕಂಡು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಕಣ್ಣುಗಳು ತುಂಬಿ ಬಂತು. ಗದ್ಗತಿತರಾಗಿ ಹೇಳಿದರು; ಫಾತಿಮಾ.!! ಪರಲೋಕದ ಶಾಶ್ವತ ಸುಖಕ್ಕಾಗಿ ಇಹಲೋಕದ ಕಷ್ಟಗಳನ್ನೂ ಕಹಿ ಅನುಭವಗಳನ್ನು ಅಲ್ಪಾಲ್ಪವಾದರೂ ಸವಿಯಬೇಕು. ಸೂರತಳ್ಳುಹಾದ ತಮ್ಮ ಪರಿಪಾಲಕನಾದ ಅಲ್ಲಾಹು ಮುಂದೆ ತಮಗೆ ನೀಡುವನು, ಆಗ ತಾವು ಸಂತೃಪ್ತರಾಗುವಿರಿ.ಎಂಬ ಈ ಸೂಕ್ತವು ಈ ಸಂದರ್ಭದಲ್ಲೇ ಅವತೀರ್ಣಗೊಂಡಿತು. (ಮಕಾರಿಮುಲ್ ಅಖ್‌ಲಾಖ್) ಕಾರ್ಯನಿರ್ವಾಹಕರು: ನೂರುಲ್ ಫಲಾಹ್ ಸಮೂಹ ಸಂಸ್ಥೆ(ರಿ) ============================= ಅಲ್ಲಾಹನು ಹರಾಂಗೊಳಿಸಿದ ಎಲ್ಲಾ ಕಾರ್ಯಗಳಿಂದ ದೂರವಿರಿ, ಪರಲೋಕದಿ ವಿಜಯಿಯಾಗಲು ಇಹಲೋಕವು ಸತ್ಕರ್ಮಗಳಿಂದ ಕೂಡಿರಲಿ, ಟಿವಿ, ಸಿರೀಯಲ್, ಮ್ಯೂಸಿಕ್‌ನೊಂದಿಗೆ ಎಲ್ಲ ರೀತಿಯ ಹರಾಂಗಳಿಂದ ಮುಕ್ತವಾಗಿ ನಮ್ಮ ದಿನನಿತ್ಯದ ಬದುಕಿನಲ್ಲಿ ಕುರ್‍ಆನ್ ಪಾರಾಯಣ ಅಧಿಕಗೊಳಿಸಿರಿ, ದುಆಃ ದ್ಸಿಕ್ರ್‌ಗಳೊಂದಿಗೆ, ಪ್ರತೀ ಕ್ಷಣವು ನಾಲಗೆಯೂ ಸ್ವಲಾತನ್ನು ಜಪಿಸುತ್ತಿರಲಿ. الل...

ಸ್ರ್ತೀಯರ ಕುರಿತಿರುವ ವಸ್ವಿಯ್ಯತ್

ಸ್ರ್ತೀಯರ ಕುರಿತಿರುವ ವಸ್ವಿಯ್ಯತ್ ಅಮ್ರ್‌ಬಿನುಲ್ ಅಹ್‌ವಸ್(ರ) ನಿವೇದನೆ:  ಹಜ್ಜತುಲ್‌ವಿವಾಅ್ (ವಿದಾಯ ಹಜ್ಜ್) ನಲ್ಲಿ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಅಲ್ಲಾಹನನ್ನು ಸ್ತುತಿಸಿ ಆರಂಭಿಸಿದ ಭಾಷಣದಲ್ಲಿ ಜನರಿಗೆ ಉಪದೇಶಿಸಿದ ನಂತರ ಹೇಳಿದರು,  ತಿಳಿಯಿರಿ, ಸ್ತ್ರೀಯರಿಗೆ ನೀವು ಒಳಿತನ್ನು ಉಪದೇಶಿಸಿರಿ, ಅವರು ನಿಮ್ಮ ಬಳಿ ಸೆರೆಯಾಳುಗಳಂತೆ ಜೀವಿಸುತ್ತಿದ್ದಾರೆ. ಅದನ್ನು (ಸಮಾಗಮ) ಹೊರತುಪಡಿಸಿ ಅವರ ಮೇಲೆ ನಿಮಗೆ ಬೇರೆ ಯಾವ ಅಧಿಕಾರವೂ ಇಲ್ಲ. ಅವರು ದುರ್ಮಾರ್ಗದಲ್ಲಿ ಏರ್ಪಟ್ಟಿದ್ದಾರೆಂದು ಸ್ಪಷ್ಟವಾದರೆ ಅವರನ್ನು ನೀವು ನಿಮ್ಮ ಹಾಸಿಗೆಯಿಂದ ದೂರವಿರಿಸಿ. ಗಾಯವಾಗದ ರೀತಿಯಲ್ಲಿ ಹೊಡೆಯಿರಿ. ಅವಳು ನಿಮ್ಮನ್ನು ಅನುಸರಿಸಿದರೆ ಅನಂತರ ನೀವು ಅವಳ ಮೇಲೆ ಬೇರೆ (ಶಿಕ್ಷೆಯ) ಮಾರ್ಗಗಳನ್ನು ಹುಡುಕದಿರಿ,  ತಿಳಿಯಿರಿ, ನಿಮಗೆ ಸ್ತ್ರೀಯರೊಂದಿಗೆ ಹಾಗೂ ಸ್ತ್ರೀಯರಿಗೆ ನಿಮ್ಮೊಂದಿಗೆ ಕೆಲವು ಬಾಧ್ಯತೆಗಳಿವೆ. ನಿಮಗೆ ಇಷ್ಟವಿಲ್ಲದವರನ್ನು ಮನೆಗೆ ಪ್ರವೇಶಗೊಳಿಸದಿರುವುದು ಹಾಗೂ ನಿಮ್ಮ ಹಾಸಿಗೆಗೆ ಬರಮಾಡಿಕೊಳ್ಳದಿರುವುದು ಅವರಿಗೆ ನಿಮ್ಮ ಮೇಲಿರುವ ಭಾದ್ಯತೆಯಾಗಿದೆ. ತಿಳಿಯಿರಿ, ವಸ್ತ್ರ ಮತ್ತು ಆಹಾರದಲ್ಲಿ ಅವರಿಗೆ ಹಿತವನ್ನುಂಟುಮಾಡುವುದು ನಿಮಗೆ ಅವರ ಮೇಲಿರುವ ಬಾಧ್ಯತೆಯಾಗಿದೆ.  (ತಿರ್ಮುದಿ). ಕಾರ್ಯನಿರ್ವಾಹಕರು: ನೂರುಲ್ ಫಲಾಹ್ ಸಮೂಹ ಸಂಸ್ಥೆ(ರಿ) ============================= ಅಲ್ಲಾಹನು ಹರಾಂಗೊಳಿಸಿದ ...

ತಪ್ಪು ಮಾಡಿದ್ದೀರಾ ? ಹಾಗಾದರೆ ಕಣ್ಣೀರಿಡಿ..!

  ತಪ್ಪು ಮಾಡಿದ್ದೀರಾ ? ಹಾಗಾದರೆ ಕಣ್ಣೀರಿಡಿ..! ನೀವ್ಯಾಕೆ ಅಳುತ್ತಿದ್ದೀರಿ..? ತನ್ನ ಮುಂದೆ ಅಳುತ್ತಿದ್ದ ಯುವಕನನ್ನು ನೋಡಿ ಹುದೈಫತುಲ್ ಮರ್‌ಅಶೀ ಕೇಳುತ್ತಾರೆ. "ನಾನು ಕಳೆದು ಹೋದ ಕಾಲಗಳಲ್ಲಿ ಮಾಡಿದ ತಪ್ಪುಗಳನ್ನು ನೆನೆದು ಅಳುತ್ತಿದ್ದೇನೆ" ಆ ಯುವಕ ಮರುತ್ತರಿಸಿದರು. ಇದನ್ನು ಕೇಳಿದ ಹುದೈಫರು ಅಳಲಾರಂಭಿಸಿದರು. ಅಳುವಿನೆಡೆಯಲ್ಲಿ ಮಹಾತ್ಮರು ಯುವಕನೊಂದಿಗೆ ಹೇಳುತ್ತಾರೆ "ಓ ಗೆಳೆಯಾ, ಇಂತಹಾ ವಿಷಯಗಳಿಗಾಗಿದೆ ನಾವು ಅಳಬೇಕಾದದ್ದು. ನಂತರ ಮಹಾತ್ಮರು ಆ ಯುವಕನ ಕೈಗಳನ್ನು ಗ್ರಹಿಸಿ ಒಂದು ಮೂಲೆಗೆ ಸರಿದು ನಿಂತರು. ಇಬ್ಬರೂ ಮುಖಾಮುಖಿಯಾಗಿ ಅಳುತ್ತಲಿದ್ದರು.                                  ★★★ ಅಬೂಬಕರಿನಿಸ್ಸಖ್ವಾಫೀ ಹೇಳುತ್ತಾರೆ "ವರ್ಷದಲ್ಲಿ ಒಂದು ದಿನ ಮಾತ್ರ ಮಾತನಾಡುವ ಅಲ್ಲಾಹನ ಆರಾಧನೆಯಲ್ಲಿ ಮುಳುಗಿದ ಆಬಿದ್ ಆದ ವ್ಯಕ್ತಿಯ ಹತ್ತಿರ ಅವರು ಮಾತನಾಡುವ ಆ ದಿನ ಒಬ್ಬ ವ್ಯಕ್ತಿ ಬಂದು ಹೇಳುತ್ತಾರೆ 'ನೀವು ನನಗೆ ಉಪದೇಶಿಸಬೇಕು..'  'ನೀವೇನಾದರೂ ತಪ್ಪು ಮಾಡಿದ್ದೀರಾ.!?' ಪ್ರಶ್ನೆಕರ್ತ 'ಅದೇ ಮಾಡಿದ್ದೇನೆ'. 'ಅದನ್ನು ಅಲ್ಲಾಹನು ತಪ್ಪುಗಳ ಸಾಲಿನಲ್ಲಿ ದಾಖಲಿಸಿದ್ದನೆಂದು ತಿಳಿದಿದೆಯೇ..?'   'ಅದೇ' ಆ ವ್ಯಕ್ತಿ ಮರುತ್ತರಿಸಿದ.. ಹಾಗಾದರೆ ಆ ತಪ್ಪನ್ನು ನಿನ್ನಿಂದ ಮಾಯಿಸಿದ್ದಾನೆಂದು ನಿನಗೆ ...

ಪ್ರವಾದಿಯನ್ನು ಕೊಲ್ಲಲು ಬಂದ ಫುಳಾಲ ಮುಸ್ಲಿಮರಾದರು

               ಪ್ರವಾದಿಯನ್ನು ಕೊಲ್ಲಲು                        ಬಂದ          ಫುಳಾಲ ಮುಸ್ಲಿಮರಾದರು ۞بِـسْــــــــمِ الــلّٰــهِ الرَّحْـــــمٰنِ الرَّحِــيـــــــــمْ۞  –––––––––––––––––––––– اَلصَّلَاةُ وَالسَّلَامُ عَلَيْكَ يَا سَيَّدِي يَارَسُولَ اللّٰه ﷺ                              ಮಕ್ಕಾ ವಿಜಯದ ದಿನ ಪ್ರವಾದಿ ﷺ ರವರು ರಾತ್ರಿ ಕಅಬಾಲಯಕ್ಕೆ ಹೋಗಿ ತವಾಫ್ ಮಾಡಲು ಶುರುಮಾಡಿದರು. 1000 ಕ್ಕಿಂತಲೂ ಅಧಿಕ ಸ್ವಹಾಬಿಗಳು ಖಡ್ಗ ಹಿಡಿದು ಹೊರಗಡೆ ಕಾವಲು ನಿಂತಿದ್ದಾರೆ. ಉಮರ್ ಖತ್ತಾಬರೂ رضي الله عنهಕೂಡ ಹೊರಗಡೆ ಇದ್ದಾರೆ. ಪ್ರವಾದಿ ﷺ ತವಾಫ್ ನಿರ್ವಹಿಸುತ್ತಿದ್ದಾರೆ.       ಪ್ರವಾದಿ ﷺ ರವರನ್ನು ಕೊಲ್ಲಬೇಕೆಂಬ ಆಗ್ರಹದೊಂದಿಗೆ ಫುಳಾಲ ಎನ್ನುವ ವ್ಯಕ್ತಿ ಖಡ್ಗ ವನ್ನು ಹಿಡಿದು ಕಅಬಾಲಯದ ಹಿಂದೆ ಅಡಗಿ ಕುಳಿತಿದ್ದಾನೆ.       ಮಕ್ಕಾ ವಿಜಯದ ದಿನದಲ್ಲಿಯೂ ಕೂಡ ನನಗೆ ಮುಹಮ್ಮದನನ್ನು ﷺ ಕೊಲ್ಲಲು ಸಾಧ್ಯವಾಗದೆ ಇದ್ದರೆ ಇನ್ನು ಮುಂದೆ ಮುಹಮ್ಮದ್ ﷺ ರನ್ನು ನನಗೆ ಕೊಲ್ಲಲು ಸಾಧ್ಯವಿಲ...

ಎಲ್ಲವೂ ದಾಖಲಿಸಲ್ಪಡುವುದು..!

  ಎಲ್ಲವೂ ದಾಖಲಿಸಲ್ಪಡುವುದು..! ಅತ್ಯಂತ ಪರಿಚಿತವಾದ ಉದಾಹರಣೆ ಮೂಲಕ ಪ್ರಾರಂಭಿಸೋಣ. ಅಂದು ಮೋಟಿವೇಶನ್ ಕ್ಲಾಸ್‌ಗೆ ತಲುಪಿದ ಟ್ರೈನರ್ ಸಾಧಾರಣೆಗೆ ಎದುರಾಗಿರಲಿಲ್ಲ. ಅವರು ಒಂದು ಕಾಗದ ತೆಗೆದರು. ಅದರ ಮಧ್ಯೆ ಕಪ್ಪು ಶಾಯಿ ಪೆನ್ನಿನಿಂದ ಒಂದು ಸಣ್ಣ ಚುಕ್ಕೆಯನ್ನು ಹಾಕಿದರು. ನಂತರ ಎಲ್ಲರ ಎದುರಿಗೆ ಆ ಕಾಗದವನ್ನು ತೋರಿಸುತ್ತಾ ಕೇಳುತ್ತಾರೆ 'ಈ ಪೇಪರಿನಲ್ಲಿ ನೀವೇನನ್ನು ಕಾಣುತ್ತಿದ್ದೀರಿ..?: 'ಒಂದು ಕಪ್ಪುಚುಕ್ಕೆ..' ಪ್ರಶ್ನೆಕರ್ತನ ಪ್ರಶ್ನೆಗೆ ತಕ್ಷಣವೇ ಸಭಿಕರಿಂದ ಉತ್ತರ ಬಂತು..! ಆಗ ಆತ ನಗುತ್ತಾ ಆ ಸಭಿಕರೊಂದಿಗೆ ಹೇಳುತ್ತಾನೆ 'ಒಂದು ಪೇಪರಿನಲ್ಲಿ ಇರುವ ವಿಶಾಲವಾದ ಬಿಳಿ ಭಾಗಗಳು ಯಾವುದನ್ನೂ ಕಾಣದೆ ಕಪ್ಪು ಚುಕ್ಕೆ ಯಲ್ಲಿ ಮಾತ್ರ ನಮ್ಮ ಶ್ರದ್ಧೆ ತಲುಪಿದರೆ; ಬೇರೆಯವರ ಮನಸ್ಸಿನ ವಿಶಾಲವಾದ ಒಳಿತಿಗೆ ಬದಲಾಗಿ ಅವರಲ್ಲಿ ಕಾಣುವ ಕೆಡುಕಿನ ಅತಿ ಸಣ್ಣ ಭಾಗಗಳಿಗೂ ದಿಟ್ಟಿಸಿ ನೋಡಲು ಅದನ್ನು ಭೀಮಾಕಾರವಾಗಿ ಕಾಣಲು ನಮಗಿಷ್ಟ ಎಂದಾಗಿದೆ. ಬಹುದೊಡ್ಡ ಸಿದ್ಧಾಂತವನ್ನು ಬೇರೆಯವರಿಗೆ ಹೇಳಿಕೊಡಲು ಸಾಧ್ಯವಾಯಿತೆಂಬ ಸಂತೋಷದೊಂದಿಗೆ ಅವರು ಹೇಳಿ ಮುಗಿಸುವಾಗ ನಿಶ್ಶಬ್ದವಾದ ಕ್ಲಾಸಿನಿಂದ ಒಬ್ಬರು ಕೂಗಿ ಹೇಳುತ್ತಾರೆ 'ಸರ್, ಈ ಉದಾಹರಣೆ ಬದಲಿಸಿ ಎಲ್ಲರೂ ಹೇಳುವ ಉದಾಹರಣೆಯಾಗಿದೆ'. ಮುಗಿಯಿತು; ಇಷ್ಟು ಹೊತ್ತು ಅವರು ತೆಗೆದ ಕ್ಲಾಸಿನ ಎಲ್ಲಾ ಗೌರವವೂ ಈ ಪದ ಪ್ರಯೋಗದೊಂದಿಗೆ ಸೋರಿಹೋಯಿತು. ಅಷ್ಟರವರೆಗೆ ಆ ಸಭೆಯಲ್ಲಿ ಮ...

ಮೂಲವ್ಯಾಧಿಗೆ ಮೂಲಂಗಿ ಮದ್ದು:

ಮೂಲವ್ಯಾಧಿಗೆ ಮೂಲಂಗಿ ಮದ್ದು: ಮೂಲಂಗಿ ಮೂಲವ್ಯಾಧಿಗೆ ಅತ್ಯುತ್ತಮವಾದ ಔಷಧಿಯಾಗಿದೆ. ಇದರ ಜ್ಯೂಸ್ ಕುಡಿದರೆ ಮೂಲವ್ಯಾಧಿ ಕಾಯಿಲೆ ಗುಣಮುಖವಾಗುವುದು. ಮೊದಮೊದಲು 1/3 ಕಪ್ ಮೂಲಂಗಿ ರಸ ಕುಡಿಯಿರಿ. ನಂತರ ಅರ್ಧ ಕಪ್ ನಷ್ಟು ಪ್ರತಿದಿನ ಕುಡಿಯುತ್ತಾ ಬನ್ನಿ. ಹೀಗೆ ಮಾಡಿದರೆ ಪೈಲ್ಸ್ ಸಮಸ್ಯೆ ನಿಮ್ಮನ್ನು ಕಾಡುವುದಿಲ್ಲ. ಇದರಿಂದ ಚಟ್ನಿ, ಪಲ್ಯ ಮಾಡಿ ತಿನ್ನಿ. ಇದರ ಸೊಪ್ಪು ಕೂಡ ತುಂಬಾ ಒಳ್ಳೆಯದು. =============================                          ಸಂಗ್ರಹ:                   ಮನೆ ಮದ್ದುಗಳು               ಸಂ: ✒️ಅಬೂರಿಫಾನ  ============================= ನಿಮ್ಮ ಸುರಕ್ಷತೆಗೆ ಸಾಮಾಜಿಕ ಅಂತರವನ್ನು ಕಾಪಾಡಿ ಮಾಸ್ಕ್ ಉಪಯೋಗಿಸಿ. ಕುರ್‌ಆನ್ ದ್ಸಿಕ್ರ್‌ಗಳು ಪಠಿಸುತ್ತಿರಿ ಪ್ರತೀ ಕ್ಷಣವು ನಾಲಗೆಯೂ ಸ್ವಲಾತನ್ನು ಜಪಿಸುತ್ತಿರಲಿ. اللَّهُمَّ صَلِّ عَلَى سَيِّدِنَا مُحَمَّدٍ النَّبِيِّ الأُمِّيِّ الْحَبِيبِ الْعَالِي الْقَدْرِ الْعَظِيمِ الْجَاهِ وَعَلَى آلِهِ وَصَحْبِهِ وَسَلِّمْ. ============================= ✤𝙇𝙞𝙠𝙚 & 𝙎𝙝𝙖𝙧𝙚✤ ✦𝙋𝙧𝙖𝙮 𝙛𝙤𝙧 𝙪𝙨 ✦ 𝗔𝗥...

ಖಲೀಫಾ ಅಳುತ್ತಿದ್ದಾರೆ..!

  ಖಲೀಫಾ ಅಳುತ್ತಿದ್ದಾರೆ..! ಉಮರ್ ರಳಿಯಲ್ಲಾಹು ಅನ್ಹುರನ್ನು ಕಂಡರೆ ಪಿಶಾಚಿ ದಾರಿ ಬದಲಿಸಿ ನಡೆಯುತ್ತಿತ್ತು. ಸ್ವರ್ಗ ಪ್ರವೇಶ ಖಚಿತ ಎಂದು ಪ್ರವಾದಿ ﷺ ಪ್ರವಚಿಸಿ ಆಣೆ ಹಾಕಿ ಹೇಳಿರುವವರಲ್ಲಿ ಒಬ್ಬರು ಮಹಾತ್ಮರಾದ ಉಮರ್ ರಳಿಯಲ್ಲಾಹು ಅನ್ಹು ಆಗಿದ್ದಾರೆ. 'ನನ್ನ ನಂತರ ನೀವು ಸಿದ್ದೀಖ್ ರಳಿಯಲ್ಲಾಹು ಅನ್ಹುರನ್ನೂ ಉಮರ್ ರಳಿಯಲ್ಲಾಹು ಅನ್ಹುರನ್ನೂ ಹಿಂಬಾಲಿಸಿರಿ'. ಎಂದು ಪ್ರವಾದಿ ﷺ ಗ್ಯಾರಂಟಿ ನೀಡಿದ ನಾಯಕ. ಇಸ್ಲಾಮಿಕ್ ರಿಪಬ್ಲಿಕ್‌ನ ನೀತಿಯ ಪ್ರತಿರೂಪವಾಗಿದ್ದರು ಉಮರ್ ರಳಿಯಲ್ಲಾಹು ಅನ್ಹು ಎಂಬ ನಿಷ್ಠಾವಂತ ಆಡಳಿತಗಾರ. ಮರಣವು ಮಹಾತ್ಮರನ್ನು ತಲುಪಿದ ಸಂದರ್ಭ. ಸುತ್ತಲೂ ಜನರು ನೆರೆದಿದ್ದಾರೆ. ಉಮರ್ ರಳಿಯಲ್ಲಾಹು ಅನ್ಹು ಅಳಲು ಪ್ರಾರಂಭಿಸಿದರು.  'ಯಾಕಾಗಿ ಅಳುತ್ತಿರುವುದು...!' ನೆರೆದವರಲ್ಲೊಬ್ಬ ಕೇಳುತ್ತಾರೆ. ಉಮರ್ ಅಳುವಿನ ಕಾರಣ ಹೇಳುತ್ತಾರೆ; 'ನಾನೇನಾದರೂ ತಪ್ಪು ಮಾಡಿ ಅದನ್ನು ಅತ್ಯಂತ ಲಘುವಾಗಿ ಕಂಡು ಯಜಮಾನನಾದ ಅಲ್ಲಾಹು ಅದನ್ನು ಗಂಭೀರವಾದ ತಪ್ಪಾಗಿ ಪರಿಗಣಿಸಿದರೆ' ಎಂದು ಆಲೋಚಿಸಿ ಅಳುತ್ತಿದ್ದೇನೆ. ನೀತಿ:ಸ್ವರ್ಗವು ಉಮರ್ ರಳಿಯಲ್ಲಾಹು ಅನ್ಹುರವರಿಗೆ ನಿಶ್ಚಯವಾಗಿದೆ. ಆದರೂ ಯಾತಕ್ಕಾಗಿ ಮಹಾತ್ಮರು ಅಳುತ್ತಿರುವುದು..? ಸ್ವರ್ಗವಲ್ಲ ಅವರ ಗುರಿ. ಅಲ್ಲಾಹನ ಇಷ್ಟವಾಗಿದೆ. ನಾನವನೊಂದಿಗೆ ಅವನಿಗಿಷ್ಟವಿಲ್ಲದ್ದನ್ನು ಮಾಡಿದ್ದರೆ ಎಂಬುವುದನ್ನು ಅಲೋಚಿಸಿಯುಳ್ಳ ದುಃಖ. ಅಲ್ಲಾಹನು ನನ್ನ ಕುರಿತು ಏ...

ಅನಾಥರು ಮತ್ತು ದುರ್ಬಲರೊಂದಿಗೆ ಅನುಕಂಪ:

ಅನಾಥರು ಮತ್ತು ದುರ್ಬಲರೊಂದಿಗೆ ಅನುಕಂಪ: ಅಬೂಹುರೈರಾ(ರ.ಅ) ನಿವೇದನೆ: ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದರು: ಒಂದೆರಡು ಮುಷ್ಟಿ ಆಹಾರ ಅಥವಾ ಖರ್ಜೂರ ಲಭಿಸಿದರೆ ಮರಳಿ ಹೋಗಬಹುದೆಂಬ ನೆಲೆಯಲ್ಲಿ ಜನರ ನಡುವೆ ಅಲೆದಾಡುವವನು ದರಿದ್ರನಲ್ಲ ನಿಜವಾದ ದರಿದ್ರರು ಯಾಚಿಸದೆ ಬದುಕುವವನಾಗಿದ್ದಾನೆ. ಮತ್ತೊಂದು ಉಲ್ಲೇಖ: ಒಂದೆರಡು ಮುಷ್ಟಿ ಆಹಾರ ಅಥವಾ ಖರ್ಜೂರ ಲಭಿಸಿದರೆ ಮರಳಿ ಹೋಗಬಹುದೆಂಬ ನೆಲೆಯಲ್ಲಿ ಜನರ ಮಧ್ಯೆ ಅಲೆದಾಡುವವನು ದರಿದ್ರನಲ್ಲ, ಬದಲಾಗಿ ಅಗತ್ಯಕ್ಕನುಸಾರ ಸಾಕಷ್ಟು ಧನ ಲಭಿಸದವನು, ದಾನ ಸಿಗಲು ತನ್ನ ಪರಿಸ್ಥಿತಿಯನ್ನು ಯಾರಿಗೂ ತಿಳಿಸದವನು ಹಾಗೂ ಜನರ ಮಧ್ಯೆ ಭಿಕ್ಷೆ ಯಾಚಿಸದವನೇ ದರಿದ್ರನು. (ಬುಖಾರಿ, ಮುಸ್ಲಿಮ್) ಕಾರ್ಯನಿರ್ವಾಹಕರು: ನೂರುಲ್ ಫಲಾಹ್ ಸಮೂಹ ಸಂಸ್ಥೆ(ರಿ) ============================= ಅಲ್ಲಾಹನು ಹರಾಂಗೊಳಿಸಿದ ಎಲ್ಲಾ ಕಾರ್ಯಗಳಿಂದ ದೂರವಿರಿ, ಪರಲೋಕದಿ ವಿಜಯಿಯಾಗಲು ಇಹಲೋಕವು ಸತ್ಕರ್ಮಗಳಿಂದ ಕೂಡಿರಲಿ, ಟಿವಿ, ಸಿರೀಯಲ್, ಮ್ಯೂಸಿಕ್‌ನೊಂದಿಗೆ ಎಲ್ಲ ರೀತಿಯ ಹರಾಂಗಳಿಂದ ಮುಕ್ತವಾಗಿ ನಮ್ಮ ದಿನನಿತ್ಯದ ಬದುಕಿನಲ್ಲಿ ಕುರ್‍ಆನ್ ಪಾರಾಯಣ ಅಧಿಕಗೊಳಿಸಿರಿ, ದುಆಃ ದ್ಸಿಕ್ರ್‌ಗಳೊಂದಿಗೆ, ಪ್ರತೀ ಕ್ಷಣವು ನಾಲಗೆಯೂ ಸ್ವಲಾತನ್ನು ಜಪಿಸುತ್ತಿರಲಿ. اللَّهُمَّ صَلِّ عَلَى سَيِّدِنَا مُحَمَّدٍ النَّبِيِّ الأُمِّيِّ الْحَبِيبِ الْعَالِي الْقَدْرِ الْعَظِيمِ الْجَاهِ وَعَلَى...

ಆರೋಗ್ಯಕರ ಶ್ವಾಸಕೋಶ ಕಾಪಾಡಿಕೊಳ್ಳಲು ಸಲಹೆಗಳು:

ಆರೋಗ್ಯಕರ ಶ್ವಾಸಕೋಶ ಕಾಪಾಡಿಕೊಳ್ಳಲು ಸಲಹೆಗಳು: 1). ಧೂಮಪಾನ ಮಾಡಬೇಡಿ ಧೂಮಪಾನದಿಂದ ಯಾವುದೇ ರೀತಿಯ ಅನುಕೂಲಗಳಿಲ್ಲ. ನೀವು ಹೆಚ್ಚು ಧೂಮಪಾನ ಮಾಡಿದಂತೆ ಕ್ಯಾನ್ಸರ್ ಮತ್ತಿತರ ದೀರ್ಘಕಾಲದ ಎದೆಗೆಮ್ಮು ಮತ್ತು ವಾತಶೋಥ ಹೊಂದಿರುವ ಕಾಯಿಲೆಗಳು ಬರುವ ಸಾಧ್ಯತೆ ಹೆಚ್ಚಿರುತ್ತದೆ. ಧೂಮಪಾನ ಅತಿ ಕೆಟ್ಟದ್ದಾಗಿದ್ದು ಇದು ಕೇವಲ ಧೂಮಪಾನ ಮಾಡುವವರಿಗೆ ಮಾತ್ರವಲ್ಲ ಧೂಮಪಾನ ಮಾಡುವಾಗ ಅವರ ಸುತ್ತಲಿರುವವರಿಗೂ ಇದು ಪರಿಣಾಮವನ್ನು ಬೀರುತ್ತದೆ   2). ಸ್ವಚ್ಚವಾದ ಗಾಳಿ ಮುಖ್ಯ 155 ಮಿಲಿಯನ್‌‌ಗೂ ಹೆಚ್ಚು ಜನರು ವಾಯು ಮಾಲಿನ್ಯ ಅಧಿಕವಾಗಿರುವ ಸ್ಥಳದಲ್ಲಿ ಜೀವಿಸುತ್ತಿದ್ದಾರೆ!. ವಾಯುಮಾಲಿನ್ಯದಿಂದ ಅಸ್ಥಮಾ ಅಥವಾ COPD ಮಾತ್ರವಲ್ಲ ಇದು ಮನುಷ್ಯನನ್ನು ಕೊಂದುಬಿಡುವಷ್ಟು ಕೆಟ್ಟ ಪರಿಣಾಮ ಬೀರುತ್ತದೆ.ನೀವು ಕಾಯಿದೆಗಳನ್ನು ಬೆಂಬಲಿಸುವುದರ ಮೂಲಕ ಪರಿಸರದ ಸ್ವಚ್ಚತೆಯನ್ನು ಕಾಪಾಡಲು ಸಹಕರಿಸಬೇಕು ಇದರಿಂದ ವಾಯುಮಾಲಿನ್ಯ ತಡೆಯಬಹುದು. ವಾಯುಮಾಲಿನ್ಯವನ್ನು ತಡೆಯಲು ಕಸವನ್ನು ಸುಡುವುದು,ಹೆಚ್ಚು ಎಲೆಕ್ಟ್ರಿಸಿಟಿ ಬಳಕೆ,ವಾಹನಗಳ ಅಧಿಕ ಚಲಾವಣೆ ಇವುಗಳನ್ನು ಮೊದಲು ತಡೆಯಬೇಕು.   3). ಕೇವಲ ವ್ಯಾಯಾಮ ಮಾಡುವುದರಿಂದ ಶ್ವಾಸಕೋಶ ಬಲಿಷ್ಠವಾಗಲಾರದು ಆದರೆ ವ್ಯಾಯಾಮ ಮಾಡುವುದರಿಂದ ಕೆಲವು ಸಮಸ್ಯೆಗಳಿಂದ ದೂರವಿರಬಹುದು. ನೀವು ಹೃದಯ ಸಂಬಂಧಿ ವ್ಯಾಯಾಮಗಳನ್ನು ಮಾಡುವುದರಿಂದ ಶ್ವಾಸಕೋಶ ಇನ್ನಿತರ ದೇಹದ ಅಂಗಗಳಿಗೆ ಅಗತ್ಯ ಆಮ್ಲಜನಕವನ್ನು ಪೂರೈಸುವಲ್...