Posts

Showing posts from June, 2021

ಕಪ್ಪು ಉಪ್ಪು: ಗ್ಯಾಸ್ಟ್ರಿಕ್, ಎದೆಯುರಿ, ಅಜೀರ್ಣ ಸಮಸ್ಯೆಗೆ ಪರ್ಫೆಕ್ಟ್ ಮನೆಮದ್ದು!

ಕಪ್ಪು ಉಪ್ಪು: ಗ್ಯಾಸ್ಟ್ರಿಕ್, ಎದೆಯುರಿ, ಅಜೀರ್ಣ ಸಮಸ್ಯೆಗೆ ಪರ್ಫೆಕ್ಟ್ ಮನೆಮದ್ದು!  ರುಚಿಗೆ ತಕ್ಕಷ್ಟು ಉಪ್ಪು ಹಾಕದೆ ಇದ್ದರೆ ನಾವು ತಯಾರು ಮಾಡುವ ಅಡುಗೆ ಬಾಯಲ್ಲಿ ಇಡಲು ಕೂಡ ಸಾಧ್ಯವಿರುವುದಿಲ್ಲ. ಏಕೆಂದರೆ ಅಪಾರ ಪ್ರಮಾಣದ ಅಡುಗೆಯ ಸ್ವಾದ ಕೇವಲ 1 ಟೇಬಲ್ ಚಮಚ ಉಪ್ಪಿನಲ್ಲಿ ನಿರ್ಧಾರವಾಗುತ್ತದೆ.  ಮಿತ ಪ್ರಮಾಣದಲ್ಲಿ ಸೇವನೆ ಮಾಡಿದರೆ ಉಪ್ಪಿನಿಂದ ಕೂಡ ನಮಗೆ ಆರೋಗ್ಯಕ್ಕೆ ಸಾಕಷ್ಟು ಅನುಕೂಲವಿದೆ. ಇದಕ್ಕೆ ಉದಾಹರಣೆಯೆನ್ನುವಂತೆ ಕಪ್ಪು ಉಪ್ಪು ಹಲವಾರು ಆರೋಗ್ಯ ಪ್ರಯೋಜನಗಳನ್ನು ಒಳಗೊಂಡಿದೆ. ವಿಶೇಷವಾಗಿ ಗ್ಯಾಸ್ಟ್ರಿಕ್ ಮತ್ತು ಆಮ್ಲೀಯತೆ ಜೊತೆಗೆ ಎದೆಯುರಿ ಸಮಸ್ಯೆಯನ್ನು ದೂರ ಮಾಡುವ ಗುಣವನ್ನು ಸಹ ಇದು ಪಡೆದುಕೊಂಡಿದೆ. ​ಕಪ್ಪು ಉಪ್ಪು ಹೇಗೆ ಸಹಾಯಕ? ಜೀರ್ಣಶಕ್ತಿ ಹೆಚ್ಚಿಸುತ್ತದೆ  ನೈಸರ್ಗಿಕವಾಗಿ ಉತ್ತೇಜನ ಶಕ್ತಿಯನ್ನು ಪಡೆದಿರುವ ಕಪ್ಪು ಯಕೃತ್ ಭಾಗವನ್ನು ಉತ್ತೇಜಿಸಿ ದೇಹದ ಜೀರ್ಣ ಪ್ರಕ್ರಿಯೆಗೆ ಅನುಕೂಲವಾಗುವಂತೆ ಅಗತ್ಯವಾಗಿ ಬೇಕಾಗಿರುವ ಜೀರ್ಣ ರಸಗಳನ್ನು ಉತ್ಪತ್ತಿಯಾಗುವಂತೆ ಮಾಡಿ ಹಸಿವಿನ ನಿಯಂತ್ರಣ ಮಾಡುತ್ತದೆ. ಕೆಲವೊಂದು ಆಮ್ಲೀಯ ಅಂಶಗಳನ್ನು ಒಳಗೊಂಡಿರುವ ಜೀರ್ಣರಸಗಳು ನೀವು ಸೇವಿಸುವ ಆಹಾರದಲ್ಲಿ ಕಂಡುಬರುವ ಕೊಬ್ಬಿನ ಅಂಶವನ್ನು ಮತ್ತು ಕರಗುವ ವಿಟಮಿನ್ ಅಂಶಗಳನ್ನು ಸಣ್ಣ ಕರುಳಿನ ಭಾಗಕ್ಕೆ ಪೂರೈಕೆ ಮಾಡುತ್ತದೆ. ಉಪಹಾರದ ಸಮಯದಲ್ಲಿ ಇವುಗಳನ್ನು ತಿಂದರೆ ಜೀರ್ಣಶಕ್ತಿ ಹೆಚ್ಚಾಗುತ್ತದೆ! *ಎದೆಯುರಿ ...

ಖಬರಸ್ಥಾನದಿಂದ ಕೆಲವು ಆಲೋಚನೆಗಳು

ಖಬರಸ್ಥಾನದಿಂದ ಕೆಲವು ಆಲೋಚನೆಗಳು ಖಬರೊಂದರ ದಫನ ಕಾರ್ಯ ಮುಗಿಸಿ ಮರಳುವಾಗ ತಟ್ಟನೆ ಆಲೋಚನೆಯೊಂದು ಮನದೊಳಗೆ ತೀವ್ರ ಭಯ ಮತ್ತು ಆತಂಕವನ್ನು ಮೂಡಿಸಿತು .  ಕಾರಣ ಬೇರೇನಿರಲಿಲ್ಲ , ಈ ಕೋವಿಡ್ ಕಾಲ ಮುಗಿಯುವ ಮೊದಲೇ ಮರಣ ಬಂದು ಬಿಡುವುದೋ ಎಂಬ ಆತಂಕ .  ಸಹಸ್ರಾರು ಸತ್ಯ ವಿಶ್ವಾಸಿಗಳು ಸಂಗಮಿಸುವ ಜನಾಝ ನಮಾಝ್ ಇರಲಿಕ್ಕಿಲ್ಲ . ಕೊನೆಯದಾಗಿ ಪವಿತ್ರ ಮಸೀದಿಯೊಳಗೆ ಕೊಂಡೊಯ್ಯುವ ಸಾಧ್ಯತೆಯಿಲ್ಲ . ಮಸೀದಿಯೊಳಗೆ ಕುಟುಂಬಿಕರ , ಆಪ್ತರ , ಪರಿಚಯಸ್ಥರ ಬಳಿ ಮಸೀದಿ ಇಮಾಮರು ನಮಗಾಗಿ ಕೇಳುವ ಕೊನೆಯ ಕ್ಷಮಾಪಣೆಯ ಕಾರ್ಯ ನಡೆಯಲಿಕ್ಕಿಲ್ಲ .  ನಮ್ಮ ಬಾಧ್ಯತೆಗಳನ್ನು ವಹಿಸಿಕೊಳ್ಳುವ ನಮ್ಮವರ ಮಾತುಗಳಿಗೆ ಅವಕಾಶವಿರಲಿಕ್ಕಿಲ್ಲ . ಸಾತ್ವಿಕರ ಸೂಫಿವರ್ಯರ ಸಾದಾತುಗಳ ಪೈಕಿ ಹೆಚ್ಚಿನವರ ಸಾನಿಧ್ಯ ಉಂಟಾಗಲಿಕ್ಕಿಲ್ಲ . ಬರಲಾಗದ ಕಾರಣ ಅವರ ಪುಣ್ಯ ಪ್ರಾರ್ಥನೆಗಳ ಧನ್ಯತೆ ನೇರವಾಗಿ ಸಿಗಲಿಕ್ಕಿಲ್ಲ .  ಕೊನೆಯದಾಗಿ ನಮ್ಮ ಮೇಲೆ ಹಿಡಿ ಮಣ್ಣು ಹಾಕಲಾಗುವಾಗ ತಸ್ಬೀತ್ ಹೇಳುವ ಜನರೂ ವಿ‌ರಳವಿರಬಹುದು .... ಅದೆಂತಹ ಯಾತ್ರೆಯಾಗಿರಬಹುದು ಅದು !!!!  ಇಕ್ಕೆಲಗಳಲ್ಲಿರುವ ಖಬರುಗಳನ್ನು ನೋಡಿದಾಗ ಅದರಲ್ಲಿರುವವರೊಂದಿಗೆ ಮನಸ್ಸು ಅರಿಯದೆ ಮಂತ್ರಿಸಿತು ....  " ನೀವೆಷ್ಟು ಭಾಗ್ಯವಂತರು .. ! ಜನಾಝವೊಂದಕ್ಕೆ ಸಿಗಬೇಕಾದ ಸಕಲ ಗೌರವಗಳು ಮತ್ತು ಸೌಭಾಗ್ಯಗಳನ್ನು ಪಡೆದು ಯಾತ್ರೆಯಾದಿರಿ . ನೂರಾರು ಮಂದಿ ನಿಮಗೆ ಜನಾಝ ನಮಾಝ್ ನಿರ್ವಹಿಸಿರಬಹ...

ಬೆಳಗ್ಗೆ ಮತ್ತು ಸಂಜೆ

       ಬೆಳಗ್ಗೆ ಮತ್ತು ಸಂಜೆ أَعُوذُ بِاللَّهِ مِنَ الشَّيْطَانِ الرَّجِيمِ. اللَّهُ لاَ إِلَهَ إِلاَّ هُوَ الْحَيُّ الْقَيُّومُ لاَ تَأْخُذُهُ سِنَةٌ وَلاَ نَوْمٌ لَّهُ مَا فِي السَّمَاوَاتِ وَمَا فِي الۡأَرْضِ مَن ذَا الَّذِي يَشْفَعُ عِنْدَهُ إِلاَّ بِإِذْنِهِ يَعْلَمُ مَا بَيْنَ أَيْدِيهِمْ وَمَا خَلْفَهُمْ وَلاَ يُحِيطُونَ بِشَىْءٍ مِّنْ عِلْمِهِ إِلاَّ بِمَا شَاءَ وَسِعَ كُرْسِيُّهُ السَّمَاوَاتِ وَالۡأَرْضَ وَلاَ يَؤُودُهُ حِفْظُهُمَا وَهُوَ الْعَلِيُّ الْعَظِيمُ ಅರ್ಥ: ಅಲ್ಲಾಹ್! ಅವನಲ್ಲದೆ ಆರಾಧನೆಗೆ ನೈಜ ಹಕ್ಕುದಾರರಾಗಿ ಅನ್ಯರಿಲ್ಲ, ಅವನು ಎಂದೆಂದಿಗೂ ಬದುಕಿರುವವನೂ ಎಲ್ಲವನ್ನೂ ನಿಯಂತ್ರಿಸುವವನೂ ಆಗಿದ್ದಾನೆ. ತೂಕಡಿಕೆಯಾಗಲಿ ನಿದ್ರೆಯಾಗಲಿ ಅವನನ್ನು ಬಾಧಿಸದು. ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವುದೆಲ್ಲವೂ ಅವನದ್ದು. ಅವನ ಅನುಮತಿಯಿಲ್ಲದೆ ಅವನ ಬಳಿ ಶಿಫಾರಸು ಮಾಡುವವನು ಯಾರಿದ್ದಾನೆ? ಅವರ ಮುಂದಿರುವುದನ್ನೂ ಹಿಂದಿರುವುದನ್ನೂ ಅವನು ಅರಿಯುತ್ತಾನೆ. ಅವನ ಅರಿವಿನಿಂದ ಅವನು ಇಚ್ಛಿಸಿದ್ದನ್ನಲ್ಲದೆ ಬೇರೇನನ್ನೂ ಆವರಿಸಿಕೊಳ್ಳಲು ಅವರಿಗೆ ಸಾಧ್ಯವಿಲ್ಲ. ಅವನ ಕುರ್ಸೀ ಆಕಾಶಗಳನ್ನೂ ಭೂಮಿಯನ್ನೂ ವ್ಯಾಪಿಸಿದೆ. ಅವುಗಳ ಸಂರಕ್ಷಣೆಯು ಅವನಿಗೊಂದು ವಿಷಯವೇ ಅಲ್ಲ. ಅವನು ಅತ್ಯುನ್ನತನೂ ಮಹೋನ್ನ...

ಅಧ್ಯಾಯ: 2 ಅಲ್-ಬಕ್ವರಃ ಸೂಕ್ತ: 228

(ಅಧ್ಯಾಯ: 2 ಅಲ್-ಬಕ್ವರಃ ಸೂಕ್ತ: 228) وَٱلْمُطَلَّقَٰتُ يَتَرَبَّصْنَ بِأَنفُسِهِنَّ ثَلَٰثَةَ قُرُوٓءٍۢ ۚ وَلَا يَحِلُّ لَهُنَّ أَن يَكْتُمْنَ مَا خَلَقَ ٱللَّهُ فِىٓ أَرْحَامِهِنَّ إِن كُنَّ يُؤْمِنَّ بِٱللَّهِ وَٱلْيَوْمِ ٱلْءَاخِرِ ۚ وَبُعُولَتُهُنَّ أَحَقُّ بِرَدِّهِنَّ فِى ذَٰلِكَ إِنْ أَرَادُوٓا۟ إِصْلَٰحًۭا ۚ وَلَهُنَّ مِثْلُ ٱلَّذِى عَلَيْهِنَّ بِٱلْمَعْرُوفِ ۚ وَلِلرِّجَالِ عَلَيْهِنَّ دَرَجَةٌۭ ۗ وَٱللَّهُ عَزِيزٌ حَكِيمٌ ಅರ್ಥ:ವಿವಾಹ ವಿಚ್ಛೇದಿತೆಯರಿಗೆ ಮೂರು ಆರ್ತವದ ವರೆಗೆ ನಿರೀಕ್ಷಣಾ ಅವಧಿಯಾಗಿರುತ್ತದೆ ¹²². ಅವರಿಗೆ ಅಲ್ಲಾಹು ಮತ್ತು ಪರಲೋಕದಲ್ಲಿ ನಂಬಿಕೆಯಿದ್ದಲ್ಲಿ ತಮ್ಮ ಗರ್ಭಾಶಯದಲ್ಲಿರುವ ಅಲ್ಲಾಹನ ಸೃಷ್ಟಿಯನ್ನು ಬಚ್ಚಿಡುವುದು ಸಮ್ಮತವಲ್ಲ. ಸಂಬಂಧ ಸುಧಾರಿಸುವ ಇರಾದೆ ಇದ್ದಲ್ಲಿ ಈ ಕಾಲಾವಧಿಯೊಳಗೆ ಮರಳಿ ಸ್ವೀಕರಿಸುವ ಅರ್ಹತೆ ಪತಿಯಂದಿರಿಗಿದೆ. ಸ್ತ್ರೀಯರಿಗೆ ಭಾಧ್ಯತೆಗ ಳಿರುವಂತೆಯೇ ನ್ಯಾಯೋಚಿತ ಹಕ್ಕುಗಳೂ ಇವೆ. ಆದರೆ ಪುರುಷರಿಗೆ ಅವರಿಗಿಂತ ಒಂದು ಪದವಿ ಮೇಲಿದೆ. ಅಲ್ಲಾಹನು ಪ್ರತಾಪಿಯು. ಯುಕ್ತಿಯುಕ್ತನು. ವಿವರಣೆ:  122. ಪ್ರಸ್ಥ ಆಚರಿಸಲಾದ (ಮೈಥುನ ನಡೆದ), ಗರ್ಭವತಿಯಲ್ಲದ ಮತ್ತು ಮಾಸಿಕ ಸ್ರಾವ ಉಂಟಾಗುವ ಸ್ತ್ರೀಯರಾಗಿದ್ದರೆ, ಇವರು ವಿಚ್ಛೇಧನಕ್ಕೊಳಗಾದರೆ ಬೇರೆ ಒಬ್ಬ ಪುರುಷನನ್ನು ವರಿಸಲು ಅನು...

ಕಬ್ಬಿಣದಂಗಡಿ!

ಕಬ್ಬಿಣದಂಗಡಿ! ರಬೀಉ ಬಿನುಲ್ ಖೈಸಂ(ರ) ರವರು ಮಹಾನುಭಾವರಾದ ಇಬ್ನು ಮಸ್ ಊದ್(ರ) ರವರು ಭೇಟಿಯಾಗಲು ಹೊರಟಿದ್ದರು. ದಾರಿ ಮಧ್ಯೆ ಕಬ್ಬಿಣ ಮಾರುವ ಅಂಗಡಿಯೊಂದರಲ್ಲಿ ಉರಿಯುತ್ತಿರುವ ಒಲೆಯನ್ನಿಟ್ಟು ಕಬ್ಬಿಣವನ್ನು ಹದಗೊಳಿಸುತ್ತಿದ್ದರು. ಮಹಾತ್ಮರಿಗೆ ಈ ದೃಶ್ಯ ಗೋಚರಿಸಿದಾಕ್ಷಣ ಅವರು ಪ್ರಜ್ಞಾಹೀನರಾಗಿ ಬಿದ್ದು ಬಿಟ್ಟರು. ಮರುದಿನದ ತನಕ ಅದೇ ಪ್ರಜ್ಞಾ ಹೀನ ಸ್ಥಿತಿ. ಪ್ರಜ್ಞೆ ಮರಳಿ ಬಂದ ಬಳಿಕ ಅವರೊಂದಿಗೆ ಈ ಬಗ್ಗೆ ಕೇಳಿದಾಗ ಅವರ ಉತ್ತರ ಹೀಗಿತ್ತು; "ಆ ದೃಶ್ಯ ಕಂಡಾಗ ನನಗೆ ನರಕವಾಸಿಗಳ ನರಕಜೀವನದ ಭಯಾನಕತೆ ನೆನಪಾಯಿತು!".(ಅಲ್ ಇಸ್ತಿಇದಾದು ಲಿಲ್ ಮೌತ್) ಜುನೈದ್ ಸಖಾಫಿ ಜೀರ್ಮುಕ್ಕಿ ಮುದರ್ರಿಸ್,ದ್ಸಿಕ್ರಾ ಮೂಡಬಿದ್ರೆ ಜೂನ್ 13, 2021 ಆದಿತ್ಯವಾರ, ದುಲ್ ಖಅದ್ 02, 1442

ನಿದ್ದೆಯಿಂದ ಎದ್ದೇಳುವಾಗ ಹೇಳುವ ದಿಕ್ರ್‍ಗಳು

ನಿದ್ದೆಯಿಂದ ಎದ್ದೇಳುವಾಗ ಹೇಳುವ ದಿಕ್ರ್‍ಗಳು اَلْحَمْدُ لِلَّهِ الَّذِي أَحْيَانَا بَعْدَ مَا أَمَاتَنَا وَإِلَيْهِ النُّشُورُ ಅರ್ಥ: ಮೃತಗೊಳಿಸಿದ ಬಳಿಕ ನಮಗೆ ಜೀವವನ್ನು ನೀಡಿದ ಅಲ್ಲಾಹನಿಗೆ ಸ್ತುತಿ ಮತ್ತು ಪುನರುತ್ಥಾನವು ಅವನ ಬಳಿಗೇ ಆಗಿದೆ. ಅಲ್‍ಹಮ್ದುಲಿಲ್ಲಾಹಿಲ್ಲದೀ ಅಹ್ಯಾನಾ ಬಅ್ ದ ಮಾ ಅಮಾತನಾ, ವಇಲೈಹಿ ನ್ನುಶೂರ್ (ಅಲ್‍ಬುಖಾರೀ (ಫತ್‍ಹುಲ್ ಬಾರಿ) 11/113 ಹದೀಸ್ ಸಂಖ್ಯೆ: 6312; ಮುಸ್ಲಿಮ್ 4/2083 ಹದೀಸ್ ಸಂಖ್ಯೆ: 2711.)  ನಿದ್ದೆಯಿಂದ ಎದ್ದೇಳುವಾಗ ಹೇಳುವ ದಿಕ್ರ್‍ಗಳು الْحَمْدُ لِلَّهِ الَّذِي عَافَانِي فِي جَسَدِي, وَرَدَّ عَلَيَّ رُوحي, وَأَذِنَ لِي بِذِكْرِهِ ಅರ್ಥ:ನನ್ನ ದೇಹದಲ್ಲಿ ನನಗೆ ಸೌಖ್ಯವನ್ನು ನೀಡಿದ, ನನ್ನ ಆತ್ಮವನ್ನು ನನಗೆ ಮರಳಿಸಿಕೊಟ್ಟ, ತನ್ನ ಸ್ಮರಣೆಗಾಗಿ ನನಗೆ ಅನುಮತಿ ನೀಡಿದ ಅಲ್ಲಾಹನಿಗೆ ಸರ್ವಸ್ತುತಿ. ಅಲ್‍ಹಮ್ದುಲಿಲ್ಲಾಹಿಲ್ಲದೀ ಆಫಾನೀ ಫೀ ಜಸದೀ, ವರದ್ದ ಅಲಯ್ಯ ರೂಹೀ, ವಅದಿನ ಲೀ ಬಿದಿಕ್ರಿಹೀ (ಅತ್ತಿರ್ಮಿದೀ 5/473 ಹದೀಸ್ ಸಂಖ್ಯೆ 3401. ನೋಡಿ: ಸಹೀಹು ತ್ತಿರ್ಮಿದೀ 3/144)  ನಿದ್ದೆಯಿಂದ ಎದ್ದೇಳುವಾಗ ಹೇಳುವ ದಿಕ್ರ್‍ಗಳು الْحَمْدُ لِلَّهِ الَّذِي عَافَانِي فِي جَسَدِي, وَرَدَّ عَلَيَّ رُوحِي, وَأَذِنَ لِي بِذِكْرِهِ ಅರ್ಥ:ನನ್ನ ದೇಹದಲ್ಲಿ ನನಗೆ ಸೌಖ್ಯವನ್ನು ನೀಡಿದ, ನನ್ನ ಆತ್ಮವನ್ನು ನನಗೆ ಮರಳಿಸಿಕ...

ಅಧ್ಯಾಯ: 2 ಅಲ್-ಬಕ್ವರಃ ಸೂಕ್ತ: 226

(ಅಧ್ಯಾಯ: 2 ಅಲ್-ಬಕ್ವರಃ ಸೂಕ್ತ: 226) لِّلَّذِينَ يُؤْلُونَ مِن نِّسَآئِهِمْ تَرَبُّصُ أَرْبَعَةِ أَشْهُرٍۢ ۖ فَإِن فَآءُو فَإِنَّ ٱللَّهَ غَفُورٌۭ رَّحِيمٌۭ ಅರ್ಥ:ಮಡದಿಯೊಂದಿಗೆ ದೇಹಸಂಪರ್ಕ ಮಾಡೆನೆಂದು ಆಣೆ ಹಾಕಿದವರಿಗೆ ನಾಲ್ಕು ಮಾಸಗಳ ವಾಯಿದೆಯಿದೆ ¹²¹. ಆ ಅವಧಿಯೊಳಗೆ ಹಿಂತೆಗೆದು ಕೊಂಡರೆ ಖಂಡಿತ ಅಲ್ಲಾಹನು ಪಾಪನಾಶಕ, ಮಹಾಕರುಣಿ. ವಿವರಣೆ:   121. ಪತ್ನಿಯರೊಂದಿಗೆ ಸಂಸರ್ಗ ನಡೆಸದಿರಲು ಆಣೆ ಹಾಕಿ ಶಪಥ ಮಾಡುವುದನ್ನು `ಈಲಾ' ಎಂದು ಕರೆಯಲಾಗುತ್ತದೆ.

ಗೆಳೆಯರ ಕೊರತೆಗಳನ್ನು ಹೇಳಿ ನಡೆಯುತ್ತೀರಾ, ಉಷಾರ್!

ಗೆಳೆಯರ ಕೊರತೆಗಳನ್ನು ಹೇಳಿ ನಡೆಯುತ್ತೀರಾ, ಉಷಾರ್! ಸೌಬಾನ್(ರ.ಅ) ರಿಂದ ನಿವೇದನೆ: ಪ್ರವಾದಿﷺ ಹೇಳಿದರು, "ನೀವು ಅಲ್ಲಾಹನ ದಾಸರನ್ನು ಉಪದ್ರವಿಸದಿರಿ, ಅವರನ್ನು ಕೀಳಾಗಿಸದಿರಿ, ಅವರ ರಹಸ್ಯ ಹುಡುಕುತ್ತಾ ನಡೆಯದಿರಿ, ಖಂಡಿತವಾಗಿಯೂ ಓರ್ವ ಮುಸ್ಲಿಂ ಸಹೋದರನ ನ್ಯೂನತೆ, ಕೊರತೆಗಳನ್ನು ಹುಡುಕುತ್ತಾ‌ ನಡೆದರೆ ಅಲ್ಲಾಹು ಅವನ ನ್ಯೂನತೆಗಳನ್ನು ಹೊರಹಾಕಿ ಅವನ ಸ್ವಂತ ಕುಟುಂಬದಲ್ಲೇ ಅವನನ್ನು ಅಪಮಾನಕ್ಕೆ ಈಡಾಗಿಸುವನು." [ಅದ್ದುರ್ರುಲ್ ಮನ್ಸೂರ್] ✍🏻ಸಾಲಿಮ್ ಮುಈನಿ ಸಖಾಫಿ ರಬ್ಬಾನಿ‌ ಅ'ಸ್ಸಿಂಧಿ ಗದಗ

ಪರನಿಂದನೆ:

ಪರನಿಂದನೆ: ಅಬೂಹುರೈರಾ ರಳಿಯಲ್ಲಾಹು ಅನ್‌ಹುರವರಿಂದ ವರದಿ: ಒಮ್ಮೆ ಪ್ರವಾದಿ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು. ಪರನಿಂದೆ ಎಂದರೇನೆಂದು ನಿಮಗೆ ಗೊತ್ತೇ?ಎಂದು ಕೇಳಿದರು. ಸಹಾಬಿಗಳು ಅಲ್ಲಾಹನು ಮತ್ತು ಅವನ ಸಂದೇಶವಾಹಕ(ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ)ರು ಹೆಚ್ಚು ಬಲ್ಲವರು ಎಂದು ಪ್ರತಿಕ್ರಿಯಿಸಿದಾಗ ಪ್ರವಾದಿ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು.  ನೀವು ನಿಮ್ಮ ಸಹೋದರನ ಕುರಿತು ಅವನಿಗೆ ಅಪ್ರಿಯವಾದುದನ್ನು ಹೇಳುವುದು ಎಂದರು.  ಆ ಸಂದರ್ಭ ಒಬ್ಬರು ನಾನು ಹೇಳುವುದು ಸಹೋದರನಲ್ಲಿದ್ದರೆ? ಎಂದು ವಿಚಾರಿಸಿದಾಗ ಪ್ರವಾದಿ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಹೀಗೆಂದರು.  ನೀನು ಹೇಳಿದ ದೋಷವು ಅವನಲ್ಲಿದ್ದರೆ ಅದು ಗೀಬತ್ (ಪರನಿಂದೆ) ಎನಿಸುತ್ತದೆ. ಇನ್ನು ಅದು ಅವನಲ್ಲಿ ಇಲ್ಲವೆಂದಾದರೆ ನೀನು ಅವನ ಮೇಲೆ ಸುಳ್ಳಾರೋಪ ಹೊರಿಸಿದಂತಾಗುತ್ತದೆ. (ಮುಸ್ಲಿಮ್) 

ಆರಾಧನೆ ಚಂದ!

ಆರಾಧನೆ ಚಂದ! ಮಹಾತ್ಮರಾದ ಹಾತಿಮುಲ್ ಅಸ್ವಮ್ಮ್(ರ) ರವರು ಹೇಳಿದರು; "ಪ್ರತಿಯೊಂದಕ್ಕೂ ಅದರದ್ದೇ ಆದ ಸೌಂದರ್ಯಗಳಿವೆ. ಆರಾಧನೆಯ ಸೌಂದರ್ಯ ಭಕ್ತಿಯಾಗಿದೆ. ಭಕ್ತಿಯಿದೆಯೆಂಬುದಕ್ಕೆ ಪುರಾವೆಯಾಗಿದೆ ಅತಿಯಾಸೆಯಿಲ್ಲದಿರುವುದು!".(ಅಲ್ ಇಸ್ತಿಇದಾದು ಲಿಲ್ ಮೌತ್) ಜುನೈದ್ ಸಖಾಫಿ ಜೀರ್ಮುಕ್ಕಿ ಮುದರ್ರಿಸ್,ದ್ಸಿಕ್ರಾ ಮೂಡಬಿದ್ರೆ ಜೂನ್ 11, 2021 ಶುಕ್ರವಾರ, ಶವ್ವಾಲ್ 30 , 1442

ಅಧ್ಯಾಯ: 2 ಅಲ್-ಬಕ್ವರಃ ಸೂಕ್ತ: 223

(ಅಧ್ಯಾಯ: 2 ಅಲ್-ಬಕ್ವರಃ ಸೂಕ್ತ: 223) نِسَآؤُكُمْ حَرْثٌۭ لَّكُمْ فَأْتُوا۟ حَرْثَكُمْ أَنَّىٰ شِئْتُمْ ۖ وَقَدِّمُوا۟ لِأَنفُسِكُمْ ۚ وَٱتَّقُوا۟ ٱللَّهَ وَٱعْلَمُوٓا۟ أَنَّكُم مُّلَٰقُوهُ ۗ وَبَشِّرِ ٱلْمُؤْمِنِينَ ಅರ್ಥ: ನಿಮ್ಮ ಮಹಿಳೆಯರು ನಿಮ್ಮ ಹೊಲ. ನಿಮ್ಮ ಹೊಲಕ್ಕೆ ನಿಮ್ಮಿಚ್ಛೆಯಂತೆ ಹೋಗಿ. ಸ್ವಹಿತಕ್ಕಾಗಿ ಧಾರ್ಮಿಕ ಪೂರ್ವವಿಧಿಗಳನ್ನು ಪಾಲಿಸಿರಿ. ಅಲ್ಲಾಹನ ವಿಧಿ-ನಿಷೇಧಗಳಿಗೆ ಬದ್ಧರಾಗಿರಿ ¹¹⁹. ಆತನನ್ನು ನೀವು ಭೇಟಿಯಾಗಲಿದ್ದೀರೆಂಬುದು ತಿಳಿದಿರಲಿ. (ಓ ಪ್ರವಾದಿಯವರೇ) ಸತ್ಯವಿಶ್ವಾಸಿಗಳಿಗೆ ಸುವಾರ್ತೆ ಕೊಡಿರಿ. ವಿವರಣೆ:  119. ಅರ್ಥಾತ್ ದೈಹಿಕ ತೃಷೆಯ ಭರದಲ್ಲಿ ಧಾರ್ಮಿಕತೆಯನ್ನು ಮರೆಯಬಾರದು ಎಂಬ ಸೂಚನೆ. ನಿಮ್ಮ ಸ್ತ್ರೀಯರು ನಿಮಗೆ ಹೊಲದಂತೆ, ನಿಮ್ಮ ಹೊಲಕ್ಕೆ ನೀವು ಇಷ್ಟಬಂದಂತೆ ಪ್ರವೇಶಿಸಿರಿ ಎಂಬ ಮುಕ್ತ ಅವಕಾಶ ದೊರೆತ ಆವೇಶದಲ್ಲಿ ಧರ್ಮಶ್ರದ್ಧೆ ಬಿಟ್ಟು ಹೋಗಬಾರದು. ಆದ್ದರಿಂದ ಮೈಥುನಾರಂಭದಲ್ಲಿ ಬಿಸ್ಮಿಲ್ಲಾಹ್ ಹೇಳುವುದು ಹಾಗೂ `ಅಲ್ಲಾಹುಮ್ಮ ಜನ್ನಿಬ್‍ನ ಶೈತಾನ, ವಜನ್ನಿಬಿಶೈತಾನ ಮಾ ರಝಖ್‍ತನಾ (ಈ ದುಆ ಹೇಳಿದರೆ ಜನಿಸುವ ಮಗುವಿಗೆ ಶೈತಾನನ ಬಾಧೆಯಿಂದ ರಕ್ಷೆ ಇದೆ ಎಂದು ಹದೀಸ್‍ನಲ್ಲಿದೆ) ಮುಂತಾದ ದುಆಗಳನ್ನು ಮಾಡಬೇಕು ಎಂದರ್ಥ. ಅಲ್ಲಾಹನ ಭಯವಿರಲಿ ಎಂಬ ಎಚ್ಚರಿಕೆಯ ತಾತ್ಪರ್ಯವೇನೆಂದರೆ ಗುದಮೈಥುನ, ಹಿಂಸಾರತಿ, ಮುಂತಾದ ನಿಷಿದ್ಧ ಮಾರ್ಗಗಳನ್ನು ಅವಲಂಬಿಸಬೇಡಿ...

ನೆಲಗಡಲೆ ನೆನೆಸಿ ತಿಂದರೆ ಆರೋಗ್ಯಕ್ಕೇನು ಲಾಭ.?

ನೆಲಗಡಲೆ ನೆನೆಸಿ ತಿಂದರೆ ಆರೋಗ್ಯಕ್ಕೇನು ಲಾಭ.?   ಬದಾಮಿಯಲ್ಲಿರುವ ಬಹುತೇಕ ಎಲ್ಲಾ ಪೋಷಕಾಂಶಗಳು ನೆಲಗಡಲೆಯಲ್ಲಿರುತ್ತವೆ. ಅದಕ್ಕಾಗಿಯೇ ನೆಲಗಡಲೆ ಬಡವರ ಬದಾಮಿ. ಹಾಗಂತ ತಾತ್ಸಾರ ಮಾಡಬೇಡಿ.     ನೆಲಗಡಲೆಯಲ್ಲಿ ಕೊಬ್ಬಿನಂಶ, ಫೈಬರ್, ಪೊಟಾಶಿಯಂ, ರಂಜಕ, ವಿಟಮಿನ್ ಬಿ, ಮೆಗ್ನೇಶಿಯಂ ಇತ್ಯಾದಿ ಪೋಷಕಾಂಶಗಳು ಭರಪೂರವಾಗಿರುತ್ತದೆ. ಬದಾಮಿಯನ್ನೇನೋ (Almond) ನೀವು ನೆನೆ ಹಾಕಿ ತಿನ್ನುತ್ತೀರಿ. ಆದರೆ, ನೆಲಗಡಲೆಯಲ್ಲಿ ಬೇಯಿಸಿ, ಹುರಿದು ತಿನ್ನುವವರೇ ಅಧಿಕ. ನೆಲಗಡಲೆಯನ್ನು ನೀರಲ್ಲಿ ನೆನೆಹಾಕಿ ಕೂಡಾ ತಿನ್ನಬಹುದು. ಆದರಿಂದ ಹೆಲ್ತ್ ಲಾಭ (Health benefits) ಏನು.?   ಈ ಸಂಬಂಧ ಆಹಾರ ತಜ್ಞರು, ವಿಶೇಷ ತಜ್ಞರು ನೀಡಿರುವ ಮಾಹಿತಿಗಳನ್ನು ಕ್ರೋಢಿಕರಿಸಿ ಇಲ್ಲಿಟ್ಟಿದ್ದೇವೆ. ಓದಿ. 1. ಹೊಟ್ಟೆಯ ಸಮಸ್ಯೆಗಳಿಗೆ ರಾಮಬಾಣ ನೆನೆ ಹಾಕಿದ ನೆಲಗಡಲೆ (Peanut) ತಿಂದರೆ ಹೊಟ್ಟೆ ಉಬ್ಬರಿಕೆ, ಗ್ಯಾಸ್ಟ್ರಿಕ್ ದೂರವಾಗುತ್ತದೆ. ಜೀರ್ಣಕ್ರಿಯೆ (Digestion) ಕೂಡಾ ಸರಾಗವಾಗಿ ನಡೆಯುತ್ತದೆ.  2. ಹೃದಯದ ಮಿತ್ರ ನೆನೆ ಹಾಕಿದ ನೆಲಗಡಲೆ ತಿಂದರೆ ಅದು ದೇಹದಲ್ಲಿ ರಕ್ತ ಸಂಚಾರ (Blood circulation) ಸರಾಗವಾಗುವಂತೆ ನೋಡಿಕೊಳ್ಳುತ್ತದೆ. ಹೃದಯದ ಸಮಸ್ಯೆ ತಡೆಗಟ್ಟುವಲ್ಲಿ ಸಹಕರಿಸುತ್ತದೆ. 3. ಬೆನ್ನು ನೋವಿಗೆ ನೆನೆಹಾಕಿದ ನೆಲಗಡಲೆ ಮತ್ತು ಬೆಲ್ಲ (Jagerry) ಸೇರಿಸಿ ತಿಂದರೆ ಬೆನ್ನು ನೋವು ಕಡಿಮೆಯಾಗುತ್ತದೆ. ನೆಲಗ...

ಕೋಳಿ ಕೂಗುವುದನ್ನು ಮತ್ತು ಕತ್ತೆ ಅರಚುವುದನ್ನು ಕೇಳಿದರೆ

ಕೋಳಿ ಕೂಗುವುದನ್ನು ಮತ್ತು ಕತ್ತೆ ಅರಚುವುದನ್ನು ಕೇಳಿದರೆ إِذَا سَمِعْتُمْ صِيَاحَ الدِّيَكَةِ فَاسْأَلُوا اللَّهَ مِنْ فَضْلِهِ, فَإِنَّهَا رَأَتْ مَلَكاً وَإِذَا سَمِعْتُمْ نَهِيقَ الْحِمَارِ فَتَعَوَّذُوا بِاللَّهِ مِنَ الشَّيطَانِ, فَإِنَّهُ رَأَى شَيْطَاناً. ನೀವು ಕೋಳಿ ಕೂಗುವುದನ್ನು ಆಲಿಸಿದರೆ ಅಲ್ಲಾಹನೊಂದಿಗೆ ಅವನ ಔದಾರ್ಯದಿಂದ ಬೇಡಿಕೊಳ್ಳಿರಿ. ಯಾಕೆಂದರೆ ಅದು (ಕೋಳಿ) ಮಲಕ್‍ನ್ನು ಕಂಡಿದೆ. ನೀವು ಕತ್ತೆ ಅರಚುವುದನ್ನು ಆಲಿಸಿದರೆ ಶೈತಾನನಿಂದ ಅಲ್ಲಾಹನೊಂದಿಗೆ ರಕ್ಷೆ ಬೇಡಿರಿ. ಯಾಕೆಂದರೆ ಅದು ಶೈತಾನನನ್ನು ಕಂಡಿದೆ. (ಅಲ್‍ಬುಖಾರಿ. ನೋಡಿ: ಫತ್‍ಹುಲ್ ಬಾರಿ 6/350. ಮುಸ್ಲಿಮ್ 4/2096) 

ನಮ್ಮ ಹೃದಯಕ್ಕೆ ಉಪದೇಶ ಫಲಿಸುವುದಿಲ್ಲವೇ!

ನಮ್ಮ ಹೃದಯಕ್ಕೆ ಉಪದೇಶ ಫಲಿಸುವುದಿಲ್ಲವೇ! ಪ್ರವಾದಿﷺ ಹೇಳಿದರು, ನೀವು ದ್ಸಿಕ್ರ್ ಹೇಳದೆ ಅಧಿಕ ಮಾತನಾಡದಿರಿ. ದ್ಸಿಕ್ರ್ ಹೇಳದೆ ಅಧಿಕ ಮಾತನಾಡುವುದರಿಂದ ಹೃದಯ ತುಂಬಾ ಕಠಿಣವಾಗಲಿದೆ. ಜನರ ಪೈಕಿ ಅಲ್ಲಾಹನಿಗೆ ಅತ್ಯಂತ ಹೆಚ್ಚು ದೂರವಾದವರು ಕಠಿಣ ಹೃದಯದವರಾಗಿದ್ದಾರೆ." [ತಿರ್ಮುದ್ಸಿ] ಮಾತು ಹೆಚ್ಚಾದರೆ ಹೃದಯ ಕಠಿಣವಾಗಲಿದೆ. ಕಠಿಣ ಹೃದಯಕ್ಕೆ ಉಪದೇಶ ಫಲಿಸದು. ಆದ್ದರಿಂದ ಎಚ್ಚರಿಕೆಯಿಂದಿರೋಣ. ದ್ಸಿಕ್ರ್ ಸ್ವಲಾತ್ ಹೆಚ್ಚಿಸೋಣ. ✍🏻ಸಾಲಿಮ್ ಮುಈನಿ ಸಖಾಫಿ ರಬ್ಬಾನಿ‌ ಅ'ಸ್ಸಿಂಧಿ ಗದಗ

ಯಹೂದಿಯ ‎'ಸಲಾಂ' ‏ಗೆ ಉತ್ತರಿಸಿದ ಪ್ರವಾದಿ ‎ﷺ..

ಯಹೂದಿಯ 'ಸಲಾಂ' ಗೆ ಉತ್ತರಿಸಿದ ಪ್ರವಾದಿ ﷺ.. (عَنْ هِشَامِ بْنِ زَيْدِ بْنِ أَنَسِ بْنِ مَالِكٍ، قَالَ سَمِعْتُ أَنَسَ بْنَ مَالِكٍ رضي الله عنه يَقُولُ: مَرَّ يَهُودِيٌّ بِرَسُولِ اللَّهِ صلى الله عليه وسلم فَقَالَ "السَّامُ عَلَيْكَ‏".‏ فَقَالَ رَسُولُ اللَّهِ صلى الله عليه وسلم "وَعَلَيْكَ".‏ فَقَالَ رَسُولُ اللَّهِ صلى الله عليه وسلم ‏"‏ أَتَدْرُونَ مَا يَقُولُ قَالَ السَّامُ عَلَيْكَ"‌‏.‏ قَالُوا يَا رَسُولَ اللَّهِ أَلاَ نَقْتُلُهُ قَالَ: ‏"‏لاَ، إِذَا سَلَّمَ عَلَيْكُمْ أَهْلُ الْكِتَابِ فَقُولُوا وَعَلَيْكُمْ".رواه-بخاري/٦٩٢٦)    ಅನಸ್ ಬುನ್ ಮಾಲಿಕ್ (ರ.ಅ) ರಿಂದ ವರದಿ- ಯಹೂದಿಯಾದ ಒಬ್ಬ ಮನುಷ್ಯನು ಪ್ರವಾದಿ (ﷺ) ರ ಪಕ್ಕದಲ್ಲಿ ನಡೆದು ಹೋಗುವಾಗ, ಅವನು ಪ್ರವಾದಿ ﷺ ರಿಗೆ ಈ ರೀತಿ ಸಲಾಂ ಹೇಳಿದರು:    *السَّامُ عَلَيْك‏  "ತಮ್ಮ ಮೇಲೆ ನಾಶವಿರಲಿ". ತಕ್ಷಣ ಪ್ರವಾದಿ ﷺ ಉತ್ತರಿಸಿದರು: وَعَلَيْكَ "ನಿಮ್ಮ ಮೇಲಿರಲಿ". ಪ್ರವಾದಿ ﷺ ರು ಸ್ವಹಾಬಿಗಳೊಂದಿಗೆ ಕೇಳಿದರು: ಅವನು ಹೇಳಿದ ಮಾತು ನಿಮಗೆ ಅರ್ಥವಾಗಿದೆಯೇ.? ಸ್ವಹಾಬಿಗಳು ಹೇಳಿದರು: "ಓ ಅಲ್ಲಾಹನ ರಸೂಲರೇ ﷺ, ನಾವು ಅವನನ್ನು ಕೊಲ್ಲೋಣವೇ.?! ಪ್ರವಾದಿ ...

ಮಾದರೀ ಉತ್ತರ

ಮಾದರೀ ಉತ್ತರ ವ್ಯಕ್ತಿಯೊಬ್ಬರ ಪ್ರಶ್ನೆ ಇಮಾಂ ಗಝ್ಝಾಲೀ(ರ) ರವರೊಂದಿಗೆ; "ನಮಾಝ್ ಉಪೇಕ್ಷಿಸುವವನನ್ನು ಏನು ಮಾಡಬೇಕು?". ಇಮಾಮರು ಹೇಳಿದರು; "ಅವರನ್ನು ನಮ್ಮ ಜೊತೆ ಕರೆದುಕೊಂಡು ಮಸೀದಿಗೆ ಹೋಗಬೇಕು. ಅಷ್ಟೆ!". ಜುನೈದ್ ಸಖಾಫಿ ಜೀರ್ಮುಕ್ಕಿ ಮುದರ್ರಿಸ್,ದ್ಸಿಕ್ರಾ ಮೂಡಬಿದ್ರೆ ಜೂನ್ 10, 2021 ಗುರುವಾರ, ಶವ್ವಾಲ್ 29, 1442

ಯಾತ್ರೆಯಿಂದ ಮರಳುವಾಗ

ಯಾತ್ರೆಯಿಂದ ಮರಳುವಾಗ يُكَبِّرُ عَلَى كُلِّ شَرَفٍ ثَلاَثَ تَكْبِيرَاتٍ: (اللَّهُ أَكْبَرُ, اللَّهُ أَكْـبَرُ, اللَّهُ أَكْـبَرُ) ثُمَّ يَقُولُ: (لَا إِلَهَ إِلاَّ اللَّهُ وَحْدَهُ لَا شَرِيكَ لَهُ, لَهُ الْمُلْكُ, وَلَهُ الْحَمْدُ, وَهُوَ عَلَى كُلِّ شَيْءٍ قَدِيرٌ, آيِبُونَ, تاَئِبُونَ, عَابِدُونَ, لِرَبِّنَا حَامِدُونَ, صَدَقَ اللَّهُ وَعْدَهُ, وَنَصَرَ عَبْدَهُ, وَهَزَمَ الْأَحْزَابَ وَحْدَهُ) ಅರ್ಥ: ಎತ್ತರದ ಎಲ್ಲ ಸ್ಥಳಗಳಲ್ಲೂ (ಮೂರು ಮೂರು ಬಾರಿ ಅಲ್ಲಾಹು ಅಕ್ಬರ್ ಎಂದು ಹೇಳಬೇಕು). ತರುವಾಯ ಈ ಪ್ರಾರ್ಥನೆ ಹೇಳಬೇಕು: ಅಲ್ಲಾಹನ ಹೊರತು ಆರಾಧನೆಗೆ ನೈಜ ಹಕ್ಕುದಾರರಾಗಿ ಅನ್ಯರಿಲ್ಲ, ಅವನು ಏಕೈಕನು, ಅವನಿಗೆ ಸಹಭಾಗಿಗಳು ಯಾರೂ ಇಲ್ಲ, ಆಧಿಪತ್ಯವು ಅವನದ್ದು, ಸ್ತುತಿಯು ಅವನಿಗೆ ಮತ್ತು ಅವನು ಎಲ್ಲ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನು. ನಾವು ಮರಳುತ್ತಿದ್ದೇವೆ, ಪಶ್ಚಾತ್ತಾಪ ಪಡುತ್ತಿದ್ದೇವೆ, ಆರಾಧಿಸುತ್ತಿದ್ದೇವೆ ಮತ್ತು ನಮ್ಮ ರಬ್ಬ್ ಗೆ ನಾವು ಸ್ತುತಿ ಅರ್ಪಿಸುತ್ತಿದ್ದೇವೆ. ಅಲ್ಲಾಹು ತನ್ನ ವಾಗ್ದಾನವನ್ನು ಸತ್ಯಪಡಿಸಿದ್ದಾನೆ ಮತ್ತು ತನ್ನ ದಾಸನಿಗೆ ಸಹಾಯವಿತ್ತಿದ್ದಾನೆ. ಮತ್ತು ಅವನು (ಅವಿಶ್ವಾಸಿಗಳ) ಪಕ್ಷಗಳನ್ನು ಒಬ್ಬಂಟಿಯಾಗಿ ಸೋಲಿಸಿದ್ದಾನೆ. ಲಾ ಇಲಾಹ ಇಲ್ಲಲ್ಲಾಹು ವಹ್ದಹೂ ಲಾ ಶರೀಕ ಲಹೂ ಲಹುಲ್ ಮುಲ್ಕು ವಲಹುಲ್ ಹಮ್ದು ವಹುವ ...

ಯಾತ್ರೆ ಮಧ್ಯೆ ಮನೆಯೊಂದನ್ನು ಅಥವಾ ವಸತಿಗೃಹವನ್ನು ಪ್ರವೇಶಿಸುವಾಗ

ಯಾತ್ರೆ ಮಧ್ಯೆ ಮನೆಯೊಂದನ್ನು ಅಥವಾ ವಸತಿಗೃಹವನ್ನು ಪ್ರವೇಶಿಸುವಾಗ أَعُوذُ بِكَلِمَاتِ اللَّهِ التَّامَّاتِ مِنْ شَرِّ مَا خَلَقَ ಅರ್ಥ:ಅಲ್ಲಾಹನ ಪರಿಪೂರ್ಣವಾದ ವಚನಗಳೊಂದಿಗೆ ಅವನು ಸೃಷ್ಟಿಸಿದ ಕೆಡುಕಿನಿಂದ ನಾನು ರಕ್ಷೆ ಬೇಡುತ್ತಿದ್ದೇನೆ. ಅಊದು ಬಿಕಲಿಮಾತಿಲ್ಲಾಹಿ ತ್ತಾಮ್ಮಾತಿ ಮಿನ್ ಶರ್ರಿ ಮಾ ಖಲಕ್ (ಮುಸ್ಲಿಮ್ 4/2080.) 

ವ್ಯರ್ಥ!

ವ್ಯರ್ಥ! ಮಹಾತ್ಮರಾದ ಹಸನ್(ರ) ರವರು ಹೇಳುತ್ತಾರೆ; "ಒಬ್ಬನ ಮಾತಿನಲ್ಲಿ ಜ್ಞಾನವಿಲ್ಲದಿದ್ದರೆ ಆ ಮಾತು ವ್ಯರ್ಥ. ಒಬ್ಬನ ಮೌನದಲ್ಲಿ ಚಿಂತನೆ-ಆಲೋಚನೆಗಳಿಲ್ಲದಿದ್ದರೆ ಆ ಮೌನ ವ್ಯರ್ಥ. ಒಬ್ಬನ ನೋಟದಲ್ಲಿ ಪಾಠವಿಲ್ಲದಿದ್ದರೆ ಆ ನೋಟ ವ್ಯರ್ಥ!".(ಇಹ್ಯಾ) ಜುನೈದ್ ಸಖಾಫಿ ಜೀರ್ಮುಕ್ಕಿ ಮುದರ್ರಿಸ್,ದ್ಸಿಕ್ರಾ ಮೂಡಬಿದ್ರೆ ಜೂನ್ 09, 2021 ಬುಧವಾರ, ಶವ್ವಾಲ್ 28, 1442

ಮರಣ ಹೊಂದಿದ ತಾಯಿಯ ಹೆಸರಿನಲ್ಲಿ ದಾನ

ಮರಣ ಹೊಂದಿದ ತಾಯಿಯ ಹೆಸರಿನಲ್ಲಿ ದಾನ (عَنْ عَائِشَةَ رضى الله عنها أَنّ رَجُلاً، قَالَ لِلنَّبِيِّ صلى الله عليه وسلم: إِنَّ أُمِّي افْتُلِتَتْ نَفْسَهَا، وَأُرَاهَا لَوْ تَكَلَّمَتْ تَصَدَّقَتْ، أَفَأَتَصَدَّقُ عَنْهَا قَالَ ‏نَعَمْ، تَصَدَّقْ عَنْهَا".رواه-بخاري/٢٧٦٠)    ಆಯಿಷಾ ಬೀವಿ(ರ.ಅ) ರಿಂದ ವರದಿ- ಒಬ್ಬರು ಪ್ರವಾದಿ ﷺ ರೊಂದಿಗೆ ಬಂದು ಹೇಳಿದರು: ನನ್ನ ತಾಯಿಯು ಇದ್ದಕ್ಕಿದ್ದಂತೆ ತೀರಿಕೊಂಡರು. ಅವರಿಗೆ ಮಾತನಾಡಲು ಸಾಧ್ಯವಾಗಿದ್ದರೆ, ದಾನ ಮಾಡುತ್ತಿದ್ದರು ಎಂದು ನನಗೆ ಖಾತ್ರಿಯಿದೆ. ಹಾಗಾಗಿ ನಾನು ಅವರಿಗಾಗಿ ದಾನ ಮಾಡಿದರೆ, ಅವರಿಗೆ ಪ್ರತಿಫಲ ಸಿಗುತ್ತದೆಯೇ.? ಪ್ರವಾದಿ (ﷺ) ಹೇಳಿದರು: "ಹೌದು ಸಿಗುತ್ತದೆ. ಅವರಿಗಾಗಿ ದಾನ ಮಾಡಿರಿ." (ಹದೀಸ್- ಇಮಾಂ ಬುಖಾರಿ) ▪ಒಳಿತನ್ನು ಕಲಿಯಲು ಅಲ್ಲಾಹನು ನಮಗೆ ಅನುಗ್ರಹಿಸಲಿ. ಆಮೀನ್🤲▪ ಮುಹಮ್ಮದ್ ತಾಜುದ್ದೀನ್ ಸಖಾಫಿ (ಖತೀಬರು- ಪರಪ್ಪು, ಗೇರುಕಟ್ಟೆ) [09-06-2021,ಬುಧವಾರ] {28-ಶವ್ವಾಲ್-1442} ✳✳✳✳✳✳✳✳✳✳

ಪತಿ-ಪತ್ನಿ ಸಂಬಂಧ ವೃದ್ಧಿಗೆ ಈ ಮಾರ್ಗ ಅನುಸರಿಸೋಣ!

ಪತಿ-ಪತ್ನಿ ಸಂಬಂಧ ವೃದ್ಧಿಗೆ ಈ ಮಾರ್ಗ ಅನುಸರಿಸೋಣ! ಉಮರ್(ರ.ಅ) ರವರ‌ ಬಳಿ ಧೂಳು ಮಿಶ್ರಿತ ದೇಹ, ಜಡೆಕಟ್ಟಿದ ಕೂದಲಿನ ಕುರೂಪಿ ಮನುಷ್ಯ ಬಂದ. ಜೊತೆಯಲ್ಲಿ ಹೆಂಡತಿಯಿದ್ದಳು. ಆತನ ಪತ್ನಿ ಹೇಳಿದಳು, ಖಲೀಫರೇ ನನಗೆ ಈ‌ ವ್ಯಕ್ತಿಯ ಜೊತೆ ಸುಧಾರಿಸಿಕೊಂಡು ಜೀವಿಸಲು ಸಾಧ್ಯವಿಲ್ಲ. ಇದು ಕೇಳಿದಾಗ ಮಹಾನರಿಗೆ ಇವರಿಬ್ಬರಿಗೆ ಪರಸ್ಪರ ಇಷ್ಟವಿಲ್ಲವೆಂದು ತಿಳಿಯಿತು. ಮಹಾನರು ಆ ವ್ಯಕ್ತಿಯಲ್ಲಿ ಕೂದಲು, ಉಗುರು ಎಲ್ಲಾ ಕತ್ತರಿಸಿ ಬರಲು ಆಜ್ಞಾಪಿಸಿದರು. ಆತ ಆ ರೀತಿ ಮಾಡಿದ. ಉಮರ್(ರ.ಅ) ಆತನನ್ನು ಹೆಂಡತಿಯ ಬಳಿ ಕಳುಹಿಸಿದರು. ಅವಳಿಗೆ ಮೊದಲು ಗಂಡನೆಂದು ತಿಳಿಯದ ಕಾರಣ ಅವಳು ದೂರವಾಗಿ ನಿಂತಳು. ನಂತರ ಇದು ತನ್ನ ಪತಿಯೆಂದು ತಿಳಿದಾಗ ಪತಿಯ ಚುಂಬಿಸಿ ತಬ್ಬಿಕೊಂಡಳು. ಪತಿಯನ್ನು ವಿಚ್ಛೇದಿಸಬೇಕೆಂಬ ವಾದದಿಂದ ಅವಳು ಹಿಂದೆಸರಿದಳು. ಇದು ಕಂಡು ಉಮರ್(ರ‌.ಅ) ಹೇಳಿದರು, ಈ ರೀತಿ ನಿಮ್ಮ ಪತ್ನಿಯರಿಗೆ ನೀವು ಮಾಡಿರಿ. ಅಲ್ಲಾಹನಾಣೆ, ಅವಳು ನಿಮಗಾಗಿ ಅಂದವಾಗುವುದು ನೀವು ಇಷ್ಟಪಡುವಂತೆ ನೀವು(ಗಂಡ) ಅವಳಿಗಾಗಿ ಅಂದವಾಗುವುದು‌ ಅವಳು ಇಷ್ಟಪಡುವಳು." [ತುಹ್ಫತುಲ್ ಅರೂಸ್] ✍🏻ಸಾಲಿಮ್ ಮುಈನಿ ಸಖಾಫಿ ರಬ್ಬಾನಿ‌ ಅ'ಸ್ಸಿಂಧಿ ಗದಗ

ಕರಿಬೇವಿನ ಎಲೆಯಲ್ಲಿದೆ ನಿಮ್ಮ ಆರೋಗ್ಯದ ಗುಟ್ಟು : ಇಲ್ಲಿದೆ ಅದರ 5 ಪ್ರಯೋಜನಗಳು!

ಕರಿಬೇವಿನ ಎಲೆಯಲ್ಲಿದೆ ನಿಮ್ಮ ಆರೋಗ್ಯದ ಗುಟ್ಟು : ಇಲ್ಲಿದೆ ಅದರ 5 ಪ್ರಯೋಜನಗಳು! ಕರಿಬೇವಿನ ಎಲೆಯ ಸಹಾಯದಿಂದ ರಕ್ತದಲ್ಲಿರುವ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಬಹುದು. ಇದು ನಿಮ್ಮನು ಮಧುಮೇಹ, ನರಶೂಲೆ ಮತ್ತು ಮೂತ್ರಪಿಂಡದ ಸಮಸ್ಯೆಯಿಂದ ರಕ್ಷಿಸಬಹುದು    ಕರಿಬೇವಿನ ಎಲೆಗಳಲ್ಲಿ ಔಷಧೀಯ ಗುಣಗಳನ್ನು ಹೊಂದಿವೆ, ಇದರಿಂದಾಗಿ ಆಯುರ್ವೇದದಲ್ಲಿ ಇದು ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಇದು ಆರೊಮ್ಯಾಟಿಕ್ ಗುಣಲಕ್ಷಣಗಳನ್ನು ಹೊಂದಿದೆ ಮತ್ತು ಸಿಟ್ರಸ್ನೊನಿಂದಾಗಿದೆ ಇದು ವಿಶಿಷ್ಟ ಪರಿಮಳ ಹೊಂದಿರುತ್ತದೆ. ಕರಿಬೇವು ಮೂಲತಃ ಭಾರತಕ್ಕೆ ಸೇರಿದ್ದು, ರುಚಿ ಮತ್ತು ಪರಿಮಳವನ್ನು ಹೆಚ್ಚಿಸಲು ಭಾರತೀಯ ಆಹಾರ ಪದ್ಧತಿಯಲ್ಲಿ ಇದನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಇದರ 5 ಶಕ್ತಿಯುತ ಪ್ರಯೋಜನಗಳು ನಿಮಗಾಗಿ. 1. ಆರೋಗ್ಯಕರ ಹೃದಯಕ್ಕೆ ಕರಿಬೇವಿನ ಎಲೆ:  ಕರಿಬೇವಿನ ಎಲೆ ಸೇವಿಸುವುದರಿಂದ ಹೃದಯ(Heart)ಕ್ಕೆ ಅನೇಕ ಪ್ರಯೋಜನಗಳಿವೆ ಎಂದು ಸಂಶೋಧನೆ ಸಾಬೀತಾಗಿದೆ. ಸಂಶೋಧನೆಯ ಪ್ರಕಾರ, ಈ ಎಲೆಗಳಲ್ಲಿರುವ ಮಹಾನಿಂಬೈನ್ ಎಂಬ ದೊಡ್ಡ ಪ್ರಮಾಣದ ಆಲ್ಕಲಾಯ್ಡ್‌ಗಳು ದೇಹದಲ್ಲಿನ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. 2. ರಕ್ತದಲ್ಲಿನ ಸಕ್ಕರೆ ನಿಯಂತ್ರಣಕ್ಕೆ ಕರಿಬೇವಿನ ಎಲೆ:   ಕರಿಬೇವಿನ ಎಲೆಯ ಸಹಾಯದಿಂದ ರಕ್ತ(Blood)ದಲ್ಲಿರುವ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಬಹುದು...

ದುನ್ಯಾದ ಸೌಂದರ್ಯ

ದುನ್ಯಾದ ಸೌಂದರ್ಯ ಮಹಾತ್ಮರೊಬ್ಬರೊಂದಿಗೆ ಒಂದು ಪ್ರಶ್ನೆ;  "ದುನ್ಯಾದಲ್ಲಿ ಒಬ್ಬನ ಸೌಂದರ್ಯವನ್ನು ಹೆಚ್ಚಿಸುವಂತಹ ಸಂಗತಿ ಯಾವುದು?". ಅವರು, "ಆತನಿಗೆ ಔನ್ನಿತ್ಯವನ್ನು ನೀಡುವ ಜ್ಞಾನವಾಗಿದೆ" ಎಂದರು. "ಅದಿಲ್ಲದಿದ್ದರೆ ಬೇರೆ ಯಾವುದು?". "ಆತನಿಗೆ ಸುರಕ್ಷೆಯೊದಗಿಸುವ ಸಂಪತ್ತು!" ಎಂದರು. "ಅದೂ ಇಲ್ಲದಿದ್ದರೆ..?". "ಆತನ ನ್ಯೂನ್ಯತೆಗಳನ್ನು ಮುಚ್ಚಿಡುವ ಶಿಸ್ತು" ಎಂದರು.  "ಅದೂ ಕೂಡಾ ಇಲ್ಲದಿದ್ದರೆ....?". ಮಹಾತ್ಮರು ಹೇಳಿದರು; "ಅದ್ಯಾವುದೂ ಇಲ್ಲದಿದ್ದರೆ ಆಕಾಶದಿಂದ ಬಂದೆರಗುವ ಭೀಕರಾಗ್ನಿ ಆತನನ್ನು ಸುಟ್ಟು ಬೂದಿ ಮಾಡಲಿದೆ!". ಜುನೈದ್ ಸಖಾಫಿ ಜೀರ್ಮುಕ್ಕಿ ಮುದರ್ರಿಸ್,ದ್ಸಿಕ್ರಾ ಮೂಡಬಿದ್ರೆ ಜೂನ್ 08, 2021 ಮಂಗಳವಾರ, ಶವ್ವಾಲ್ 27, 1442

ಯಾತ್ರೆ ಮಧ್ಯೆ ಪ್ರಭಾತವಾದರೆ

ಯಾತ್ರೆ ಮಧ್ಯೆ ಪ್ರಭಾತವಾದರೆ سَمِعَ سَامِعٌُ بِحَمْدِ اللَّهِ, وَحُسْنِ بَلَائِهِ عَلَيْنَا. رَبَّنَا صَاحِبْنَا وَأَفْضِلْ عَلَيْنَا عَائِذاً بِاللَّهِ مِنَ النَّارِ ಅರ್ಥ: ನಾವು ಅಲ್ಲಾಹನನ್ನು ಸ್ತುತಿಸಿರುವುದಕ್ಕೆ ಮತ್ತು ಅಲ್ಲಾಹು ನಮ್ಮನ್ನು ಅನುಗ್ರಹಿಸಿರುವುದಕ್ಕೆ ಒಬ್ಬ ಸಾಕ್ಷಿ ಸಾಕ್ಷಿಯಾಗಲಿ. ಓ ಅಲ್ಲಾಹ್ ನಮ್ಮನ್ನು ರಕ್ಷಿಸು ಮತ್ತು ನಮ್ಮನ್ನು ನಿನ್ನ ಅನುಗ್ರಹಗಳಿಂದ ಅನುಗ್ರಹಿಸು ಮತ್ತು ಎಲ್ಲ ಅನಿಷ್ಟಗಳನ್ನು ನಮ್ಮಿಂದ ದೂರ ಮಾಡು. ನರಕ ಶಿಕ್ಷೆಯಿಂದ ನಾನು ಅಲ್ಲಾಹನೊಂದಿಗೆ ರಕ್ಷೆ ಬೇಡುತ್ತಿದ್ದೇನೆ. ಸಮ್ಮಅ ಸಾಮಿಉನ್ ಬಿಹಮ್ದಿಲ್ಲಾಹಿ, ವಹುಸ್ನಿ ಬಲಾಇಹೀ ಅಲೈನಾ, ರಬ್ಬನಾ ಸಾಹಿಬ್‍ನಾ, ವಅಫ್ದಿಲ್ ಅಲೈನಾ, ಆಇದನ್ ಬಿಲ್ಲಾಹಿ ಮಿನನ್ನಾರ್ (ಮುಸ್ಲಿಮ್ 4/2086.) 

ಅಧ್ಯಾಯ: 2 ಅಲ್-ಬಕ್ವರಃ ಸೂಕ್ತ: 218

(ಅಧ್ಯಾಯ: 2 ಅಲ್-ಬಕ್ವರಃ ಸೂಕ್ತ: 218) إِنَّ ٱلَّذِينَ ءَامَنُوا۟ وَٱلَّذِينَ هَاجَرُوا۟ وَجَٰهَدُوا۟ فِى سَبِيلِ ٱللَّهِ أُو۟لَٰٓئِكَ يَرْجُونَ رَحْمَتَ ٱللَّهِ ۚ وَٱللَّهُ غَفُورٌۭ رَّحِيمٌۭ ಅರ್ಥ:ಸತ್ಯವಿಶ್ವಾಸವಿಟ್ಟವರು, ಧರ್ಮದ ಅನಿವಾ ರ್ಯತೆಗಾಗಿ ದೇಶತ್ಯಾಗ ಮಾಡಿದವರು ಹಾಗೂ ಅಲ್ಲಾಹನ ಮಾರ್ಗದಲ್ಲಿ ಧರ್ಮಯುದ್ಧ ಮಾಡಿದವರೇ ಅಲ್ಲಾಹನ ಕೃಪಾಕಾಂಕ್ಷಿಗಳು ¹¹⁷. ಅಲ್ಲಾಹನು ತುಂಬ ಕ್ಷಮಾಶೀಲನು. ಪರಮ ದಯಾನಿಧಿ. ವಿವರಣೆ:  117.ಅಲ್ಲಾಹನ ಕಾರುಣ್ಯವನ್ನು ಆಕಾಂಕ್ಷಿಸುವ ಕೆಲವು ಪ್ರಧಾನ ಲಕ್ಷಣಗಳನ್ನು ಇಲ್ಲಿ ಹೇಳಲಾಗಿದೆ. ಎಂತಹ ಸನ್ನಿವೇಶದಲ್ಲೂ ಅಲ್ಲಾಹನನ್ನು ಅವಲಂಬವಾಗಿಟ್ಟು ಪರಿಪೂರ್ಣ ವಿಶ್ವಾಸವಿರಿಸಿ ಸತ್ಯಮಾರ್ಗದಲ್ಲಿ ಮುಂದೆ ಸಾಗುವುದು. ಅವನ ಆದೇಶಗಳನ್ನು ಪಾಲಿಸಿ ಬದುಕಲು ಸ್ವತಂತ್ರವಾಗಿ ಹಾಗೂ ನಿರ್ಭಯನಾಗಿ ಕಳೆಯಲು ಮನೆಮಾರುಗಳನ್ನು ಸ್ವತ್ತು ವಿತ್ತಗಳನ್ನು ತೊರೆದು ಹೋಗಬೇಕಾಗಿ ಬಂದರೂ ಅವೆಲ್ಲವನ್ನು ಅನುಭವಿಸುವುದು. ಸತ್ಯಮಾರ್ಗದ ಸಂರಕ್ಷಣೆÉ ಸಾಧ್ಯವಿಲ್ಲದ ಮಟ್ಟಿಗೆ ಪೀಡನೆ ಅಸಹನೀಯವಾದರೆ ವೈರಿಗಳನ್ನು ಹತ್ತಿಕ್ಕುವ ಪ್ರಸಂಗ ಬಂದರೆ ಅವರೊಡನೆ ಸಮರ ಸಾರುವುದಕ್ಕೂ ಸಿದ್ಧರಾಗುವುದು ಸದ್‍ವೃತ್ತರ ಲಕ್ಷಣಗಳೆನಿಸಿವೆ.

ಸ್ವಾಲಿಹ್ ನಬಿ ಅಲೈಸ್ಸಲಾಂ

ಸ್ವಾಲಿಹ್ ನಬಿ ಅಲೈಸ್ಸಲಾಂ ಸಮೂದ್ ಗೋತ್ರಕ್ಕೆ ಎರಗಿದ ಶಿಕ್ಷೆ    ಆದ್ ಗೋತ್ರದ ಬಳಿಕ ಭೂಮಿಯಲ್ಲಿ ನಿಯೋಗಿಸಲ್ಪಟ್ಟ ಸಮೂಹವೇ ಸಮೂದ್ ಗೋತ್ರ. ಇವರು ಕೂಡಾ ಆದ್‌ನಂತೆ ಶಕ್ತಿಶಾಲಿಯಾಗಿದ್ದರು. ಉತ್ತಮವಾದ ಕೃಷಿ ಸ್ಥಳಗಳೂ, ಹೂದೋಟಗಳೂ, ಬಯಲು ಸೀಮೆಗಳಿಂದಲೂ ಕಂಗೊಳಿಸುವ ಭೂಮಿಯಾಗಿತ್ತು ಅವರದ್ದು. ಹಲವು ನದಿಗಳು ಅವರೆಡೆಯಲ್ಲಿ ಹರಿಯುತ್ತಿತ್ತು. ಅವರು ಕುಶಾಗ್ರ ಬುದ್ದಿಶಾಲಿಗಳಾಗಿದ್ದರು.    ಪರ್ವತಗಳನ್ನು, ಬಂಡೆಕಲ್ಲುಗಳನ್ನು ಕೈಗಳಿಂದಲೇ ಕೊರೆದು ಭವ್ಯವಾದ ಮನೆಗಳನ್ನು ನಿರ್ಮಿಸುತ್ತಿದ್ದರು. ಅವರ ಪಟ್ಟಣಗಳತ್ತ ಯಾರಾದರೂ ವಿದೇಶಿಯರು ಪ್ರವೇಶಿಸಿದರೆ ಅವರು ಅಚ್ಛರಿ ಪಡುತ್ತಿದ್ದರು. ಪರ್ವತಗಳಂತೆ ಭವ್ಯವಾದ ಬಂಡ ಸಾಲೆಗಳು, ಸುಂದರವಾದ ಹೂದೋತಗಳು ಇನ್ನೂ ಅನೇಕಾನೇಕ ಅದ್ಭುತ ದೃಶ್ಯಗಳನ್ನು ಅಲ್ಲಿ ದರ್ಶಿಸಲು ಸಾಧ್ಯವಾಗುತ್ತಿತ್ತು. ಅಲ್ಲಾಹನು ಧಾರಾಳವಾದ  ಸಮೃಧಿಯನ್ನು ಸಮೂದ್ ಗೋತ್ರಕ್ಕೆ ನೀಡಿದನು.    ತಮ್ಮ ಸಕಲೈಶ್ಚರ್ಯಗಳಿಂದ ಕೂಡಿದ ಬದುಕಿನೆಡೆಯಲ್ಲಿ ಅವರು ಸೃಷ್ಟಿಕರ್ತನನ್ನು ಮರೆತರು. ಅವನ ಅನುಗ್ರಹಗಳಿಗೆ ಕೃತಘ್ನತೆಯರ್ಪಿಸುವ ಗೋಜಿಗೆ ಅವರು ಹೋಗಲಿಲ್ಲ. ಅವರು ಹೇಳಿದರು. ನಮಗಿಂತಹ ದೊಡ್ದ ಶಕ್ತಿಶಾಲಿಗಳು ಈ ಭೂಲೋಕದಲ್ಲಿ ಯಾರಿದ್ದಾರೆ. ಅವರು ಮರಣ ಹೊಂದಲಾರೆವು. ಅರಮನೆಗಳಿಂದ ಹೊರಟು ಹೋಗ ಬೇಕೆಂದೆ ಇಲ್ಲ ಎಂಬ ಭಾವನೆಯಾಗಿತ್ತು ಅವರದು. ಈ ಬಂಡೆಕಲ್ಲಿನಲ್ಲಿನೊಳಗೆ ಮರಣವು ಪ್ರವೇಶಿಲಾರದು ಎಂದು ಅವರ...

ಅತ್ಯುತ್ತಮವಿದು!

ಅತ್ಯುತ್ತಮವಿದು! ನಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದರು; "ಅತ್ಯುತ್ತಮ ದ್ಸಿಕ್ರ್ ಗೌಪ್ಯವಾಗಿ ಹೇಳುವ ದ್ಸಿಕ್ರ್ ಆಗಿದೆ. ಉತ್ತಮವಾದ ಆಹಾರ ಅಗತ್ಯವಿರುವಷ್ಟು ಮಾತ್ರ ಮಿತವಾಗಿ ಸೇವಿಸುವುದಾಗಿದೆ". ಜುನೈದ್ ಸಖಾಫಿ ಜೀರ್ಮುಕ್ಕಿ ಮುದರ್ರಿಸ್,ದ್ಸಿಕ್ರಾ ಮೂಡಬಿದ್ರೆ ಜೂನ್ 07, 2021 ಸೋಮವಾರ, ಶವ್ವಾಲ್ 26, 1442

ಯಾತ್ರೆಗಾಗಿ ಬೀಳ್ಕೊಡುವಾಗ:01

ಯಾತ್ರೆಗಾಗಿ ಬೀಳ್ಕೊಡುವಾಗ:01 أَسْتَوْدِعُ اللَّهَ دِينَكَ, وَأَمَانَتَكَ, وَخَوَاتِيمَ عَمَلِكَ ಅರ್ಥ: ನಾನು ನಿನ್ನ ಧರ್ಮವನ್ನು, ಪ್ರಾಮಾಣಿಕತೆಯನ್ನು ಮತ್ತು ನಿನ್ನ ಕರ್ಮದ ಅಂತ್ಯಗಳನ್ನು ಅಲ್ಲಾಹನ ಸಂರಕ್ಷಣೆಯಲ್ಲಿಡುತ್ತೇನೆ. ಅಸ್ತೌದಿಉಲ್ಲಾಹ ದೀನಕ ವಅಮಾನತಕ ವಖವಾತೀಮ ಅಮಲಿಕ್ (ಅಹ್ಮದ್ 2/7. ಅತ್ತಿರ್ಮಿದಿ 5/499. ನೋಡಿ: ಸಹೀಹು ತ್ತಿರ್ಮಿದಿ (2/155). ಯಾತ್ರೆಗಾಗಿ ಬೀಳ್ಕೊಡುವಾಗ:02 زَوَّدَكَ اللَّهُ التَّقْوَى, وَغَفَرَذَنْبَكَ, وَيَسَّرَ لَكَ الْخَيْرَ حَيْثُمَا كُنْتَ ಅರ್ಥ: ಅಲ್ಲಾಹು ನಿನಗೆ ತಕ್ವಾವನ್ನು ಅಧಿಕಗೊಳಿಸಲಿ, ನಿನ್ನ ಪಾಪಗಳನ್ನು ಕ್ಷಮಿಸಲಿ ಮತ್ತು ನೀನೆಲ್ಲೇ ಇದ್ದರೂ ನಿನಗೆ ಒಳಿತನ್ನು ಸುಲಭೀಕರಿಸಲಿ. ಝವ್ವದಕಲ್ಲಾಹು ತ್ತಕ್ವಾ ವಗಫರ ದಮ್ಬಕ ವಯಸ್ಸರಲ್ ಖೈರ ಹೈಸು ಮಾ ಕುನ್ತ (ಅತ್ತಿರ್ಮಿದಿ. ನೋಡಿ: ಸಹೀಹು ತ್ತಿರ್ಮಿದಿ (3/155).

ಅಧ್ಯಾಯ: 2 ಅಲ್-ಬಕ್ವರಃ ಸೂಕ್ತ: 217

(ಅಧ್ಯಾಯ: 2 ಅಲ್-ಬಕ್ವರಃ ಸೂಕ್ತ: 217) يَسْـَٔلُونَكَ عَنِ ٱلشَّهْرِ ٱلْحَرَامِ قِتَالٍۢ فِيهِ ۖ قُلْ قِتَالٌۭ فِيهِ كَبِيرٌۭ ۖ وَصَدٌّ عَن سَبِيلِ ٱللَّهِ وَكُفْرٌۢ بِهِۦ وَٱلْمَسْجِدِ ٱلْحَرَامِ وَإِخْرَاجُ أَهْلِهِۦ مِنْهُ أَكْبَرُ عِندَ ٱللَّهِ ۚ وَٱلْفِتْنَةُ أَكْبَرُ مِنَ ٱلْقَتْلِ ۗ وَلَا يَزَالُونَ يُقَٰتِلُونَكُمْ حَتَّىٰ يَرُدُّوكُمْ عَن دِينِكُمْ إِنِ ٱسْتَطَٰعُوا۟ ۚ وَمَن يَرْتَدِدْ مِنكُمْ عَن دِينِهِۦ فَيَمُتْ وَهُوَ كَافِرٌۭ فَأُو۟لَٰٓئِكَ حَبِطَتْ أَعْمَٰلُهُمْ فِى ٱلدُّنْيَا وَٱلْءَاخِرَةِ ۖ وَأُو۟لَٰٓئِكَ أَصْحَٰبُ ٱلنَّارِ ۖ هُمْ فِيهَا خَٰلِدُونَ ಅರ್ಥ: ಪವಿತ್ರ ಮಾಸದಲ್ಲಿ ಸಮರಕ್ಕಿಳಿಯುವ ಕುರಿತು ಅವರು ನಿಮ್ಮಲ್ಲಿ ಪ್ರಶ್ನಿಸುತ್ತಿದ್ದಾರೆ. ಹೇಳಿರಿ; ಆ ಮಾಸದಲ್ಲಿ ಸಮರವು ಮಹಾಪರಾಧ ನಿಜ. ಆದರೆ ಅಲ್ಲಾಹನ ಮಾರ್ಗಕ್ಕೆ ಅಡ್ಡಿಪಡಿಸುವುದು, ಅವನಿಗೆ ದ್ರೋಹ ವೆಸಗುವುದು, ಮಸ್ಜಿದುಲ್ ಹರಾಮ್‍ನಿಂದ ತಡೆಯುವುದು, ಅಲ್ಲಿನ ನಿವಾಸಿಗಳನ್ನು ಹೊರಹಾಕುವುದು ಅಲ್ಲಾಹನ ದೃಷ್ಟಿಯಲ್ಲಿ ಅದಕ್ಕಿಂತಲೂ ಘೋರ ಅಪರಾಧವಾಗಿದೆ ¹¹⁶. ಅರಾಜಕತೆಯು ಕೊಲೆಗಿಂತ ಗಂಭೀರ. ಅವರಿಗೆ ಸಾಧ್ಯವಾದರೆ ನಿಮ್ಮನ್ನು ನಿಮ್ಮ ಧರ್ಮದಿಂದ ವಿಮುಖಗೊಳಿಸುವವರೆಗೂ ನಿಮ್ಮೆದುರು ಯುದ್ಧ ಮಾಡುತ್ತಲೇ ಇರುವರು. ನಿಮ್ಮಿಂದ ಯಾವನು ...

ತೂಕ ಇಳಿಕೆಯನ್ನು ಉತ್ತೇಜಿಸಲು ನಿಮ್ಮ ಆಹಾರದಲ್ಲಿ ಸಬ್ಜಾ ಬೀಜಗಳನ್ನು ಸೇರಿಸಿ

ತೂಕ ಇಳಿಕೆಯನ್ನು ಉತ್ತೇಜಿಸಲು ನಿಮ್ಮ ಆಹಾರದಲ್ಲಿ ಸಬ್ಜಾ ಬೀಜಗಳನ್ನು ಸೇರಿಸಿ   ನೀವೇನಾದರೂ ತೂಕ ಇಳಿಸುವ ಪ್ರಯತ್ನದಲ್ಲಿ ಇದ್ದರೆ ಸಬ್ಜಾ ಬೀಜಗಳನ್ನು ನಿಮ್ಮ ತೂಕ ಇಳಿಕೆಯ ಪ್ರಕ್ರಿಯೆಯಲ್ಲಿ ಸೇರಿಸಿಕೊಳ್ಳಿ. ಗಾತ್ರದಲ್ಲಿ ಚಿಕ್ಕದಾಗಿರುವ ಸಬ್ಜಾ ಬೀಜಗಳು ವಿವಿಧ ಆರೋಗ್ಯ ಮತ್ತು ಗುಣಪಡಿಸುವ ಗುಣಗಳನ್ನು ಹೊಂದಿವೆ.     ಇತ್ತೀಚಿನ ದಿನಗಳಲ್ಲಿ ತೂಕನಷ್ಟ ಎನ್ನುವುದು ತನ್ನದೇ ಆದ ಹೊಸ ಆಯಾಮವನ್ನು ಪಡೆದುಕೊಂಡಿವೆ. ತೂಕ ನಷ್ಟಕ್ಕಾಗಿ ಹಲವಾರು ಜನರುಗಳು ಹಲವಾರು ರೀತಿಯಲ್ಲಿ ಪ್ರಯತ್ನ ಪಡುತ್ತಾರೆ. ತೂಕ ಕಳೆದುಕೊಳ್ಳಲು ತಮ್ಮ ಕೈಲಾದ ಪ್ರಯತ್ನಗಳನ್ನು ಸಹ ಮಾಡಿರುತ್ತಾರೆ. ಆದರೆ ಕೆಲವೊಮ್ಮೆ ನಾನಾ ಕಾರಣಗಳಿಂದಾಗಿ ಅವರ ತೂಕದಲ್ಲಿ ಯಾವುದೇ ಮಾರ್ಪಾಡು ಆಗಿರುವುದಿಲ್ಲ. ಇದಕ್ಕೆ ಹಲವಾರು ಕಾರಣಗಳಿರಬಹುದು. ಆಮ್ಲೀಯತೆ, ಎದೆಯುರಿ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಮತ್ತು ದೇಹದ ಶಾಖವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಸಬ್ಜಾ ಬೀಜಗಳು ಅಗತ್ಯವಾದ ಕೊಬ್ಬುಗಳು, ಕಾರ್ಬೋಹೈಡ್ರೇಟ್ಗಳು, ಪ್ರೋಟೀನ್‌ಗಳಲ್ಲಿ ಸಮೃದ್ಧವಾಗಿವೆ ಮತ್ತು ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ. ಕ್ಯಾಲೋರಿಗಳನ್ನು ಕಡಿಮೆ ಹೊಂದಿರುವುದರಿಂದ ತೂಕ ಇಳಿಸಿಕೊಳ್ಳಲು ಈ ಬೀಜಗಳು ಸಹಾಯ ಮಾಡುತ್ತದೆ. ​ತೂಕ ಇಳಿಸಿಕೊಳ್ಳಲು ಸಬ್ಜಾ ಬೀಜಗಳು ಹೇಗೆ ಸಹಾಯ ಮಾಡುತ್ತವೆ? ಅಗತ್ಯ ಕೊಬ್ಬಿನಾಮ್ಲ ಸಬ್ಜಾ ಬೀಜಗಳಲ್ಲಿ ಒಮೆಗಾ-3 ಮತ್ತು ಒಮೆಗಾ-6 ಕೊಬ್ಬಿನಾಮ್ಲಗ...

ಮರಣಹೊಂದಿದವರ ಕುರಿತು ಒಳ್ಳೆಯದು ಮಾತ್ರ ಹೇಳಿರಿ!

ಮರಣಹೊಂದಿದವರ ಕುರಿತು ಒಳ್ಳೆಯದು ಮಾತ್ರ ಹೇಳಿರಿ! ಅನಸ್(ರ.ಅ) ರಿಂದ ನಿವೇದನೆ: ಒಂದು ಮಯ್ಯಿತ್ ನೊಂದಿಗೆ ಜನರು ಹಾದುಹೋಗುತ್ತಿದ್ದಾಗ ಕೆಲವರು ಆ ಮರಣ ಹೊಂದಿದ ವ್ಯಕ್ತಿಯನ್ನು ಹೊಗಳಿದರು. ಆಗ ಪ್ರವಾದಿﷺ ಹೇಳಿದರು, "ಆತನಿಗೆ ಅದು ನಿಶ್ಚಿತವಾಗಲಿ." ಮತ್ತೊಮ್ಮೆ ಒಂದು ಮಯ್ಯಿತ್ ನೊಂದಿಗೆ ಜನರು ನಡೆದು ಹೋಗುವಾಗ ಅದರ ಕುರಿತು ಕೆಲವರು ದೂಷಿಸಿದರು. ಆಗಲೂ ಪ್ರವಾದಿﷺ ಹೇಳಿದರು, "ಆತನಿಗೆ ಅದು ನಿಶ್ಚಿತ." ಇದು ಕೇಳಿದಾಗ ಉಮರ್(ರ.ಅ) ಕೇಳಿದರು, "ಏನು ನಿಶ್ಚಿತ ನೆಬಿಯವರೇﷺ? ಆಗ ಪ್ರವಾದಿﷺ ಹೇಳಿದರು, "ನೀವು ಹೊಗಳಿದವನಿಗೆ ಸ್ವರ್ಗ ನಿಶ್ಚಿತ. ಅದೇ ರೀತಿ ‌ನೀವು ದೂಷಿಸಿದವನಿಗೆ ನರಕ ನಿಶ್ಚಿತವಾಗಿದೆ. ನೀವು ಭೂಮಿಯಲ್ಲಿ ಅಲ್ಲಾಹನ ಸಾಕ್ಷಿಗಳು ಆಗಿರುವಿರಿ." [ಬುಖಾರಿ: 1367] ✍🏻ಸಾಲಿಮ್ ಮುಈನಿ ಸಖಾಫಿ ರಬ್ಬಾನಿ‌ ಅ'ಸ್ಸಿಂಧಿ ಗದಗ

ಈ ಝಿಕ್ರ್ ನಿರಂತರ ಹೇಳುತ್ತಾ ಇರಬೇಕು

ಈ ಝಿಕ್ರ್ ನಿರಂತರ ಹೇಳುತ್ತಾ ಇರಬೇಕು (عَنْ سَالِمِ بْنِ عَبْدِ اللَّهِ بْنِ عُمَرَ، عَنْ أَبِيهِ، عَنْ جَدِّهِ، أَنَّ رَسُولَ اللَّهِ صلى الله عليه وسلم قَالَ: مَنْ قَالَ فِي السُّوقِ "لاَ إِلَهَ إِلاَّ اللَّهُ وَحْدَهُ لاَ شَرِيكَ لَهُ لَهُ الْمُلْكُ وَلَهُ الْحَمْدُ يُحْيِي وَيُمِيتُ وَهُوَ حَىٌّ لاَ يَمُوتُ بِيَدِهِ الْخَيْرُ وَهُوَ عَلَى كُلِّ شَيْءٍ قَدِيرٌ" كَتَبَ اللَّهُ لَهُ أَلْفَ أَلْفِ حَسَنَةٍ وَمَحَا عَنْهُ أَلْفَ أَلْفِ سَيِّئَةٍ وَبَنَى لَهُ بَيْتًا فِي الْجَنَّةِ".رواه-ترمذي/٣٤٢٩)    ಸಾಲಿಮ್ ಇಬ್ನ್ ಅಬ್ದುಲ್ಲಾ ಇಬ್ನು ಉಮರ್(ರ.ಅ) ರಿಂದ ವರದಿ- ಪ್ರವಾದಿ ﷺ ಹೇಳಿದರು: ಯಾರಾದರೂ ಮಾರುಕಟ್ಟೆಯಲ್ಲಿ ಈ ಝಿಕ್ರನ್ನು ಹೇಳಿದರೆ ಅವನಿಗೆ ಸಾವಿರ ಸಾವಿರ ಸತ್ಕರ್ಮಗಳು ದಾಖಲಿಸಲ್ಪಡುತ್ತವೆ, ಅವನ ಸಾವಿರಾರು ದುಷ್ಕೃತ್ಯಗಳು ಅಳಿಸಲ್ಪಡುತ್ತವೆ ಮತ್ತು ಸ್ವರ್ಗದಲ್ಲಿ ಅವನಿಗೆ ಒಂದು ಮನೆಯನ್ನು ನಿರ್ಮಿಸಲಾಗುವುದು.  لاَ إِلَهَ إِلاَّ اللَّهُ وَحْدَهُ لاَ شَرِيكَ لَهُ لَهُ الْمُلْكُ وَلَهُ الْحَمْدُ يُحْيِي وَيُمِيتُ وَهُوَ حَىٌّ لاَ يَمُوتُ بِيَدِهِ الْخَيْرُ وَهُوَ عَلَى كُلِّ شَيْءٍ قَدِيرٌ    {ಅಲ್ಲಾಹನು ಒಬ್ಬನೇ ಅವನಲ್ಲದೇ ಬೇರೆ ಇಲಾಹ...

ಗೆಳೆತನದ ಪರೀಕ್ಷೆ

ಗೆಳೆತನದ ಪರೀಕ್ಷೆ ನಾಲ್ಕು ವಿಧದ ಪರೀಕ್ಷೆಗಳ ಬಳಿಕವಾಗಿರಬೇಕು ಸ್ನೇಹಿತರನ್ನು ಆರಿಸಬೇಕಾದದ್ದು. ಗೆಳೆಯನಾಗಿ ಆರಿಸಲ್ಪಡುವವನಲ್ಲಿರುವ ನೈತಿಕತೆ, ಧಾರ್ಮಿಕತೆ, ಗುಣನಡತೆ ಹಾಗೂ ನಿಮ್ಮ ಗೆಳೆತನದಲ್ಲಿ ಆತನಿಗೆ ಒಲವಿದೆಯೇ ಎಂಬ ತಿಳುವಳಿಕೆ".(ಅದಬುದ್ದುನ್ಯಾ ವದ್ದೀನ್) ಜುನೈದ್ ಸಖಾಫಿ ಜೀರ್ಮುಕ್ಕಿ ಮುದರ್ರಿಸ್,ದ್ಸಿಕ್ರಾ ಮೂಡಬಿದ್ರೆ ಜೂನ್ 06, 2021 ಆದಿತ್ಯವಾರ, ಶವ್ವಾಲ್ 25, 1442

ಸಾಮರಸ್ಯ:

ಸಾಮರಸ್ಯ: ಉಮ್ಮು ಕುಲ್ಸೂಮ್ ರಳಿಯಲ್ಲಾಹು ಅನ್‌ಹಾ ಅವರಿಂದ ಉಲ್ಲೇಖ: ಪ್ರವಾದಿ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಹೀಗೆ ಹೇಳಿರುವುದನ್ನು ನಾನು ಆಲಿಸಿದ್ದೇನೆ: ಜನರ ನಡುವಿನ ಮನಸ್ತಾಪವನ್ನು ಬಗೆಹರಿಸಿ ಸತ್ಕರ್ಮವನ್ನು ವರ್ಧಿಸುವಂತೆ ಒಳಿತನ್ನು ಉಪದೇಶಿಸುವವನು ಸುಳ್ಳುಗಾರನಲ್ಲ. (ಬುಖಾರಿ, ಮುಸ್ಲಿಮ್) ಮುಸ್ಲಿಮ್ ವರದಿ: ಉಮ್ಮು ಕುಲ್ಸೂಮ್ ರಳಿಯಲ್ಲಾಹು ಅನ್‌ಹಾ ಹೇಳುತ್ತಾರೆ: ಜನರಾಡುವ ಮಾತುಗಳಲ್ಲಿ: ಮೂರು ಕಾರ್ಯಗಳನ್ನು ಹೊರತುಪಡಿಸಲಾಗಿದೆ. 1).ಯುದ್ದ ಕಾರ್ಯಗಳಲ್ಲಿ. 2).ಜನರ ನಡುವಿನ ಮನಸ್ತಾಪ ಮುಗಿಸಲು. 3).ಪತಿ ಪತ್ನಿಯರ ನಡುವಿನ ವಿರಸ ನಿವಾರಿಸಲು. ಇಂತಹ ಸಂದರ್ಭಗಳಲ್ಲಿ ಬಳಸುವ ತಂತ್ರಗಳು ಸುಳ್ಳಾಗಿ ಪರಿಗಣಿಸಲ್ಪಡುವುದಿಲ್ಲ. 

ಅಧ್ಯಾಯ: 2 ಅಲ್-ಬಕ್ವರಃ ಸೂಕ್ತ: 216

(ಅಧ್ಯಾಯ: 2 ಅಲ್-ಬಕ್ವರಃ ಸೂಕ್ತ: 216) كُتِبَ عَلَيْكُمُ ٱلْقِتَالُ وَهُوَ كُرْهٌۭ لَّكُمْ ۖ وَعَسَىٰٓ أَن تَكْرَهُوا۟ شَيْـًۭٔا وَهُوَ خَيْرٌۭ لَّكُمْ ۖ وَعَسَىٰٓ أَن تُحِبُّوا۟ شَيْـًۭٔا وَهُوَ شَرٌّۭ لَّكُمْ ۗ وَٱللَّهُ يَعْلَمُ وَأَنتُمْ لَا تَعْلَمُونَ ಅರ್ಥ: ಧರ್ಮಯುದ್ಧವು ನಿಮಗೆ ಅನಿಷ್ಟಕರವಾಗಿದ್ದರೂ ನಿಮಗದನ್ನು ಶಾಸನಗೊಳಿಸಲಾಗಿದೆ. ಏನಾದರೊಂದು ನಿಮಗೆ ಅಪ್ರಿಯವಾಗಿರಬಹುದು. ನಿಜದಲ್ಲಿ ಅದು ನಿಮಗೆ ಗುಣಕರವಾಗಿರಬಹುದು. ಯಾವುದಾದರೊಂದು ನಿಮಗೆ ಪ್ರಿಯವಾಗಿರಬಹುದು. ನಿಜದಲ್ಲಿ ಅದು ನಿಮಗೆ ಕೇಡಾಗಿರ ಬಹುದು. ಅಲ್ಲಾಹನು ಬಲ್ಲವನು. ನೀವಲ್ಲ ಬಲ್ಲವರು ¹¹⁵. ವಿವರಣೆ: 115. ಪ್ರವಾದಿವರ್ಯ(ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ)ರೊಂದಿಗೆ ವಿಶ್ವಾಸವಿರಿಸಿದ ಅನುಚರರನ್ನು ಅತ್ಯಂತ ಕಠಿಣವಾಗಿ ಪೀಡನೆಗೊಳಪಡಿಸಿದಾಗ ಅವರು ಗತ್ಯಂತರವಿಲ್ಲದೆ ಮನೆಮಾರು ತೊರೆದು ಮದೀನಾದಲ್ಲಿ ಅಭಯ ಪಡೆದರು. ಅಲ್ಲಿಯೂ ಅವರನ್ನು ನಿಶ್ಚಿಂತೆಯಿಂದ ಬದುಕಲು ಶತ್ರುಗಳು ಬಿಡದಾದಾಗ ಅವರೊಂದಿಗೆ ಹೋರಾಡುವಂತೆ ಅಲ್ಲಾಹನು ವಿಶ್ವಾಸಿಗಳಿಗೆ ಕರೆಕೊಟ್ಟನು. ಯುದ್ಧವು ಅಪಾರ ಕಷ್ಟನಷ್ಟಗಳಿಗೂ ಸಾವು ನೋವುಗಳಿಗೂ ಕಾರಣವಾಗುವುದರಿಂದ ಅದರಲ್ಲಿ ಜಿಗುಪ್ಸೆ ಹುಟ್ಟುವುದು ಸಹಜವಷ್ಟೆ. ಆದರೆ ಮನುಷ್ಯರ ಬದುಕಿನ ಅಭಿವೃದ್ಧಿಗೆ ಅಗತ್ಯವಾದ ಎಲ್ಲ ಕಾರ್ಯಗಳನ್ನು ಗ್ರಹಿಸಲು ಅವರು ಅಶಕ್ತರು. ಪ್ರಥಮ ನೋಟಕ್ಕೆ ಜಿಗುಪ್ಸೆ ಮೂಡುವ ಕೆಲವು ವ...

ಯಾತ್ರೆಗೆ ಹೊರಡುವಾಗ ತಾನು ಅಗಲಿ ಹೋಗುವವರಿಗಾಗಿ

ಯಾತ್ರೆಗೆ ಹೊರಡುವಾಗ ತಾನು ಅಗಲಿ ಹೋಗುವವರಿಗಾಗಿ أَسْتَوْدِعُكُمُ اللَّهَ الَّذِي لَا تَضِيعُ وَدَائِعُهُ ಅರ್ಥ:ನಾನು ನಿಮ್ಮನ್ನು ಅಲ್ಲಾಹನ ಸಂರಕ್ಷಣೆಯಲ್ಲಿ ಅರ್ಪಿಸಿದ್ದೇನೆ. ಅವನ ಸಂರಕ್ಷಣೆಯಲ್ಲಿ ಅರ್ಪಿಸಲ್ಪಟ್ಟದ್ದು ಎಂದೂ ನಷ್ಟವಾಗದು. ಅಸ್ತೌದಿಉಕುಮುಲ್ಲಾಹಲ್ಲದೀ ಲಾ ತದೀಉ ವದಾಇಉಹೂ (ಅಹ್ಮದ್ 2/403. ಇಬ್ನ್ ಮಾಜ 2/943. ನೋಡಿ: ಸಹೀಹ್ ಇಬ್ನ್ ಮಾಜ (2/133).

ಮರಣಹೊಂದಿದವರಿಗೆ ಮಾಡುವ ದಾನದ ಪ್ರತಿಫಲ ಅವರಿಗೆ ಲಭಿಸಲಿದೆಯೇ!

ಮರಣಹೊಂದಿದವರಿಗೆ ಮಾಡುವ ದಾನದ ಪ್ರತಿಫಲ ಅವರಿಗೆ ಲಭಿಸಲಿದೆಯೇ! ಬೀವಿ ಆಯಿಷಾ(ರ.ಅ) ರಿಂದ ನಿವೇದನೆ: ಓರ್ವ ವ್ಯಕ್ತಿ ಪ್ರವಾದಿﷺ ಬಳಿ ಬಂದು ಹೇಳಿದರು, ನನ್ನ ತಾಯಿ ತಕ್ಷಣ ಮರಣ ಹೊಂದಿದರು. ಅವರಿಗೆ ಮಾತನಾಡಲು ಸಾಧ್ಯವಾಗಿರುತ್ತಿದ್ದರೆ ಅವರು ದಾನ-ಧರ್ಮ ಮಾಡುತ್ತಿದ್ದರು ಎಂಬುದು ನನಗೆ ಖಾತ್ರಿಯಿದೆ. ಆದ್ದರಿಂದ ನಾನು ಅವರಿಗಾಗಿ ದಾನ-ಧರ್ಮ ಮಾಡಿದರೆ ಅದರ ಪ್ರತಿಫಲ ಅವರಿಗೆ ಲಭಿಸಬಹುದೇ? ಪ್ರವಾದಿﷺ ಹೇಳಿದರು, ಹೌದು, ಅವರಿಗಾಗಿ ನೀವು ದಾನ-ಧರ್ಮ ಮಾಡಿರಿ." [ಸ್ವ.ಬುಖಾರಿ: 2760] ✍🏻ಸಾಲಿಮ್ ಮುಈನಿ ಸಖಾಫಿ ರಬ್ಬಾನಿ‌ ಅ'ಸ್ಸಿಂಧಿ ಗದಗ

ಸಾಲ ಮರು ಪಾವತಿಸುವಾಗ ಪ್ರವಾದಿ ‎(ﷺ) ‏ರು ಪ್ರಾರ್ಥಿಸಿದರು

ಸಾಲ ಮರು ಪಾವತಿಸುವಾಗ ಪ್ರವಾದಿ (ﷺ) ರು ಪ್ರಾರ್ಥಿಸಿದರು (عَنْ إِسْمَاعِيلَ بْنِ إِبْرَاهِيمَ بْنِ عَبْدِ اللَّهِ بْنِ أَبِي رَبِيعَةَ، عَنْ أَبِيهِ، عَنْ جَدِّهِ، قَالَ: اسْتَقْرَضَ مِنِّي النَّبِيُّ صلى الله عليه وسلم أَرْبَعِينَ أَلْفًا فَجَاءَهُ مَالٌ فَدَفَعَهُ إِلَىَّ وَقَالَ: ‏بَارَكَ اللَّهُ لَكَ فِي أَهْلِكَ وَمَالِكَ إِنَّمَا جَزَاءُ السَّلَفِ الْحَمْدُ وَالأَد".رواه-نسائي/٤٦٨٣)    ಇಸ್ಮಾಯಿಲ್ ಬುನ್ ಇಬ್ರಾಹಿಂ ಬುನ್ ಅಬ್ದುಲ್ಲಾ (ರ.ಅ) ರವರು ತಮ್ಮ ತಂದೆ ಮತ್ತು ತಂದೆಯ ತಂದೆಯಿಂದ ವರದಿ- ಅವರು ಹೇಳಿದರು: ಪ್ರವಾದಿ ﷺ ರು ನನ್ನಿಂದ ನಲ್ವತ್ತು ಸಾವಿರ ರುಪಾಯಿ ಎರವಲು ಪಡೆದರು. ಆ ಕ್ಷಣದಲ್ಲಿ ಪ್ರವಾದಿ ﷺ ರು ಎಲ್ಲಿಂದಲೋ ಸ್ವಲ್ಪ ಹಣವನ್ನು ತೆಗೆದುಕೊಂಡು ಅದನ್ನು ನನಗೆ ಹಿಂದಿರುಗಿಸಿದರು. ತದನಂತರ ಹೇಳಿದರು: بَارَكَ اللَّهُ لَكَ فِي أَهْلِكَ وَمَالِكَ إِنَّمَا جَزَاءُ السَّلَفِ الْحَمْدُ وَالأَد    {ಅಲ್ಲಾಹನು ನಿಮ್ಮ ಕುಟುಂಬ ಮತ್ತು ಸಂಪತ್ತನ್ನು ನಿಮಗಾಗಿ ಅನುಗ್ರಹಿಸಲಿ. ಸಾಲ ನೀಡುವುದರ ಪ್ರತಿಫಲವೆಂದರೆ ಸ್ತುತಿಸುವುದು ಮತ್ತು ಮರುಪಾವತಿಸುವುದಾಗಿದೆ}. (ಹದೀಸ್- ಇಮಾಂ ನಸಾಈ) ▪ಒಳಿತನ್ನು ಕಲಿಯಲು ಅಲ್ಲಾಹನು ನಮಗೆ ಅನುಗ್ರಹಿಸಲಿ. ಆಮೀನ್🤲▪ ಮುಹಮ್ಮದ್ ತಾಜುದ್ದೀನ್ ಸಖಾಫಿ (ಖತೀಬರು- ಮುಹ್...

ಪ್ರಕೃತಿಯೊಂದಿಗೆ...

ಪ್ರಕೃತಿಯೊಂದಿಗೆ... ಸೈನ್ಯವನ್ನು ಸಜ್ಜುಗೊಳಿಸಿದ ನಂತರ ಖಲೀಫಾ ಅಬೂಬಕರ್ ಸಿದ್ದೀಖ್(ರ) ರವರು ಸೈನಿಕರಿಗೆ ನೀಡಿದ ನಿರ್ದೇಶನ, "ನೀವು ಖರ್ಜೂರದ ಮರಗಳನ್ನು ಕಡಿಯಬಾರದು. ಬೆಂಕಿ ಹಾಕಿ ಸುಡಬಾರದು. ಫಲ ನೀಡುವ ಯಾವುದೇ ವೃಕ್ಷಗಳಿಗೆ ಕೊಡಲಿ ಹಾಕುವುದು ಸಲ್ಲದು. ಜಾನುವಾರುಗಳನ್ನು ಹತ್ಯೆ ಮಾಡಬಾರದು" ಎಂದಾಗಿತ್ತು. ಮರ ಬೆಳೆಸಿ ನಾಡು ಉಳಿಸೋಣ. ಜುನೈದ್ ಸಖಾಫಿ ಜೀರ್ಮುಕ್ಕಿ ಮುದರ್ರಿಸ್,ದ್ಸಿಕ್ರಾ ಮೂಡಬಿದ್ರೆ ಜೂನ್ 05, 2021 ಶನಿವಾರ, ಶವ್ವಾಲ್ 24, 1442

ಪೇಟೆಯನ್ನು ಪ್ರವೇಶಿಸುವಾಗ

ಪೇಟೆಯನ್ನು ಪ್ರವೇಶಿಸುವಾಗ لَا إِلَهَ إِلاَّ اللَّهُ وَحْدَهُ لَا شَرِيكَ لَهُ, لَهُ الْمُلْكُ وَلَهُ الْحَمْدُ, يُحْيِي وَيُمِيتُ وَهُوَ حَيٌّ لَا يَمُوتُ, بِيَدِهِ الْخَيْرُ وَهُوَ عَلَى كُلِّ شَيْءٍ قَدِيرٌ ಅರ್ಥ: ಅಲ್ಲಾಹನ ಹೊರತು ಆರಾಧನೆಗೆ ನೈಜ ಹಕ್ಕುದಾರರಾಗಿ ಅನ್ಯರಿಲ್ಲ, ಅವನು ಏಕೈಕನು, ಅವನಿಗೆ ಸಹಭಾಗಿಗಳಾಗಿ ಯಾರೂ ಇಲ್ಲ, ಆಧಿಪತ್ಯವು ಅವನದ್ದು ಮತ್ತು ಸ್ತುತಿಯು ಅವನಿಗೆ, ಅವನು ಬದುಕನ್ನು ನೀಡುವವನು ಮತ್ತು ಮೃತಪಡಿಸುವವನಾಗಿದ್ದಾನೆ, ಅವನು ಎಂದೂ ಮರಣಹೊಂದದವನೂ ನಿರಂತರವಾಗಿ ಜೀವಿಸುವವನೂ ಆಗಿದ್ದಾನೆ, ಒಳಿತು ಅವನ ಕೈಯಲ್ಲಿದೆ ಮತ್ತು ಅವನು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ. ಲಾ ಇಲಾಹ ಇಲ್ಲಲ್ಲಾಹು ವಹ್ದಹೂ ಲಾ ಶರೀಕ ಲಹೂ ಲಹುಲ್ ಮುಲ್ಕು ವಲಹುಲ್ ಹಮ್ದು ಯುಹ್ಯೀ ವಯುಮೀತು ವಹುವ ಹಯ್ಯುನ್ ಲಾ ಯಮೂತು ಬಿಯದಿಹಿಲ್ ಖೈರು ವಹುವ ಅಲಾ ಕುಲ್ಲಿ ಶೈಇನ್ ಕದೀರ್ (ಅತ್ತಿರ್ಮಿದಿ 5/291; ಅಲ್‍ಹಾಕಿಮ್ 1/538; ಸಹೀಹ್ ಇಬ್ನ್ ಮಾಜದಲ್ಲಿ (2/21) ಮತ್ತು ಸಹೀಹು ತ್ತಿರ್ಮಿದಿಯಲ್ಲಿ (3/152) ಅಲ್‍ಅಲ್ಬಾನೀ ಇದನ್ನು ಸಹೀಹ್ ಎಂದಿದ್ದಾರೆ.) 

ಅಧ್ಯಾಯ: 2 ಅಲ್-ಬಕ್ವರಃ ಸೂಕ್ತ: 214

(ಅಧ್ಯಾಯ: 2 ಅಲ್-ಬಕ್ವರಃ ಸೂಕ್ತ: 214) أَمْ حَسِبْتُمْ أَن تَدْخُلُوا۟ ٱلْجَنَّةَ وَلَمَّا يَأْتِكُم مَّثَلُ ٱلَّذِينَ خَلَوْا۟ مِن قَبْلِكُم ۖ مَّسَّتْهُمُ ٱلْبَأْسَآءُ وَٱلضَّرَّآءُ وَزُلْزِلُوا۟ حَتَّىٰ يَقُولَ ٱلرَّسُولُ وَٱلَّذِينَ ءَامَنُوا۟ مَعَهُۥ مَتَىٰ نَصْرُ ٱللَّهِ ۗ أَلَآ إِنَّ نَصْرَ ٱللَّهِ قَرِيبٌۭ ಅರ್ಥ: ನಿಮ್ಮ ಪೂರ್ವಿಕರ ಕಟು ಅನುಭವ ನಿಮಗೂ ಬಾರದೆ ಸ್ವರ್ಗಪ್ರವೇಶ ಸಾಧ್ಯವೆಂದು ಭಾವಿಸುತ್ತಿದ್ದೀರಾ? ಅವರಿಗೆ ಕಡುದಾರಿದ್ರ್ಯಗಳೂ ಕಠಿಣ ರೋಗಗಳೂ ಬಾಧಿಸಿದ್ದುವು. ಪ್ರವಾದಿಗಳೂ ವಿಶ್ವಾಸಿಗಳೂ *‘ಅಲ್ಲಾಹನ ನೆರವು ಯಾವಾಗ?’* ಎಂದು ಕೇಳುವಷ್ಟು ಕಷ್ಟಕೋಟಲೆಗಳಿಂದ ಕಂಪಿಸಲ್ಪಟ್ಟಿದ್ದರು. ಅಲ್ಲಾಹನ ಸಹಾಯ ಸನ್ನಿಹಿತವಾಗಿದೆ. (ಎಂದವರಿಗೆ ಸಾಂತ್ವನ ನೀಡಲಾಗಿತ್ತು)¹¹⁴. ವಿವರಣೆ:  114. ಸತ್ಯವಿಶ್ವಾಸಿಗಳಿಗೆ ಶತ್ರುಗಳಿಂದ ಭಾರೀ ವಿರೋಧ ಹಾಗೂ ಅಪಾರ ಕಷ್ಟನಷ್ಟಗಳನ್ನು ಅನುಭವಿಸುವ ಪ್ರಸಂಗ ಬರಬಹುದು. ಅಂತಹ ಪ್ರತಿಕೂಲ ಘಟ್ಟಗಳಲ್ಲಿ ತತ್ತರಿಸದೆ, ಅಳುಕದೆ ಮನೋದಾಢ್ರ್ಯತೆಯಿಂದ ಅಚಲ ವಿಶ್ವಾಸದೊಂದಿಗೆ ಸತ್ಯವನ್ನು ಭದ್ರವಾಗಿ ಹಿಡಿದುಕೊಂಡು ಮುಂದೆ ಸಾಗಬೇಕು. ಅದಕ್ಕೆ ಮಹತ್ತರ ಕ್ಷಮೆ ಹಾಗೂ ಅಪೂರ್ವ ತ್ಯಾಗ ಸನ್ನದ್ದತೆ ಅಗತ್ಯ. ಆದರೆ ಇವೆಲ್ಲವೂ ಅಲ್ಲಾಹನ ಪರೀಕ್ಷೆಗಳಾಗಿವೆ. ಪ್ರವಾದಿಗಳು ಹಾಗೂ ಅವರ ಅನುಯಾಯಿಗಳು ಇಂತಹ ಅನೇಕ ಪರೀಕ್ಷೆಗಳನ್ನು ಎದುರಿಸುತ್...

ಪ್ರವಾದಿﷺ ‏ರವರ ಪಾವನ ಬಾಯಿಯ ನೀರಿನ ಮಹತ್ವ!

ಪ್ರವಾದಿﷺ ರವರ ಪಾವನ ಬಾಯಿಯ ನೀರಿನ ಮಹತ್ವ! ಸಹಲ್ ಬ್ನ್ ಸ'ಅದ್(ರ.ಅ) ರಿಂದ ನಿವೇದನೆ: ಖೈಬರ್ ಯುದ್ಧ ದಿನ ಪ್ರವಾದಿﷺ ಹೇಳಿದರು, ‌"ಅಲ್ಲಾಹು ಮತ್ತು ಅವನ ರಸೂಲ್ﷺ ಪ್ರೀತಿಸುವ, ಅಲ್ಲಾಹನನ್ನು,‌ ಅವನ ರಸೂಲ್ﷺ ರನ್ನು ಪ್ರೀತಿಸುವ ಒಬ್ಬರ ಹಸ್ತಕ್ಕೆ ನಾನು ಈ ಪತಾಕೆ ನೀಡುವೆನು. ಅವರ ನೇತೃತ್ವದಲ್ಲಿ ಅಲ್ಲಾಹು ವಿಜಯ ನೀಡುವನು. ಆ ಪತಾಕೆ ಯಾರಿಗೆ ನೀಡಬಹುದು ಎಂಬ ಕುತೂಹಲದೊಂದಿಗೆ‌ ಜನರೆಲ್ಲಾ ಅಂದಿನ ರಾತ್ರಿ ಕಳೆದರು. ತರುವಾಯ ಪ್ರವಾದಿﷺ ಕೇಳಿದರು, "ಅಲೀ(ರ.ಅ) ಎಲ್ಲಿ?, ಜನರು; ಅವರಿಗೆ ಕಣ್ಣಿನ ಕಾಯಿಲೆ ಇದೆ. ಅವರನ್ನು ಕರೆದುಕೊಂಡು ಬನ್ನಿ." ಮಹಾನರನ್ನು ಕರೆದುಕೊಂಡು ಬಂದಾಗ ಪ್ರವಾದಿﷺ ತನ್ನ ಪಾವನ ಬಾಯಿಯ ನೀರು ಅಲೀ(ರ.ಅ) ರವರ ಕಣ್ಣಿಗೆ ಸವರಿ ದುಆಃ ಮಾಡಿದಾಗ ರೋಗ ಸಂಪೂರ್ಣ ವಾಸಿಯಾಯಿತು. ನಂತರ ಪ್ರವಾದಿﷺ ಆ ಪತಾಕೆ ಮಹಾನರಿಗೆ ಹಸ್ತಾಂತರಿಸಿದರು. ✍🏻ಸಾಲಿಮ್ ಮುಈನಿ ಸಖಾಫಿ ರಬ್ಬಾನಿ‌ ಅ'ಸ್ಸಿಂಧಿ ಗದಗ

ಅಲ್ಲಾಹನ ಮಾರ್ಗದಲ್ಲಿ ನಾನು ನಿಮ್ಮನ್ನು ಪ್ರೀತಿಸುತ್ತೇನೆ

ಅಲ್ಲಾಹನ ಮಾರ್ಗದಲ್ಲಿ ನಾನು ನಿಮ್ಮನ್ನು ಪ್ರೀತಿಸುತ್ತೇನೆ (عَنْ أَنَسِ بْنِ مَالِكٍ رضي الله عنه، أَنَّ رَجُلاً كَانَ عِنْدَ النَّبِيِّ صلى الله عليه وسلم فَمَرَّ بِهِ رَجُلٌ فَقَالَ: يَا رَسُولَ اللَّهِ إِنِّي لأُحِبُّ هَذَا.‏ فَقَالَ لَهُ النَّبِيُّ صلى الله عليه وسلم: أَعْلَمْتَهُ.‏ قَالَ لاَ، قَالَ:أَعْلِمْهُ. قَالَ فَلَحِقَهُ فَقَالَ "إِنِّي أُحِبُّكَ فِي اللَّهِ".‏ فَقَالَ "أَحَبَّكَ الَّذِي أَحْبَبْتَنِي لَهُ".رواه-أبو داوود/٥١٢٥)    ಅನಸ್ ಬುನ್ ಮಾಲಿಕ್ (ರ.ಅ) ರಿಂದ ವರದಿ- ಒಬ್ಬರು ಪ್ರವಾದಿ ﷺ ರವರ ಹತ್ತಿರದಲ್ಲಿದ್ದಾಗ ಇನ್ನೊಬ್ಬ ವ್ಯಕ್ತಿಯು ಅವರ ಮೂಲಕ ಹಾದುಹೋದರು. ಆವಾಗ ಈ ವ್ಯಕ್ತಿ ಹೇಳಿದರು: ಓ ಅಲ್ಲಾಹನ ರಸೂಲರೇ (ﷺ) ನಾನು ಆ ಹೋದ ಮನುಷ್ಯನನ್ನು ಪ್ರೀತಿಸುತ್ತೇನೆ. ಪ್ರವಾದಿ (ﷺ) ರು ಕೇಳಿದರು: ನೀವು ಅದನ್ನು ಅವರಿಗೆ ತಿಳಿಸಿದ್ದೀರಾ? ಅವರು ಉತ್ತರಿಸಿದರು: ಇಲ್ಲ. ಪ್ರವಾದಿ (ﷺ) ಹೇಳಿದರು: ಅವರಿಗೆ ತಿಳಿಸಿ. ನಂತರ ಅವನು ಅವರ ಬಳಿಗೆ ಹೋಗಿ ಹೇಳಿದರು: "ಅಲ್ಲಾಹನ ಮಾರ್ಗದಲ್ಲಿ ನಾನು ನಿಮ್ಮನ್ನು ಪ್ರೀತಿಸುತ್ತೇನೆ". ಅವರು ಹೇಳಿದರು: "ನೀವು ಯಾರಿಗೆ ಬೇಕಾಗಿ ನನ್ನನ್ನು ಪ್ರೀತಿಸಿದ್ದೀರೋ, ಅವನು ನಿಮ್ಮನ್ನು ಪ್ರೀತಿಸಲಿ". (ಹದೀಸ್- ಇಮಾಂ ಅಬೂ ದಾವೂದ್) ▪ಒಳಿತನ್ನು ಕಲಿಯಲ...

ಒಂಟಿಕಾಲಿನಲ್ಲೂ ನಮಾಝ್!

ಒಂಟಿಕಾಲಿನಲ್ಲೂ ನಮಾಝ್! ಮುಹಮ್ಮದ್ ಬಿನು ಇಸ್ ಹಾಖ್(ರ) ರವರು ಹೇಳುತ್ತಾರೆ; "ಮಹಾತ್ಮರಾದ ಅಬ್ದುರ್ರಹ್ಮಾನ್ ಬಿನುಲ್ ಅಸ್ವದ್(ರ) ರವರು ಹಜ್ಜ್ ನಿರ್ವಹಿಸಲೋಸುಗ ನಮ್ಮ ಊರಿಗೆ ಬಂದ ಸಂದರ್ಭ ಅವರ ಕಾಲೊಂದಕ್ಕೆ ಏನೋ ಅನಾರೋಗ್ಯವುಂಟಾಗಿ ಉಲ್ಭಣಗೊಂಡು ನೋವು ಕಾಣಿಸಿಕೊಂಡಿತು. ಮಹಾತ್ಮರು ಒಂಟಿಕಾಲಿನಲ್ಲಿ ನಿಂತು ನಮಾಝ್ ನಿರ್ವಹಿಸತೊಡಗಿದರು. ಅಂದು ಇಶಾಇನ ಅದೇ ವುಳೂವಿನಿಂದ ಸುಬ್ ಹಿ ನಮಾಝನ್ನು ಕೂಡಾ ನಿರ್ವಹಿಸಿದ್ದರು!".(ಇಹ್ಯಾ) ಜುನೈದ್ ಸಖಾಫಿ ಜೀರ್ಮುಕ್ಕಿ ಮುದರ್ರಿಸ್,ದ್ಸಿಕ್ರಾ ಮೂಡಬಿದ್ರೆ ಜೂನ್ 04, 2021 ಶುಕ್ರವಾರ, ಶವ್ವಾಲ್ 23, 1442

ತಲೆ ನೋವು ಹಾಗೂ ಇತರೆ ಹಲವು ಖಾಯಿಲೆಗಳನ್ನು ಗುಣಪಡಿಸುವ ಗುಣ ತುಂಬೆ ಗಿಡಕ್ಕಿದೆ.!

ತಲೆ ನೋವು ಹಾಗೂ ಇತರೆ ಹಲವು ಖಾಯಿಲೆಗಳನ್ನು ಗುಣಪಡಿಸುವ ಗುಣ ತುಂಬೆ ಗಿಡಕ್ಕಿದೆ.! ತುಂಬೆಗಿಡವನ್ನು ನಾವು ನೀವೆಲ್ಲರೂ ಹಲವು ಕಡೆಗಳಲ್ಲಿ ಕಂಡಿರುತ್ತೇವೆ, ಇದಕ್ಕೆ ಬೆಳೆಯಲು ಪ್ರತ್ಯೇಕವಾದ ಜಾಗ ಬೇಕಾಗಿಲ್ಲ, ಎಲ್ಲೆಂದರಲ್ಲಿ ಹದವಾಗಿ, ಸೋಮಪಾಗಿ ಬೆಳೆಯುತ್ತದೆ. ಇದು ನೋಡಲು ಅಂದವಾಗಿರುವುದಲ್ಲದೆ ಇದರಲ್ಲಿ ಬಿಡುವ ಹೂವುಗಳು ವಿವಿಧ ಬಗೆಯವುಗಳಾಗಿವೆ. ಇದು ಹಲವು ರೋಗಗಳನ್ನ ಗುಣಪಡಿಸುವ ಗುಣವನ್ನ ಹೊಂದಿದೆ.   ಬಿಳಿ ತುಂಬೆ ಹೂವಗಳನ್ನು ಸ್ವಲ್ಪ ಪ್ರಮಾಣದ ಜೇನು ತುಪ್ಪದಲ್ಲಿ ನೆನೆಸಿ ತಿಂದರೆ ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ. ತುಂಬೆಗಿಡದ ರಸದ ಜೊತೆ ಕರಿಮೆಣಸಿನ ಪುಡಿಯನ್ನು ಬೆರೆಸಿ ನಿಯಮಿತವಾಗಿ ಸೇವಿಸಿದರೆ ವಿಷಮಜ್ವರವು ಕಡಿಮೆಯಾಗುತ್ತದೆ. ತಲೆನೋವು, ತಲೆ ಭಾರ ಮತ್ತು ಮೂಗು ಕಟ್ಟಿದಲ್ಲಿ, ತುಂಬೆಗಿಡದ ಖಾಂಡವನ್ನು ನೀರಿನಲ್ಲಿ ಕುದಿಸಿ ಅದರ ಹಬೆಯನ್ನು ತೆಗೆದುಕೊಂಡರೆ, ತಲೆನೋವು, ತಲೆ ಭಾರ ಕಡಿಮೆಯಾಗುತ್ತದೆ. ನಿಯಮಿತ ಪ್ರಮಾಣದಲ್ಲಿ ತುಂಬೆಗಿಡದ ರಸಕ್ಕೆ ಅಕ್ಕಿತೊಳೆದ ನೀರನ್ನು ಬೆರೆಸಿ ಸೇವಿಸಿದರೆ ಮತ್ತು ಅದೇ ಮಿಶ್ರಣದಿಂದ ಕಣ್ಣನ್ನು ತೊಳೆಯುತ್ತಿದ್ದರೆ ಕಣ್ಣಿನ ಸಮಸ್ಯೆ ದೂರವಾಗುತ್ತದೆ. ದೇಹದಲ್ಲಿ ಯಾವುದೇ ತರಹದ ಊತವಿದ್ದಲ್ಲಿ ತುಂಬೆ ಸೊಪ್ಪಿನ ಕಷಾಯದಿಂದ ಶಾಕವನ್ನು ಕೊಟ್ಟರೆ ಊತ ಕಡಿಮೆಯಾಗುತ್ತದೆ. ತುಂಬೆಗಿಡದ ಕಷಾಯಕ್ಕೆ ಸೈಂಧವ ಉಪ್ಪನ್ನು ಸೇರಿಸಿ, ದಿನಕ್ಕೆ 2 ಬಾರಿ ಸೇವಿಸಿದರೆ, ಜೀರ್ಣಶಕ್ತಿ ಹೆಚ್ಚುತ್ತದೆ.  =====...

ಮುಂಜಾನೆ ಸಿಂಚನ

ಮಹಾತ್ಮರೊಬ್ಬರು ಹೇಳುತ್ತಾರೆ; "ನಾನು ಆಮಿರ್ ಬಿನು ಅಬ್ದುಲ್ ಖೈಸ್(ರ) ರವರ ಜೊತೆ ನಿರಂತರವಾಗಿ ರಾತ್ರಿ ಹಗಲೆನ್ನದೆ ನಾಲ್ಕು ತಿಂಗಳ ಕಾಲ ಸಹವಾಸ ಬೆಳೆಸಿದೆ. ಆ ದೀರ್ಘಾವಧಿಯಲ್ಲಿ ಒಮ್ಮೆಯೂ ಕೂಡಾ ಶೈಖ್ ರವರನ್ನು ನಿದ್ರಿಸುವುದಾಗಿ ನಾನು ನೋಡಿಲ್ಲ". (ಇಹ್ಯಾ) ಜುನೈದ್ ಸಖಾಫಿ ಜೀರ್ಮುಕ್ಕಿ ಮುದರ್ರಿಸ್,ದ್ಸಿಕ್ರಾ ಮೂಡಬಿದ್ರೆ ಜೂನ್ 03, 2021 ಗುರುವಾರ, ಶವ್ವಾಲ್ 22, 1442

ಪ್ರಾರ್ಥಿಸುವುದಾದರೆ ನಾಲ್ಕು ವಿಷಯಗಳಿಂದ ಆಶ್ರಯ ಪಡೆಯಿರಿ ‏

ಪ್ರಾರ್ಥಿಸುವುದಾದರೆ ನಾಲ್ಕು ವಿಷಯಗಳಿಂದ ಆಶ್ರಯ ಪಡೆಯಿರಿ (عَنْ أَبِي هُرَيْرَةَ رضي الله عنه قَالَ، قَالَ رَسُولُ اللَّهِ صلى الله عليه وسلم: ‏إِذَا تَشَهَّدَ أَحَدُكُمْ فَلْيَسْتَعِذْ بِاللَّهِ مِنْ أَرْبَعٍ يَقُولُ اللَّهُمَّ إِنِّي أَعُوذُ بِكَ مِنْ عَذَابِ جَهَنَّمَ وَمِنْ عَذَابِ الْقَبْرِ وَمِنْ فِتْنَةِ الْمَحْيَا وَالْمَمَاتِ وَمِنْ شَرِّ فِتْنَةِ الْمَسِيحِ الدَّجَّالِ".رواه-مسلم/٥٨٨)    ಅಬೂಹುರೈರಾ (ರ.ಅ) ರಿಂದ ವರದಿ- ಪ್ರವಾದಿ ﷺ ಹೇಳಿದರು: ನಿಮ್ಮಲ್ಲಿ ಯಾರಾದರೂ ಪ್ರಾರ್ಥಿಸುವುದಾದರೆ ನಾಲ್ಕು ವಿಷಯಗಳಿಂದ ಅಲ್ಲಾಹನೊಂದಿಗೆ ಆಶ್ರಯವನ್ನು ಪಡೆಯಲಿ. ಓ ಅಲ್ಲಾಹನೇ, ನರಕದ ಶಿಕ್ಷೆಯಿಂದ ನಿನ್ನೊಂದಿಗೆ ಆಶ್ರಯವನ್ನು ಕೇಳುತ್ತೇನೆ. ಖಬರಿನ ಶಿಕ್ಷೆಯಿಂದ ರಕ್ಷಣೆಯನ್ನು ಬೇಡುತ್ತೇನೆ. ಜೀವನ ಮತ್ತು ಮರಣದ ಫಿತ್ನಾದಿಂದ ಮತ್ತು ಮಸೀಹು ದ್ದಜ್ಜಾಲಿನ ಫಿತ್ನಾದಿಂದ ನಾನು ನಿನ್ನೊಂದಿಗೆ ಅಭಯವನ್ನು ಬೇಡುತ್ತೇನೆ. (ಹದೀಸ್- ಇಮಾಂ ಮುಸ್ಲಿಮ್) ▪ಒಳಿತನ್ನು ಕಲಿಯಲು ಅಲ್ಲಾಹನು ನಮಗೆ ಅನುಗ್ರಹಿಸಲಿ. ಆಮೀನ್🤲▪ ಮುಹಮ್ಮದ್ ತಾಜುದ್ದೀನ್ ಸಖಾಫಿ (ಖತೀಬರು- ಮುಹ್ಯದ್ಧೀನ್ ಜುಮಾ ಮಸೀದಿ ಪರಪ್ಪು, ಗೇರುಕಟ್ಟೆ) [03-06-2021,ಗುರುವಾರ] {21-ಶವ್ವಾಲ್-1442} ✳✳✳✳✳✳✳✳✳✳

ತಂದೆ-ತಾಯಿಗೆ ಮಾಡುವ ಸೇವೆಯ ಮಹತ್ವ!

ತಂದೆ-ತಾಯಿಗೆ ಮಾಡುವ ಸೇವೆಯ ಮಹತ್ವ! ಅಂರ್ ಬ್ನ್ ಆಸ್ವ್(ರ.ಅ) ರಿಂದ ನಿವೇದನೆ: ಒಬ್ಬರು ಪ್ರವಾದಿﷺ ರವರ ಬಳಿ ಬಂದು ಹೇಳಿದರು, "ಹಿಜಿರಾ ಮತ್ತು ಯುದ್ಧದ ವಿಷಯದಲ್ಲಿ ನಾನು ತಮ್ಮಲ್ಲಿﷺ ಕರಾರು ಮಾಡುತ್ತೇನೆ. ಅಲ್ಲಾಹನಿಂದ ನಾನು ಪ್ರತಿಫಲ ಬಯಸುತ್ತೇನೆ. ಪ್ರವಾದಿﷺ ಕೇಳಿದರು, "ನಿನ್ನ ತಂದೆ-ತಾಯಿಯ ಪೈಕಿ ಯಾರಾದರೂ ಜೀವಂತವಿದ್ದಾರೆಯೇ? ಆತ ಹೇಳಿದ, "ಹೌದು ಇಬ್ಬರೂ. ಪ್ರವಾದಿﷺ ಕೇಳಿದರು, "ಅಲ್ಲಾಹನಿಂದ ನೀನು ಪ್ರತಿಫಲ ಬಯಸುವಿಯಾ? ಆತ ಹೇಳಿದ, "ಹೌದು." ಆಗ ಪ್ರವಾದಿﷺ ಹೇಳಿದರು, "ನೀನು ನಿನ್ನ ತಂದೆ-ತಾಯಿಯ ಬಳಿ ತೆರಳು. ಅವರೊಂದಿಗೆ ಉತ್ತಮ ಸಹವಾಸ ಬೆಳೆಸಿಕೊಳ್ಳು." [ಸ್ವ.ಮುಸ್ಲಿಂ] ತಂದೆ-ತಾಯಿಗೆ ಮಾಡುವ ಸೇವೆ ಅತ್ಯಂತ ಶ್ರೇಷ್ಠ ಸೇವೆ ಎಂಬುದು ಈ ಹದೀಸಿನಿಂದ ಸ್ಪಷ್ಟ. ✍🏻ಸಾಲಿಮ್ ಮುಈನಿ ಸಖಾಫಿ ರಬ್ಬಾನಿ‌ ಅ'ಸ್ಸಿಂಧಿ ಗದಗ

ನೀರಲ್ಲಿ ನೆನೆಸಿಟ್ಟ ಬಾದಾಮಿ ಅಥವಾ ಒಣ ಬಾದಾಮಿ: ಯಾವುದು ಉತ್ತಮ.?

ನೀರಲ್ಲಿ ನೆನೆಸಿಟ್ಟ ಬಾದಾಮಿ ಅಥವಾ ಒಣ ಬಾದಾಮಿ: ಯಾವುದು ಉತ್ತಮ.?  ರುಚಿಕರ ಬಾದಾಮಿಯನ್ನು ಇಷ್ಟಪಡದವರು ವಿರಳ. ಬಾದಾಮಿ. ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಬಹುತೇಕರು ತಮ್ಮ ಡಯಟ್​ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ಚರ್ಮ ಹಾಗೂ ದೇಹಕ್ಕೆ ಬೇಕಾದ ಅಗತ್ಯ ಪೌಷ್ಟಿಕಾಂಶಗಳನ್ನು ಬಾದಾಮಿ ಪೂರೈಸುತ್ತದೆ. ಕೆಲವರು ನೆನೆಸಿದ ಬಾದಾಮಿ ತಿಂದರೆ, ಮತ್ತೆ ಕೆಲವರು ಒಣ ಬಾದಾಮಿಯನ್ನು ಇಷ್ಟಪಡುತ್ತಾರೆ. ಆದರೆ ಬಾದಾಮಿಯನ್ನು ಹೇಗೆ ತಿನ್ನಬೇಕೆಂಬ ಗೊಂದಲ ಸಾಕಷ್ಟು ಮಂದಿಯಲ್ಲಿದೆ. ರಾತ್ರಿಯಿಡೀ ನೀರಿನಲ್ಲಿ ನೆನೆಸಿಟ್ಟ ಬಾದಾಮಿ, ಒಣ ಬಾದಾಮಿ ತಿನ್ನುವುದಕ್ಕಿಂದ ಒಳ್ಳೆಯದು ಅಥವಾ ಒಳ್ಳೆಯದಲ್ಲ ಎಂದು ಜನ ಹೇಳುವುದನ್ನು ಕೇಳಿದ್ದೀರಾ? ಖಂಡಿತಾ ಕೇಳಿರುತ್ತೀರಿ. ಹಾಗಾಗಿ ಬಾದಾಮಿಯನ್ನು ಹೇಗೆ ತಿನ್ನಬೇಕೆಂಬ ಗೊಂದಲ ನಿಮ್ಮಲ್ಲಿದೆಯೇ? ಆ ಗೊಂದಲಕ್ಕೆ ಇಲ್ಲಿದೆ ಪರಿಹಾರ.   ಪ್ರೋಟೀನ್, ಫೈಬರ್ ಮತ್ತು ಒಮೆಗಾ 3ಯ ಆಗರವಾಗಿರುವ ರುಚಿಕರ ಬಾದಾಮಿಯನ್ನು ಇಷ್ಟಪಡದವರು ತುಂಬಾ ಕಡಿಮೆ. ಹೆಚ್ಚಿನವರಿಗೆ ಬಾದಾಮಿ ಆರೋಗ್ಯ ಎಷ್ಟು ಉಪಯೋಗಕಾರಿ ಎಂಬುದರ ಅರಿವಿದ್ದು, ಅವರು ಅದನ್ನು ನಿತ್ಯದ ಆಹಾರ ಕ್ರಮದಲ್ಲಿ ಅಳವಡಿಸಿಕೊಂಡಿದ್ದಾರೆ ಎಂಬುವುದು ಒಳ್ಳೆಯ ಸಂಗತಿ.  ಆದರೆ, ಬಾದಾಮಿಯನ್ನು ಹಾಗೆಯೇ ತಿನ್ನುವುದಕ್ಕಿಂತ, ನೀರಲ್ಲಿ ನೆನಸಿಟ್ಟು ತಿಂದರೆ ಅದರಲ್ಲಿರುವ ಪೌಷ್ಟಿಕ ಸತ್ವಗಳು ಮತ್ತು ವಿಟಮಿನ್‍ಗಳನ್ನು ದೇಹ ಬಹುಬೇಗನೆ ಹೀರಿಕೊಳ್ಳುತ್ತದೆ ಎಂಬು...

ಅಧ್ಯಾಯ: 2 ಅಲ್-ಬಕ್ವರಃ ಸೂಕ್ತ: 210

(ಅಧ್ಯಾಯ: 2 ಅಲ್-ಬಕ್ವರಃ ಸೂಕ್ತ: 210) هَلْ يَنظُرُونَ إِلَّآ أَن يَأْتِيَهُمُ ٱللَّهُ فِى ظُلَلٍۢ مِّنَ ٱلْغَمَامِ وَٱلْمَلَٰٓئِكَةُ وَقُضِىَ ٱلْأَمْرُ ۚ وَإِلَى ٱللَّهِ تُرْجَعُ ٱلْأُمُورُ ಅರ್ಥ:ಅಲ್ಲಾಹನ ಶಿಕ್ಷೆಯು ದಟ್ಟ ಕರಿಮೋಡಗಳ ನಡುವೆ ಮಲಾಇಕತ್‍ಗಳೊಂದಿಗೆ ಎರಗಿ ತೀರ್ಪು ಜಾರಿಯಾಗುವುದನ್ನು ಅವರು ನಿರೀಕ್ಷಿಸುತ್ತಿರುವರೇನು? ಸರ್ವ ಸಂಗತಿಗಳ ನಿರ್ಗಮನವು ಅಲ್ಲಾಹನ ಕಡೆಗೇ ¹¹³. ವಿವರಣೆ:  113.ಶ್ಲೋಕದ ನೇರ ಅರ್ಥದಲ್ಲಿ ಅಲ್ಲಾಹನು ಬರುವುದು ಎಂದಿದೆ. ಆದರೆ ಸರ್ವಾಂತರ್ಯಾಮಿಯೂ ಸ್ಥಳ, ಕಾಲಗಳಿಗತೀತನೂ ಆದ ಅಲ್ಲಾಹನ ಕುರಿತು ಬರುವಿಕೆ, ಹೋಗುವಿಕೆ ಎಂಬ ಕಲ್ಪನೆಯೇ ಅಸಂಬದ್ಧ. ಇಮಾಮ್ ರಾಝಿ ವ್ಯಾಖ್ಯಾನಿಸಿದ ಪ್ರಕಾರ ಅಲ್ಲಾಹು ಅವರ ಬಳಿಗೆ ಬರುವುದೆಂದರೆ ಅವನ ಆದೇಶ ಹಾಗೂ ಅವನ ದಂಡನೆ ಬರುವುದು ಎಂದರ್ಥ. ‘ನಾಡಿನೊಂದಿಗೆ ಕೇಳು’ (2:80) ಎಂಬಲ್ಲಿ ನಾಡಿನ ಜನರೊಂದಿಗೆ ಕೇಳು ಎಂದರ್ಥ ತಾನೇ? ಹಾಗೆಯೇ ಇಲ್ಲಿ ಸಮಾಸದ ಪೂರ್ವ ಪದವನ್ನು ಕೈಬಿಡಲಾಗಿದೆ. ‘ಅಮ್ರುಲ್ಲಾಹ್’ ಎಂಬ ಸಮಾಸ ಪದದಿಂದ ‘ಅಮ್ರ್ರ್’ ಎಂಬುದನ್ನು ಕೈಬಿಡಲಾಗಿದೆ. ಇದು ಸಾಮಾನ್ಯವಾಗಿ ಪ್ರಚಾರದಲ್ಲಿರುವ ಒಂದು ಸಾಹಿತ್ಯಿಕ ಶೈಲಿ. ರಾಜನು ಹೊಡೆದನು, ಗಲ್ಲಿಗೇರಿಸಿದನು, ನೀಡಿದನು ಮುಂತಾದ ಪ್ರಯೋಗಗಳಲ್ಲಿ ರಾಜ ಅಪ್ಪಣೆ ಮಾಡಿದನು ಎಂಬ ಉದ್ದೇಶವಿರುವುದು ಸ್ಪಷ್ಟ.

ಯಾತ್ರೆಯಲ್ಲಿ ಹಳ್ಳಿಯನ್ನು ಅಥವಾ ಪಟ್ಟಣವನ್ನು ಪ್ರವೇಶಿಸುವಾಗ

ಯಾತ್ರೆಯಲ್ಲಿ ಹಳ್ಳಿಯನ್ನು ಅಥವಾ ಪಟ್ಟಣವನ್ನು ಪ್ರವೇಶಿಸುವಾಗ اللَّهُمَّ رَبَّ السَّمَوَاتِ السَّبْعِ وَمَا أَظْلَلْنَ, وَرَبَّ الْأَرَاضِينَ السَّبْعِ وَمَا أَقْلَلْنَ, وَرَبَّ الشَّيَاطِينِ وَمَا أَضْلَلْنَ, وَرَبَّ الرِّيَاحِ وَمَا ذَرَيْنَ, أَسْأَلُكَ خَيْرَ هَذِهِ الْقَرْيَةِ وَخَيْرَ أَهْلِهَا, وَخَيْرَ مَا فِيهَا, وَأَعُوذُ بِكَ مِنْ شَرِّهَا, وَشَرِّ أَهْلِهَا, وَشَرِّ مَا فِيهَا ಅರ್ಥ:ಓ ಅಲ್ಲಾಹ್! ಏಳಾಕಾಶಗಳ ಮತ್ತು ಅವು ನೆರಳಿತ್ತವುಗಳ ಒಡೆಯನೇ! ಏಳು ಭೂಮಿಗಳ ಮತ್ತು ಅವು ಹೊತ್ತಿರುವವುಗಳ ಒಡೆಯನೇ! ಶೈತಾನರ ಮತ್ತು ಅವರು ದಾರಿಗೆಡಿಸಿದವರ ಒಡೆಯನೇ! ಗಾಳಿಯ ಮತ್ತು ಅದು ಝಾಡಿಸಿದವುಗಳ ಒಡೆಯನೇ! ಈ ಗ್ರಾಮದ ಒಳಿತನ್ನು ಮತ್ತು ಇದರ ನಿವಾಸಿಗಳ ಒಳಿತನ್ನು ಮತ್ತು ಇದರಲ್ಲಿರುವ ಒಳಿತನ್ನು ನಾನು ನಿನ್ನೊಂದಿಗೆ ಬೇಡುತ್ತಿದ್ದೇನೆ. ಇದರ ಕೆಡುಕಿನಿಂದ, ಇದರ ನಿವಾಸಿಗಳ ಕೆಡುಕಿನಿಂದ ಮತ್ತು ಇದರಲ್ಲಿರುವ ಕೆಡುಕಿನಿಂದ ನಾನು ನಿನ್ನೊಂದಿಗೆ ರಕ್ಷೆ ಬೇಡುತ್ತಿದ್ದೇನೆ. ಅಲ್ಲಾಹುಮ್ಮ ರಬ್ಬ ಸ್ಸಮಾವಾತಿ ಸ್ಸಬ್‍ಇ ವಮಾ ಅದ್‍ಲಲ್‍ನ, ವರಬ್ಬಲ್ ಅರ್ದೀನ ಸ್ಸಬ್‍ಇ ವಮಾ ಅಕ್ಲಲ್‍ನ, ವರಬ್ಬ ಶ್ಶಯಾತೀನಿ ವಮಾ ಅದ್‍ಲಲ್‍ನ, ವರಬ್ಬ ರ್ರಿಯಾಹಿ ವಮಾ ದರೈನ, ಅಸ್‍ಅಲುಕ ಖೈರ ಹಾದಿಹಿಲ್ ಕರ್ಯತಿ ವಖೈರ ಅಹ್ಲಿಹಾ, ವಖೈರ ಮಾ ಫೀಹಾ, ವನಊದು ಬಿಕ ಮಿನ್ ಶರ್ರಿಹಾ, ವಶರ್ರಿ ಅಹ...

ಅಧ್ಯಾಯ: 2 ಅಲ್-ಬಕ್ವರಃ ಸೂಕ್ತ: 203

(ಅಧ್ಯಾಯ: 2 ಅಲ್-ಬಕ್ವರಃ ಸೂಕ್ತ: 203) ۞ وَٱذْكُرُوا۟ ٱللَّهَ فِىٓ أَيَّامٍۢ مَّعْدُودَٰتٍۢ ۚ فَمَن تَعَجَّلَ فِى يَوْمَيْنِ فَلَآ إِثْمَ عَلَيْهِ وَمَن تَأَخَّرَ فَلَآ إِثْمَ عَلَيْهِ ۚ لِمَنِ ٱتَّقَىٰ ۗ وَٱتَّقُوا۟ ٱللَّهَ وَٱعْلَمُوٓا۟ أَنَّكُمْ إِلَيْهِ تُحْشَرُونَ ಅರ್ಥ: ಎಣಿಸಲ್ಪಟ್ಟ ದಿನಗಳಲ್ಲಿ ಅಲ್ಲಾಹನ ಸ್ಮರಣೆ ಮಾಡಿರಿ. ಯಾರಾದರೂ ಎರಡೇ ದಿನಗಳಲ್ಲಿ ¹¹⁰ ತ್ವರೆ ಮಾಡಿದರೂ ಪರವಾಗಿಲ್ಲ. ತಡಮಾಡುವು ದಕ್ಕೂ ಅಭ್ಯಂತರವಿಲ್ಲ. ಇದು ತತ್ವ ನಿಷ್ಠೆಯುಳ್ಳವರಿಗೆ. ನೀವು ಅಲ್ಲಾಹನಿಗೆ ಹೆದರಿರಿ. ನೀವು ಆತನ ಬಳಿ ಜಮಾಯಿಸಲಿದ್ದೀರಿ ಎಂಬುದು ತಿಳಿದಿರಲಿ. ವಿವರಣೆ: 110. ಎಣಿಸಲ್ಪಟ್ಟ ದಿವಸಗಳು ಅಂದರೆ ದುಲ್ ಹಜ್ 11, 12, 13,ಎಂಬೀ ಮೂರು ದಿವಸಗಳು. ಈ ದಿವಸಗಳು ಅಯ್ಯಾಮುತ್ತಶ್ರೀಕ್ ಎಂದೂ ಕರೆಯಲ್ಪಡುತ್ತದೆ. ಈ ಅವಧಿಯ ಎರಡು ದಿನಗಳಲ್ಲಿ ಕಲ್ಲೆಸೆದು ಸೂರ್ಯಾಸ್ತಮಾನದ ಮುಂಚೆ ಮಿನಾದಿಂದ ಹೊರಡಬಹುದು ಇಲ್ಲವೇ ಅಂದು ರಾತ್ರಿ ಮಿನಾದಲ್ಲಿ ತಂಗಿ ಮೂರನೆಯ ದಿನ ಕಲ್ಲೆಸೆದು ಅಲ್ಲಿಂದ ಹೊರಡಬಹುದು.

ಅಧ್ಯಾಯ: 2 ಅಲ್-ಬಕ್ವರಃ ಸೂಕ್ತ: 205

(ಅಧ್ಯಾಯ: 2 ಅಲ್-ಬಕ್ವರಃ ಸೂಕ್ತ: 205) وَإِذَا تَوَلَّىٰ سَعَىٰ فِى ٱلْأَرْضِ لِيُفْسِدَ فِيهَا وَيُهْلِكَ ٱلْحَرْثَ وَٱلنَّسْلَ ۗ وَٱللَّهُ لَا يُحِبُّ ٱلْفَسَادَ ಅರ್ಥ:(ನಿಮ್ಮ ಬಳಿಯಿಂದ) ಅವನು ಹೊರಟು ಹೋದರೆ ಭೂಮಿ ಮೇಲೆ ಕೇಡು ಹರಡಲೂ, ಕೃಷಿ ನಾಶ, ವಂಶನಾಶಕ್ಕೂ ಶತ ಪ್ರಯತ್ನ ಮಾಡುತ್ತಾನೆ. ವಾಸ್ತವ ದಲ್ಲಿ ಅಲ್ಲಾಹನು ಕೇಡನ್ನು ಇಷ್ಟಪಡುವುದಿಲ್ಲ ¹¹¹. ವಿವರಣೆ:  111. ಇದು ಕಪಟಿಯಾದ ಅಖ್‍ನಸ್ ಬಿನ್ ಶುರೈಖನ ಬಗ್ಗೆ ಅವತೀರ್ಣಗೊಂಡಿದೆ. ಅವನು ಪ್ರವಾದಿವರ್ಯ(ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ) ರಲ್ಲಿ ಮಧುರ ಮಾತು ಹೇಳುತ್ತ ಸಂಭಾವಿತನಂತೆ ನಟಿಸಿಕೊಂಡು ಹಿಂತಿರುಗಿದಾಗ ದಾರಿಯಲ್ಲಿ ಮುಸ್ಲಿಮರ ಹೊಲಗಳಿಗೆ ಬೆಂಕಿ ಹಚ್ಚಿದನು ಮತ್ತು ಕತ್ತೆಗಳನ್ನು ತರಿದು ಹಾಕಿದನು.

ನಿದ್ರೆಯಿಲ್ಲದ ವರ್ಷ!

ನಿದ್ರೆಯಿಲ್ಲದ ವರ್ಷ! ಮಹಾತ್ಮರಾದ ತಮೀಮುದ್ದಾರೀ(ರ) ರವರಿಗೆ ಒಂದು ರಾತ್ರಿ ನಿದ್ದೆಯಾವರಿಸಿ ತಹಜ್ಜುದ್ ಮೊಟಕುಗೊಂಡಿತು. ಅದಕ್ಕೆ ಪ್ರಾಯಶ್ಚಿತ್ತವಾಗಿ ಒಂದು ವರ್ಷ ಮಹಾತ್ಮರು ನಿದ್ದೆಯನ್ನೇ ಮಾಡಲಿಲ್ಲ!.(ಇಹ್ಯಾ) ಜುನೈದ್ ಸಖಾಫಿ ಜೀರ್ಮುಕ್ಕಿ

ಮದುವೆಯ ನಂತರ ಈ ಪ್ರಾರ್ಥನೆ ನಡೆಸಲಿ..

ಮದುವೆಯ ನಂತರ ಈ ಪ್ರಾರ್ಥನೆ ನಡೆಸಲಿ.. (عَنْ عَمْرِو بْنِ شُعَيْبٍ، عَنْ أَبِيهِ، عَنْ جَدِّهِ رضي الله عنهم، عَنِ النَّبِيِّ صلى الله عليه وسلم قَالَ: إِذَا تَزَوَّجَ أَحَدُكُمُ امْرَأَةً أَوِ اشْتَرَى خَادِمًا فَلْيَقُلِ "اللَّهُمَّ إِنِّي أَسْأَلُكَ خَيْرَهَا وَخَيْرَ مَا جَبَلْتَهَا عَلَيْهِ وَأَعُوذُ بِكَ مِنْ شَرِّهَا وَمِنْ شَرِّ مَا جَبَلْتَهَا عَلَيْهِ وَإِذَا اشْتَرَى بَعِيرًا فَلْيَأْخُذْ بِذِرْوَةِ سَنَامِهِ وَلْيَقُلْ مِثْلَ ذَلِكَ"‏.رواه-أبو داوود/٢١٦٠)    ಅಮ್ರ್ ಬುನ್ ಶುಐಬ್(ರ.ಅ) ರಿಂದ ವರದಿ- ಪ್ರವಾದಿ ﷺ ಹೇಳಿದರು: ನಿಮ್ಮಲ್ಲಿ ಒಬ್ಬ ಪುರುಷನು ಮದುವೆಯಾದರೆ ಅಥವಾ ಸೇವಕನನ್ನು ಖರೀದಿ ಮಾಡಿದರೆ ಅವರು ಈ ರೀತಿಯಲ್ಲಿ ಹೇಳಲಿ: اللَّهُمَّ إِنِّي أَسْأَلُكَ خَيْرَهَا وَخَيْرَ مَا جَبَلْتَهَا عَلَيْهِ وَأَعُوذُ بِكَ مِنْ شَرِّهَا وَمِنْ شَرِّ مَا جَبَلْتَهَا عَلَيْهِ    {ಓ ಅಲ್ಲಾಹನೇ, ಅವಳ ಒಳ್ಳೆಯತನವನ್ನು ಮತ್ತು ನೀನು ಅವಳನ್ನು ಯಾವ ಸ್ವಭಾವದಲ್ಲಿ ಸೃಷ್ಟಿಸಿದೆ, ಅದರ ಒಳ್ಳೆಯತನದ ಬಗ್ಗೆ ನಾನು ನಿನ್ನೊಂದಿಗೆ ಕೇಳುತ್ತೇನೆ. ಅವಳ ದುಷ್ಟತನದಿಂದ ಮತ್ತು ನೀನು ಅವಳನ್ನು ಯಾವ ಸ್ವಭಾವದಲ್ಲಿ ಸೃಷ್ಟಿಸಿದೆ, ಅದರ ಕೆಡುಕಿನಿಂದ ನಾನು ನಿನ್ನೊಂದಿಗೆ ಆಶ್ರಯಿಸು...

ಪರಿಹಾಸ್ಯ ಮಾಡುವವರಿಗೆ ನರಕವೇ ಗತಿ!

ಪರಿಹಾಸ್ಯ ಮಾಡುವವರಿಗೆ ನರಕವೇ ಗತಿ! ಹಸನ್(ರ.ಅ) ರಿಂದ ನಿವೇದನೆ: ಪ್ರವಾದಿﷺ ಹೇಳಿದರು, ‌ಭೂಲೋಕದಲ್ಲಿ ಮತ್ತೊಬ್ಬರನ್ನು ಪರಿಹಾಸ್ಯ(ಗೇಲಿ) ಮಾಡುತ್ತಿದ್ದ ಕಾರಣ ನರಕ ನಿವಾಸಿಗಳನ್ನು ಸ್ವರ್ಗದ ಬಾಗಿಲಿಗೆ ಕರೆಯಲಾಗುವುದು. ಅವನು ಅತ್ತ ತೆರಳುವಾಗ ಸ್ವರ್ಗದ ಬಾಗಿಲು ಮುಚ್ಚಲ್ಪಡುತ್ತದೆ. ಅವನನ್ನು ಪ್ರವೇಶಿಸಲು ಅನುಮತಿಸುವುದಿಲ್ಲ. ಅದೇ ರೀತಿ ಅವನನ್ನು ಪುನಃ ಪುನಃ ಕರೆಯಲಾಗುವುದು. ಹಾಗೆಲ್ಲಾ ಸ್ವರ್ಗದ ಬಾಗಿಲು ಮುಚ್ಚಲ್ಪಡುತ್ತದೆ. ಅವನು ಅವಮಾನದಿಂದ ಹಿಂದಿರುಗುತ್ತಾ ಇರುವನು. ಕೊನೆಗೆ ಅವನನ್ನು ತೆರೆದ ಸ್ವರ್ಗಕ್ಕೆ ಕರೆಯುವಾಗ ಅವನು ಬೇಸತ್ತು ಹತಾಶೆ,‌ ನಿರಾಶೆಯಿಂದ ಅಲ್ಲಿಗೆ ಹೋಗಲು ಸಿದ್ಧನಾಗುವುದಿಲ್ಲ." [ಬೈಅಖಿ] ✍🏻ಸಾಲಿಮ್ ಮುಈನಿ ಸಖಾಫಿ ರಬ್ಬಾನಿ‌ ಅ'ಸ್ಸಿಂಧಿ ಗದಗ

ಉಗುರುಗಳ ಮೇಲೆ ಮೂಡುವ ಬಿಳಿಯ ಅರ್ಧ ಚಂದ್ರಾಕೃತಿಯಿಂದ ನಿಮ್ಮ ಆರೋಗ್ಯ ತಿಳಿಯಬಹುದು:

ಉಗುರುಗಳ ಮೇಲೆ ಮೂಡುವ ಬಿಳಿಯ ಅರ್ಧ ಚಂದ್ರಾಕೃತಿಯಿಂದ ನಿಮ್ಮ ಆರೋಗ್ಯ ತಿಳಿಯಬಹುದು:  ಮೊದಲನೆಯದಾಗಿ, ನಿಮ್ಮ ಕೈಯ ಉಗುರುಗಳನ್ನು ಪರಿಶೀಲಿಸಿ ಮತ್ತು ಉಗುರುಗಳಲ್ಲಿ ಬಿಳಿಯ ಅರ್ಧ ಚಂದ್ರ ಆಕೃತಿ ಮೂಡಿದೆಯೇ ಪರಿಶೀಲಿಸಿ. ಉಗುರಿನಲ್ಲಿ ಮೂಡಿದ ಈ ಅರ್ಧ ಚಂದ್ರಾಕೃತಿ ನಮ್ಮ ಆರೋಗ್ಯದ ಬಗ್ಗೆ ಅನೇಕ ಸೂಚನೆಗಳನ್ನು ನೀಡುತ್ತದೆ.  ನೀವು ಗಮನಿಸಿರಬಹುದು ಕೆಲವೊಮ್ಮೆ ವೈದ್ಯರು ನಮ್ಮನ್ನು ಪರೀಕ್ಷೆಗೆ ಒಳಪಡಿಸದೆಯೇ ನಮ್ಮ ದೇಹವನ್ನು ಹೊರಗಿನಿಂದ ನೋಡುತ್ತಲೇ ನಮ್ಮಲ್ಲಿರುವ ಅನೇಕ ಸಮಸ್ಯೆಗಳ ಬಗ್ಗೆ ಹೇಳುತ್ತಾರೆ. ಈ ರೀತಿ ಹೇಳಿದಾಗ ನಮಗೆ ಆಶ್ಚರ್ಯವಾಗುತ್ತೆ. ನಮ್ಮ ಸಮಸ್ಯೆ ನಮಗೆ ಗೊತ್ತು. ಆದರೆ ನಮ್ಮನ್ನು ಟೆಸ್ಟ್ ಮಾಡದೆಯೇ ವೈದ್ಯರಿಗೆ ಹೇಗೆ ತಿಳಿತು. ತುಂಬ ಸರ್ವಿಸ್ ಇರೋ ಡಾಕ್ಟರ್ ಇರಬೇಕು ಎನ್ನಿಸುತ್ತದೆ. ಆದರೆ ವಾಸ್ತವವಾಗಿ, ನಮ್ಮ ದೇಹವು ನಮಗೆ ಯಾವುದೇ ರೀತಿಯ ಸಮಸ್ಯೆ ಅಥವಾ ಆರೋಗ್ಯದಲ್ಲಿ ಏರುಪೇರಾದ ಸಂದರ್ಭದಲ್ಲಿ ವಿಭಿನ್ನವಾಗಿ ಪ್ರತಿಕ್ರಿಯಿಸುತ್ತದೆ. ಈ ಕಾರಣದಿಂದಾಗಿ, ನಮ್ಮ ದೇಹದಲ್ಲಿ ವಿವಿಧ ರೀತಿಯ ಬದಲಾವಣೆಗಳಾಗುತ್ತವೆ. ಈ ಬದಲಾವಣೆಗಳನ್ನು ನೋಡಿ, ವೈದ್ಯರು ನಮ್ಮ ಅನೇಕ ಸಮಸ್ಯೆಗಳನ್ನು ಟೆಸ್ಟ್ ಮಾಡದೆಯೇ ಕಂಡುಹಿಡಿಯುತ್ತಾರೆ. ಇದೇ ರೀತಿ ಇಂದು ನಾವು ನಮ್ಮ ದೇಹದಲ್ಲಿ ಆಗುವ ಅದೊಂದು ಬದಲಾವಣೆಯ ಬಗ್ಗೆ ಹೇಳಲಿದ್ದೇವೆ, ಅದು ಬಹಳ ಮುಖ್ಯ. ಈ ಬದಲಾವಣೆಗಳು ನಮ್ಮ ದೇಹದಲ್ಲಿನ ಅನೇಕ ಸಮಸ್ಯೆಗಳ ಬಗ್ಗೆ ಸೂಚಿಸುತ್ತದೆ, ಅದನ್ನು ನಿ...

ಪ್ರಾಯಶ್ಚಿತ್ತ!

ಪ್ರಾಯಶ್ಚಿತ್ತ! ಮಹಾತ್ಮರಾದ ಇಬ್ನು ಅಬೀ ರಬೀಅ(ರ) ರವರು ಒಮ್ಮೆ ಸುಬ್ ಹಿನ ಮುನ್ನ ನಿರ್ವಹಿಸಬೇಕಾದ ಎರಡು ರಕ್ಅತ್ ನಮಾಝ್ ಮೊಟಕುಗೊಂಡದ್ದಕ್ಕೆ ಪ್ರಾಯಶ್ಚಿತ್ತವಾಗಿ ದಾಸಿಯೊಬ್ಬಳನ್ನು ವಿಮೋಚನೆಗೊಳಿಸಿದ್ದರು!".(ಇಹ್ಯಾ) ಜುನೈದ್ ಸಖಾಫಿ ಜೀರ್ಮುಕ್ಕಿ ಮುದರ್ರಿಸ್,ದ್ಸಿಕ್ರಾ ಮೂಡಬಿದ್ರೆ ಜೂನ್ 02, 2021 ಬುಧವಾರ, ಶವ್ವಾಲ್ 21, 1442

ಸಂಕಷ್ಟಗಳು ಒಳಗಾದವರನ್ನು ನೋಡಿದರೆ ಈ ಪ್ರಾರ್ಥನೆ ಮಾಡಿರಿ

ಸಂಕಷ್ಟಗಳು ಒಳಗಾದವರನ್ನು ನೋಡಿದರೆ ಈ ಪ್ರಾರ್ಥನೆ ಮಾಡಿರಿ (عَنْ أَبِي هُرَيْرَةَ رضي الله عنه قَالَ، قَالَ رَسُولُ اللَّهِ صلى الله عليه وسلم: ‏مَنْ رَأَى مُبْتَلًى فَقَالَ "الْحَمْدُ لِلَّهِ الَّذِي عَافَانِي مِمَّا ابْتَلاَكَ بِهِ وَفَضَّلَنِي عَلَى كَثِيرٍ مِمَّنْ خَلَقَ تَفْضِيلاً" لَمْ يُصِبْهُ ذَلِكَ الْبَلاَءُ".رواه-ترمذي/٣٤٣٢)    ಅಬೂಹುರೈರಾ (ರ.ಅ) ರಿಂದ ವರದಿ- ಪ್ರವಾದಿ ﷺ ಹೇಳಿದರು: ಪರೀಕ್ಷೆಗೆ ಒಳಗಾದವರನ್ನು ನೋಡಿದಾಗ ಈ ರೀತಿ ಪ್ರಾರ್ಥಿಸಿದರೆ ಯಾವುದೇ ಪರೀಕ್ಷೆ, ಸಂಕಷ್ಟಗಳು ಅವನ ಮೇಲೆ ಪರಿಣಾಮ ಬೀರುವುದಿಲ್ಲ; الْحَمْدُ لِلَّهِ الَّذِي عَافَانِي مِمَّا ابْتَلاَكَ بِهِ وَفَضَّلَنِي عَلَى كَثِيرٍ مِمَّنْ خَلَقَ تَفْضِيلاً    {ನಿಮಗೆ ಉಂಟಾದ ಪರೀಕ್ಷೆಯಿಂದ ನನ್ನನ್ನು ಕಾಪಾಡಿ ಗುಣಪಡಿಸಿದ ಮತ್ತು ಅವನು ಸ್ರಷ್ಟಿಸಿದ ಅನೇಕ ಜೀವಿಗಳಿಗಿಂತ ನನ್ನನ್ನು ಉತ್ತಮಗೊಳಿಸಿದ ಅಲ್ಲಾಹನಿಗೆ ಸರ್ವಸ್ತುತಿಗಳು}. (ಹದೀಸ್- ಇಮಾಂ ತುರ್ಮುಝೀ) ▪ಒಳಿತನ್ನು ಕಲಿಯಲು ಅಲ್ಲಾಹನು ನಮಗೆ ಅನುಗ್ರಹಿಸಲಿ. ಆಮೀನ್🤲▪ ಮುಹಮ್ಮದ್ ತಾಜುದ್ದೀನ್ ಸಖಾಫಿ (ಖತೀಬರು- ಮುಹ್ಯದ್ಧೀನ್ ಜುಮಾ ಮಸೀದಿ ಪರಪ್ಪು, ಗೇರುಕಟ್ಟೆ) [02-06-2021,ಬುಧವಾರ] {20-ಶವ್ವಾಲ್-1442} ✳✳✳✳✳✳✳✳✳✳

ಅಲ್ಲಾಹನ ಅರ್ಶಿನ ನೆರಳು ಸಿಗಬೇಕೇ!

ಅಲ್ಲಾಹನ ಅರ್ಶಿನ ನೆರಳು ಸಿಗಬೇಕೇ! ಅಬೂಹುರೈರಾ(ರ.ಅ) ರಿಂದ ನಿವೇದನೆ: ಪ್ರವಾದಿﷺ ಹೇಳಿದರು, "ಖಂಡಿತವಾಗಿಯೂ ಅಂತ್ಯದಿನದಂದು ಅಲ್ಲಾಹು ಹೇಳುವನು, ನನ್ನನ್ನು ಅನುಸರಿಸಿ, ಗೌರವಿಸಿ ಪರಸ್ಪರ ಪ್ರೀತಿಸಿದವರು ಎಲ್ಲಿ? ನನ್ನ ನೆರಳಿನ ಹೊರತು ಬೇರೆ ಯಾವುದೇ ನೆರಳಿಲ್ಲದ ಈ ದಿನ ನಾನು ಅವರಿಗೆ ನನ್ನ ವಿಶೇಷ ನೆರಳನ್ನು ನೀಡಿ ಅನುಗ್ರಹಿಸುವೆನು." [ಸ್ವ.ಮುಸ್ಲಿಂ] ಪ್ರೀತಿ, ಸ್ನೇಹ ಎಲ್ಲವೂ ಅಲ್ಲಾಹನ ಹಾದಿಯಲ್ಲಾಗಿರಲಿ. ದ್ವೇಷ, ವೈರಾಗ್ಯ ಮುಕ್ತ ಜೀವನ ನಮ್ಮದಾಗಿರಲಿ. ✍🏻ಸಾಲಿಮ್ ಮುಈನಿ ಸಖಾಫಿ ರಬ್ಬಾನಿ‌ ಅ'ಸ್ಸಿಂಧಿ ಗದಗ

ಪ್ರತಿದಿನ ಬೆಳಗ್ಗೆ ಒಂದು ಗ್ಲಾಸ್ ಬಿಸಿನೀರು ಕುಡಿಬೇಕು? ಇದರಿಂದ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ?

ಪ್ರತಿದಿನ ಬೆಳಗ್ಗೆ ಒಂದು ಗ್ಲಾಸ್ ಬಿಸಿನೀರು ಕುಡಿಬೇಕು? ಇದರಿಂದ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ? ನೀರು ಕುಡಿಯುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ, ದೇಹದ ಅನೇಕ ಅಸ್ವಸ್ಥತೆಗಳನ್ನು ನಿವಾರಿಸುವ ಜೊತೆಗೆ, ನಮ್ಮ ದೇಹವನ್ನು ಹೈಡ್ರೇಟ್ ಆಗಿಡಲು ನೀರು ತುಂಬಾ ಪರಿಣಾಮಕಾರಿಯಾಗಿದೆ. ನಿಮಗೆ ಬಿಸಿ ನೀರನ್ನು ಕುಡಿಯಲು ಇಷ್ಟಪಡದಿದ್ದರೂ, ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಆದ್ದರಿಂದ 8 ರಿಂದ 10 ಲೋಟ ನೀರು ಕುಡಿಯುವುದು ದೇಹಕ್ಕೆ ಬಹಳ ಮುಖ್ಯ, ಆದರೆ ದಿನಕ್ಕೆ ಮೂರು ಬಾರಿ ಬಿಸಿ ನೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ, ಇದರಿಂದ ದೇಹಕ್ಕೆ ರೋಗಗಳಿಂದ ದೂರವಿರಿಸುತ್ತದೆ. ಪ್ರತಿದಿನ ಬೆಳಿಗ್ಗೆ ಒಂದು ಲೋಟ ಬೆಚ್ಚಗಿನ ನೀರನ್ನು ಕುಡಿಯುವುದರಿಂದ ಅನೇಕ ಪ್ರಯೋಜನಗಳಿವೆ. ತೂಕ ಇಳಿಕೆಗೆ ಬಿಸಿ ನೀರು:    ನಿಮ್ಮ ದೇಹ ತೂಕ(Weight Loss) ಹೆಚ್ಚುತ್ತಿದ್ದರೆ, ನಿಮ್ಮ ಸಾವಿರಾರು ಪ್ರಯತ್ನಗಳು ಮಾಡಿದರು ನಿಮ್ಮ ದೇಹ ತೂಕ ಇಳಿಕೆ ಮಾಡಿದರು ಕಡಿಮೆ ಆಗುವುದಿಲ್ಲ, ಆದರೆ, ಸತತ ಮೂರು ತಿಂಗಳು ಬಿಸಿ ನೀರು ಕುಡಿಯಿರಿ. ನೀವು ಖಂಡಿತವಾಗಿಯೂ ತೂಕ ಕಡಿಮೆ ಮಾಡಿಕೊಳ್ಳಬಹುದು. ನಿಮಗೆ ಬಿಸಿ ನೀರು ಕುಡಿಯಾದಾಗದಿದ್ದರೆ. ಊಟ, ತಿಂಡಿ ಮಡಿದ ನಂತರ ಒಂದು ಕಪ್ ಬಿಸಿ ನೀರನ್ನು ಸಹ ಕುಡಿಯಬಹುದು. ರಕ್ತ ಪರಿಚಲನೆ ಸರಿಯಾಗಲು ಬಿಸಿ ನೀರು:  ದೇಹವನ್ನು ಸರಾಗವಾಗಿ ಚಲಿಸಲು, ದೇಹದಾದ್ಯಂತ ರಕ್ತ(Blood)ವು ಸರಿಯಾಗಿ ಹರಿಯುವುದು ತುಂಬಾ ಮ...