Posts

Showing posts from April, 2021

ಅಧ್ಯಾಯ:2 (ಅಲ್-ಬಕ್ವರ) ಸೂಕ್ತ: 162

ಅಧ್ಯಾಯ:2 (ಅಲ್-ಬಕ್ವರ) ಸೂಕ್ತ: 162 خَٰلِدِينَ فِيهَا ۖ لَا يُخَفَّفُ عَنْهُمُ ٱلْعَذَابُ وَلَا هُمْ يُنظَرُونَ ಅರ್ಥ: ಅವರು ಶಿಕ್ಷೆಯಲ್ಲಿ ಶಾಶ್ವತರು. ಅವರಿಗೆ ಶಿಕ್ಷೆಯನ್ನು ಸರಳಗೊಳಿಸಲಾಗುವುದಿಲ್ಲ, ಬಿಡುವನ್ನೂ ನೀಡಲಾಗುವುದಿಲ್ಲ.

ಕಠಿಣ ಪ್ರಾಯಶ್ಚಿತ್ತ:

ಕಠಿಣ ಪ್ರಾಯಶ್ಚಿತ್ತ:      ಒಬ್ಬಾತ ರಮಳಾನ್ ತಿಂಗಳಲ್ಲಿ ಮನಃಪೂರ್ವಕ ಲೈಂಗಿಕ ಸಂಪರ್ಕ ನಡೆಸಿ ತನ್ನ ಉಪವಾಸವನ್ನು ಭಂಗಪಡಿಸಿದರೆ ಖಳಾ ಪೂರೈಸುವುದರೊಂದಿಗೆ ಕಠಿಣ ಪ್ರಾಯಶ್ಚಿತ ಕೂಡಾ ನೀಡಬೇಕಾಗುತ್ತದೆ. ಮಹಿಳೆಯರು ಸಂಭೋಗಕ್ಕೆ ಒಪ್ಪಿಕೊಳ್ಳುವುದು ಹರಾಂ (ನಿಷಿದ್ದ) ಆದರೂ ಅವರಿಗೆ ಪ್ರಾಯಶ್ಚಿತ್ತ ಮಾತ್ರ ಕಡ್ಡಾಯವಿಲ್ಲ. ಕೇವಲ ಖಳಾ ಪೂರೈಸಿದರೆ ಸಾಕು. ಮುಅ್‌ಮಿನಾದ ಓರ್ವ ಗುಲಾಮನನ್ನು ದಾಸ್ಯತನದಿಂದ ಬಿಡುಗಡೆಗೊಳಿಸುವುದಾಗಿದೆ ನಿಜವಾದ ಪ್ರಾಯಶ್ಚಿತ. ಅದು ಹೇಗೂ ಅಸಾಧ್ಯವೆನಿಸಿದರೆ ಎರಡು ತಿಂಗಳ ಕಾಲ ಸತತ ವ್ರತ ಕೈಗೊಳ್ಳಬೇಕು. ಮಧ್ಯದಲ್ಲಿ ಒಂದು ದಿನ ಕೈತಪ್ಪಿ ಹೋದಲ್ಲಿ ಮತ್ತೆ ಮೊದಲಿನಿಂದಲೇ ಪ್ರಾರಂಭಿಸಬೇಕಾಗುತ್ತದೆ. ಈ ರೀತಿ ವ್ರತಾನುಷ್ಟಿಸಲೂ ಸಾಧ್ಯವಿಲ್ಲವೆಂದಾದರೆ 60ಬಡವರಿಗೋ ಅಥವಾ ನಿರ್ಗತಿಕರಿಗೋ ಒಬ್ಬೊಬ್ಬರಿಗೆ ಒಂದೊಂದು ಬೊಗಸೆ (650ಗ್ರಾಂ) ಆಹಾರ ಧಾನ್ಯವನ್ನು ದಾನ ನೀಡಬೇಕು. ಈ ಮೂರು ವಿಧಾನವೂ ಅವನಿಂದ ಅಸಾಧ್ಯವಾದರೆ ಎಂದೆಂದಿಗೂ ತನ್ನ ಹೆಗಲ ಮೇಲೆ ಅದೊಂದು ಕಡ್ಡಾಯ ಬಾಧ್ಯತೆಯಾಗಿ ಉಳಿಯುತ್ತದೆ. ಯಾವಾಗ ತನ್ನಿಂದ ಸಾಧ್ಯವಾಗುತ್ತದೋ ಆ ಸಂದರ್ಭದಲ್ಲಿ ಅದನ್ನು ಸಂದಾಯಿಸುವುದು ಕಡ್ಡಾಯವಾಗುತ್ತದೆ. ಒಬ್ಬಾತ ಎರಡೂ ದಿನಗಳ ವ್ರತವನ್ನು ಸಂಭೋಗದ ಮೂಲಕ ಭಂಗಪಡಿಸಿದ್ದಲ್ಲಿ ಮೇಲೆ ಹೇಳಿದ ಪ್ರಕಾರ ಎರಡು ಪ್ರಾಯಶ್ಚಿತ್ತ ಕಡ್ಡಾಯವಾಗುತ್ತದೆ. ಈ ರೀತಿ ಎಷ್ಟು ದಿನಗಳ ವ್ರತ ಭಂಗಪಡಿಸುತ್ತಾನೋ ಅಷ್ಟೇ ಪ್ರಾಯಶ್ಚಿತ್ತವೂ ಕಡ್ಡ...

ಸ್ವರ್ಗ...

ಸ್ವರ್ಗ... ಸ್ವರ್ಗ ಅಂದರೇನು...? ಮನುಷ್ಯ ಬಹುಷಃ ಅದನ್ನು ಕಲ್ಪಿಸಿಕೊಳ್ಳುವಲ್ಲಿ ಸೋಲುತ್ತಾನೆ. ಅದು ಅವನ ಊಹನೆಗೆ ನಿಲುಕದಷ್ಟು ಉನ್ನತವಾದುದು ವಿಚಿತ್ರವಾದುದು.. ಅದೊಂದು ವಿಸ್ಮಯ ಜಗತ್ತು. ಹದೀಸ್ ವಚನದಲ್ಲಿ ಹೇಳಲಾದಂತೆ ಮನುಷ್ಯ ತನ್ನ ಹೃದಯದಲ್ಲೆಂದು ಊಹಿಸಿರದ,ಊಹಿಸಲಾಗದ,ಮನುಷ್ಯನ ಕಲ್ಪನೆಗೆ ಸಿಗದ ಎಲ್ಲವೂ ಅದರಲ್ಲಿದೆ.. ಅಲ್ಲಿ ಇಲ್ಲದಿರುದು ಒಂದು ಮಾತ್ರ ಇಲ್ಲ ಎನ್ನುದು? ಮನುಷ್ಯನಿಗೆ ಸ್ವರ್ಗದ ಸಮಗ್ರ ಚಿತ್ರಣವನ್ನು ಕಲ್ಪಿಸಿಕೊಳ್ಳಲು ಅಸಾಧ್ಯವಾದರೂ ಅದನ್ನು ಅವನಿಗೆ ಪರಿಚಿತವಾದ ವಸ್ತುಗಳ ಮೂಲಕ ಖುರ್ ಆನ್ ಪರಿಚಯಿಸಿ ಕೊಡುತ್ತದೆ. ಖುರ್ ಆನ್ ಈ ಬಗ್ಗೆ ನೀಡಿದ ವಿವರಣೆಗಳತ್ತ ಕಣ್ಣು ಹರಿಸೋಣ. " ಸತ್ಯವಿಶ್ವಾಸಿಗಳು ಹಾಗೂ ಸತ್ಯವಿಶ್ವಾಸಿನಿಯರಿಗೆ ಅಲ್ಲಾಹನು ಸ್ವರ್ಗೋದ್ಯಾನಗಳನ್ನು ವಾಗ್ದಾನ ಮಾಡಿರುವನು.ಅವುಗಳ ತಳಭಾಗದಲ್ಲಿ ನದಿಗಳು ಹರಿಯುತ್ತಿವೆ.ಅವರದರಲ್ಲಿ ಸ್ಥಿರನಿವಾಸುಗಳಾಗಿರುವರು ಶಾಶ್ವತ ವಾಸದ ಸ್ವರ್ಗಗಳಲ್ಲಿ ಉತ್ತಮವಾದ ಭವನಗಳನ್ನು ( ಅಲ್ಲಾಹು ಅವರಿಗೆ ವಾಗ್ದಾನ ಮಾಡಿರುವನು)ಅಲ್ಲಾಹನ ತೃಪ್ತಿಯು ಅತ್ಯಂತ ಹಿರಿದು ಅದುವೇ ಮಹಾವಿಜಯ (ಸೂರ ಅತ್ತೌಬಾ) ನಿಶ್ಚಯ,ಭಯಭಕ್ತಿಯುಳ್ಳವರು ಉದ್ಯಾನಗಳಲ್ಲಿಯೂ  ಚೆಲುಮೆಗಳಲ್ಲಿಯೂ ಇರುವರು.ನಿರ್ಭಯರಾಗಿ ಶಾಂತಿಯಿಂದ ಅವುಗಳಿಗೆ ಪ್ರವೇಶ ಮಾಡಿರಿ(ಎಂದು ಅವರೊಂದಿಗೆ ಹೇಳಲಾಗುವುದು)ಅವರ ಹೃದಯಗಳಿಂದ ಕೆಡುಕುಗಳನ್ನೆಲ್ಲ ನಾವು ನಿವಾರಿಸಿ ಬಿಡುವೆವು.ಅವರು ಪರಸ್ಪರ ಸಹೋದರರಾಗಿ ಅಭಿಮುಖ...

ಪ್ರವಾದಿ ಪ್ರಪಂಚ

ಪ್ರವಾದಿಯ ಪ್ರಪಂಚ     ▪️ ಒಮ್ಮೆ ಒಬ್ಬರು ತನ್ನ ಎಡಗೈಯಿಂದ ಆಹಾರ ಸೇವಿಸುವುತ್ತಿರುದನ್ನು ನೋಡಿದ ಪ್ರವಾದಿ ಮುಹಮ್ಮದ್ ﷺ ರು ಅವರಲ್ಲಿ ಹೇಳಿದರು. "ಎಡಗೈಯಲ್ಲಿ ತಿನ್ನಬೇಡಿ. ಬಲಗೈಯಲ್ಲಿ ತಿನ್ನಿ."ಕೂಡಲೇ ಆ ವ್ಯಕ್ತಿ ಹೇಳಿದರು. "ನನಗೆ ಬಲಗೈಯಲ್ಲಿ ತಿನ್ನಲು ಸಾಧ್ಯವಾಗುವುದಿಲ್ಲ."    ▪️ ನಿಜವಾಗಿ ಆ ವ್ಯಕ್ತಿಗೆ ಎಡಗೈಯಿಂದ ತಿನ್ನಲು ಅನಾನುಕೂಲವಾಗುವ ಯಾವುದೇ ಕಾರಣಗಳಿರಲಿಲ್ಲ. ಬರೀ ಅಹಂಕಾರವಾಗಿತ್ತು ಮುಖ್ಯ ಕಾರಣ. ಇದನ್ನರಿತ ಪ್ರವಾದಿವರ್ಯರು ಅವರಲ್ಲಿ ಹೇಳಿದರು. "ಹಾಗೆಯಾ..? ಹಾಗಾದರೆ ಹಾಗೇನೇ"*ಸುಬ್‌ಹಾನಲ್ಲಾಹ್.! ಬಳಿಕ ಈ ವ್ಯಕ್ತಿಗೆ ತನ್ನ ಜೀವನಪರ್ಯಂತ ತನ್ನ ಬಲಗೈಯನ್ನು ತನ್ನ ಬಾಯಿಯತ್ತ ಎತ್ತಲು ಸಾಧ್ಯವಾಗಲಿಲ್ಲ. ✍🏻ಸಂಗ್ರಹ: ಇಮಾಮ್ ಹಲಬಿಯ ಅಸ್ಸೀರತುಲ್ ಹಲಬಿಯ್ಯ ಎಂಬ ಗ್ರಂಥದಿಂದ.

ಪ್ರವಾದಿ ಪ್ರಪಂಚ

ಪ್ರವಾದಿಯ ಪ್ರಪಂಚ     ▪️ ಪ್ರವಾದಿ ಮುಹಮ್ಮದ್ ﷺ ರು ವ್ಯಕ್ತಿಯೊಬ್ಬರ ಪುತ್ರಿಯನ್ನು ತನಗೆ ವಿವಾಹ ಮಾಡಿಕೊಡುವಂತೆ ಅಪೇಕ್ಷೆಪಟ್ಟರು. ಹತಭಾಗ್ಯನಾದ ಆ ವ್ಯಕ್ತಿಗೆ ಅದು ಅಷ್ಟೊಂದು ಇಷ್ಟ ಇರಲಿಲ್ಲ. ಪ್ರವಾದಿವರ್ಯರು (ಸ) ತನ್ನ ಮಗಳನ್ನು ಮದುವೆ ಆಗುವುದನ್ನು ತಪ್ಪಿಸುವ ಉದ್ದೇಶದಿಂದ ಅವರು ಹೇಳಿದರು. "ಪ್ರವಾದಿಯವರೇ.. ನಿಮಗೆ ಅದು ಸರಿಯಾಗದು. ಅವಳಿಗೆ ಪಾಂಡುರೋಗವಿದೆ." ನಿಜವಾಗಿ ಆಕೆಗೆ ಯಾವುದೇ ರೋಗ ಇರಲಿಲ್ಲ. ಆಗ ಪ್ರವಾದಿ ಮುಹಮ್ಮದ್ ﷺ ರು ಹೇಳಿದರು. "ಹಾಗಾದರೆ, ಹಾಗೆಯೇ ಆಗಲಿ. ಪರವಾಗಿಲ್ಲ.."ಸುಬ್‌ಹಾನಲ್ಲಾಹ್.. ಈ ವ್ಯಕ್ತಿ ಮನೆ ತಲುಪಿದಾಗ ತನ್ನ ಮಗಳು ಪಾಂಡುರೋಗಿಯಾಗಿ ಮಾರ್ಪಟ್ಟು ಶರೀರ ಪೂರ್ತಿ ಬಿಳಿತೊನ್ನು ಆವರಿಸಿಬಿಟ್ಟಿತ್ತು. ✍🏻ಸಂಗ್ರಹ: ಇಮಾಮ್ ಹಲಬಿಯ ಅಸ್ಸೀರತುಲ್ ಹಲಬಿಯ್ಯ ಎಂಬ ಗ್ರಂಥದಿಂದ.

ಪ್ರವಾದಿ ಪ್ರಪಂಚ

ಪ್ರವಾದಿಯ ಪ್ರಪಂಚ     ▪️ ಒಂದು ದಿನ ಪ್ರವಾದಿ ಮುಹಮ್ಮದ್ ﷺ ರ ಪ್ರೀತಿಯ ಪುತ್ರಿ ಬೀವಿ ಫಾತಿಮಾಃ (ರ) ರವರು ಪ್ರವಾದಿ ﷺ ರ ಬಳಿ ಬಂದರು. ಕೆಲವು ದಿನಗಳಿಂದ ಆಹಾರ ಸಿಗದೆ ಹಸಿವಿನಿಂದ ಕಂಗಾಲಾಗಿದ್ದ ಅವರ ಮುಖವು ರಕ್ತ ಸಂಚಾರವಿಲ್ಲದೆ ಕಪ್ಪಾಗಿತ್ತು. ಸರಿಯಾಗಿ ಮಾತನಾಡಲೂ ಆಗುತ್ತಿರಲಿಲ್ಲ. ತನ್ನ ಪ್ರೀತಿಯ ಮಗಳನ್ನು ಕಂಡಾಗ ಮನ ಕರಗಿದ ಪ್ರವಾದಿ ಮುಹಮ್ಮದ್ ﷺ ರು ಅವರನ್ನು ತನ್ನ ಹತ್ತಿರ ಬಂದು ಕುಳಿತುಕೊಳ್ಳಲು ಹೇಳಿದರು. ಹತ್ತಿರ ಬಂದು ಕುಳಿತ ಪುತ್ರಿಯ ಎದೆಯ ಮೇಲೆ ಕೈಯಿಟ್ಟು ಪ್ರವಾದಿ ﷺ ರು ಅಲ್ಲಾಹನಲ್ಲಿ ಈ ರೀತಿ ದುಆ ಮಾಡಿದರು. "ಹಸಿದವನ ಹಸಿವನ್ನು ನೀಗಿಸುವ ಅಲ್ಲಾಹನೇ.., ನನ್ನ ಪ್ರೀತಿಯ ಪುತ್ರಿ ಫಾತಿಮಳ ಹಸಿವನ್ನು ನೀನು ನೀಗಿಸು. ಅವಳ ಕಪ್ಪಾದ ಸುರುಳಿಗಟ್ಟಿದ ಮುಖಕ್ಕೆ ಪೂರ್ವ ಕಾಂತಿಯನ್ನು ಕೊಡು."    ▪️ ಸುಬ್‌ಹಾನಲ್ಲಾಹ್. ಅಷ್ಟು ಹೇಳಿದ್ದೇ ತಡ. ಅವರ ಹಸಿವು ಹೋಗುವುದಲ್ಲದೆ ಪೂರ್ವ ಸ್ಥಿತಿಗೆ ಮರಳಿ ಬಂದರು.    ▪️ ಗಮನಾರ್ಹವೆಂದರೆ ಇದರ ಬಳಿಕ ಅವರಿಗೆ ಕೆಲವೊಮ್ಮೆ ಸರಿಯಾದ ಸಮಯದಲ್ಲಿ ಆಹಾರ ಸಿಗದಿದ್ದರೂ ಹಸಿವು ಎಂಬ ತೊಂದರೆ ಅವರ ವಫಾತಿನ ತನಕ ಒಮ್ಮೆಯೂ ಉಂಟಾಗಿಲ್ಲ.  ✍🏻ಸಂಗ್ರಹ: ಇಮಾಮ್ ಹಲಬಿಯ ಅಸ್ಸೀರತುಲ್ ಹಲಬಿಯ್ಯ ಎಂಬ ಗ್ರಂಥದಿಂದ.

ಜ್ಞಾನಧಾರೆ

  ಬದ್ರ್; ಪ್ರವಾದಿﷺ ತಙಲರ ಪ್ರವಚನ! ಅನಸ್ ಬ್ನ್ ಮಾಲಿಕ್(ರ.ಅ) ರಿಂದ ನಿವೇದನೆ: ಮಹಾನರು ಹೇಳುತ್ತಾರೆ, "ನಮ್ಮಲ್ಲಿ ಉಮರ್ ಬ್ನ್ ಖತ್ತಾಬ್(ರ‌.ಅ) ಬದ್ರ್ ಸ್ವಹಾಬಿಗಳ ಕುರಿತು ಸ್ಮರಿಸುತ್ತಾ ಹೇಳಿದರು, "ಖಂಡಿತಾ, ಪ್ರವಾದಿﷺ ಯುದ್ಧದಲ್ಲಿ ಹಾಜರಾಗಿದ್ದರು, ಒಬ್ಬೊಬ್ಬರು ಹುತಾತ್ಮರಾಗಿ(ಮರಣಹೊಂದುವ) ಬೀಳುವ ಜಾಗ ನಮಗೆ ತೋರಿಸಿಕೊಡುತ್ತಾ ಈ ರೀತಿ ಹೇಳಿದ್ದರು, ಇಲ್ಲಿ ಆಗಿದೆ(ಇನ್ಶಾ ಅಲ್ಲಾಹ್) ನಾಳೆ ಈ ಸ್ವಹಾಬಿ(ಶಹೀದ್ ಆಗುವ ಸ್ವಹಾಬಿಗಳ ಕುರಿತು) ಮರಣ ಹೊಂದುವ ಸ್ಥಳ. ಇಲ್ಲಿ ಆಗಿದೆ ನಾಳೆ(ಇನ್ಶಾ ಅಲ್ಲಾಹ್) ಈ ಸ್ವಹಾಬಿ ಮರಣ ಸ್ಥಳ. ಉಮರ್(ರ.ಅ) ಮುಂದುವರೆಸುತ್ತಾರೆ, "ಸತ್ಯದೂತರಾಗಿ ಪ್ರವಾದಿﷺ ತಙಲರನ್ನು ಕಳುಹಿಸಿದ ಅಲ್ಲಾಹನಾಣೆ, ಪ್ರವಾದಿﷺ ಅಂದು ಎಳೆದ ರೇಖೆ ಯಾರೂ ಕೂಡ ಒಂದಲ್ಪವೂ ದಾಟಿಲ್ಲ." [ತ್ವಬ್'ರಾನಿ] ಪ್ರವಾದಿﷺ ಮುಹ್'ಜಿಝತ್ ಮೂಲಕ ಸ್ವಹಾಬಿಗಳು ಹುತಾತ್ಮರಾಗಿ ಬೀಳುವ ಜಾಗ ಮೊದಲೇ ಬಾಕಿ ಸ್ವಹಾಬಿಗಳಿಗೆ ತೋರಿಸಿಕೊಟ್ಟಿದ್ದರು. ಆ ಬದ್ರ್ ಸ್ವಹಾಬಿಗಳ ಬರಕತಿನಿಂದ ಅಲ್ಲಾಹು ನಮ್ಮೆಲ್ಲರಿಗೂ ಪರಮ ಆರೋಗ್ಯದ ಜೊತೆ ದೀರ್ಘಾಯುಷ್ಯ ನೀಡಿ ಕರುಣಿಸಲಿ, ಆಮೀನ್ ಸಾಲಿಮ್ ಮುಈನಿ ಸಖಾಫಿ ರಬ್ಬಾನಿ‌ ಅ'ಸ್ಸಿಂಧಿ ಗದಗ

ಅಧ್ಯಾಯ:2 (ಅಲ್-ಬಕ್ವರ) ಸೂಕ್ತ: 161

ಅಧ್ಯಾಯ:2 (ಅಲ್-ಬಕ್ವರ) ಸೂಕ್ತ: 161 إِنَّ ٱلَّذِينَ كَفَرُوا۟ وَمَاتُوا۟ وَهُمْ كُفَّارٌ أُو۟لَٰٓئِكَ عَلَيْهِمْ لَعْنَةُ ٱللَّهِ وَٱلْمَلَٰٓئِكَةِ وَٱلنَّاسِ أَجْمَعِينَ ಅರ್ಥ:⤵️ ▪️ಸತ್ಯವನ್ನು ನಿಷೇಧಿಸಿದ ಮತ್ತು ಅವಿಶ್ವಾಸಿಗಳಾಗಿಯೇ ಮರಣ ಹೊಂದಿದವರಿಗೆ ಅಲ್ಲಾಹು, ಮಲಾಇಕತ್ ಹಾಗೂ ಸರ್ವ ಜನರ ಶಾಪವಿದೆ ⁸¹. *ವಿವರಣೆ:⤵️* *81.* ಕುಫ್ರ್ ಎಂಬ ಪದವನ್ನು ‘ಈಮಾನ್’ನ ವಿರೋಧಾರ್ಥದಲ್ಲಿ ಬಳಸಲಾಗುತ್ತದೆ. ಈಮಾನ್ ಎಂದರೆ ಪ್ರವಾದಿವರ್ಯ(ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ)ರು ಅಲ್ಲಾಹನಿಂದ ತಂದಿರುವುದೆಂದು ಖಚಿತವಾದ ವಿಚಾರಗಳಲ್ಲಿ ಅವರು ಪೂರ್ಣವಾಗಿಯೂ ಸತ್ಯಸಂಧರೆಂದು ಅಂಗೀಕರಿಸಿ ಆ ವಿಚಾರಗಳಲ್ಲಿ ದೃಢನಂಬಿಕೆ ತಾಳುವುದು. ಅದಕ್ಕೆದುರಾಗಿ ಕುಫ್ರ್ ಎಂದರೆ ಪ್ರವಾದಿವರ್ಯ(ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ)ರು ತಂದ ಆಶಯವೆಂದು ಖಚಿತವಾಗಿರುವ ಒಂದು ವಿಚಾರವನ್ನು ನಿಷೇಧಿಸುವುದು. (ಬೈಳಾವಿ 1/23)

ಬದ್ರ್: ‏ಪ್ರವಾದಿ ‎ﷺ ‏ರವರ ದೀರ್ಘದ್ರಷ್ಟಿ

ಬದ್ರ್: ಪ್ರವಾದಿ ﷺ ರವರ ದೀರ್ಘದ್ರಷ್ಟಿ (عنْ أَنَسِ بْنِ مَالِكٍ، قَالَ: أَنْشَأَ عُمَرُ بْنُ الْخَطَّابِ يُحَدِّثُنَا عَنْ أَهْلِ بَدْرٍ، فَقَالَ: إِنَّ رَسُولَ اللَّهِ صَلَّى اللَّهُ عَلَيْهِ وَآلِهِ وَسَلَّمَ كَانَ يُرِينَا مَصَارِعَ أَهْلِ بَدْرٍ بِالأَمْسِ مِنْ بَدْرٍ، يَقُولُ: هَذَا مَصْرَعُ فُلانٍ غَدًا، وَهَذَا مَصْرَعُ فُلانٍ غَدًا إِنْ شَاءَ اللَّهُ، قَالَ عُمَرُ : فَوَالَّذِي بَعَثَهُ بِالْحَقِّ، مَا أَخْطَأُوا الْحُدُودَ الَّتِي حَدَّهَا رَسُولُ اللَّهِ صَلَّى اللَّهُ عَلَيْهِ وَآلِهِ وَسَلَّمَ".رواه-الطبراني/١٠٨٢)    ಅನಸ್ ಬುನ್ ಮಾಲಿಕ್ (ರ.ಅ) ರಿಂದ ವರದಿ- ಅವರು ಹೇಳಿದರು: ಉಮರ್ ಬುನ್ ಖತ್ತಾಬ್ (ರ.ಅ) ರವರು ಬದ್ರ್'ನ ಕುರಿತು ನಮ್ಮೊಂದಿಗೆ ವಿವರಿಸಿದರು: ಖಂಡಿತವಾಗಿಯೂ ಪ್ರವಾದಿ (ﷺ) ರವರು ಬದ್ರ್ ಯುದ್ಧದ ಹಿಂದಿನ ದಿನ ಮುಶ್ರಿಕ್'ಗಳ ನೇತಾರರೆಲ್ಲರೂ ಸತ್ತುಬೀಳುವ ಸ್ಥಳವನ್ನು ನಮಗೆ ತೋರಿಸಿದ್ದರು. ಪ್ರವಾದಿ ﷺ ರವರು ಹೇಳಿದ್ದಾರೆ: ಇನ್ಶಾ ಅಲ್ಲಾಹ್ ನಾಳೆ ಇಂತಹಾ ವ್ಯಕ್ತಿ ಸಾಯುವ ಸ್ಥಳ ಇದಾಗಿದೆ, ಇಂತಿಂತಹಾ ವ್ಯಕ್ತಿ ಸಾಯುವ ಸ್ಥಳ ಇದಾಗಿದೆ. ಉಮರ್ (ರ.ಅ) ರವರು ಹೇಳಿದರು: "ಪ್ರವಾದಿ ﷺ ರನ್ನು ಸತ್ಯದೂತರಾಗಿ ಕಳುಹಿಸಿದ ಅಲ್ಲಾಹನಾಣೆ, ಯಾರೂ ಕೂಡಾ ಪ್ರವಾದಿ ﷺ ರು ಎಳೆದ ...

ಕೂಲಿಯಾಳುಗಳಿಗೆ ಊಟ:

ಕೂಲಿಯಾಳುಗಳಿಗೆ ಊಟ:   ರಮಳಾನ್ ತಿಂಗಳಲ್ಲಿ ವ್ರತ ತೊರೆಯಲು ಪರಿಗಣಿಸಲಾಗಿರುವ ರಿಯಾಯಿತಿಗಳೇನೂ ಇಲ್ಲದೆ ವೃತ ಉಪೇಕ್ಷಿಸುವುದು ತನ್ನ ಮೇಲೆ ನಿಷಿದ್ಧವಾದಂತೆಯೇ ಇತರರಿಗೆ ಆ ಬಗ್ಗೆ ಸಹಾಯ ಮಾಡುವುದೂ ಹರಾಂ ಆಗಿರುತ್ತದೆ. ಹಾಗೆನ್ನುವಾಗ ತಮ್ಮ ಮನೆಯಲ್ಲಿ ಅಥವಾ ತೋಟಗಳಲ್ಲಿ ಕೆಲಸ ಮಾಡುವ ಕೂಲಿಯಾಳುಗಳಿಗೆ ರಮಳಾನಿನ ಹಗಲಲ್ಲಿ ಊಟ ತಯಾರಿಸಿ ಕೊಡುವುದೂ ನಿಷಿದ್ಧವಾಗಿರುತ್ತದೆ. ಕಾರಣ ಕೆಲಸಗಳು ರಿಯಾಯಿತಿಯಾಗಿ ಪರಿಗಣಿಸಲಾಗುವುದಿಲ್ಲ. ಆದರೆ ಕೃಷಿ ಮತ್ತು ಕಟ್ಟಡ ನಿರ್ಮಾಣ ಈ ಎರಡು ಕೆಲಸವನ್ನು ಮೇಲಿನ ನಿಯಮದಿಂದ ಹೊರತುಪಡಿಸಲಾಗಿದೆ. ಈ ಇಬ್ಬರಿಗೂ ತಮ್ಮ ಕೆಲಸದ ವೇಳೆ ಅತಿಯಾದ ತೊಂದರೆ ಅನುಭವಿಸಬೇಕಾಗಿ ಬಂದಲ್ಲಿ ಮಾತ್ರ ವೃತ ತೊರೆಯುವುದರಲ್ಲಿ ತಪ್ಪಿಲ್ಲ. ಆದರೆ ಆ ರೀತಿಯ ತೊಂದರೆಗಳೇನೂ ಇಲ್ಲದಿದ್ದಲ್ಲಿ ಈ ರಿಯಾಯಿತಿ ಬಾಧಕವಲ್ಲ. ಆದ್ದರಿಂದಲೇ ಪ್ರತಿದಿನವೂ ರಾತ್ರಿ ನಿಯ್ಯತ್ ಮಾಡುವುದು ಇವರಿಗೆ ಕಡ್ಡಾಯವಾಗಿರುತ್ತದೆ. ಕೂಲಿಯಾಳುಗಳು ಅಮುಸ್ಲಿಮರಾದರೂ ಊಟ ತಯಾರಿಸಿ ಕೊಡುವುದು ನಿಷಿದ್ದ ಕಾರಣ ಶಾಫಿಈ ಮದ್ಸ್‌ಹಬ್ ಪ್ರಕಾರ ನಮ್ಮ ಮೇಲೆ ಕಡ್ಡಾಯವಿರುವ ವೈಯಕ್ತಿಕ ಕರ್ಮಗಳೆಲ್ಲವೂ ಅವರ ಮೇಲೂ ಕಡ್ಡಾಯವಾಗಿದೆ. ಆದರೆ ಅವುಗಳು ಸಿಂಧುವಾಗಬೇಕಾದರೆ ಮಾತ್ರ ವ್ಯಕ್ತಿ ಮುಸ್ಲಿಮನಾಗಿರಬೇಕಾದುದು ಒಂದು ನಿಬಂಧನೆಯಷ್ಟೆ.

ಅಧ್ಯಾಯ:2 (ಅಲ್-ಬಕ್ವರ) ಸೂಕ್ತ: 160

ಅಧ್ಯಾಯ:2 (ಅಲ್-ಬಕ್ವರ) ಸೂಕ್ತ: 160 إِلَّا ٱلَّذِينَ تَابُوا۟ وَأَصْلَحُوا۟ وَبَيَّنُوا۟ فَأُو۟لَٰٓئِكَ أَتُوبُ عَلَيْهِمْ ۚ وَأَنَا ٱلتَّوَّابُ ٱلرَّحِيمُ ಅರ್ಥ:⤵️ ▪️ಆದರೆ ತಪ್ಪಿಗೆ ಮರುಗುವ, (ಕರ್ಮವನ್ನು) ಸುಧಾರಿಸಿಕೊಳ್ಳುವ ಮತ್ತು ಮುಚ್ಚಿಟ್ಟದ್ದನ್ನು ಹೊರಗೆಡಹುವವರಿಗೆ ನಾನು ಕ್ಷಮಿಸುತ್ತೇನೆ. ನಾನು ಪರಮ ಕ್ಷಮಾದಾನಿ, ಕರುಣಾವಾರಿಧಿ.             ಸಂ: ✒️ಅಬೂರಿಫಾನ

ಬದ್‌ರ್ ದಿನ:

ಬದ್‌ರ್ ದಿನ:  ಇಸ್ಲಾಮಿನ ಇತಿಹಾಸದಲ್ಲೇ ಅತ್ಯಂತ ಸ್ಮರಿಸಲ್ಪಡುವ ಒಂದು ವಿಶಿಷ್ಟ ದಿನವಾಗಿದ ಬದ್‌ರ್ ದಿನ, ಸತ್ಯ ಮತ್ತು ಅಸತ್ಯದ ವಿವೆಚನೆಗಾಗಿ ನಡೆದ ಅದ್ಭುತ ಹೋರಾಟವೊಂದಕ್ಕೆ ಸಾಕ್ಷಿಯಾದ ಈ ದಿನವು ಪವಿತ್ರ ರಮಳಾನಿನ 17ನೇ ಹಗಲಲ್ಲಾಗಿತ್ತು. ಕೇವಲ ಮುನ್ನೂರು   ಧರ್ಮಯೋಧರು ಉಪವಾಸ ಕೈಗೊಂಡು ನಿರಾಯುಧರಾಗಿ ಸಾವಿರಗಟ್ಟಲೆ ಬರುವ ಸರ್ವ ವಿಧ ಆಯುಧ ಸಜ್ಜರಾಗಿರುವ ಶತ್ರಗಳ ವಿರುದ್ಧ ಧರ್ಮ ಹೋರಾಟ ನಡೆಸಿ ಅದ್ಭುತ ವಿಜಯ ಗಳಿಸಿದ ಈ ಪುಣ್ಯ ದಿನವು ಸತ್ಯ ವಿಶ್ವಾಸಿಗಳಿಗೆ ಒಮ್ಮೆಯೂ ಮರೆಯಲಾಗದ ದಿನವಾಗಿದೆ. ಆ ಮಹಾ ಘಟನೆಯಲ್ಲಿ ಭಾಗವಹಿಸಿದ ಬದ್‌ರ್ ಶುಹದಾಗಳನ್ನು ಸ್ಮರಿಸಿ ಬದ್‌ರ್ ಮೌಲಿದ್, ದಾನ ಧರ್ಮ ಮುಂತಾದ ಒಳಿತುಗಳನ್ನು ಹೆಚ್ಚಿಸುವುದು ಈ ದಿನದಲ್ಲಿ ಪ್ರತ್ಯೇಕ ಪುಣ್ಯದಾಯಕವಾಗಿದೆ. ============================ ಕಾರ್ಯನಿರ್ವಾಹಕರು: ನೂರುಲ್ ಫಲಾಹ್ ಸಮೂಹ ಸಂಸ್ಥೆ(ರಿ)

ಜ್ಞಾನಧಾರೆ

ಬದ್ರ್ ಸ್ವಹಾಬಿಗಳ ಮಹತ್ವ! ಒಮ್ಮೆ ಪ್ರವಾದಿﷺ ರಲ್ಲಿ ಮಲಕ್ ಜಿಬ್ರೀಲ್(ಅ) ಪ್ರಶ್ನಿಸಿದರು: ನಿಮ್ಮ ಪೈಕಿ ಬದ್ರ್'ನಲ್ಲಿ ಭಾಗವಹಿಸಿದವರನ್ನು ನೀವು ಯಾವ ರೀತಿ ಕಾಣುತ್ತೀರಿ..!? ಉತ್ತರ; ಅವರು ನಮ್ಮ ಪೈಕಿ ಅತ್ಯಂತ ಶ್ರೇಷ್ಠರು, ಅತ್ಯುತ್ತಮರು. ಆಗ ಜಿಬ್ರೀಲ್(ಅ) ಹೇಳಿದರು: ಮಲಕುಗಳ(ಫರಿಸ್ತೇಗಳ) ಪೈಕಿ ಬದರಿನಲ್ಲಿ ಭಾಗವಹಿಸಿದವರನ್ನು ನಾವು ಕೂಡ ಅದೇ ರೀತಿ ಕಾಣುತ್ತೇವೆ..[ಅದ್ದುರ್ರುಲ್ ಮನ್ಸೂರ್: 2/307] ಬದ್ರೀಙಲೆ ಕಿಸ್ಸ ಹೇಳುವುದು, ಬದ್ರ್ ಸ್ವಹಾಬಿಗಳ ಮೌಲೀದ್ ಎಲ್ಲವೂ ಅನುವದನೀಯವಾಗಿದ್ದು ಮಹಾಮಾರಿಯಿಂದ ಮುಕ್ತಿ ಹೊಂದಲು ಅವರ ಮುಂದಿರಿಸಿ ನಾವು ದುಆಃ ಮಾಡೋಣ. ಅಲ್ಲಾಹು ಅವರ ಬರಕತಿನಿಂದ ನಮ್ಮೆಲ್ಲರನ್ನೂ ಮಹಾಮಾರಿಯಿಂದ ಕಾಪಾಡಲಿ, ಆಮೀನ್ ✍🏻ಸಾಲಿಮ್ ಮುಈನಿ ಸಖಾಫಿ ರಬ್ಬಾನಿ‌ ಅ'ಸ್ಸಿಂಧಿ ಗಂಡಿಬಾಗಿಲು

ಈ ಮೂರು ವಿಚಾರವನ್ನು ಚೆನ್ನಾಗಿ ಗ್ರಹಿಸೋಣ

ಈ ಮೂರು ವಿಚಾರವನ್ನು ಚೆನ್ನಾಗಿ ಗ್ರಹಿಸೋಣ (عَنْ سَعِيدٍ الطَّائِيِّ أَبِي الْبَخْتَرِيِّ، أَنَّهُ قَالَ حَدَّثَنِي أَبُو كَبْشَةَ الأَنْصارِيُّ، أَنَّهُ سَمِعَ رَسُولَ اللَّهِ صلى الله عليه وسلم يَقُولُ: ‏"‏ثَلاَثَةٌ أُقْسِمُ عَلَيْهِنَّ وَأُحَدِّثُكُمْ حَدِيثًا فَاحْفَظُوهُ"‏.‏ قَالَ ‏"‏مَا نَقَصَ مَالُ عَبْدٍ مِنْ صَدَقَةٍ وَلاَ ظُلِمَ عَبْدٌ مَظْلِمَةً فَصَبَرَ عَلَيْهَا إِلاَّ زَادَهُ اللَّهُ عِزًّا وَلاَ فَتَحَ عَبْدٌ بَابَ مَسْأَلَةٍ إِلاَّ فَتَحَ اللَّهُ عَلَيْهِ بَابَ فَقْرٍ".رواه-ترمذي)    ಅಬೂ ಕಬ್'ಶತುಲ್ ಅನ್ಸಾರೀ (ರ.ಅ) ರಿಂದ ವರದಿ- ಪ್ರವಾದಿ ﷺ ಹೇಳುವುದನ್ನು ನಾನು ಕೇಳಿದೆನು: ಮೂರು ವಿಷಯಗಳನ್ನು ನಾನು ನಿಮ್ಮೊಂದಿಗೆ ಪ್ರತಿಜ್ಞೆ ಮಾಡಿ ಹೇಳುತ್ತೇನೆ. ಅದನ್ನು ನೀವು ಒಳ್ಳೆಯ ರೀತಿಯಲ್ಲಿ ಗ್ರಹಿಸಿ ಅರ್ಥಮಾಡಿಕೊಳ್ಳಬೇಕು. ನಂತರ ಪ್ರವಾದಿ (ﷺ) ರವರು ಹೇಳಿದರು: ದಾನಧರ್ಮವು ಯಾವುದೇ ಒಬ್ಬ ವ್ಯಕ್ತಿಯ ಸಂಪತ್ತನ್ನು ಕಡಿಮೆ ಮಾಡುವುದಿಲ್ಲ. ಅನ್ಯಾಯ ಉಂಟಾಗಿಯೂ ಕ್ಷಮೆ ನೀಡುವ ವ್ಯಕ್ತಿಗೆ ಅಲ್ಲಾಹನು ಮಹಿಮೆಯನ್ನು ಹೆಚ್ಚಿಸುವನು. ಯಾವುದೇ ಒಬ್ಬ ವ್ಯಕ್ತಿಯು ಕೈಚಾಚಿ ಬೇಡಲು ತೊಡಗುತ್ತಾನೋ, ಅವನಿಗೆ ಅಲ್ಲಾಹನು ಬಡತನವೆಂಬ ದಾರಿದ್ರ್ಯವನ್ನು ಹೆಚ್ಚಿಸುವನು.  (ಹದೀಸ್- ಇಮಾಂ ತುರ್ಮುಝೀ...

ಜ್ಞಾನಧಾರೆ

ದಾನ-ಧರ್ಮದ ಮಹತ್ವ ಅಬೂಹುರೈರಾ(ರ.ಅ) ರಿಂದ ನಿವೇದನೆ: ಪ್ರವಾದಿﷺ ಹೇಳಿದರು, "ಪ್ರತಿ ದಿನ ಮುಂಜಾನೆ ಎರಡು ಮಲಕುಗಳು(ಫರಿಸ್ತೆಗಳು) ಭೂಲೋಕಕ್ಕೆ ಇಳಿದು ಬರುವರು. ನಂತರ ಅವರ ಪೈಕಿ ಒಬ್ಬರು ಅಲ್ಲಾಹನೇ, ಸಂಪತ್ತು ಉತ್ತಮ ಕೆಲಸಕ್ಕೆ ಖರ್ಚು ಮಾಡುವವನಿಗೆ ನೀ ಬದಲಿ ನೀಡು ಅಲ್ಲಾಹ್ (ಹೆಚ್ಚಾಗಿಸು) ಎಂದು ಪ್ರಾರ್ಥಿಸುವಾಗ ಮತ್ತೊಂದು ಫರಿಸ್ತೆ ಅಲ್ಲಾಹನೇ, ಖರ್ಚು ಮಾಡದವನಿಗೆ(ಜಿಪುಣನಿಗೆ) ನೀ ನಾಶವನ್ನು ನೀಡು ಅಲ್ಲಾಹ್ ಎಂದು ಪ್ರಾರ್ಥಿಸುವುದು." [ಸ್ವ.ಬುಖಾರಿ] ✍🏻ಸಾಲಿಮ್ ಮುಈನಿ ಸಖಾಫಿ ರಬ್ಬಾನಿ‌ ಅ'ಸ್ಸಿಂಧಿ ಗದಗ

ಸಂಪತ್ತಿನಿಂದ ಝಕಾತ್ ಮತ್ತು ದಾನ ನೀಡಿರಿ

ಸಂಪತ್ತಿನಿಂದ ಝಕಾತ್ ಮತ್ತು ದಾನ ನೀಡಿರಿ (عن ﻋَﺒْﺪِ اﻟﻠﻪِ رضي الله عنه ﻗَﺎﻝَ: ﻗَﺎﻝَ ﺭَﺳُﻮﻝُ اﻟﻠﻪِ ﺻَﻠَّﻰ اﻟﻠﻪُ ﻋَﻠَﻴْﻪِ ﻭَﺳَﻠَّﻢَ: ﺣَﺼِّﻨُﻮا ﺃَﻣْﻮَاﻟَﻜُﻢْ ﺑِﺎﻟﺰَّﻛَﺎﺓِ، ﻭَﺩَاﻭُﻭا ﻣَﺮْﺿَﺎﻛُﻢْ ﺑﺎﻟﺼﺪﻗﺔ، ﻭَﺃَﻋِﺪُّﻭا ﻟِﻠْﺒَﻼَءِ اﻟﺪُّﻋَﺎء".رواه-الطبراني:١٠١٩٦)    ಅಬ್ದುಲ್ಲಾ (ರ.ಅ) ರಿಂದ ವರದಿ- ಪ್ರವಾದಿ ﷺ ಹೇಳಿದರು: ನಿಮ್ಮ ಹಣದಿಂದ ಝಕಾತ್ ನೀಡುವ ಮೂಲಕ ನಿಮ್ಮ ಸಂಪತ್ತನ್ನು ರಕ್ಷಿಸಿರಿ. ನಿಮ್ಮಲ್ಲಿ ರೋಗಿಗಳಿಗೆ ನೀವು ದಾನವನ್ನು ಕೊಟ್ಟು ಚಿಕಿತ್ಸೆಗೆ ಸಹಾಯ ಮಾಡಿರಿ. ಸಂಕಷ್ಟಗಳು ಬಂದಾಗ ಪ್ರಾರ್ಥನೆ ಮಾಡಲು ಸಿದ್ಧರಾಗಿರಿ. (ಹದೀಸ್- ಇಮಾಂ ತ್ವಬ್ರಾನೀ) ▪ಒಳಿತನ್ನು ಕಲಿಯಲು ಅಲ್ಲಾಹನು ನಮಗೆ ಅನುಗ್ರಹಿಸಲಿ. ಆಮೀನ್🤲▪ ತಾಜುದ್ದೀನ್ ಸಖಾಫಿ,ಕುಂದಾಪುರ (27-04-2021,ಮಂಗಳವಾರ) (15-ರಂಝಾನ್-1442) ✳✳✳✳✳✳✳✳✳✳

ಜೇನು ತುಪ್ಪದ ಔಷಧಿಯ ಗುಣಗಳು....

ಜೇನು ತುಪ್ಪದ ಔಷಧಿಯ ಗುಣಗಳು.... ರಹ್ಮಾನನೂ ರಹೀಮ‌ನೂ ಆದ ಅಲ್ಲಾಹನ ನಾಮದಿಂದ ಸರ್ವಲೋಕ ಪರಿಪಾಲಕನಾದ ಅಲ್ಲಾಹನಿಗೆ ಸರ್ವಸ್ತುತಿ. ಅಲ್ಲಾಹನ ಸ್ವಲಾತ್ ಸಲಾಮ್ ಗಳು ಅಂತ್ಯ ಪ್ರವಾದಿ ಮುಹಮ್ಮದ್‌ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಮೇಲೂ ಅವರ ಬಂಧುಗಳು ಹಾಗೂ ಅನುಚರರಾದ ಸ್ವಹಾಬಿಗಳ ಮೇಲೂ ಸದಾ ವರ್ಷಿಸುತ್ತಿರಲಿ. ಮಾನ್ಯ ಓದುಗರೇ ನಿಮ್ಮ ಕೈಗೆ ತಲುಪಿದ ಈ ಲೇಖನ ನಿತ್ಯ ಜೀವನದಲ್ಲಿ ನಮಗೆ ಬಾಧಿಸುವಂತಹ ಹಲವು ತರದ ಅನಾರೋಗ್ಯ ಸಮಸ್ಯೆಗಳಿಗೆ ಜೇನು ತುಪ್ಪದಿಂದ ಯಾವ ರೀತಿಯಲ್ಲಿ ಪರಿಹಾರ ಕಂಡು ಕೊಳ್ಳಬಹುದು ಎಂಬುವುದರ ಬಗ್ಗೆ ತುಂಬಾ ಸರಳವಾದ ರೀತಿಯಲ್ಲಿ ತಿಳಿಸಿ ಕೊಡಲಾಗಿದೆ. ಜೇನಿನ ಕುರಿತು ವಿಶುದ್ಧ ಖುರ್ಆನಿನಲ್ಲಿ ಒಂದು ಅಧ್ಯಾಯವೇ ಇರುವಾಗ ಹದೀಸ್ ಗಳ ಗ್ರಂಥಗಳಲ್ಲಿ ಸಾಕಷ್ಟು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ನುಡಿಗಳಿರುವಾಗ ಅಧುನಿಕ ವೈದ್ಯ ವಿಜ್ಙಾನ ಜೇನು ತುಪ್ಪದ ಕುರಿತು ಈಗಲೂ ಸಂಶೋಧನೆ ಮುಂದುವರಿಸುತ್ತಿರುವಾಗ ನಾವು ಅದರ ಔಷಧಿಯ ಗುಣಗಳ ಕುರಿತು ತಿಳಿದು ಕೊಳ್ಳುವುದು ಅತ್ಯಾವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಈ ಕಿರು ಲೇಖನ ಎಲ್ಲರಿಗೂ ಪ್ರಯೋಜನವಾಗಲಿ. ಅಲ್ಲಾಹನು ಈ ಚಿಕ್ಕ ಪ್ರಯತ್ನವನ್ನು ಕಬೂಲ್ ಮಾಡಲಿ.....         ಉಬ್ಬಸ 01. ಕೊತ್ತಂಬರಿ ಬೀಜದ ಕಷಾಯ ಮಾಡಿ ಚೆನ್ನಾಗಿ ತಣಿಸಿ ಎಂಟನೇ ಒಂದು ಪಾಲು ಜೇನು ಸೇವಿಸುವುದರಿಂದ ಗುಣವಾಗುವುದು. 02. ಪ್ರತಿದಿನ ಮಲಗುವುದಕ್ಕಿಂತ ಮುಂಚೆ ಎರಡು ಚಮಚ ಶು...

ಉವೈಸುಲ್ ಖರ್ನಿ(ರ.ಅ):

ಉವೈಸುಲ್ ಖರ್ನಿ(ರ.ಅ): ಭೌತಿಕ ಜೀವನದಲ್ಲಿ ನಯಾಪೈಸೆಯ ಆಸಕ್ತಿಯನ್ನೂ ತೋರದ ಮಹಾತ್ಮರಾಗಿದ್ದರು ಉವೈಸುಲ್ ಖರ್ನಿ(ರ.ಅ), ಇದರಿಂದ ಮನೆಯವರೂ ಸಹ ಅವರನ್ನು ಮಾನಸಿಕ ರೋಗಿಯಂತೆ ಕಂಡರು. ಅವರಿಗೆ ವಾಸಿಸಲು ಮನೆಯ ಪಕ್ಕದಲ್ಲಿ ಮತ್ತೊಂದು ಮನೆಯನ್ನು ನಿರ್ಮಿಸಿ ಕೊಡಲಾಯಿತು. ಉವೈಸುಲ್ ಖರ್ನಿ(ರ.ಅ) ಆ ಮನೆಯನ್ನು ಬಹಳ ಕಡಿಮೆ ಹೊತ್ತು ಉಪಯೋಗಿಸುತ್ತಿದ್ದರು, ಸುಬುಹಿ ಬಾಂಗ್ ಮೊಳಗುತ್ತಿದ್ದಂತೆ ಅವರು ಮನೆಯಿಂದ ಹೊರಡುತ್ತಿದ್ದರು. ಇಶಾಅ್ ನಮಾಝಿನ ಬಳಿಕ ಹಿಂದಿರುಗುತ್ತಿದ್ದರು. ತೀರಾ ಕೆಳ ಮಟ್ಟದ ಒಣ ಖರ್ಜೂರ ದೊರೆತರೆ ಅವರದನ್ನು ಉಪವಾಸ ತ್ಯಜಿಸಲು ಎತ್ತಿಡುತ್ತಿದ್ದರು. ಏನೂ ಸಿಗದಿದ್ದಲ್ಲಿ ಅವರು ಖರ್ಜೂರದ ಬೀಜಗಳನ್ನು ಸಂಗ್ರಹಿಸಿ, ಮಾರಾಟ ಮಾಡುತ್ತಿದ್ದರು. ಅದರಿಂದ ದೊರೆತ ಹಣದಿಂದ ಉಪವಾಸ ತ್ಯಜಿಸಲು ಕಳಪೆ ಮಟ್ಟದ ಒಣ ಖರ್ಜೂರಗಳನ್ನು ಖರೀದಿಸುತ್ತಿದ್ದರು. ಇದು ಅವರ ಜೀವನ ರೂಢಿಯಾಗಿತ್ತು. (ಇಹ್ಯಾ: 3/192).

ಅಧ್ಯಾಯ:2 (ಅಲ್-ಬಕ್ವರ) ಸೂಕ್ತ: 159

ಅಧ್ಯಾಯ:2 (ಅಲ್-ಬಕ್ವರ) ಸೂಕ್ತ: 159 إِنَّ ٱلَّذِينَ يَكْتُمُونَ مَآ أَنزَلْنَا مِنَ ٱلْبَيِّنَٰتِ وَٱلْهُدَىٰ مِنۢ بَعْدِ مَا بَيَّنَّٰهُ لِلنَّاسِ فِى ٱلْكِتَٰبِ ۙ أُو۟لَٰٓئِكَ يَلْعَنُهُمُ ٱللَّهُ وَيَلْعَنُهُمُ ٱللَّٰعِنُونَ ಅರ್ಥ:  ನಾವು ಅವತೀರ್ಣಗೊಳಿಸಿದ ಸುವ್ಯಕ್ತ ದೃಷ್ಟಾಂತಗಳು ಮತ್ತು ಸತ್ಯದರ್ಶನವನ್ನು ಜನರಿಗೋಸ್ಕರ ನಾವು ಗ್ರಂಥದಲ್ಲಿ ವಿವರಿಸಿದ ನಂತರವೂ ಮರೆ ಮಾಚುವವರನ್ನು ಅಲ್ಲಾಹನು ಶಪಿಸುವನು. ಶಪಿಸುವ ಇತರರೂ ಶಪಿಸುವರು.

ಪ್ರವಾದಿ ಪ್ರಪಂಚ

ಪ್ರವಾದಿಯ ಪ್ರಪಂಚ     ▪️ ಪ್ರವಾದಿ ಮುಹಮ್ಮದ್ ﷺ ರು ಈದುಲ್ ಫಿತ್‌ರ್ ಹಬ್ಬದಂದು (ಚೆರಿಯ ಪೆರುನಾಳ್) ಬೆಳಿಗ್ಗೆ ಈದ್ ನಮಾಝಿಗೆ ಮಸೀದಿಗೆ ಹೋಗುವಾಗ ಬೆಳಗಿನ ಉಪಹಾರ ಮಾಡಿ ಹೋಗುತ್ತಿದ್ದರು. ಆದರೆ ಬಕ್ರೀದ್ ಹಬ್ಬದಂದು (ಬೆಲಿಯೆ ಪೆರುನಾಳ್) ಹೋಗುವಾಗ ಹಸಿ ಹೊಟ್ಟೆಯಲ್ಲಿ ಏನೂ ತಿನ್ನದೆ ಹೋಗುತ್ತಿದ್ದರು. ಬಳಿಕ ಮಸೀದಿಯಿಂದ ಬಂದ ನಂತರ ಭೋಜನ ಮಾಡುತ್ತಿದ್ದರು. ಹಾಗೆಯೇ ಎರಡು ಹಬ್ಬದ ದಿನ ಮಸಿದಿಗೆ ಒಂದು ದಾರಿಯಲ್ಲಿ ಹೋದರೆ ವಾಪಸು ಬರುವಾಗ ಬೇರೊಂದು ದಾರಿಯಾಗಿ ಬರುತ್ತಿದ್ದರು. ✍🏻ಸಂಗ್ರಹ: ಇಮಾಮ್ ಬಿನ್ ಜವ್‌ಝಿಯ ಅಲ್ ವಫಾ ಬಿ ಅಹ್ವಾಲಿಲ್ ಮುಸ್ತಫಾ ಎಂಬ ಗ್ರಂಥದಿಂದ.

ಪ್ರವಾದಿ ಪ್ರಪಂಚ

ಪ್ರವಾದಿಯ ಪ್ರಪಂಚ     ▪️  ಪ್ರವಾದಿಮುಹಮ್ಮದ್ ﷺ ರು ಒಮ್ಮೆ ಒಂದು ದಾರಿಯಲ್ಲಿ ಹೋಗುತ್ತಿರುವಾಗ ಅವರಿಗೆ ಬಾಯಾರಿಕೆಯಾಯಿತು. ಹತ್ತಿರದ ಮನೆಯ ಯಹೂದಿಯೊಬ್ಬನು ನೀರು ಕೊಟ್ಟು ಅವರ ಬಾಯಾರಿಕೆಯನ್ನು ನೀಗಿಸಿದನು. ನೀರು ಕೊಟ್ಟ ಅಮುಸ್ಲಿಮನಾದ ಯಹೂದಿಗೆ ಧನ್ಯವಾದವಾಗಿ ಪ್ರವಾದಿವರ್ಯರು "ನಿನ್ನ ಸೌಂದರ್ಯವನ್ನು ಅಲ್ಲಾಹನು ಕಾಪಾಡಲಿ." ಎಂದು ದುಆ ಮಾಡಿದರು.    ▪️ ಗಮನಾರ್ಹವೆಂದರೆ ಈ ಯಹೂದಿಯು ಮುದುಕನಾಗಿ ಮರಣ ಹೊಂದುವ ತನಕ ಈತನ ಒಂದೇ ಒಂದು ಕೂದಲು ಕೂಡ ಬೆಳ್ಳಗಾಗಲಿಲ್ಲ! ✍🏻ಸಂಗ್ರಹ: ಇಮಾಮ್ ಅಹ್ಮದ್‌ರವರ *ಮುಸ್ನದ್ ಅಹ್ಮದ್* ಎಂಬ ಗ್ರಂಥದಿಂದ

ಅಧ್ಯಾಯ:2 (ಅಲ್-ಬಕ್ವರ) ಸೂಕ್ತ: 158

ಅಧ್ಯಾಯ:2 (ಅಲ್-ಬಕ್ವರ) ಸೂಕ್ತ: 158 ۞ إِنَّ ٱلصَّفَا وَٱلْمَرْوَةَ مِن شَعَآئِرِ ٱللَّهِ ۖ فَمَنْ حَجَّ ٱلْبَيْتَ أَوِ ٱعْتَمَرَ فَلَا جُنَاحَ عَلَيْهِ أَن يَطَّوَّفَ بِهِمَا ۚ وَمَن تَطَوَّعَ خَيْرًۭا فَإِنَّ ٱللَّهَ شَاكِرٌ عَلِيمٌ ಅರ್ಥ: ಖಂಡಿತವಾಗಿಯೂ ಸಫಾ ಮತ್ತು ಮರ್ವಾ ಅಲ್ಲಾಹನ ಕುರುಹುಗಳಲ್ಲಿ ಸೇರಿವೆ. ಆದುದರಿಂದ ಕಅಬಾದಲ್ಲಿ ಹಜ್-ಉಮ್ರಾ ನಿರ್ವಹಿಸುವವರು ಅವುಗಳ ನಡುವೆ ಪಥಸಂಚಲನೆ (ಸಅ್‌ಯ್) ಗೈಯುವುದು ತಪ್ಪಲ್ಲ ⁸⁰. ಯಾರಾದರೂ ಸ್ವಪ್ರೇರಿತನಾಗಿ ಸುಕೃತ ಮಾಡಿದರೆ, (ಅದು ವ್ಯರ್ಥವಲ್ಲ. ಏಕೆಂದರೆ) ಖಂಡಿತ ಅಲ್ಲಾಹನು ಕೃತಜ್ಞನೂ ಅಭಿಜ್ಞನೂ ಆಗಿರುವನು. ವಿವರಣೆ:⤵️ 80. ಸಫಾ ಮತ್ತು ಮರ್ವಾ ಕಅ್‌ಬಾದ ಪಕ್ಕದಲ್ಲಿರುವ ಎರಡು ಬೆಟ್ಟಗಳು. ಇವುಗಳನ್ನು ಇಲ್ಲಿ ‘ಶಆಯಿರಿಲ್ಲಾಹ್’ ಎನ್ನಲಾಗಿದೆ. ಅಲ್ಲಾಹನ ಸಂಕೇತಗಳು ಎಂದರ್ಥ. ಎಂದರೆ ಧರ್ಮಾನುಸರಣೆಯ ಪ್ರತ್ಯಕ್ಷ ಕುರುಹುಗಳು. ಹಾಜರ್‍ಬೀವಿ(ರ.ಅ)ಯವರು ತನ್ನ ಶಿಶುವಿನ ದಾಹ ಶಮನಕ್ಕಾಗಿ ಈ ಎರಡು ಬೆಟ್ಟಗಳ ನಡುವೆ ಅತ್ತಿತ್ತ ಓಡಾಡಿದ ಘಟನೆಯ ಸ್ಮರಣೆಗಾಗಿ ಸಫಾ-ಮರ್ವಾದ ನಡುವಣ ಓಟ (ಸಅ್‌ಯ್)ವನ್ನು ಹಜ್ಜ್ ಹಾಗೂ ಉಮ್ರಾದಲ್ಲಿ ಧರ್ಮಶಾಸ್ತ್ರಗೊಳಿಸಲಾಗಿದೆ. ಆದರೆ ಇಸ್ಲಾಮಿನ ಆರಂಭ ಕಾಲದಲ್ಲಿ ವಿಗ್ರಹಾರಾಧಕರು ಆ ಎರಡು ಬೆಟ್ಟಗಳಲ್ಲೂ ವಿಗ್ರಹಗಳನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಿದ್ದರು. ಹೀಗಾಗಿ ಮುಸ್ಲಿಮರು ಆ ಬೆಟ್ಟಗಳನ್ನು ಪ್ರದಕ್ಷಿಣೆ ಮಾಡ...

ಧರ್ಮಭ್ರಷ್ಟ:

ಧರ್ಮಭ್ರಷ್ಟ:  ಸತ್ಯ ವಿಶ್ವಾಸಿಯಾಗಿರಬೇಕಾದುದೂ ವೃತ ಸಿಂಧುವಾಗಲಿಕ್ಕಿರುವ ಒಂದು ನಿಬಂಧನೆಯಾಗಿದೆ. ಆದ್ದರಿಂದ ವೃತಸ್ಥ ಪವಿತ್ರ ಇಸ್ಲಾಂನಿಂದ ಧರ್ಮಭ್ರಷ್ಟ (ಮುರ್‌ತದ್) ನಾದರೆ ವೃತ ಭಂಗವಾಗುತ್ತದೆ. ಕೂಡಲೇ ಅದರಿಂದ ಮರಳಿ ಬಂದರೂ ಸರಿ.  ಧರ್ಮಭ್ರಷ್ಟನಾದಂತೆ ಯಾವುದೆ ಸತ್ಕರ್ಮಗಳೂ ಅವನಿಂದ ಸ್ವೀಕರಿಸಲಾಗುವುದಿಲ್ಲ. ಆದ್ದರಿಂದಲೆ ಈ ಸಂದರ್ಭದಲ್ಲಿ ಅವನ ಮೇಲೆ ಕಡ್ಡಾಯವಾಗುವ ನಮಾಝ್, ಉಪವಾಸಗಳಂತಹ ಕಾರ್ಯಗಳನ್ನೆಲ್ಲವೂ ನಂತರ ದೀನಿಗೆ ಮರಳಿ ಬಂದರೆ ಖಳಾಅ್ ಸಂದಾಯಿಸುವುದು ಕಡ್ಡಾಯವಾಗಿರುತ್ತದೆ.  ಧರ್ಮಭ್ರಷ್ಟ ಅತ್ಯಂತ ಮಹಾಪಾಪವಾಗಿದೆ. ಇತರ ದೋಷಕೃತ್ಯಗಳನ್ನೆಲ್ಲಾ ಅಲ್ಲಾಹು ಇಚ್ಚಿಸುವವರಿಗೆ ಕ್ಷಮಿಸಿ ಕೊಡುವನು. ಆದರೆ ಧರ್ಮಭ್ರಷ್ಟ ಮಾತ್ರ ಒಮ್ಮೆಯೂ ಕ್ಷಮಿಸುವಂತಿಲ್ಲ ಎಂದು ಪವಿತ್ರ ಕುರ್‌ಆನ್ ಸ್ಪಷ್ಟಪಡಿಸಿದೆ. ಅಲ್ಲಾಹನು ನಮ್ಮೆಲ್ಲರನ್ನೂ ಅದರಿಂದ ಕಾಪಾಡಲಿ. ಆಮೀನ್

ಝಕಾತ್ ಝಕಾತ್ ಝಕಾತ್

ಝಕಾತ್ ಝಕಾತ್ ಝಕಾತ್ ಬಾಡಿಗೆ ಕುಳಿತವರು *ಲೀಸ್‌ಗೆ ಕುಳಿತವರು* ಇದನ್ನು ಓದಿ.... 595 ಗ್ರಾಮ್ ಬೆಳ್ಳಿಯ ಹಣ ಒಂದು ವರ್ಷ ಸಂಗ್ರಹ ಇದ್ದರೆ ಝಕಾತ್ ನೀಡಬೇಕು. 25/4/2021 ರಂದು ಒಂದು ಗ್ರಾಮ್ ಬೆಳ್ಳಿಯ ಹಣ 70 ರುಪಾಯಿ.( ಆಯಾ ದಿವಸ ರೇಟ್ ಏರುಪೇರಾಗುತ್ತದೆ.) ಹಾಗಾದರೆ 70×595= 41650  ಇಂದಿನ ಬೆಳ್ಳಿಯ ರುಪಾಯಿಯಂತೆ ಒಬ್ಬನ ಕೈ ವಶ ಅಥವಾ ಈತನ ಹಣ ಬೇರೆಯವರ ಕೈ ವಶ 41650 ರುಪಾಯಿ ಇದ್ದರೆ ಅದರ ಎರಡು ವರೆ ಶೇಕಡಾ ಝಕಾತ್ ನೀಡಬೇಕು. ಗಮನಿಸಿ: 👉 *41650 ರುಪಾಯಿ ಯಷ್ಟು ಹಣ ಅಥವಾ ಅದಕ್ಕಿಂತ ಜಾಸ್ತಿ ಬಾಡಿಗೆಗಾಗಿ ಅಡ್ವಾನ್ಸ್ ನೀಡಿದವರು* 👉 *41650 ರುಪಾಯಿ ಹಾಗೂ ಅದಕ್ಕಿಂತ ಅಧಿಕ ಹಣ ಲೀಸ್‌ಗಾಗಿ ನೀಡಿದವರು* ಅವರ ಮೇಲೆ ಝಕಾತ್ ಕಡ್ಡಾಯವಾಗಿದೆ. ನಾವು ಬಡವರು ಹಾಗಾಗಿ ನಾವು ಝಕಾತ್ ನೀಡಬೇಕೆ ? ಎಂದು ಕೇಳುವವರು ಇರಬಹುದು. ಬಡತನ ಎಂಬುದು ಇಲ್ಲಿ ಮಾನದಂಡ ವಲ್ಲ. ಝಕಾತ್ ಪಡೆಯಲು ಅರ್ಹತೆ ಇರುವವರು ಕೆಲವೊಮ್ಮೆ ಝಕಾತ್ ನೀಡಲು ಅರ್ಹರಾಗುತ್ತಾರೆ. ಬಾಡಿಗೆ ಕುಳಿತವರು,ಲೀಸ್‌ಗೆ ಕುಳಿತವರು ಕನಿಷ್ಠ 41650 ರುಪಾಯಿಗಳು ಅಥವಾ ಹೆಚ್ಚು ಮೊತ್ತವನ್ನು ನೀವು ಭದ್ರತಾ ಠೇವಣಿಯಿಗಿ ಇಟ್ಟಿದ್ದರೆ ಅದರ ಲೆಕ್ಕ ಮಾಡಿ ಝಕಾತ್ ನೀಡಿರಿ. ಅದು ನಿಮ್ಮ ಮೇಲೆ ಕಡ್ಡಾಯ ವಾಗಿದೆ.

ಕಳೆದು ಹೋಗುವ ಸಮಯ

اَلسَّلَامُ عَلَيْكُمْ وَرَحْمَةُ اللّٰـهِ وَبَرَكاتُهُ‎         •·•·•·•·•·•·•·•·•·••·•·•·•·•·•·•·•     ಕಳೆದು ಹೋಗುವ ಸಮಯ        •·•·•·•·•·•·•·•·•·••·•·•·•·•·•·•·•        بِسْمِ اللّٰـهِ الرَّحْمَنِ الرَّحِيمِ      ═════ ✥.❖.✥ ═════ ನಾವು ನಮ್ಮ ಸಮಯವನ್ನು ವ್ಯರ್ಥ ಮಾಡುತ್ತಿರುವೆವು ನಿನ್ನೆ ನಿರ್ವಹಿಸಿದ ಸತ್ಕರ್ಮಗಳು ಇವತ್ತು ನಾವು ನಿರ್ವಹಿಸುತ್ತಿಲ್ಲ. (ಅಬ್ದುಲ್ಲಾಹಿ ಬಿನ್ ಮಸೂದ್) (ರ) ಹೇಳುವರು ما ندمت على شيء ندمي علي يوم جربت سامسونج نقص فيه اجلي ولم  يزد فيه امل *ನಾನು ಬಹಳ ದುಃಖಿತನಾಗಿದ್ದು ಯಾವುದಾದರೂ ಒಂದು ದಿವಸ ಅದು ನನ್ನಿಂದ ನಷ್ಟವಾಗಿ ಹೋಯಿತಲ್ಲವೆಂದು ಆ ದಿನವಾಗಲಿ ನನ್ನ ಆಯುಷ್ಯದಲ್ಲಿ ಒಂದು ದಿವಸ ಕಳೆದುಹೋಯಿತು ಆದರೆ* *ಸತ್ಕರ್ಮಗಳಲ್ಲಿ ಯಾವುದೇ ಬದಲಾವಣೆ ಕಾಣಲಿಲ್ಲ ಅದಕ್ಕಿಂತ ದುಖಃ ಮತ್ಯಾವುದೇ ವಿಷಯಗಳಲ್ಲಿಲ್ಲ ಎಂದಾಗಿದೆ.* ಆದ್ದರಿಂದ ಸತ್ಕರ್ಮಗಳು ವರ್ದಿಸದೆ ದಿವಸಗಳು ಕಳೆದುಹೋಗುವುದು ಬಹಳ ವಿಪರ್ಯಾಸವಾದ ಕಾರ್ಯವಾಗಿದೆ ಎಂದು (ಅಬ್ದುಲ್ಲಾಹಿ ಬಿನ್ ಮಾಸ್ ವೂದ್)(ರ) ಹೇಳುವರು. ಆದ್ದರಿಂದ ಸಹೋದರರೇ:-ಸಮಯವೆಂದರೆ ಬಹಳ ಉತ್ತಮವಾದುದ್ದಾಗಿದೆ ಮರಣ ಸಂದರ್ಭಗಳಲ್ಲಿ ಒಂದು ನಿಮಿಷಕ್ಕಾಗಿ ಅಲ್ಲಾಹನಲ್ಲಿ ನಾವು ಯಾಚಿಸುವೆವು ಎಂದು...

ರಮಳಾನ್ ಸಂಶಯಗಳಿಗೆ ಉತ್ತರ

      ರಮಳಾನ್ : ವಿಶೇಷ ಲೇಖನಗಳು                      ಸಂಶಯಗಳಿಗೆ ಉತ್ತರ      1. ರಮಳಾನ್ ಉಪವಾಸ ಕಡ್ಡಾಯವಾದದ್ದು ಹಿಜ್ರ:ದ ಎಷ್ಟನೇ ವರ್ಷದಲ್ಲಿ? =ಹಿಜ್ರ:2ನೇ ವರ್ಷ ಶಅಬಾನ್ ತಿಂಗಳಲ್ಲಿ ಉಪವಾಸ ಕಡ್ಡಾಯವಾಯಿತು. 2. ಪ್ರವಾದಿ (ಸ)ರು ಎಷ್ಟು ವರ್ಷಗಳ ಕಾಲ ರಮಳಾನ್ ಉಪವಾಸ ಆಚರಿಸಿದ್ದಾರೆ? =ಒಂಭತ್ತು ವರ್ಷಗಳು. 3. ಪ್ರವಾದಿ(ಸ)ರಿಗೆ ತನ್ನ ಜೀವನದಲ್ಲಿ ಎಷ್ಟು ಸಲ ರಮಳಾನ್ ಮೂವತ್ತು ದಿನಗಳ ಪೂರ್ತಿ ಉಪವಾಸ ಸಿಕ್ಕಿದೆ? = ಒಮ್ಮೆ ಮಾತ್ರ. 4. ರಮಳಾನಿನ ಉಪವಾಸ ಪ್ರವಾದಿ(ಸ)ರ ಉಮ್ಮತಿಗಳಿಗೆ ಮಾತ್ರ ವಿರುವಂತದ್ದೇ? ಇಲ್ಲವೇ ಗತಕಾಲ ಪ್ರವಾದಿಗಳ ಸಮುದಾಯದವರಿಗೂ ಇತ್ತೇ? = ಗತಕಾಲ ಪ್ರವಾದಿಗಳ ಸಮುದಾಯದವರಿಗೂ ಉಪವಾಸ ಕಡ್ಡಾಯವಿತ್ತು.ಆದರೆ ರಮಳಾನಿನ ಉಪವಾಸ ಪ್ರವಾದಿ( ಸ)ರ ಉಮ್ಮತಿಗಳಿಗೆ ಮಾತ್ರವಿರುವ ಉಪವಾಸವಾಗಿದೆ. 5. ರಮಳಾನ್ ತಿಂಗಳಲ್ಲಿ ಉಪವಾಸ ಮಾಡದವರು ಮುರ್ತದ್ದ್ (ಧರ್ಮ ಭ್ರಷ್ಟ) ಆಗುತ್ತಾರೆಯೇ? =ಉಪವಾಸ ಮಾಡದ ಕಾರಣದಿಂದ ‌ಮುರ್ತದ್ದ್ ಆಗುವುದಿಲ್ಲ. 6. ರಮಳಾನ್ ತಿಂಗಳ ಉಪವಾಸ ಕಡ್ಡಾಯವಿಲ್ಲವೆಂದು ಹೇಳಿದರೆ ಅಥವಾ ವಿಶ್ವಾಸವಿರಿಸಿದರೆ ಅವರು ಮುರ್ತದ್ದ್ ಆಗುತ್ತಾರೆಯೇ? = ಹೌದು. ಅವರು ಮುರ್ತದ್ದ್ ಅಂದರೆ ಇಸ್ಲಾಮಿನಿಂದ ಹೊರಕ್ಕೆ ಆಗುತ್ತಾರೆ. 7. ಓರ್ವ ರಮಳಾನ್ ತಿಂಗಳ ಉಪವಾಸ ನಿರ್ವಹಿಸುತ್ತಿದ್ದು ಆದರೆ ಅದು ಇಸ್ಲ...

ಅಲ್ಲಾಹನ ಪ್ರತಿಫಲ:

ಅಲ್ಲಾಹನ ಪ್ರತಿಫಲ: ವ್ರತವು ವ್ಯಕ್ತಿ ಮತ್ತು ಅಲ್ಲಾಹನೆಡೆಯಲ್ಲಿರುವ ಒಂದು ರಹಸ್ಯ ಆರಾಧನೆಯಾಗಿದೆ. ಇತರ ಆರಾಧನೆಗಳಂತೆ ಜನರನ್ನು ತೋರ್ಪಡಿಸುವ ಅಥವಾ ಅವರೆಡೆಯಲ್ಲಿ ನನ್ನನ್ನು ಗಮನಿಸಬೇಕೆಂಬ ಉದ್ದೇಶ ಉಪವಾಸದಿಂದುಂಟಾಗುವುದಿಲ್ಲ. ಕೇವಲ ಸರ್ವಶಕ್ತನಾದ ಅಲ್ಲಾಹನ ತೃಪ್ತಿಯನ್ನು ಮಾತ್ರ ಹುಡುಕಬೇಕಷ್ಟೆ. ಆದ್ದರಿಂದಲೇ ಅದಕ್ಕೆ ಅಲ್ಲಾಹು ನೀಡುವ ಪ್ರತಿಫಲ ಕೂಡಾ ಬಹಳ ಹಿರಿದಾಗಿದೆ. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಹೇಳುತ್ತಾರೆ. *ಮಾನವನು ಮಾಡುವ ಪ್ರತಿಯೊಂದು ಸತ್ಕರ್ಮಗಳಿಗೂ ಹತ್ತರಿಂದ ಏಳೂನೂರು ತನಕ ದುಪ್ಪಟ್ಟು ಪ್ರತಿಫಲ ಸಿಗುತ್ತದೆ.* ಆದರೆ ಅಲ್ಲಾಹು ಹೇಳುತ್ತಾನೆ. "ಉಪವಾಸ ಬಿಟ್ಟು, ಅದು ನನಗೆ ಮಾತ್ರವಿರುವ (ತಿಳಿಯುವ) ಆರಾಧನೆಯಾಗಿದೆ. ಆದ್ದರಿಂದ ಅದರ ಪ್ರತಿಫಲ ನಾನೇ ನೀಡುತ್ತೇನೆ. (ಅದಕ್ಕೆ ಯಾವುದೇ ಮಿತಿಯಿರುವುದಿಲ್ಲ), ಕಾರಣ ಉಪವಾಸಿಗನು ನನಗೆ ಬೇಕಾಗಿ ಮಾತ್ರ ತನ್ನ ಕಾಮ ಮತ್ತು ಆಹಾರಗಳನ್ನೆಲ್ಲಾ ಕೈ ಬಿಡುತ್ತಾನೆ." ಎಂದು. ಉಪವಾಸಿಗನಿಗೆ ಎರಡು ಮಹಾ ಸಂತೋಷಗಳಿವೆ. ವ್ರತ ತೆರೆಯುವ ಸಂದರ್ಭವಿರುವ ಸಂತೋಷ ಹಾಗೂ ತನ್ನ ಯಜಮಾನನ್ನು ಕಾಣುವ (ಪಾರತ್ರಿಕ ಲೋಕದಲ್ಲಿ) ವೇಳೆಯಿರುವ ಮಹಾ ಸಂತೋಷ. ಅಲ್ಲಾಹನ ಬಳಿ ಉಪವಾಸಿಗನ ಬಾಯಿಯ ಸುವಾಸನೆ ಕಸ್ತೂರಿಗಿಂತಲೂ ಮಿಗಿಲಾಗಿರುತ್ತದೆ. (ಬುಖಾರಿ-ಮುಸ್ಲಿಮ್)

ಅಧ್ಯಾಯ:2 (ಅಲ್-ಬಕ್ವರ) ಸೂಕ್ತ: 157

ಅಧ್ಯಾಯ:2 (ಅಲ್-ಬಕ್ವರ) ಸೂಕ್ತ: 157 أُو۟لَٰٓئِكَ عَلَيْهِمْ صَلَوَٰتٌۭ مِّن رَّبِّهِمْ وَرَحْمَةٌۭ ۖ وَأُو۟لَٰٓئِكَ هُمُ ٱلْمُهْتَدُونَ ಅರ್ಥ:⤵️ ▪️ಅಂತಹವರಿಗೆ ತಮ್ಮ ಪ್ರಭುವಿನಿಂದ ವರದಾನ ಗಳೂ ಕೃಪೆಯೂ ಪ್ರಾಪ್ತ. ಅವರೇ ಸತ್ವರ್ಥಿಕರು.             ಸಂ: ✒️ಅಬೂರಿಫಾನ

ಜ್ಞಾನಧಾರೆ

ದಾನ-ಧರ್ಮದ ಮಹತ್ವ! ಉಕ್'ಬಾ ಬಿನ್ ಆಮಿರ್(ರ.ಅ) ರಿಂದ ನಿವೇದನೆ: ಪ್ರವಾದಿﷺ ಹೇಳಿದರು, "ಖಂಡಿತವಾಗಿಯೂ ದಾನ-ಧರ್ಮವು ಕಬರಿನ ಬಿಸಿ ಶಾಖವನ್ನು ತಣಿಸುತ್ತದೆ. ಅಂತ್ಯ ದಿನದಂದು ವಿಶ್ವಾಸಿ ತನ್ನ ದಾನ-ಧರ್ಮದ ನೆರಳಿನಲ್ಲಿ ಆಗಿರುವನು." [ಬೈಅಖಿ] ರಮಳಾನ್ ದಾನ-ಧರ್ಮ ಯಥೇಚ್ಛವಾಗಿ ಮಾಡುವ ತಿಂಗಳು. ಉತ್ತರದ ಮುಗ್ಧ ಜನತೆಗೆ ದೀನೀ ಜ್ಞಾನ ಕಲಿಸುವ ಹಾದಿಯಲ್ಲಿ ನಾವಿದ್ದೇವೆ.‌ ನಮ್ಮೊಂದಿಗೆ ಕೈ ಜೋಡಿಸಲು ಇಚ್ಛಿಸುವವರು ಈ ವಿನೀತನ ಸಂಪರ್ಕಿಸಿ. ✍🏻ಸಾಲಿಮ್ ಮುಈನಿ ಸಖಾಫಿ ರಬ್ಬಾನಿ‌ ಅ'ಸ್ಸಿಂಧಿ ಗದಗ

ಮುನಾಫಿಕುಗಳಿಗೆ ಭಾರವಾದ ನಮಾಝ್

ಮುನಾಫಿಕುಗಳಿಗೆ ಭಾರವಾದ ನಮಾಝ್ (عنْ أَبِي هُرَيْرَةَ رضي الله عنه قَالَ- قَالَ النَّبِيُّ صلى الله عليه وسلم: لَيْسَ صَلاَةٌ أَثْقَلَ عَلَى الْمُنَافِقِينَ مِنَ الْفَجْرِ وَالْعِشَاءِ، وَلَوْ يَعْلَمُونَ مَا فِيهِمَا لأَتَوْهُمَا وَلَوْ حَبْوًا".رواه-صحيح البخاري)    ಅಬೂಹುರೈರಾ (ರ.ಅ) ರಿಂದ ವರದಿ- ಪ್ರವಾದಿ ﷺ ಹೇಳಿದರು: ಇಶಾ ಮತ್ತು ಫಜ್ರ್ ನಮಾಝಿಗಿಂತ ಮುನಾಫಿಕುಗಳಿಗೆ(ಕಪಟವಿಶ್ವಾಸಿ) ಭಾರವಾದ ಬೇರೆ ಪ್ರಾರ್ಥನೆ ಇರಲಿಲ್ಲ. ಎಲ್ಲಾದರೂ ಆ ಎರಡು ನಮಾಝಿನ ಪ್ರತಿಫಲ ಎಷ್ಟೆಂದು ಅವರು ತಿಳಿದಿರುತ್ತಿದ್ದರೆ, ಅವರ ಮೊಣಕಾಲುಗಳ ಮೇಲೆಯಾದರೂ ನಡೆದು ಬಂದು ಅದಕ್ಕೆ ತಲುಪುತ್ತಿದ್ದರು. (ಹದೀಸ್- ಇಮಾಂ ಬುಖಾರಿ) ▪ಒಳಿತನ್ನು ಕಲಿಯಲು ಅಲ್ಲಾಹನು ನಮಗೆ ಅನುಗ್ರಹಿಸಲಿ. ಆಮೀನ್🤲▪ ತಾಜುದ್ದೀನ್ ಸಖಾಫಿ,ಕುಂದಾಪುರ (25-04-2021,ಆದಿತ್ಯವಾರ) (13-ರಂಝಾನ್-1442) ✳✳✳✳✳✳✳✳✳✳

ಇಷ್ಟೊಂದು ಪ್ರತಿಫಲ ನಿಮಗೆ ಬೇಕೇ..?!

ಇಷ್ಟೊಂದು ಪ್ರತಿಫಲ ನಿಮಗೆ ಬೇಕೇ..?! (وَعَنْ عُثْمَانَ رَضِيَ اللَّهُ عَنْهُ -قَالَ: قَالَ رَسُولُ اللَّهِ صَلَّى اللَّهُ عَلَيْهِ وَسَلَّمَ: مَنْ صَلَّى الْعِشَاءَ فِي جَمَاعَةٍ; فَكَأَنَّمَا قَامَ نِصْفَ اللَّيْلِ، وَمَنْ صَلَّى الصُّبْحَ فِي جَمَاعَةٍ، فَكَأَنَّمَا صَلَّى اللَّيْلَ كُلَّهُ".رَوَاهُ-مسلم)    ಉಸ್ಮಾನ್ ಬುನ್ ಅಫ್ಫಾನ್ (ರ.ಅ) ರಿಂದ ವರದಿ- ಪ್ರವಾದಿ ﷺ ಹೇಳಿದರು: ಯಾರಾದರೂ ಇಶಾ ನಮಾಝನ್ನು ಜಮಾಅತ್ ಆಗಿ ಪ್ರಾರ್ಥಿಸಿದರೆ, ಅವನು ಮಧ್ಯರಾತ್ರಿಯವರೆಗೆ ನಮಾಝ್ ನಿರ್ವಹಿಸಿದಂತೆ. ಯಾರಾದರೂ ಫಜ್ರ್ ನಮಾಝ್ ಜಮಾಅತ್ ಆಗಿ ಪ್ರಾರ್ಥಿಸಿದರೆ ರಾತ್ರಿಯಿಡೀ ನಮಾಝ್ ನಿರ್ವಹಿಸಿದಂತೆ ಆಗಿದೆ. (ಹದೀಸ್- ಇಮಾಂ ಮುಸ್ಲಿಮ್) ▪ಒಳಿತನ್ನು ಕಲಿಯಲು ಅಲ್ಲಾಹನು ನಮಗೆ ಅನುಗ್ರಹಿಸಲಿ. ಆಮೀನ್🤲▪ ತಾಜುದ್ದೀನ್ ಸಖಾಫಿ,ಕುಂದಾಪುರ (24-04-2021,ಶನಿವಾರ) (12-ರಂಝಾನ್-1442) ✳✳✳✳✳✳✳✳✳✳

ಅಧ್ಯಾಯ:2 (ಅಲ್-ಬಕ್ವರ) ಸೂಕ್ತ: 156

ಅಧ್ಯಾಯ:2 ಸೂಕ್ತ: 156 ٱلَّذِينَ إِذَآ أَصَٰبَتْهُم مُّصِيبَةٌۭ قَالُوٓا۟ إِنَّا لِلَّهِ وَإِنَّآ إِلَيْهِ رَٰجِعُونَ ಅಂಥವರಿಗೆ ವಿಪತ್ತೇನಾದರೂ ಬಾಧಿಸಿದರೆ, (ಆಪತ್ಕಾಲದಲ್ಲಿ) ಅವರು ‘ನಿಜವಾಗಿಯೂ ನಾವು ಅಲ್ಲಾಹನಿಗೆ ಇರುವವರು, ಅವನೆಡೆಗೆ ನಿರ್ಗಮಿಸುವವರು’ ಅನ್ನುವರು ⁷⁹. ವಿವರಣೆ: 79. ವಿಪತ್ತುಗಳ ಸಂದರ್ಭದಲ್ಲಿ ಅದು ಎಷ್ಟೇ ಕ್ಷುಲ್ಲಕವಿದ್ದರೂ ಕೂಡಾ ಇನ್ನಾಲಿಲ್ಲಾಹಿ ವ ಇನ್ನಾ ಇಲೈಹಿ ರಾಜಿಊನ್ ಎಂದು ಹೇಳಬೇಕು. ಸಹನಾಶೀಲರ ವಿಶೇಷ ಗುಣವಾದ ಈ ದ್ಸಿಕ್ರ್‍ಗೆ ವಿಶೇಷ ಪುಣ್ಯ ವಾಗ್ದಾನ ಮಾಡಲಾಗಿದೆ. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಹೀಗೆ ಹೇಳಿರುವರು, `ಓರ್ವನ ಮಗು ತೀರಿದರೆ ಮಲಕ್‍ಗಳಲ್ಲಿ ಅಲ್ಲಾಹು ಕೇಳುವನು; ನೀವು ನನ್ನ ದಾಸನ ಮಗುವಿನ ಪ್ರಾಣ ವಶಪಡಿಸಿದಿರಾ? ಮಲಕ್‍ಗಳು ಹೌದು ಎನ್ನುವರು. ನೀವು ಅವನ ಕರುಳಕುಡಿಯ ಪ್ರಾಣವನ್ನು ವಶಪಡಿಸಿದಿರಾ? ಎಂದು ಎರಡನೇ ಬಾರಿ ಅಲ್ಲಾಹನು ಕೇಳುವನು. ಮಲಕ್‍ಗಳು ಹೌದು ಎನ್ನುವರು. ಆಗ ಅವನು ಏನು ಹೇಳಿದ? ಎಂದು ಕೇಳಿದಾಗ ಮಲಕ್‍ಗಳು ಹೇಳುವರು; ಅವನು ನಿನ್ನನ್ನು ಸ್ತುತಿಸಿದನು ಮತ್ತು ಇನ್ನಾಲಿಲ್ಲಾಹಿ... ಹೇಳಿದನು. ಆಗ ಅಲ್ಲಾಹು ಹಾಗಾದರೆ ಸ್ವರ್ಗದಲ್ಲಿ ಅವನಿಗಾಗಿ ಒಂದು ವಿಶೇಷ ಭವನವನ್ನು ನಿರ್ಮಿಸಿರಿ. ಅದಕ್ಕೆ `ಬೈತುಲ್ ಹಮ್‍ದ್' ಎಂದು ಹೆಸರಿಡಿ’ ಎಂದು ಹೇಳುವನು. (ಅಹ್ಮದ್, ತಿರ್ಮುದಿ) ಅಬೂಬಕರುರ್ರಾಝೀ   ಯವರು ಹೇಳುತ್ತಾರೆ; ಈ ಶ್ಲೋಕದಲ್ಲಿ ಎರಡ...

ವ್ರತವು ಒಂದು ರಕ್ಷಾಕವಚವಾಗಿದೆ:

ವ್ರತವು ಒಂದು ರಕ್ಷಾಕವಚವಾಗಿದೆ: ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಹೇಳುತ್ತಾರೆ: "ವ್ರತವು ಒಂದು ರಕ್ಷಾಕವಚವಾಗಿದೆ. ಆದ್ದರಿಂದ ಉಪವಾಸಿಗನು ಅಶ್ಲೀಲ ನುಡಿಯುವುದಾಗಲೀ, ದುರ್ಗುಣ ದುರಾಚಾರಗಳಿಗೆ ಕೈ ಹಾಕುವುದಾಗಲೀ ಬೇಡ. ಯಾರಾದರೂ ತನ್ನನ್ನು ಬೈದರೆ ಅಥವಾ ತನ್ನೊಂದಿಗೆ ಜಗಳಕ್ಕಿಳಿದರೆ ಆತನೊಂದಿಗೆ ನಾನು ಉಪವಾಸಿಗನೆಂದು ಹೇಳಿಬಿಡಲಿ." (ಬುಖಾರಿ) ವ್ರತಚರಿಸುವವನು ಅಕ್ರಮ ಕೃತ್ಯಗಳಿಂದಲೂ ಅನಗತ್ಯ ಮಾತುಗಳಿಂದಲೂ ಸಂಪೂರ್ಣ ಮುಕ್ತನಾಗಿರತಕ್ಕದ್ದು. ಇಲ್ಲದಿದ್ದರೆ ಹಗಲಿಡೀ ಹಸಿದು ಬಳಲುವುದಲ್ಲದೆ ಉಪವಾಸದ ನೈಜ ಫಲವನ್ನು ತನ್ನದಾಗಿಸಿಕೊಳ್ಳಲು ಸಾಧ್ಯವಿಲ್ಲ. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರವರು ಹೇಳುತ್ತಾರೆ.  ಒಬ್ಬ ವ್ಯಕ್ತಿ ಹೀನ ಮಾತುಗಳನ್ನೂ ಕುಕೃತ್ಯಗಳನ್ನೂ ಉಪೇಕ್ಷಿಸದೆ ಕೇವಲ ಅನ್ನ ಪಾನೀಯಗಳನ್ನು ತೊರೆಯುವುದರಲ್ಲಿ ಅಲ್ಲಾಹನಿಗೆ ಯಾವುದೇ ಅಗತ್ಯವಿಲ್ಲ."  ಅನ್ನ ಪಾನೀಯಗಳ ವರ್ಜನೆ ಮೂಲಕ ದೈಹಿಕ ಮತ್ತು ಮಾನಸಿಕ ನಿಯಂತ್ರಣವಾಗಿದೆ. ಉಪವಾಸದ ನೈಜ ಗುಟ್ಟು ಎಂಬುವುದು ಈ ಹದೀಸ್‌ನಿಂದ ಮನಗಾಣಬಹುದು.

ಅಧ್ಯಾಯ:2 (ಅಲ್-ಬಕ್ವರ) ಸೂಕ್ತ: 155

ಅಧ್ಯಾಯ:2 (ಅಲ್-ಬಕ್ವರ) ಸೂಕ್ತ: 155 وَلَنَبْلُوَنَّكُم بِشَىْءٍۢ مِّنَ ٱلْخَوْفِ وَٱلْجُوعِ وَنَقْصٍۢ مِّنَ ٱلْأَمْوَٰلِ وَٱلْأَنفُسِ وَٱلثَّمَرَٰتِ ۗ وَبَشِّرِ ٱلصَّٰبِرِينَ ಅರ್ಥ:⤵️ ▪️ಏನಾದರೊಂದು ಭಯ, ಹಸಿವು, ಧನಹಾನಿ, ಪ್ರಾಣಹಾನಿ, ಫಲೋತ್ಪನ್ನಗಳ ಕೊರತೆಗಳ ಮೂಲಕ ನಾವು ನಿಮ್ಮನ್ನು ಖಂಡಿತ ಪರೀಕ್ಷಿಸು ತ್ತಿರುತ್ತೇವೆ. ಸಹನಶೀಲರಿಗೆ ಶುಭವಾರ್ತೆ ನೀಡಿರಿ.         ಸಂ: ✒️ಅಬೂರಿಫಾನ

ಶುಕ್ರವಾರದ ಮಹತ್ವ:

ಶುಕ್ರವಾರದ ಮಹತ್ವ: ಅಬೂಹುರೈರಾ(ರ.ಅ) ನಿವೇದನೆ: ಶುಕ್ರವಾರದ ಕುರಿತು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಮಾಡಿದ ಭಾಷಣದಲ್ಲಿ ಹೇಳಿದರು: ಆ ದಿನದಲ್ಲಿ ಪ್ರತ್ಯೇಕವಾದ ಒಂದು ಸಮಯವಿದೆ. ನಮಾಝ್ ನಿರ್ವಹಿಸಿ ಅಲ್ಲಾಹನೊಂದಿಗೆ ಪ್ರಾರ್ಥಿಸುವ ಸತ್ಯವಿಶ್ವಾಸಿಯ ಪ್ರಾರ್ಥನೆ ಆ ಸಮಯಕ್ಕೆ ಹೊಂದಿಕೆಯಾದರೆ ಅಲ್ಲಾಹನು ಅವನ ಕೋರಿಕೆಯನ್ನು ನೆರವೇರಿಸುತ್ತಾನೆ. ಇದು ತುಂಬಾ ಅಲ್ಪ ಸಮಯವಾಗಿದೆಯೆಂದು ಅವರು ಕೈಯಿಂದ ಸನ್ನೆಮಾಡಿ ತೋರಿಸಿದರು. (ಬುಖಾರಿ, ಮುಸ್ಲಿಮ್) ============================ ಕಾರ್ಯನಿರ್ವಾಹಕರು: ನೂರುಲ್ ಫಲಾಹ್ ಸಮೂಹ ಸಂಸ್ಥೆ(ರಿ)

ಜ್ಞಾನಧಾರೆ

ಸುಬಹ್ ಜಮಾಅತಿನ ಮಹತ್ವ! ಉಸ್ಮಾನ್(ರ.ಅ) ರಿಂದ ನಿವೇದನೆ: ಮುತ್ತು ನೆಬಿﷺ ಹೇಳಿದರು, ‌"ಯಾರಾದರೂ ಇಶಾಅ್ ನಮಾಝ್ ಜಮಾಅತಾಗಿ ನಿರ್ವಹಿಸಿದರೆ ಅವನು ಅರ್ಧ ರಾತ್ರಿ ತನಕ ನಮಾಝ್ ಮಾಡಿದವನಂತೆ. ಇನ್ನು ಸುಬಹ್ ನಮಾಝ್ ಜಮಾಅತಾಗಿ ನಿರ್ವಹಿಸಿದರೆ ಅವನು ರಾತ್ರಿ ಪೂರ್ತಿ ನಮಾಝ್ ನಿರ್ವಹಿಸಿದವನಂತೆ."[ಸ್ವ.ಮುಸ್ಲಿಂ] ಸದ್ಯ ಕೊರೋಣ ಕಾರಣ ಎಲ್ಲರೂ ಮನೆಯಲ್ಲೇ ಇರುವುದರಿಂದ ನಮಾಝ್ ಜಮಾಅತಾಗಿಯೇ ನಿರ್ವಹಿಸಲು ಪ್ರಯತ್ನಪಡೋಣ. ✍🏻ಸಾಲಿಮ್ ಮುಈನಿ ಸಖಾಫಿ ರಬ್ಬಾನಿ‌ ಅ'ಸ್ಸಿಂಧಿ ಗದಗ

ಸೂರ್ಯ ಉದಯಿಸುವವರೆಗೂ ಅಲ್ಲಿಯೇ ಕುಳಿತುಕೊಳ್ಳಿ

ಸೂರ್ಯ ಉದಯಿಸುವವರೆಗೂ ಅಲ್ಲಿಯೇ ಕುಳಿತುಕೊಳ್ಳಿ (عَنْ جَابِرِ بْنِ سَمُرَةَ رضي الله عنه قَالَ: كَانَ النَّبِيُّ صلى الله عليه وسلم إِذَا صَلَّى الْفَجْرَ تَرَبَّعَ فِي مَجْلِسِهِ حَتَّى تَطْلُعَ الشَّمْسُ حَسْنَاءَ".رواه-أبو داوود/٤٨٥٠)    ಜಾಬಿರ್ ಬುನ್ ಸಮುರತ್ (ರ.ಅ) ರಿಂದ ವರದಿ- ಅವರು ಹೇಳಿದರು: ಪ್ರವಾದಿ ﷺ ರವರು ಫಜ್ರ್ ನಮಾಝ್ ನಿರ್ವಹಿಸಿದ ನಂತರ ಪೂರ್ಣ ಸೂರ್ಯ ಉದಯಿಸುವವರೆಗೂ ಅದೇ ಸ್ಥಳದಲ್ಲಿ ಕುಳಿತು ಕೊಳ್ಳುತ್ತಿದ್ದರು. (ಹದೀಸ್- ಇಮಾಂ ಅಬೂ ದಾವೂದ್) ▪ಒಳಿತನ್ನು ಕಲಿಯಲು ಅಲ್ಲಾಹನು ನಮಗೆ ಅನುಗ್ರಹಿಸಲಿ. ಆಮೀನ್🤲▪ ತಾಜುದ್ದೀನ್ ಸಖಾಫಿ,ಕುಂದಾಪುರ (23-04-2021,ಶುಕ್ರವಾರ) (11-ರಂಝಾನ್-1442) ✳✳✳✳✳✳✳✳✳✳

ಸಹರಿ ಊಟದಲ್ಲಿ ಬರಕತ್ ಇದೆ

ಸಹರಿ ಊಟದಲ್ಲಿ ಬರಕತ್ ಇದೆ (عَنْ أَبِي أُمَامَةَ قَالَ: سَمِعْتُ رَسُولَ اللهِ صَلَّى اللهُ عَلَيْهِ وَسَلَّمَ يَقُولُ: اللهُمَّ بَارِكْ لِأُمَّتِي فِي سُحُورِهَا، تَسَحَّرُوا وَلَوْ بِشَرْبَةٍ مِنْ مَاءٍ، وَلَوْ بِتَمْرَةٍ، وَلَوْ بِحَبَّاتِ زَبِيبٍ، فَإِنَّ الْمَلَائِكَةَ تُصَلِّي عَلَيْكُمْ".حلية الأولياء ،وطبقا الأصفياء-٥/٢٤٦)    ಅಬೂ ಉಮಾಮತ್ (ರ.ಅ) ರಿಂದ ವರದಿ- ಪ್ರವಾದಿ ﷺ ಹೇಳುವುದನ್ನು ನಾನು ಕೇಳಿದೆನು: ಓ ಅಲ್ಲಾಹನೇ, ನನ್ನ ಸಮುದಾಯಕ್ಕೆ ಅವರ ಸಹರಿ ಊಟದಲ್ಲಿ ನೀನು ಪ್ರತ್ಯೇಕವಾದ ಬರಕತ್ ನೀಡು. ನೀವು ಒಂದು ಗ್ಲಾಸ್ ನೀರು, ಹಾಗೂ ಖರ್ಜೂರ ಅಥವಾ ಸ್ವಲ್ಪ ಒಣದ್ರಾಕ್ಷಿಗಳನ್ನು ತಿಂದಾದರೂ ಸಹರಿ ಊಟ ಮಾಡಿರಿ. ಏಕೆಂದರೆ ಸಹರಿ ಮಾಡಿದರೆ ಅಲ್ಲಾಹನ ಮಲಕುಗಳು ನಿಮ್ಮನ್ನು ಸ್ತುತಿಸುತ್ತಾರೆ ಮತ್ತು ನಿಮಗಾಗಿ ಪ್ರಾರ್ಥಿಸುತ್ತಾರೆ. (ಹದೀಸ್- ಹಿಲ್ಯತುಲ್ ಔಲಿಯಾ, ತ್ವಬಕಾತುಲ್ ಅಸ್'ಫಿಯಾ) ▪ಒಳಿತನ್ನು ಕಲಿಯಲು ಅಲ್ಲಾಹನು ನಮಗೆ ಅನುಗ್ರಹಿಸಲಿ. ಆಮೀನ್🤲▪ ತಾಜುದ್ದೀನ್ ಸಖಾಫಿ,ಕುಂದಾಪುರ (21-04-2021,ಬುಧವಾರ) (09-ರಂಝಾನ್-1442) ✳✳✳✳✳✳✳✳✳✳

ಪ್ರವಾದಿ ‎ﷺ ‏ರವರ ರಾತ್ರಿಯ ಪ್ರಾರ್ಥನೆ

ಪ್ರವಾದಿ ﷺ ರವರ ರಾತ್ರಿಯ ಪ್ರಾರ್ಥನೆ (عَنْ عَائِشَةَ رضى الله عنها- كَانَ النَّبِيُّ صلى الله عليه وسلم يُصَلِّي مِنَ اللَّيْلِ إِحْدَى عَشْرَةَ رَكْعَةً، فَإِذَا طَلَعَ الْفَجْرُ صَلَّى رَكْعَتَيْنِ خَفِيفَتَيْنِ، ثُمَّ اضْطَجَعَ عَلَى شِقِّهِ الأَيْمَنِ، حَتَّى يَجِيءَ الْمُؤَذِّنُ فَيُؤْذِنَهُ‏".رواه-بخاري-٦٣١٠)    ಆಯಿಷಾ ಬೀವಿ (ರ.ಅ) ರಿಂದ ವರದಿ- ಅವರು ಹೇಳಿದರು: ಪ್ರವಾದಿ (ﷺ) ರಾತ್ರಿಯಲ್ಲಿ ಹನ್ನೊಂದು ರಕಅತ್ ನಮಾಝನ್ನು ನಿರ್ವಹಿಸುತ್ತಿದ್ದರು. ಹಾಗೆಯೇ ಬೆಳಿಗ್ಗೆಯಾದರೆ, ಎರಡು ರಕಅತ್ ಲಘುವಾದ ರೀತಿಯಲ್ಲಿ ನಮಾಝನ್ನು ನಿರ್ವಹಿಸುತ್ತಿದ್ದರು ಮತ್ತು ಮುಅಝ್ಝಿನ್ ಬಂದು ಅಝಾನ್(ಬಾಂಗ್) ನೀಡುವವರೆಗೂ ಅವರ ಬಲಭಾಗಕ್ಕೆ ಸರಿದು ಮಲಗುತ್ತಿದ್ದರು. (ಹದೀಸ್- ಇಮಾಂ ಬುಖಾರಿ) ▪ಒಳಿತನ್ನು ಕಲಿಯಲು ಅಲ್ಲಾಹನು ನಮಗೆ ಅನುಗ್ರಹಿಸಲಿ. ಆಮೀನ್🤲▪ ತಾಜುದ್ದೀನ್ ಸಖಾಫಿ,ಕುಂದಾಪುರ (22-04-2021,ಗುರುವಾರ) (10-ರಂಝಾನ್-1442) ✳✳✳✳✳✳✳✳✳✳

ಜ್ಞಾನಧಾರೆ

ದಿವಸವೂ 40,000 ತಸ್ಬೀಹ್! ಹಿಜಿರ‌ ವರ್ಷ 104 ರಲ್ಲಿ ವಫಾತಾದ ಪ್ರಮುಖ ತಾಬಿಈ ವಿದ್ವಾಂಸರು, ಹಿಂಸಿನ ಇಮಾಂ ಆಗಿದ್ದ ಖಾಲಿದ್ ಬ್ನ್ ಸಹದಾನ್(ರ.ಅ),‌ ಮಹಾನರು ಹಲವಾರು ಸ್ವಹಾಬಿಗಳಿಂದ ಹದೀಸ್ ನಿವೇದನೆ ಮಾಡಿದ್ದಾರೆ. ಮಹಾನರು ರಮಳಾನ್ ತಿಂಗಳು ಬಂದರೆ ವ್ರತದ ಜೊತೆ ನಲ್ವತ್ತು ಸಾವಿರ ತಸ್ಬೀಹ್(ದ್ಸಿಕ್ರ್) ಹೇಳುತ್ತಿದ್ದರು. ಪ್ರತಿ ರಾತ್ರಿಯೂ ಕುರ್'ಆನಿನ ಮೂರರಲ್ಲೊಂದು ಭಾಗ ಪಾರಾಯಣ ಮಾಡಿ ತರಾವೀಹ್ ನಮಾಝ್ ನಿರ್ವಹಿಸುತ್ತಿದ್ದರು."[ಅಲ್ ಬಿದಾಯಃ] ಸಚ್ಚರಿತ ಶ್ರೇಷ್ಠ ವಿದ್ವಾಂಸರಾದ ಇವರೇ ಅಲ್ಲಾಹನ ಆರಾಧನೆಯ ವಿಷಯದಲ್ಲಿ ಇಷ್ಟೊಂದು ಕಾಳಜಿ ವಹಿಸಿದ್ದರೆ ಇನ್ನು ನಮ್ಮ ಅವಸ್ಥೆ ಏನು? ✍🏻ಸಾಲಿಮ್ ಮುಈನಿ ಸಖಾಫಿ ರಬ್ಬಾನಿ‌ ಅ'ಸ್ಸಿಂಧಿ ಗದಗ

ಮಹಿಳೆಯರ ಜಮಾಅತ್‌:

ಮಹಿಳೆಯರ ಜಮಾಅತ್‌: ಮಹಿಳೆಯರಿಗೂ ತರಾವೀಹ್ ನಮಾಝ್ ಸುನ್ನತ್ತಿದೆ. ಅವರಿಗೂ ಸಮ್ಮತ ಸ್ವತಃ ಮನೆಯಲ್ಲಿ ಜಮಾಅತ್ತಾಗಿ ನಿರ್ವಹಿಸಬಹುದು. ಆದರೆ ಅದಕ್ಕಾಗಿ ಮನೆ ಬಿಟ್ಟು ಹೋಗುವುದು ಒಳಿತಲ್ಲ. ಕಾರಣ ಮಹಿಳೆಯರು ಸ್ವತಃ ಮನೆಯೊಳಗೆ ಮಾಡುವ ಇಬಾದತ್‌ಗಿಂತಲೂ ಉತ್ತಮವಾದ ಆರಾಧನೆ ಮತ್ತೊಂದಿಲ್ಲವೆಂದು ಪ್ರವಾದಿ ಸ್ವಲಲ್ಲಾಹು ಅಲಾಹಿವಸಲ್ಲಮರು ಹೇಳಿದ್ದಾರೆ. ಮಾತ್ರವಲ್ಲ ಸ್ತ್ರೀಯರಿಗೆ ನಮಾಝ್ ನಿರ್ವಹಿಸಲು ಅತ್ಯಂತ ಶ್ರೇಷ್ಟ ಸ್ಥಳ ಅವಳ ಸ್ವತಃ ಮನೆಯ ಒಳ ಕೊಠಡಿಯಾಗಿದೆ ಎಂದು ಅದೆಷ್ಟೋ ಹದೀಸ್‌ಗಳಲ್ಲಿ ಸ್ಪಷ್ಟಗೊಂಡಿದೆ. ಆದ್ದರಿಂದಲೇ ಇತ್ತೀಚಿನ ಕಾಲದಿಂದ ಕೆಲವು ಊರುಗಳಲ್ಲಿ ಕಂಡು ಬರುವಂತೆ ಅಕ್ಕಪಕ್ಕದ ಮಹಿಳೆಯರು ಸೇರಿ ಒಂದು ಮನೆಯಲ್ಲಿ ಅಥವಾ ಮದ್ರಸಾದಂತಹ ಇನ್ನಿತರ ಸ್ಥಳಗಳಲ್ಲಿ ತರಾವೀಹ್ ಜಮಾಅತ್ ನಡೆಸುವುದು ಇಸ್ಲಾಮ್ ಒಮ್ಮೆಯೂ ಪ್ರೋತ್ಸಾಹ ಕೊಡುವಂತಹ ಸಂಗತಿಯಲ್ಲ. ಒಳಿತಿಗೆ ವಿರುದ್ಧವಾದ ಇಂತಹ ಕಾರ್ಯಗಳಿಗೆ ಮದ್ರಸಾವನ್ನು ಬಿಟ್ಟು ಕೊಡುವುದು ಸರಿಯಲ್ಲ. ಆಡಳಿತಾಧಿಕಾರಿಗಳು ಆ ಬಗ್ಗೆ ಜಾಗೃತರಾಗಲೇಬೇಕು. ಅದೇ ರೀತಿ ಸ್ವತಃ ಮನೆಯನ್ನು ಬಿಟ್ಟು ಕೊಡುವುದೂ ಇಸ್ಲಾಮ್ ಆದೇಶಿಸುವ ಒಳಿತಿನ ವಿರುದ್ದ ಸಹಾಯ ಮಾಡುವಂತಾಗುತ್ತದೆ.     ಸ್ವತಃಮನೆಯಿಂದ ಹೊರ ಹೋಗಿ ಜಮಾಅತಾಗಿ ನಿರ್ವಹಿಸುವುದಕ್ಕಿಂತಲೂ ಮನೆಯೊಳಗೆಯೇ ಒಬ್ಬಂಟಿಯಾಗಿ ನಿರ್ವಹಿಸುವುದೇ ಮಹಿಳೆಯರಿಗೆ ಉತ್ತಮವೆಂದು ಮೇಲಿನ ಹದೀಸ್‌ಗಳಿಂದ ಮನಗಾಣಬಹುದು. ಮಾತ್ರವಲ್ಲ ಶಾಫಿಈ ಮದ್ಸ್‌ಹಬ್...

ಅಧ್ಯಾಯ:2 (ಅಲ್-ಬಕ್ವರ) ಸೂಕ್ತ: 154

ಅಧ್ಯಾಯ:2 (ಅಲ್-ಬಕ್ವರ) ಸೂಕ್ತ: 154 وَلَا تَقُولُوا۟ لِمَن يُقْتَلُ فِى سَبِيلِ ٱللَّهِ أَمْوَٰتٌۢ ۚ بَلْ أَحْيَآءٌۭ وَلَٰكِن لَّا تَشْعُرُونَ ಅರ್ಥ:⤵️ ▪️ಅಲ್ಲಾಹನ ಮಾರ್ಗದಲ್ಲಿ ಹತರಾದವರನ್ನು ಮೃತರೆನ್ನಬೇಡಿರಿ. ಅವರು ಸಜೀವರು ⁷⁸. ಆ ಕುರಿತು ನೀವು ಪ್ರಜ್ಞಾಶೂನ್ಯರು ⁷⁸ಂ. ವಿವರಣೆ:⤵️ 78.ಅರ್ಥಾತ್ ಅವರು ಈಗಲೇ ಜೀವಂತವಿರುವರು. ಅಲ್ಲಾಹನು ಅವರೆಡೆಗೆ ಪ್ರತಿಫಲ ಸೇರ್ಪಡೆಗೊಳಿಸಲಿಕ್ಕಾಗಿ ಅವರನ್ನು ಜೀವಂತಗೊಳಿಸುತ್ತಿರುವನು. ಇದು ಬಹುತೇಕ ಮುಫಸ್ಸಿರ್‍ಗಳ ಅಭಿಪ್ರಾಯ. ಗೋರಿಯೊಳಗಿನ ಶಿಕ್ಷೆಯ ಬಗ್ಗೆ ಪ್ರತಿಪಾದಿಸುವ ಖುರ್‍ಆನ್ ಸೂಕ್ತಗಳು ಗೋರಿಯೊಳಗಿನ ಪುಣ್ಯಫಲವನ್ನೂ ಸಮರ್ಥಿಸಬಲ್ಲವು. ಇದರ ಅರ್ಥ ‘ನಂತರ ಜೀವಂತಗೊಳ್ಳುವರು’ಎಂದಾಗಿದ್ದರೆ ಇದನ್ನು ಪ್ರತ್ಯೇಕ ಎತ್ತಿಹೇಳುವ ಅಗತ್ಯವಿರುತ್ತಿರಲಿಲ್ಲ. ಅಲ್ಲದೆ ಜನರು ಶುಹದಾಗಳ ಗೋರಿಗಳನ್ನು ಝಿಯಾರತ್ ಮಾಡುತ್ತಿರುವುದು ಮತ್ತು ಅವುಗಳನ್ನು ಗೌರವಿಸುತ್ತಿರುವುದು ಕೂಡಾ ಅವರ ಜೀವಂತಿಕೆಯ ಸಂಕೇತವಾಗಿದೆ. (ರಾಝಿ 4/162) 78ಂ. ಅರ್ಥಾತ್ ಅವರ ಅವಸ್ಥೆಯನ್ನು ನೀವು ತಿಳಿಯಲಾರಿರಿ. ಇದು, ಅವರ ಜೀವನವು ಶಾರೀರಿಕವಲ್ಲ, ಗೋಚರ ಜಡವರ್ಗದ್ದೂ ಅಲ್ಲ. ಪರಂತು ಅದು ದಿವ್ಯಸಂದೇಶ ಮೂಲಕವೇ ಹೊರತು ಬುದ್ಧಿಯಿಂದ ತಿಳಿಯಲು ಸಾಧ್ಯವಿಲ್ಲದ ಕಾರ್ಯ ಎಂಬುದರ ಸೂಚನೆಯಾಗಿದೆ. ಮಾತ್ರವಲ್ಲ, ಈ ಸೂಕ್ತದಲ್ಲಿ ಆತ್ಮಗಳು ಸ್ವಯಂ ನೆಲೆಗೊಳ್ಳುವ ಮೂರ್ತರೂಪಿಗಳು. ಅವು ಮರಣಾನಂತರವೂ ಪ್ರಜ್ಞಾಪೂರ್...

ಜ್ಞಾನಧಾರೆ

ರಮಳಾನಿನ ಒಂದು ದಿನ ಸಾವಿರ ದಿನಗಳಿಗಿಂತ ಉತ್ತಮ! ಇಬ್ನ್ ಹಜರುಲ್ ಹೈತಮಿ(ರ‌.ಅ) ರಮಳಾನಿನ ಮಹತ್ವವನ್ನು‌ ಉಲ್ಲೇಖಿಸುವಾಗ ಕೆಲವು ಹದೀಸುಗಳು ಉದ್ಧರಿಸಿದ ನಂತರ ಹೇಳುತ್ತಾರೆ, "ಮೇಲೆ ಉದ್ಧರಿಸಿದ ಹದೀಸುಗಳಿಂದ ಮನದಟ್ಟಾಗುವ ವಿಷಯ ಇಮಾಂ ನಖ್'ಈ(ರ.ಅ) ವಿವರಿಸುವುದು ಈ ರೀತಿ, ರಮಳಾನಿನ ಒಂದು ದಿನದ ವ್ರತ ಸಾವಿರ ದಿನಗಳಿಗಿಂತ ಮಹತ್ವವುಳ್ಳದ್ದಾಗಿದೆ. ಒಂದು ತಸ್ಬೀಹ್ ಸಾವಿರ ತಸ್ಬೀಹ್ ಗಿಂತಲೂ, ‌ಒಂದು ರಕಾತ್ ನಮಾಝ್ ಸಾವಿರ ರಕಾತ್ ನಮಾಝ್ ಗಿಂತಲೂ ಶ್ರೇಷ್ಠವಾದುದಾಗಿದೆ." [ಇತ್'ಹಾಫ್] ✍🏻ಸಾಲಿಮ್ ಮುಈನಿ ಸಖಾಫಿ ರಬ್ಬಾನಿ‌ ಅ'ಸ್ಸಿಂಧಿ ಗದಗ

ಇಅ್‌ತಿಕಾಫ್

ಇಅ್‌ತಿಕಾಫ್: ಇದು ಕೂಡಾ ಬಹಳ ಪ್ರತಿಫಲಾರ್ಹವಾದ ಒಂದು ಇಬಾದತ್ತಾಗಿದೆ. ರಮಳಾನ್ ತಿಂಗಳಲ್ಲಿ ಇದರ ಪುಣ್ಯ, ದುಪ್ಪಟ್ಟು ಹೆಚ್ಚುತ್ತದೆ. "ಈ ಮಸೀದಿಯಲ್ಲಿ ನಾನು ಅಲ್ಲಾಹನಿಗಾಗಿ ಇಅ್‌ತಿಕಾಫ್ ಕುಳಿತುಕೊಳ್ಳುತ್ತೇನೆ."ಎಂಬ ದೃಢ ಸಂಕಲ್ಪದೊಂದಿಗೆ ಸ್ವಲ್ಪ ಹೊತ್ತು ಮಸೀದಿಯಲ್ಲಿ ಕಳೆಯುವುದು ಇಅ್‌ತಿಕಾಫ್. ಹಾಗೆ ಸಂಕಲ್ಪ ಮಾಡಿ ಎಷ್ಟು ಸಮಯ ಮಸೀದಿಯಲ್ಲೇ ಇರುತ್ತಾನೋ ಆ ಪ್ರತಿಯೊಂದು ಕ್ಷಣಕ್ಕೂ ಪುಣ್ಯ ಲಭ್ಯವಾಗುತ್ತದೆ. ರಮಳಾನಿಗೆ ಕೊನೆಯ ಹತ್ತು ದಿನಗಳಲ್ಲಿ ಇಅ್‌ತಿಕಾಫ್ ಅತ್ಯಂತ ವಿಶೇಷ ಸುನ್ನತ್ತಾಗಿದೆ.

ಉಪವಾಸದ ಕಡ್ಡಾಯ ನಿಯಮಗಳು:

ಉಪವಾಸದ ಕಡ್ಡಾಯ ನಿಯಮಗಳು: ಉಪವಾಸಕ್ಕೆ ಕಡ್ಡಾಯವಾದ ಕಾರ್ಯಗಳು ಹೆಚ್ಚೇನೂ ಇಲ್ಲ. ಆದರೆ, ವಿವರಣೆಗಳು ಹೆಚ್ಚಿವೆ. ನಿಯ್ಯತ್ ಹಾಗೂ ಉಪವಾಸ ಮುರಿಯುವ ಕಾರ್ಯಗಳನ್ನು ವರ್ಜಿಸುವುದು ಉಪವಾಸದ ಫರ್‌ಳ್ ಅಥವಾ ಕಡ್ಡಾಯ ನಿಯಮಗಳಾಗಿವೆ. ಉಪವಾಸ ಮೊದಲ ನಿಬಂಧನೆ ನಿಯ್ಯತ್ ಸಂಕಲ್ಪಿಸುವುದು. ಉಪವಾಸ ಹಿಡಿಯುವ ಉದ್ದೇಶದಿಂದ ಸಹರಿ ಸೇವಿಸುವವನೂ ಸಹ ನಿಯ್ಯತ್ ಸಂಕಲ್ಪಿಸಬೇಕು . ಅದು ಕಡ್ಡಾಯ. ವುಳೂಅ್ ನಿರ್ವಹಿಸಿ, ಮಸೀದಿಯ ಒಳಗೆ ಹೋಗಿ ಇಮಾಮರ ಹಿಂದೆ ನಿಲ್ಲುವವನ ಮನಸಿನಲ್ಲೂ ತಾನು ನಮಾಝ್ ಮಾಡಲು ಹೊರಟಿದ್ದೇನೆ ಎಂಬ ಪ್ರಜ್ಞೆಯಿರುತ್ತದೆಯಲ್ಲವೇ.? ಅವನೂ ಸಹ ನಿಯ್ಯತ್ ಸಂಕಲ್ಪಿಸಲೇಬೇಕು. ಹಾಗೆಯೇ ಉಪವಾಸ ವ್ರತದ ನಿಯ್ಯತ್ ಕೂಡ. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳುತ್ತಾರೆ. ನಿಶ್ಚಯವಾಗಿಯೂ ಕರ್ಮಗಳು ಸ್ವೀಕರಿಸಲ್ಪಡುವುದು ನಿಯ್ಯತ್‌ನ ಮೂಲಕವಾಗಿದೆ. (ಬುಖಾರಿ) ಇಂತಿಂಥ ಉಪವಾಸ, ನಮಾಝ್ ಎಂದೇ ನಿಯ್ಯತ್ ಸಂಕಲ್ಪಿಸಬೇಕೆಂಬುದನ್ನು ಈ ಪ್ರವಾದಿ ವಚನ ಸ್ಪಷ್ಟಪಡಿಸುತ್ತದೆ. ============================ ಕೆಎಂ ಜಲೀಲ್ ಕುಂದಾಪುರ ಕಾರ್ಯನಿರ್ವಾಹಕರು: ನೂರುಲ್ ಫಲಾಹ್ ಸಮೂಹ ಸಂಸ್ಥೆ(ರಿ)

ಅಧ್ಯಾಯ:2 (ಅಲ್-ಬಕ್ವರ) ಸೂಕ್ತ: 153

ಅಧ್ಯಾಯ:2 (ಅಲ್-ಬಕ್ವರ) ಸೂಕ್ತ: 153 يَٰٓأَيُّهَا ٱلَّذِينَ ءَامَنُوا۟ ٱسْتَعِينُوا۟ بِٱلصَّبْرِ وَٱلصَّلَوٰةِ ۚ إِنَّ ٱللَّهَ مَعَ ٱلصَّٰبِرِينَ ಅರ್ಥ:⤵️ ▪️ಓ ಸತ್ಯವಿಶ್ವಾಸಿಗಳೇ! ಸಹನೆ ಮತ್ತು ನಮಾಜ್‍ನ ಮೂಲಕ ಸಹಾಯಪೇಕ್ಷೆ ಮಾಡಿಕೊಳ್ಳಿರಿ. ನಿಜವಾಗಿ ಅಲ್ಲಾಹನಿರುವುದು ಸಹನಶೀಲರೊಡನೆ.    ಸಂ: ✒️ಅಬೂರಿಫಾನ ಕುಂದಾಪುರ

ಭೂಲೋಕ ಪರಲೋಕ.

ಭೂಲೋಕ ಪರಲೋಕ.... (ಸಂಕ್ಷಿಪ್ತ) ಈ ಭೂಲೋಕದ ಬಗ್ಗೆ ಕೂಲಂಕುಷವಾಗಿ ಚಿಂತಿಸುವಾಗ ಕೆಲವೊಂದು ವಿಷಯಗಳು ಅರ್ಥಮಾಡಲು ಸಾಧ್ಯವಾಗುತ್ತದೆ. ಇಲ್ಲಿ ಯಾರೂ ಸುಖವಾಗಿ ಇರುವುದಿಲ್ಲ. ದುಡ್ಡಿರುವವರೆಲ್ಲರೂ ಹಾಯಾಗಿ ಇರುತ್ತಾರೆ ಎಂದು ನಾವು ಅಂದುಕೊಳ್ಳುತ್ತೇವೆ ಅದು ನಮ್ಮ ಶುದ್ಧ ಮೂರ್ಖತನ. ಒಂದು ವಸ್ತುವು ಶಾಶ್ವತವಾಗಿ ಇರಬೇಕು. ಅದಕ್ಕೆ ಕೊನೆ ಇರಬಾರದು, ಅದರಲ್ಲಿ ಯಾವುದೇ ದೋಷಗಳು ಇರಬಾರದು, ಅದರ ಕಾರಣದಿಂದ ನಾವು ಕಷ್ಟ ಅನುಭವಿಸಬಾರದು. ಹೀಗೆಲ್ಲಾ ಇದ್ದರೆ ಅದಕ್ಕೊಂದು ಅರ್ಥವಿರುತ್ತೆ.  ಆದರೆ ಈ ಲೋಕದಲ್ಲಿ ಅಂತಹಾ ಸ್ಪೆಷಾಲಿಟಿ ಏನೂ ಇಲ್ಲ. ಇಲ್ಲಿ ಏನು ಮಾಡಬೇಕಾದರೂ ಕಷ್ಟ ಪಡಬೇಕು, ಆರೋಗ್ಯ ಹಾಲುಮಾಡಬೇಕು, ಒಂದುವೇಳೆ ಕಷ್ಟ ಪಟ್ಟು ಆರೋಗ್ಯ ಹಾಳುಮಾಡಿ ತುಂಬಾ ಹಣ ಮಾಡಿ ದೊಡ್ಡ ಶ್ರೀಮಂತನಾದರೂ ಕೂಡಾ ಆ ಸಮಯಕ್ಕೆ ಆಯುಷ್ಯ ಮುಗಿಯುವ ಹಂತದಲ್ಲಿರುತ್ತೇವೆ. ಶರೀರದ ಚರ್ಮವೆಲ್ಲಾ ಸುರುಗಟ್ಟಿ, ಕಣ್ಣುಗುಡ್ಡೆಗಳು ಒಳಹೋಗಿ, ಕೂಡಲೆಲ್ಲಾ ಉದುರಿ ಹೋಗಿಬಿಟ್ಟಿರುತ್ತದೆ. ಇಷ್ಟೆಲ್ಲಾ ಮಾಡಿ ಏನು ಪ್ರಯೋಜನ...? ಕೊನೆಗೆ ತಾನು ಮಾಡಿದ್ದೆಲ್ಲಾ ವಾರೀಸುದಾರರಿಗೆ ಕೊಟ್ಟು ಮಣ್ಣಿನ ಸಣ್ಣ ರಂಧ್ರದಲ್ಲಿ ಮಣ್ಣಾಗುವ ಶರೀರ..... ಇನ್ನು ಒಬ್ಬ ತುಂಬಾ ವೇಗವಾಗಿ ಬೆಳೆದ ಅವನ ಬ್ಯುಸ್ನಸ್ ತುಂಬಾ ದೊಡ್ಡದಾಯಿತು. ಸಣ್ಣ ಪ್ರಾಯದಲ್ಲೇ ತುಂಬಾ ಹಣ ಗಳಿಸಿ ತುಂಬಾ ದೊಡ್ಡ ಶ್ರೀಮಂತನಾದ ಅಂದುಕೊಳ್ಳುವ (ಇಂತಹಾ ಅದೇಷ್ಟೋ ಮಂದಿಯಿದ್ದಾರೆ) ತನ್ನ ಎಷ್ಟೋ ತಲೆಮಾರುಗಳಿಗೆ ಸಾಕಾಗು...

ಅಧ್ಯಾಯ:2 (ಅಲ್-ಬಕ್ವರ) ಸೂಕ್ತ: 150

ಅಧ್ಯಾಯ:2 (ಅಲ್-ಬಕ್ವರ) ಸೂಕ್ತ: 150 وَمِنْ حَيْثُ خَرَجْتَ فَوَلِّ وَجْهَكَ شَطْرَ ٱلْمَسْجِدِ ٱلْحَرَامِ ۚ وَحَيْثُ مَا كُنتُمْ فَوَلُّوا۟ وُجُوهَكُمْ شَطْرَهُۥ لِئَلَّا يَكُونَ لِلنَّاسِ عَلَيْكُمْ حُجَّةٌ إِلَّا ٱلَّذِينَ ظَلَمُوا۟ مِنْهُمْ فَلَا تَخْشَوْهُمْ وَٱخْشَوْنِى وَلِأُتِمَّ نِعْمَتِى عَلَيْكُمْ وَلَعَلَّكُمْ تَهْتَدُونَ ಅರ್ಥ:⤵️ ▪️ನೀವು ಎತ್ತ ಹೊರಟಿದ್ದರೂ ಮಸ್ಜಿದುಲ್ ಹರಾಮಿನ ಕಡೆಗೆ ಅಭಿಮುಖರಾಗಿರಿ. (ಸತ್ಯವಿಶ್ವಾಸಿಗಳೇ) ನೀವು ಎಲ್ಲಿರುವಿರಾದರೂ ಆ ದಿಕ್ಕಿಗೆ ನಿಮ್ಮ ಮುಖ ತಿರುಗಿಸಿರಿ. ಇದು ಅವರ ಪೈಕಿ ಕೆಲವು ಮಂದಿ (ತರ್ಕಕ್ಕೆ ನಿಲ್ಲುವ) ದುರಾತ್ಮರ ಹೊರತು, ಉಳಿದ  ಜನರಿಗೆ ನಿಮ್ಮ ವಿರುದ್ಧ ಯಾವುದೇ ಪುರಾವೆ (ಸಾಕ್ಷಿ) ದೊರೆಯದಿರಲು⁷⁷. ನೀವು ಅವರಿಗೆ ಭಯಪಡಬೇಡಿರಿ. ಪ್ರತಿಯಾಗಿ ನನಗೆ ಭಯಪಡಿರಿ. ಇದು ನನ್ನ ವರದಾನವನ್ನು ನಿಮಗೆ ನಾನು ಪೂರ್ಣಗೊಳಿಸಲು ಹಾಗೂ ನೀವು ಸತ್ಪಥಿಕರಾಗಲು. ವಿವರಣೆ:⤵️   77. ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಕಅ್‌ಬಾವನ್ನು ಖಿಬ್‍ಲಾ ಮಾಡುವರು ಎಂಬ ಅವರ ವೇದಗ್ರಂಥದಲ್ಲಿರುವ ಪರಾಮರ್ಶೆಯನ್ನು ಎತ್ತಿತೋರಿಸಿ ಈ ಪ್ರವಾದಿ ಖಿಬ್‍ಲಾ ಬದಲಾಯಿಸಿಲ್ಲ, ಆದ್ದರಿಂದ ನಮ್ಮ ವೇದದಲ್ಲಿ ಪ್ರಸ್ತಾಪಿಸಿದ ಪ್ರವಾದಿ ಇವರಲ್ಲ ಎಂದು ವಾದಿಸುತ್ತಿದ್ದರು. ಅದೇ ಪ್ರಕಾರ ಇಬ್ರಾಹೀಮ್ ನಬಿ(ಅ.ಸ) ಯವರ ವಂಶದ...

ಅಧ್ಯಾಯ:2 (ಅಲ್-ಬಕ್ವರ) ಸೂಕ್ತ: 152

ಅಧ್ಯಾಯ:2 (ಅಲ್-ಬಕ್ವರ) ಸೂಕ್ತ: 152 فَٱذْكُرُونِىٓ أَذْكُرْكُمْ وَٱشْكُرُوا۟ لِى وَلَا تَكْفُرُونِ ಅರ್ಥ:⤵️ ▪️ಆದ್ದರಿಂದ ನೀವು ನನ್ನನ್ನು ಸ್ಮರಿಸಿರಿ. ನಿಮ್ಮನ್ನು ನಾನೂ ಸ್ಮರಿಸುವೆನು. ನನಗೆ ಕೃತಜ್ಞರಾಗಿರಿ. ಕೃತಘ್ನರಾಗದಿರಿ.    ಸಂ: ✒️ಅಬೂರಿಫಾನ ಕುಂದಾಪುರ

ಅಧ್ಯಾಯ:2 (ಅಲ್-ಬಕ್ವರ) ಸೂಕ್ತ: 151

ಅಧ್ಯಾಯ:2 (ಅಲ್-ಬಕ್ವರ) ಸೂಕ್ತ: 151 كَمَآ أَرْسَلْنَا فِيكُمْ رَسُولًۭا مِّنكُمْ يَتْلُوا۟ عَلَيْكُمْ ءَايَٰتِنَا وَيُزَكِّيكُمْ وَيُعَلِّمُكُمُ ٱلْكِتَٰبَ وَٱلْحِكْمَةَ وَيُعَلِّمُكُم مَّا لَمْ تَكُونُوا۟ تَعْلَمُونَ ಅರ್ಥ:⤵️ ▪️ನನ್ನ ವರದಾನವನ್ನು ನಾನು ಪೂರ್ಣಗೊಳಿಸುವುದು ನಿಮ್ಮಿಂದಲೇ ಓರ್ವ ರಸೂಲರನ್ನು ನಿಮಗಾಗಿ ಕಳುಹಿಸಿ ಪೂರ್ಣಗೊಳಿಸಿದ ರೀತಿಯಲ್ಲಾಗಿದೆ. ಆ ರಸೂಲರು ನಮ್ಮ ಸದ್ವಚನಗಳನ್ನು ನಿಮಗೆ ಓದಿ ಕೊಡುತ್ತಾರೆ. ನಿಮ್ಮನ್ನು ಶುಚಿಗೊಳಿಸುತ್ತಾರೆ. ನಿಮಗೆ ದಿವ್ಯಗ್ರಂಥವನ್ನೂ ತತ್ವಜ್ಞಾನವನ್ನೂ ಕಲಿಸುತ್ತಾರೆ. ನಿಮಗೆ ತಿಳಿಯದ ವಿಚಾರಗಳನ್ನು ತಿಳಿಯಪಡಿಸುತ್ತಾರೆ. 𖣔𖣔𖣔𖣔𖣔𖣔𖣔𖣔𖣔𖣔𖣔𖣔𖣔𖣔𖣔𖣔𖣔 ವಿ.ಸೂ; ಈ ಸಂದೇಶವನ್ನು ಎಡಿಟ್(Edit) ಮಾಡಿ, ಹೆಸರು ಬದಲಿಸಿ ಇತರೆ ಗ್ರೂಪ್‌ಗಳಿಗೆ/ಇತರರಿಗೆ ಕಳುಹಿಸುವುದು ಸಮ್ಮತಾರ್ಹವಲ್ಲ. ಅತೃಪ್ತಿದಾಯಕವಾಗಿದೆ. ಇಂತಹ ಕಾರ್ಯಗಳನ್ನು ಅಲ್ಲಾಹನು ಮೆಚ್ಚಲಾರನು.    ಸಂ: ✒️ಅಬೂರಿಫಾನ ಕುಂದಾಪುರ

ಉಪವಾಸವು ಇಸ್ಲಾಮಿನ ಪಂಚ ಸ್ಥಂಭಗಳಲ್ಲೊಂದಾಗಿದೆ:

ಉಪವಾಸವು ಇಸ್ಲಾಮಿನ ಪಂಚ ಸ್ಥಂಭಗಳಲ್ಲೊಂದಾಗಿದೆ: ಉಪವಾಸವು ಇಸ್ಲಾಮಿನ ಪಂಚಸ್ಥಂಭಗಳಲ್ಲೊಂದಾಗಿದೆ. ನಮ್ಮಂತೆಯೇ ಪೂರ್ವಿಕ ಜನಾಂಗಕ್ಕೂ ಕಡ್ಡಾಯಗೊಳಿಸಲ್ಪಟ್ಟ ಪುರಾತನ ಆರಾಧನೆಗಳಲ್ಲಿ ಇದೂ ಒಂದಾಗಿದೆ. ಪಾಪಗಳಿಂದ ತುಂಬಿದ ದೇಹ ಮತ್ತು ಮನಸನ್ನು ಶುಚಿಗೊಳಿಸಲು ಅಲ್ಲಾಹನು ನೀಡಿದ ಸದವಕಾಶವೇ ಉಪವಾಸ ವ್ರತ. ಪವಿತ್ರ ಖುರ್‌ಆನ್‌ನಲ್ಲಿ ಅಲ್ಲಾಹನು ಹೇಳುತ್ತಾನೆ: *ಓ ಸತ್ಯ ವಿಶ್ವಾಸಿಗಳೇ.!! ನಿಮ್ಮ ಪೂರ್ವಿಕರ ಮೇಲೆ ಉಪವಾಸ ಕಡ್ಡಾಯಗೊಳಿಸಿದಂತೆ ನಿಮ್ಮ ಮೇಲೂ ಉಪವಾಸ ಕಡ್ಡಾಯಗೊಳಿಸಲಾಗಿದೆ. ಅದರ ಮೂಲಕ ನೀವೂ ಭಯ, ಭಕ್ತಿ ಉಳ್ಳವರಾಗಲಿಕ್ಕಾಗಿ. ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳುತ್ತಾರೆ; ಒಬ್ಬ ವ್ಯಕ್ತಿ ಕೆಟ್ಟ ಮಾತುಗಳನ್ನೂ, ಪಾಪ ಕೃತ್ಯಗಳನ್ನೂ ಉಪೇಕ್ಷಿಸದೇ ಕೇವಲ ಅನ್ನ ಪಾನೀಯಗಳನ್ನು ತೊರೆಯುವುದು ಅಲ್ಲಾಹನಿಗೆ ಅಗತ್ಯವಿಲ್ಲ. ಅನ್ನ ಪಾನೀಯಗಳನ್ನು ತೊರೆಯುವುದರ ಮೂಲಕ ಮಾನಸಿಕ ಹಾಗೂ ದೈಹಿಕ ನಿಯಂತ್ರಣವೇ ಉಪವಾಸದ ನಿಜವಾದ ಗುಟ್ಟು ಎನ್ನುವುದನ್ನು ಈ ಹದೀಸಿನ ಮೂಲಕ ತಿಳಿಯಬಹುದಾಗಿದೆ. ಮನುಷ್ಯನ ಉನ್ನತಿಯನ್ನು ತಡೆಯುವ ಅನೇಕ ವಿಷಯಗಳಿವೆ. ನಡೆ, ನುಡಿ, ಚಿಂತನೆಗಳಲ್ಲಿ ಸಂಭವಿಸುವ ಕೆಡುಕುಗಳು ಅವುಗಳಲ್ಲಿ ಬಹಳ ಮುಖ್ಯವಾದವುಗಳು. ಆದರೆ, ವ್ರತ ಅವುಗಳಿಂದ ಮುಕ್ತಿ ನೀಡಿ, ಮನುಷ್ಯನನ್ನು ಔನ್ನತ್ಯಕ್ಕೇರಿಸುತ್ತದೆ. ವ್ರತಕಾಲವು ದುಷ್ಟ ಚಿಂತೆ, ದುಷ್ಟ ಕೆಲಸಕಾರ್ಯಗಳಿಂದ ತಡೆದು ನಿಲ್ಲಿಸಿ, ಮನಸು ಹಾಗೂ ಶರೀರವನ್ನು ಸ್ಪಟಿಕ ಶುದ್ಧಗೊಳಿಸಿ, ಸಂಶ...